ETV Bharat / state

ದಲಿತ ಮಹಿಳೆಗಿಲ್ಲ ಮೀನು ಮಾರಾಟಕ್ಕೆ ಅವಕಾಶ: ಕ್ರಮ ಕೈಗೊಳ್ಳದ ಪೊಲೀಸರು..? - ಅಂಬೇಡ್ಕರ್ ಯುವಸೇನೆ

ದಲಿತ ಮಹಿಳೆಯು ಮೀನು ಮಾರುಕಟ್ಟೆಗೆ ಮೀನು ಮಾರಾಟ ಮಾಡಲು ಬಂದಾಗ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ..

Refused to sell fish for Dalit woman
ಲೋಕೇಶ್ ಪಡುಬಿದ್ರೆ
author img

By

Published : Jan 16, 2021, 9:21 PM IST

ಮಂಗಳೂರು: ದಲಿತ ಮಹಿಳೆಗೆ ಮೀನು ಮಾರಾಟ ಮಾಡಲು ಅವಕಾಶ ನಿರಾಕರಿಸುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಮಾತನಾಡಿದ ಅಂಬೇಡ್ಕರ್ ಯುವಸೇನೆ ಕೆರೆಕಾಡು ಮುಖಂಡ ಲೋಕೇಶ್ ಪಡುಬಿದ್ರೆ, ಕಿನ್ನಿಗೋಳಿಯಲ್ಲಿ ಕಳೆದ 70 ವರ್ಷಗಳಿಂದ ದಲಿತ ಮಹಿಳೆಯೊಬ್ಬರು ಒಣಮೀನು ಮತ್ತು ಚಿಪ್ಪು ಮಾರಾಟ ಮಾಡುತ್ತಿದ್ದರು. ಆ ದಲಿತ ಮಹಿಳೆಯ ಮಗಳು ಕಿನ್ನಿಗೋಳಿ ಮೀನು ಮಾರುಕಟ್ಟೆಗೆ ಮೀನು ಮಾರಾಟ ಮಾಡಲು ಬಂದಾಗ ಕಿರುಕುಳ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಂಬೇಡ್ಕರ್ ಯುವಸೇನೆ ಕೆರೆಕಾಡು ಮುಖಂಡ ಲೋಕೇಶ್ ಪಡುಬಿದ್ರೆ

ಈ ಬಗ್ಗೆ ಎರಡು ಬಾರಿ ಪ್ರಕರಣ ದಾಖಲಾದರೂ ಮುಚ್ಚಳಿಕೆ ಬರೆಸಿ ಪ್ರಕರಣ ಇತ್ಯರ್ಥಗೊಳಿಸಲಾಗಿತ್ತು. ಆದರೆ ಇದೀಗ ಮಹಿಳೆಗೆ ‌ಮೀನು ಮಾರಾಟಕ್ಕೆ ಅವಕಾಶ ನೀಡಲಾಗುತ್ತಿಲ್ಲ. ದಲಿತ ಮಹಿಳೆ ಮೀನು ಮಾರಾಟಕ್ಕೆ‌ ಮಾರುಕಟ್ಟೆಗೆ ಬಂದರೆ ನಿಂದಿಸುವುದು, ಶಟರ್ ಹಾಕುವುದು ಮಾಡಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಮೂಲ್ಕಿ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.

ಮಂಗಳೂರು: ದಲಿತ ಮಹಿಳೆಗೆ ಮೀನು ಮಾರಾಟ ಮಾಡಲು ಅವಕಾಶ ನಿರಾಕರಿಸುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಮಾತನಾಡಿದ ಅಂಬೇಡ್ಕರ್ ಯುವಸೇನೆ ಕೆರೆಕಾಡು ಮುಖಂಡ ಲೋಕೇಶ್ ಪಡುಬಿದ್ರೆ, ಕಿನ್ನಿಗೋಳಿಯಲ್ಲಿ ಕಳೆದ 70 ವರ್ಷಗಳಿಂದ ದಲಿತ ಮಹಿಳೆಯೊಬ್ಬರು ಒಣಮೀನು ಮತ್ತು ಚಿಪ್ಪು ಮಾರಾಟ ಮಾಡುತ್ತಿದ್ದರು. ಆ ದಲಿತ ಮಹಿಳೆಯ ಮಗಳು ಕಿನ್ನಿಗೋಳಿ ಮೀನು ಮಾರುಕಟ್ಟೆಗೆ ಮೀನು ಮಾರಾಟ ಮಾಡಲು ಬಂದಾಗ ಕಿರುಕುಳ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಂಬೇಡ್ಕರ್ ಯುವಸೇನೆ ಕೆರೆಕಾಡು ಮುಖಂಡ ಲೋಕೇಶ್ ಪಡುಬಿದ್ರೆ

ಈ ಬಗ್ಗೆ ಎರಡು ಬಾರಿ ಪ್ರಕರಣ ದಾಖಲಾದರೂ ಮುಚ್ಚಳಿಕೆ ಬರೆಸಿ ಪ್ರಕರಣ ಇತ್ಯರ್ಥಗೊಳಿಸಲಾಗಿತ್ತು. ಆದರೆ ಇದೀಗ ಮಹಿಳೆಗೆ ‌ಮೀನು ಮಾರಾಟಕ್ಕೆ ಅವಕಾಶ ನೀಡಲಾಗುತ್ತಿಲ್ಲ. ದಲಿತ ಮಹಿಳೆ ಮೀನು ಮಾರಾಟಕ್ಕೆ‌ ಮಾರುಕಟ್ಟೆಗೆ ಬಂದರೆ ನಿಂದಿಸುವುದು, ಶಟರ್ ಹಾಕುವುದು ಮಾಡಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಮೂಲ್ಕಿ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.