ETV Bharat / state

ಪಿಎಫ್​ಐನಂತೆ ಎಸ್​​ಡಿಪಿಐ, ಮದರಸಗಳನ್ನೂ ನಿಷೇಧಿಸಿ: ಹಿಂದೂ ಮಹಾಸಭಾ ಆಗ್ರಹ - etv bharat kannada

ಪಿಎಫ್ಐ ನಿಷೇಧದಂತೆ ಮದರಸಗಳನ್ನೂ ನಿರ್ಬಂಧಿಸಬೇಕು. ಈ ರೀತಿ ಮಾಡಿದರೆ ಹಿಂದೂ ರಾಷ್ಟ್ರ ನಿರ್ಮಾಣವಾಗಲಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಪ್ರಮುಖರು ಹೇಳಿದ್ದಾರೆ.

hindu-mahasabha-urges-to-ban-sdpi-and-madarasa
ಪಿಎಫ್​ಐನಂತೆ ಎಸ್​​ಡಿಪಿಐ, ಮದರಸಗಳನ್ನೂ ನಿಷೇಧಿಸಿ: ಹಿಂದೂ ಮಹಾಸಭಾ ಆಗ್ರಹ
author img

By

Published : Sep 29, 2022, 7:27 PM IST

Updated : Sep 29, 2022, 8:04 PM IST

ಮಂಗಳೂರು: ದೇಶದಲ್ಲಿ ಪಿಎಫ್ಐ ನಿಷೇಧಿಸಿದಂತೆ ಎಸ್​​ಡಿಪಿಐ ಮತ್ತು ಮದರಸಗಳನ್ನು ನಿಷೇಧಿಸಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಆಗ್ರಹಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವಾಗ ಪಿಎಫ್ಐನ ರಾಜಕೀಯ ಪಕ್ಷವಾದ ಎಸ್​ಡಿಪಿಐಯನ್ನು ನಿಷೇಧ ಮಾಡದಿರುವುದು ಯಾಕೆ? ಮುಂದಿನ ಚುನಾವಣೆ ರಾಜಕೀಯಕ್ಕಾಗಿ ಲಾಭ ಪಡೆಯಲು ಎಸ್​ಡಿಪಿಐಯನ್ನು ನಿಷೇಧ ಮಾಡದೇ ಇರುವ ಬಗ್ಗೆ ಅನುಮಾನಗಳಿದೆ‌. ಎಸ್​ಡಿಪಿಐ ಮತ್ತು ಓವೈಸಿ ಪಕ್ಷವನ್ನು ಚುನಾವಣೆಗಾಗಿ ಬಿಜೆಪಿ ಬಳಸುತ್ತಿದೆ‌. ಎಸ್​ಡಿಪಿಐ ನಿಷೇಧ ಮಾಡದೇ ಇರುವುದು ಬೇಸರದ ಸಂಗತಿ ಎಂದರು.

ಹಿಂದೂ ಮಹಾಸಭಾ ಆಗ್ರಹ

ಅದೇ ರೀತಿ ಮದರಸಗಳನ್ನು ನಿಷೇಧಿಸಬೇಕು. ಈ ರೀತಿ ಮಾಡಿದರೆ ಹಿಂದೂ ರಾಷ್ಟ್ರ ನಿರ್ಮಾಣವಾಗಲಿದೆ ಎಂದ ಅವರು, ಬಿಜೆಪಿ ಎಂಬುದು ಭ್ರಷ್ಟ ಜನರ ಪಕ್ಷವಾಗಿದೆ. ಅದು ಹಿಂದೂ ಪಕ್ಷವಲ್ಲ. ಕೇವಲ ಬೂಟಾಟಿಕೆ ಮಾಡುತ್ತಿದೆ ಎಂದು ಟೀಕಿಸಿದರು.

ಇದೇ ವೇಳೆ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ಧರ್ಮೇಂದ್ರ ಅವರು, ಪಿಎಫ್ಐಗೆ ವಕ್ಫ್ ಬೋರ್ಡ್​ನಿಂದ ಹಣ ಸಂದಾಯವಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ವಕ್ಫ್​ ಬೋರ್ಡ್ ಎಸ್​​ಡಿಪಿಐ, ಕಾಂಗ್ರೆಸ್ ಅಧೀನದಲ್ಲಿ ಇಲ್ಲ. ರಾಜ್ಯ ಬಿಜೆಪಿ ಸರ್ಕಾರದ ಅಧೀನದಲ್ಲಿದೆ. ಅದರ ಮೂಲಕ ಹಣ ಸಂದಾಯವಾಗುತ್ತಿರುವುದು ಬೇಸರ ವಿಚಾರ. ತಾಕತ್ತಿದ್ದರೆ ಬಿಜೆಪಿ ಸರ್ಕಾರ ವಕ್ಫ್ ಬೋರ್ಡ್​ನ್ನು ತಕ್ಷಣ ನಿಷೇಧ ಮಾಡಲಿ ಎಂದು ಸವಾಲು ಹಾಕಿದರು.

ಆರ್​ಎಸ್​ಎಸ್ ಬಗ್ಗೆ ಹೇಳಿಕೆ ನೀಡುವ ಸಿದ್ದರಾಮಯ್ಯ ಅವರು ಈ ರೀತಿ ಮಾತನಾಡಿದರೆ ಬಹಳ ಕಷ್ಟವಾದೀತು. ಆರ್​ಎಸ್​ಎಸ್​ನ ಪಾದದ ಧೂಳಿಗೂ ಅವರು ಸಮವಲ್ಲ. ಆರ್​ಎಸ್​ಎಸ್ ಪ್ರಶ್ನಾತೀತ ಎಂದರು.

ಇದನ್ನೂ ಓದಿ: ಮಂಗಳೂರು: ಪಿಎಫ್ಐ ಸೇರಿದಂತೆ 12 ಕಚೇರಿಗಳಿಗೆ ಬೀಗಮುದ್ರೆ

ಮಂಗಳೂರು: ದೇಶದಲ್ಲಿ ಪಿಎಫ್ಐ ನಿಷೇಧಿಸಿದಂತೆ ಎಸ್​​ಡಿಪಿಐ ಮತ್ತು ಮದರಸಗಳನ್ನು ನಿಷೇಧಿಸಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಆಗ್ರಹಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವಾಗ ಪಿಎಫ್ಐನ ರಾಜಕೀಯ ಪಕ್ಷವಾದ ಎಸ್​ಡಿಪಿಐಯನ್ನು ನಿಷೇಧ ಮಾಡದಿರುವುದು ಯಾಕೆ? ಮುಂದಿನ ಚುನಾವಣೆ ರಾಜಕೀಯಕ್ಕಾಗಿ ಲಾಭ ಪಡೆಯಲು ಎಸ್​ಡಿಪಿಐಯನ್ನು ನಿಷೇಧ ಮಾಡದೇ ಇರುವ ಬಗ್ಗೆ ಅನುಮಾನಗಳಿದೆ‌. ಎಸ್​ಡಿಪಿಐ ಮತ್ತು ಓವೈಸಿ ಪಕ್ಷವನ್ನು ಚುನಾವಣೆಗಾಗಿ ಬಿಜೆಪಿ ಬಳಸುತ್ತಿದೆ‌. ಎಸ್​ಡಿಪಿಐ ನಿಷೇಧ ಮಾಡದೇ ಇರುವುದು ಬೇಸರದ ಸಂಗತಿ ಎಂದರು.

ಹಿಂದೂ ಮಹಾಸಭಾ ಆಗ್ರಹ

ಅದೇ ರೀತಿ ಮದರಸಗಳನ್ನು ನಿಷೇಧಿಸಬೇಕು. ಈ ರೀತಿ ಮಾಡಿದರೆ ಹಿಂದೂ ರಾಷ್ಟ್ರ ನಿರ್ಮಾಣವಾಗಲಿದೆ ಎಂದ ಅವರು, ಬಿಜೆಪಿ ಎಂಬುದು ಭ್ರಷ್ಟ ಜನರ ಪಕ್ಷವಾಗಿದೆ. ಅದು ಹಿಂದೂ ಪಕ್ಷವಲ್ಲ. ಕೇವಲ ಬೂಟಾಟಿಕೆ ಮಾಡುತ್ತಿದೆ ಎಂದು ಟೀಕಿಸಿದರು.

ಇದೇ ವೇಳೆ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ಧರ್ಮೇಂದ್ರ ಅವರು, ಪಿಎಫ್ಐಗೆ ವಕ್ಫ್ ಬೋರ್ಡ್​ನಿಂದ ಹಣ ಸಂದಾಯವಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ವಕ್ಫ್​ ಬೋರ್ಡ್ ಎಸ್​​ಡಿಪಿಐ, ಕಾಂಗ್ರೆಸ್ ಅಧೀನದಲ್ಲಿ ಇಲ್ಲ. ರಾಜ್ಯ ಬಿಜೆಪಿ ಸರ್ಕಾರದ ಅಧೀನದಲ್ಲಿದೆ. ಅದರ ಮೂಲಕ ಹಣ ಸಂದಾಯವಾಗುತ್ತಿರುವುದು ಬೇಸರ ವಿಚಾರ. ತಾಕತ್ತಿದ್ದರೆ ಬಿಜೆಪಿ ಸರ್ಕಾರ ವಕ್ಫ್ ಬೋರ್ಡ್​ನ್ನು ತಕ್ಷಣ ನಿಷೇಧ ಮಾಡಲಿ ಎಂದು ಸವಾಲು ಹಾಕಿದರು.

ಆರ್​ಎಸ್​ಎಸ್ ಬಗ್ಗೆ ಹೇಳಿಕೆ ನೀಡುವ ಸಿದ್ದರಾಮಯ್ಯ ಅವರು ಈ ರೀತಿ ಮಾತನಾಡಿದರೆ ಬಹಳ ಕಷ್ಟವಾದೀತು. ಆರ್​ಎಸ್​ಎಸ್​ನ ಪಾದದ ಧೂಳಿಗೂ ಅವರು ಸಮವಲ್ಲ. ಆರ್​ಎಸ್​ಎಸ್ ಪ್ರಶ್ನಾತೀತ ಎಂದರು.

ಇದನ್ನೂ ಓದಿ: ಮಂಗಳೂರು: ಪಿಎಫ್ಐ ಸೇರಿದಂತೆ 12 ಕಚೇರಿಗಳಿಗೆ ಬೀಗಮುದ್ರೆ

Last Updated : Sep 29, 2022, 8:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.