ಮಂಗಳೂರು : ನಗರದ ವಲಚ್ಚಿಲ್ ಶ್ರೀನಿವಾಸ ಫಾರ್ಮಸಿ ಕಾಲೇಜ್ವೊಂದರ ನಾಲ್ವರು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢವಾಗಿರುವ ಕಾರಣ ಪ್ರಾಂಶುಪಾಲರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.
ನಾಲ್ವರೂ ಕೇರಳದ ವಿದ್ಯಾರ್ಥಿಗಳಾಗಿದ್ದು, ಇವರು ತಮ್ಮ ರಾಜ್ಯದಿಂದ ನಗರದ ಕಾಲೇಜಿಗೆ ಬರುವಾಗ ತಪಾಸಣೆ ನಡೆಸಿ ನೆಗೆಟಿವ್ ವರದಿ ಇಲ್ಲದೆ ಬಂದಿದ್ದರು. ಇದೀಗ ಅವರನ್ನು ತಪಾಸಣೆ ನಡೆಸಿದಾಗ ನಾಲ್ವರಲ್ಲಿಯೂ ಸೋಂಕು ದೃಢಪಟ್ಟಿದೆ.
ಓದಿ: ಲಸಿಕೆ ಭಯ ಹೋಗಲಾಡಿಸಲು ವಿಭಿನ್ನ ರೀತಿಯ ಗಣರಾಜ್ಯೋತ್ಸವ ಆಚರಿಸಿದ ಸಪ್ತಗಿರಿ ಆಸ್ಪತ್ರೆ
ಇಬ್ಬರು ಸೋಂಕಿತರು ಹಾಸ್ಟೆಲ್ನಲ್ಲಿ ಐಸೋಲೇಷನ್ಗೆ ಒಳಗಾಗಿದ್ದಾರೆ. ಆದರೆ, ಕಾಸರಗೋಡು ಹಾಗೂ ಎರ್ನಾಕುಲಂನ ಇಬ್ಬರು ಸೋಂಕಿತರು ಕಾಲೇಜಿನಿಂದ ಪರಾರಿಯಾಗಿ ತಮ್ಮ ಊರಿಗೆ ಸೇರಿಕೊಂಡಿದ್ದಾರೆ. ಇಂದು ಮತ್ತೆ 300 ಮಂದಿಯ ಗಂಟಲು ದ್ರವದ ಮಾದರಿಯನ್ನು ಲ್ಯಾಬ್ಗೆ ಕಳುಹಿಸಲಾಗಿದೆ.