ETV Bharat / state

ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಸದಾ ಸಿದ್ಧನಿದ್ದೇನೆ: ಶಾಸಕ ಭರತ್ ಶೆಟ್ಟಿ - Dr. Y Bharat Shetty

ಲಾಕ್​​ಡೌನ್​​ ಇರುವ ಹಿನ್ನೆಲೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ, ಪಕ್ಷದ ಕಾರ್ಯಕರ್ತರು ಹಾಗೂ ಮನಪಾ ಸದಸ್ಯರು, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿದ್ರು.

Dr. Y Bharat Shetty
ಡಾ. ವೈ ಭರತ್ ಶೆಟ್ಟಿ
author img

By

Published : Apr 9, 2020, 4:56 PM IST

Updated : Apr 9, 2020, 8:00 PM IST

ಮಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್​​​ಡೌನ್​​ ಆಗಿದೆ. ಈ ವೇಳೆ ಸಂಕಷ್ಟದಲ್ಲಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ, ನಮ್ಮ ಕಾರ್ಯಕರ್ತರು ಹಾಗೂ ಮನಪಾ ಸದಸ್ಯರು ಕುಟುಂಬಗಳಿಗೆ ಬೇಕಾದ ದಿನನಿತ್ಯದ ಆಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಹೇಳಿದ್ದಾರೆ.

ಈವರೆಗೂ ಸುಮಾರು 12,175 ಕಿಟ್​​ಗಳನ್ನು ವಿತರಿಸಿದ್ದು, ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ. ಸುಮಾರು 147 ಮಂದಿಯನ್ನು ಡಯಾಲಿಸಿಸ್ ಹಾಗೂ ಇತರ ಕಾಯಿಲೆಯಿಂದ ಬಳಲುತ್ತಿದ್ದವರನ್ನು ಅವರ ಮನೆಯಿಂದ ಕರೆದುಕೊಂಡು ಆಸ್ಪತ್ರೆಗೆ ಸೇರಿಸಿ, ಮನೆಗೆ ತಂದು ಬಿಡುವ ಕೆಲಸವನ್ನು ಮಾಡಿದ್ದೇವೆ. ಅಲ್ಲದೇ ಸುಮಾರು 2000 ಮಂದಿ ಹೊರ ರಾಜ್ಯದ ಕಾರ್ಮಿಕರಿಗೆ ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಾ. ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ

ಕೊರೊನಾ ವೈರಸ್​ ಹರಡದಂತೆ ತಡೆಯಲು ಮಾಸ್ಕ್​​ಗಳನ್ನು ನೀಡಲಿದ್ದು, ಸುಮಾರು 15000 ಮಾಸ್ಕ್​​ಗಳನ್ನು ಹಂಚುವ ಕೆಲಸ ಮಾಡಲಿದ್ದೇವೆ. ಈವರೆಗೂ 2000 ಮಾಸ್ಕ್​​ಗಳನ್ನು ಹಂಚಲಾಗಿದೆ. ಇನ್ನೂ 10,000 ಆಹಾರದ ಕಿಟ್​​ಗಳನ್ನು ತರಿಸುವ ಕೆಲಸ ನಡೆಯುತ್ತಿದ್ದು, ಎಲ್ಲಾ ಬೂತ್​​ಗಳ ಸಂಕಷ್ಟದಲ್ಲಿರುವ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ. ಇಂತಹ ಕಠಿಣ ಸಂದರ್ಭದಲ್ಲೂ ಜನರ ಸೇವೆ ಮಾಡುತ್ತಿರುವ ಎಲ್ಲಾ ಪಕ್ಷದವರಿಗೂ ನನ್ನ ವೈಯುಕ್ತಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಮಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್​​​ಡೌನ್​​ ಆಗಿದೆ. ಈ ವೇಳೆ ಸಂಕಷ್ಟದಲ್ಲಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ, ನಮ್ಮ ಕಾರ್ಯಕರ್ತರು ಹಾಗೂ ಮನಪಾ ಸದಸ್ಯರು ಕುಟುಂಬಗಳಿಗೆ ಬೇಕಾದ ದಿನನಿತ್ಯದ ಆಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಹೇಳಿದ್ದಾರೆ.

ಈವರೆಗೂ ಸುಮಾರು 12,175 ಕಿಟ್​​ಗಳನ್ನು ವಿತರಿಸಿದ್ದು, ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ. ಸುಮಾರು 147 ಮಂದಿಯನ್ನು ಡಯಾಲಿಸಿಸ್ ಹಾಗೂ ಇತರ ಕಾಯಿಲೆಯಿಂದ ಬಳಲುತ್ತಿದ್ದವರನ್ನು ಅವರ ಮನೆಯಿಂದ ಕರೆದುಕೊಂಡು ಆಸ್ಪತ್ರೆಗೆ ಸೇರಿಸಿ, ಮನೆಗೆ ತಂದು ಬಿಡುವ ಕೆಲಸವನ್ನು ಮಾಡಿದ್ದೇವೆ. ಅಲ್ಲದೇ ಸುಮಾರು 2000 ಮಂದಿ ಹೊರ ರಾಜ್ಯದ ಕಾರ್ಮಿಕರಿಗೆ ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಾ. ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ

ಕೊರೊನಾ ವೈರಸ್​ ಹರಡದಂತೆ ತಡೆಯಲು ಮಾಸ್ಕ್​​ಗಳನ್ನು ನೀಡಲಿದ್ದು, ಸುಮಾರು 15000 ಮಾಸ್ಕ್​​ಗಳನ್ನು ಹಂಚುವ ಕೆಲಸ ಮಾಡಲಿದ್ದೇವೆ. ಈವರೆಗೂ 2000 ಮಾಸ್ಕ್​​ಗಳನ್ನು ಹಂಚಲಾಗಿದೆ. ಇನ್ನೂ 10,000 ಆಹಾರದ ಕಿಟ್​​ಗಳನ್ನು ತರಿಸುವ ಕೆಲಸ ನಡೆಯುತ್ತಿದ್ದು, ಎಲ್ಲಾ ಬೂತ್​​ಗಳ ಸಂಕಷ್ಟದಲ್ಲಿರುವ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ. ಇಂತಹ ಕಠಿಣ ಸಂದರ್ಭದಲ್ಲೂ ಜನರ ಸೇವೆ ಮಾಡುತ್ತಿರುವ ಎಲ್ಲಾ ಪಕ್ಷದವರಿಗೂ ನನ್ನ ವೈಯುಕ್ತಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

Last Updated : Apr 9, 2020, 8:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.