ಪುತ್ತೂರು: ಪೆರ್ಲಂಪಾಡಿ ಮೂಲದ 55 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದು ಪುತ್ತೂರಿನ ಮಡಿವಾಳಕಟ್ಟೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಮೃತ ವ್ಯಕ್ತಿ ಪೆರ್ಲಂಪಾಡಿವರಾಗಿದ್ದರೂ ಬೆಂಗಳೂರಿನಲ್ಲೇ ನೆಲೆಸಿದ್ದರು. ನಿನ್ನೆ ಕೊರೊನಾದಿಂದ ಮೃತಪಟ್ಟ ಬಳಿಕ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ಮಾಡಲು ತಕ್ಷಣ ವ್ಯವಸ್ಥೆ ಇಲ್ಲದ ಹಿನ್ನೆಲೆ ಪುತ್ತೂರಿಗೆ ತಂದಿದ್ದಾರೆ. ನಂತರ ಶಾಸಕರ ವಾರ್ ರೂಮ್ ಸಹಾಯದೊಂದಿಗೆ ಕೋವಿಡ್ ಮಾರ್ಗಸೂಚಿಯಂತೆ ಅಂತಿಮ ಸಂಸ್ಕಾರ ಮಾಡಲಾಗಿದೆ.
ಈ ಕಾರ್ಯಕ್ಕೆ ಶಾಸಕರ ವಾರ್ ರೂಮ್ನ ತುರ್ತು ಸೇವಾ ವಿಭಾಗದ ಪಿ.ಜಿ ಜಗನಿವಾಸ ರಾವ್, ನಗರಸಭಾ ಸದಸ್ಯ ನವೀನ್ ಪೆರಿಯತ್ತೋಡಿ ಮತ್ತಿತರರು ಸಹಕರಿಸಿದ್ದಾರೆ.