ETV Bharat / state

ಮೋದಿ ಪ್ರಮಾಣವಚನ: ಅಭಿಮಾನಿ ಬಳಗದಿಂದ ದಿನವಿಡೀ ಉಚಿತ ಬಸ್ ಸೇವೆ - undefined

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರೇಂದ್ರ ಮೋದಿಯವರ ಅಭಿಮಾನಿ ಬಳಗವೊಂದು ಇಂದು ಇಡೀ ದಿನ ಉಚಿತ ಬಸ್​ ಸೇವೆ ನೀಡಿದ್ದಾರೆ.

ಉಚಿತ ಬಸ್ ಸೇವೆ ವ್ಯವಸ್ಥೆ ಮಾಡಿದ ಮೋದಿ‌ ಅಭಿಮಾನಿ ಬಳಗ
author img

By

Published : May 30, 2019, 7:24 PM IST

Updated : May 30, 2019, 7:44 PM IST

ಮಂಗಳೂರು: ಕಿನ್ನಿಗೋಳಿಯಿಂದ ಮೂಡುಬಿದಿರೆ ಹಾಗೂ ಮಂಗಳೂರಿಗೆ ಸಂಚರಿಸುವ ಕೋಟ್ಯಾನ್ ಹೆಸರಿನ ಬಸ್​ನಲ್ಲಿ ಇಂದು ಸಂಚರಿಸುವ ಎಲ್ಲರೂ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಮೋದಿ ಅಭಿಮಾನ.

ಉಚಿತ ಬಸ್ ಸೇವೆ ವ್ಯವಸ್ಥೆ ಮಾಡಿದ ಮೋದಿ‌ ಅಭಿಮಾನಿ ಬಳಗ

ಹೌದು ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಈ ಹಿನ್ನೆಲೆ ಅವರ ಅಭಿಮಾನಿ ಬಳಗದಿಂದ ಇಂದು ಬೆಳಗ್ಗೆಯಿಂದಲೇ ಈ ಉಚಿತ ಸಂಚಾರ ಸೇವೆ ಆರಂಭವಾಗಿದೆ. ಈ ಬಸ್​ ಕಿನ್ನಿಗೋಳಿಯಿಂದ ಮೂಡುಬಿದಿರೆಗೆ ಹೋಗಿ ಅಲ್ಲಿಂದ ಕಿನ್ನಿಗೋಳಿಗೆ ಸಂಚರಿಸಿ ಬಳಿಕ ಮಂಗಳೂರಿಗೆ ಬರಲಿದೆ. ಹೀಗೆ ದಿನಕ್ಕೆ ಎರಡು ಟ್ರಿಪ್ ಇದೇ ರೀತಿ ಈ ಬಸ್ ಸಂಚರಿಸುತ್ತದೆ. ಬಸ್​ಗೆ ದಿನಕ್ಕೆ 3,500 ರೂ. ಡೀಸೆಲ್ ವೆಚ್ಚ ಬೀಳುತ್ತದೆ.

ಈ ಸಂದರ್ಭ ಮಾತನಾಡಿದ ಬಸ್​ ಚಾಲಕ ಶ್ರೀಕಾಂತ್ ಬಲವಿನಗುಡ್ಡೆ, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಇಂದು ಎಲ್ಲರೂ ದೇಶಾದ್ಯಂತ ವಿವಿಧ ರೀತಿಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನಾವು ಗೆಳೆಯರೆಲ್ಲಾ ಸೇರಿ ಈ ಉಚಿತ ಬಸ್ ಸೇವೆಯನ್ನು ಮಾಡಿದ್ದೇವೆ. ಇದಕ್ಕೆ ಮೋದಿಯ ಮೇಲಿನ ಅಭಿಮಾನವೇ ಕಾರಣ. ಐದು ವರ್ಷಗಳ ಹಿಂದೆ ಮೋದಿಯವರು ಪ್ರಧಾನಿಯಾದಾಗಲೂ ಇದೇ ರೀತಿ ನಾವು ಉಚಿತ ಬಸ್ ವ್ಯವಸ್ಥೆ ಮಾಡಿದ್ದೆವು. ಮುಂದೆಯೂ ಅವರೇ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾವು ಈ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ಬಸ್ ನಲ್ಲಿ ಪ್ರಯಾಣಿಸಿದ ಶಬೀರ್ ಅಹಮದ್ ತೋಕೂರು ಮಾತನಾಡಿ, ನಾನು ಯಾವಾಗಲೂ ಇದೇ ಬಸ್​ನಲ್ಲಿ ಪ್ರಯಾಣಿಸುವುದು. ಬಸ್ ಪೂರ್ತಿ ರಶ್ ಇತ್ತು. ಮೊದಲಿಗೆ ನನಗೆ ಇವತ್ತು ಬಸ್ ಉಚಿತ ಸೇವೆ ಎಂದು ತಿಳಿದಿರಲಿಲ್ಲ. ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಉಚಿತ ಬಸ್ ಸೇವೆ ಇರುವುದು ಸಂತೋಷ ತಂದಿದೆ. ಬಸ್​ನಲ್ಲಿದ್ದ ಎಲ್ಲರೂ ಇಂದು ಸಂತೋಷ ವಾಗಿ‌ ಪ್ರಯಾಣಿಸಿದರು‌ ಎಂದರು.

ಒಟ್ಟಿನಲ್ಲಿ ಈ ಬಸ್​ನ ಚಾಲಕ ಶ್ರೀಕಾಂತ್ ಬಲವಿನಗುಡ್ಡೆ ಈ ವಿಶಿಷ್ಟವಾದ ಮೋದಿ ಅಭಿಮಾನವನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಇತರ ಚಾಲಕರು ಹಾಗೂ ನಿರ್ವಾಹಕರು ಸಹಕಾರ ನೀಡಿದ್ದಾರೆ. 2014 ರಂದು ಮೋದಿ ಅಧಿಕಾರ ವಹಿಸಿಕೊಂಡಾಗಲೂ ಶ್ರೀಕಾಂತ್ ಬಲವಿನಗುಡ್ಡೆ ಇದೇ ರೀತಿ ಉಚಿತ ಬಸ್ ಸೇವೆ ಮಾಡಿದ್ದರಂತೆ.

ಮಂಗಳೂರು: ಕಿನ್ನಿಗೋಳಿಯಿಂದ ಮೂಡುಬಿದಿರೆ ಹಾಗೂ ಮಂಗಳೂರಿಗೆ ಸಂಚರಿಸುವ ಕೋಟ್ಯಾನ್ ಹೆಸರಿನ ಬಸ್​ನಲ್ಲಿ ಇಂದು ಸಂಚರಿಸುವ ಎಲ್ಲರೂ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಮೋದಿ ಅಭಿಮಾನ.

ಉಚಿತ ಬಸ್ ಸೇವೆ ವ್ಯವಸ್ಥೆ ಮಾಡಿದ ಮೋದಿ‌ ಅಭಿಮಾನಿ ಬಳಗ

ಹೌದು ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಈ ಹಿನ್ನೆಲೆ ಅವರ ಅಭಿಮಾನಿ ಬಳಗದಿಂದ ಇಂದು ಬೆಳಗ್ಗೆಯಿಂದಲೇ ಈ ಉಚಿತ ಸಂಚಾರ ಸೇವೆ ಆರಂಭವಾಗಿದೆ. ಈ ಬಸ್​ ಕಿನ್ನಿಗೋಳಿಯಿಂದ ಮೂಡುಬಿದಿರೆಗೆ ಹೋಗಿ ಅಲ್ಲಿಂದ ಕಿನ್ನಿಗೋಳಿಗೆ ಸಂಚರಿಸಿ ಬಳಿಕ ಮಂಗಳೂರಿಗೆ ಬರಲಿದೆ. ಹೀಗೆ ದಿನಕ್ಕೆ ಎರಡು ಟ್ರಿಪ್ ಇದೇ ರೀತಿ ಈ ಬಸ್ ಸಂಚರಿಸುತ್ತದೆ. ಬಸ್​ಗೆ ದಿನಕ್ಕೆ 3,500 ರೂ. ಡೀಸೆಲ್ ವೆಚ್ಚ ಬೀಳುತ್ತದೆ.

ಈ ಸಂದರ್ಭ ಮಾತನಾಡಿದ ಬಸ್​ ಚಾಲಕ ಶ್ರೀಕಾಂತ್ ಬಲವಿನಗುಡ್ಡೆ, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಇಂದು ಎಲ್ಲರೂ ದೇಶಾದ್ಯಂತ ವಿವಿಧ ರೀತಿಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನಾವು ಗೆಳೆಯರೆಲ್ಲಾ ಸೇರಿ ಈ ಉಚಿತ ಬಸ್ ಸೇವೆಯನ್ನು ಮಾಡಿದ್ದೇವೆ. ಇದಕ್ಕೆ ಮೋದಿಯ ಮೇಲಿನ ಅಭಿಮಾನವೇ ಕಾರಣ. ಐದು ವರ್ಷಗಳ ಹಿಂದೆ ಮೋದಿಯವರು ಪ್ರಧಾನಿಯಾದಾಗಲೂ ಇದೇ ರೀತಿ ನಾವು ಉಚಿತ ಬಸ್ ವ್ಯವಸ್ಥೆ ಮಾಡಿದ್ದೆವು. ಮುಂದೆಯೂ ಅವರೇ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾವು ಈ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ಬಸ್ ನಲ್ಲಿ ಪ್ರಯಾಣಿಸಿದ ಶಬೀರ್ ಅಹಮದ್ ತೋಕೂರು ಮಾತನಾಡಿ, ನಾನು ಯಾವಾಗಲೂ ಇದೇ ಬಸ್​ನಲ್ಲಿ ಪ್ರಯಾಣಿಸುವುದು. ಬಸ್ ಪೂರ್ತಿ ರಶ್ ಇತ್ತು. ಮೊದಲಿಗೆ ನನಗೆ ಇವತ್ತು ಬಸ್ ಉಚಿತ ಸೇವೆ ಎಂದು ತಿಳಿದಿರಲಿಲ್ಲ. ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಉಚಿತ ಬಸ್ ಸೇವೆ ಇರುವುದು ಸಂತೋಷ ತಂದಿದೆ. ಬಸ್​ನಲ್ಲಿದ್ದ ಎಲ್ಲರೂ ಇಂದು ಸಂತೋಷ ವಾಗಿ‌ ಪ್ರಯಾಣಿಸಿದರು‌ ಎಂದರು.

ಒಟ್ಟಿನಲ್ಲಿ ಈ ಬಸ್​ನ ಚಾಲಕ ಶ್ರೀಕಾಂತ್ ಬಲವಿನಗುಡ್ಡೆ ಈ ವಿಶಿಷ್ಟವಾದ ಮೋದಿ ಅಭಿಮಾನವನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಇತರ ಚಾಲಕರು ಹಾಗೂ ನಿರ್ವಾಹಕರು ಸಹಕಾರ ನೀಡಿದ್ದಾರೆ. 2014 ರಂದು ಮೋದಿ ಅಧಿಕಾರ ವಹಿಸಿಕೊಂಡಾಗಲೂ ಶ್ರೀಕಾಂತ್ ಬಲವಿನಗುಡ್ಡೆ ಇದೇ ರೀತಿ ಉಚಿತ ಬಸ್ ಸೇವೆ ಮಾಡಿದ್ದರಂತೆ.

Intro:ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿ ಬಳಗವೊಂದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಿರುವ ಹಿನ್ನೆಲೆಯಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸುವ ದಿನವಾದ ಇಂದು ಇಡೀ ದಿನ ಉಚಿತ ಬಸ್ ಸೇವೆಯನ್ನು ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದೆ.

ಕಿನ್ನಿಗೋಳಿಯಿಂದ ಮೂಡುಬಿದಿರೆ ಹಾಗೂ ಮಂಗಳೂರಿಗೆ ಸಂಚರಿಸುವ ಕೋಟ್ಯಾನ್ ಬಸ್ ನಲ್ಲಿ ಸಂಚರಿಸುವ ಎಲ್ಲರೂ ಇಂದು ಉಚಿತವಾಗಿ ಪ್ರಯಾಣ ಮಾಡಬಹುದು. ಇಂದು ಬೆಳಗ್ಗೆ ಯಿಂದಲೇ ಈ ಉಚಿತ ಸಂಚಾರ ಸೇವೆ ಆರಂಭವಾಗಿದ್ದು, ಕಿನ್ನಿಗೋಳಿಯಿಂದ ಮೂಡುಬಿದಿರೆಗೆ ಹೋಗಿ ಅಲ್ಲಿಂದ ಕಿನ್ನಿಗೋಳಿಗೆ ಸಂಚರಿಸಿ ಬಳಿಕ ಮಂಗಳೂರಿಗೆ ಬರಲಿದೆ. ಹೀಗೆ ದಿನಕ್ಕೆ ಎರಡು ಟ್ರಿಪ್ ಇದೇ ರೀತಿ ಈ ಬಸ್ ಸಂಚರಿಸುತ್ತದೆ.


Body:ಈ ಬಸ್ ನ ಚಾಲಕ ಶ್ರೀಕಾಂತ್ ಬಲವಿನಗುಡ್ಡೆ ಈ ವಿಶಿಷ್ಟವಾದ ಮೋದಿ ಅಭಿಮಾನವನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಇತರ ಚಾಲಕರು ಹಾಗೂ ನಿರ್ವಾಹಕರು ಸಹಕಾರ ನೀಡಿದ್ದಾರೆ.
ಈ ಬಸ್ ಗೆ ದಿನಕ್ಕೆ 3,500 ರೂ. ಡೀಸೆಲ್ ವೆಚ್ಚ ಬೀಳುತ್ತದೆ. ಆದರೆ ಇಂದು ಯಾವುದೇ ಟಿಕೆಟ್ ತೆಗೆದುಕೊಳ್ಳದೆ ಈ‌ಬಸ್ ನಲ್ಲಿ ಸಂಚರಿಸುವ ಎಲ್ಲರೂ ಉಚಿತವಾಗಿ ಪ್ರಯಾಣ ಮಾಡಲಿದ್ದಾರೆ‌. 2014 ರಂದು ಮೋದಿ ಅಧಿಕಾರ ವಹಿಸಿಕೊಂಡಾಗಲೂ ಶ್ರೀಕಾಂತ್ ಬಲವಿನಗುಡ್ಡೆ ಇದೇ ರೀತಿ ಉಚಿತ ಬಸ್ ಸೇವೆ ಮಾಡಿದ್ದರು.

ಈ ಸಂದರ್ಭ ಶ್ರೀಕಾಂತ್ ಬಲವಿನಗುಡ್ಡೆ ಮಾತನಾಡಿ, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಇಂದು ಎಲ್ಲರೂ ದೇಶಾದ್ಯಂತ ವಿವಧ ರೀತಿಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನಾವು ಗೆಳೆಯರೆಲ್ಲಾ ಸೇರಿ ಈ ಉಚಿತ ಬಸ್ ಸೇವೆಯನ್ನು ಮಾಡಿದ್ದೇವೆ. ಇದಕ್ಕೆ ಮೋದಿಯ ಮೇಲಿನ ಅಭಿಮಾನವೇ ಕಾರಣ. ಐದು ವರ್ಷಗಳ ಹಿಂದೆ ಮೋದಿಯವರು ಪ್ರಧಾನಿಯಾದಾಗಲೂ ಇದೇ ರೀತಿ ನಾವು ಉಚಿತ ಬಸ್ ವ್ಯವಸ್ಥೆ ಮಾಡಿದ್ದೆವು. ಮುಂದೆಯೂ ಅವರೇ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾವು ಈ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.




Conclusion:ಈ ಸಂದರ್ಭ ಬಸ್ ನಲ್ಲಿ ಪ್ರಯಾಣಿಸಿದ ಶಬೀರ್ ಅಹಮದ್ ತೋಕೂರು ಮಾತನಾಡಿ, ನಾನು ಯಾವಗಲೂ ಇದೇ ಬಸ್ ನಲ್ಲಿ ಪ್ರಯಾಣಿಸುವುದು. ಬಸ್ ಪೂರ್ತಿ ರಶ್ ಇತ್ತು. ಮೊದಲಿಗೆ ನನಗೆ ಇವತ್ತು ಬಸ್ ಉಚಿತ ಸೇವೆ ಎಂದು ತಿಳಿದಿರಲಿಲ್ಲ‌. ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಉಚಿತ ಬಸ್ ಸೇವೆ ಇರುವುದು ಸಂತೋಷ ತಂದಿದೆ. ಬಸ್ ನಲ್ಲಿದ್ದ ಎಲ್ಲರೂ ಇಂದು ಸಂತೋಷ ವಾಗಿ‌ ಪ್ರಯಾಣಿಸಿದರು‌ ಎಂದರು.


Byte....

ಕನ್ನಡಕ ಇಟ್ಟವರು ಶಬೀರ್ ಅಹ್ಮದ್ ತೋಕೂರು

ಮತ್ತೊಬ್ಬರು ಬಸ್ ಚಾಲಕ ಶ್ರೀಕಾಂತ್ ಬಲವಿನಗುಡ್ಡೆ

Reporter_Vishwanath panjimogaru
Last Updated : May 30, 2019, 7:44 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.