ETV Bharat / state

ನಿಗಮಗಳ ರಚನೆಯೊಂದು ಚುನಾವಣಾ ಗಿಮಿಕ್: ಬಿಜೆಪಿ ವಿರುದ್ಧ ರಮಾನಾಥ ರೈ ಕಿಡಿ..!

ಬಿಜೆಪಿ ಚುನಾವಣಾ ಗಿಮಿಕ್ ನಡೆಸುತ್ತಿದ್ದು, ಇದೇ ಕಾರಣಕ್ಕೆ ನೂತನ ನಿಗಮಗಳನ್ನು ರಚಿಸುತ್ತಿದೆ ಎಂದು ಮಾಜಿ ಸಚಿವ ರಮಾನಾಥ ಆರೋಪಿಸಿದ್ದಾರೆ.

author img

By

Published : Nov 19, 2020, 1:43 PM IST

Ramanatha Rai statement against BJP
ಬಿಜೆಪಿ ವಿರುದ್ಧ ರಮಾನಾಥ ರೈ ಕಿಡಿ

ಮಂಗಳೂರು: ಚುನಾವಣಾ ದೃಷ್ಟಿಯಿಂದ ರಾಜ್ಯ ಸರ್ಕಾರವು ನೂತನ ನಿಗಮಗಳನ್ನು ರಚಿಸುತ್ತಿದೆ ಎಂದು, ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವತ್ತಿಗೂ ಚುನಾವಣೆ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಬಿಜೆಪಿ ಚುನಾವಣಾ ಗಿಮಿಕ್ ನಡೆಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ವಿರುದ್ಧ ರಮಾನಾಥ ರೈ ಕಿಡಿ

ಈಗ ಮರಾಠ ಅಭಿವೃದ್ಧಿ ನಿಗಮ ಮಾಡಿರುವುದರಿಂದ ಎಲ್ಲರೂ ತಮ್ಮ ನಿಗಮ ಆಗಬೇಕೆಂದು ಕೇಳುತ್ತಾರೆ. ಸಾಮಾಜಿಕವಾಗಿ ಆರ್ಥಿಕ ದುರ್ಬಲರಾದವರು ಎಲ್ಲರು ಕೇಳುತ್ತಾರೆ. ಯು. ಟಿ. ಖಾದರ್ ಅವರು ಹೇಳಿರುವಂತೆ, ಎಲ್ಲಾ ಜಾತಿಗಳ ನಿಗಮ ರಚನೆಗೆ ಬೇಡಿಕೆ ಬರುತ್ತದೆ. ಅದನ್ನು ಸರಕಾರ ಮಾಡಲಿ ಎಂದರು.

ಮಂಗಳೂರು: ಚುನಾವಣಾ ದೃಷ್ಟಿಯಿಂದ ರಾಜ್ಯ ಸರ್ಕಾರವು ನೂತನ ನಿಗಮಗಳನ್ನು ರಚಿಸುತ್ತಿದೆ ಎಂದು, ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವತ್ತಿಗೂ ಚುನಾವಣೆ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಬಿಜೆಪಿ ಚುನಾವಣಾ ಗಿಮಿಕ್ ನಡೆಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ವಿರುದ್ಧ ರಮಾನಾಥ ರೈ ಕಿಡಿ

ಈಗ ಮರಾಠ ಅಭಿವೃದ್ಧಿ ನಿಗಮ ಮಾಡಿರುವುದರಿಂದ ಎಲ್ಲರೂ ತಮ್ಮ ನಿಗಮ ಆಗಬೇಕೆಂದು ಕೇಳುತ್ತಾರೆ. ಸಾಮಾಜಿಕವಾಗಿ ಆರ್ಥಿಕ ದುರ್ಬಲರಾದವರು ಎಲ್ಲರು ಕೇಳುತ್ತಾರೆ. ಯು. ಟಿ. ಖಾದರ್ ಅವರು ಹೇಳಿರುವಂತೆ, ಎಲ್ಲಾ ಜಾತಿಗಳ ನಿಗಮ ರಚನೆಗೆ ಬೇಡಿಕೆ ಬರುತ್ತದೆ. ಅದನ್ನು ಸರಕಾರ ಮಾಡಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.