ETV Bharat / state

ಇತಿಹಾಸ ಪ್ರಸಿದ್ಧ ಪುತ್ತೂರು ಕಂಬಳದಲ್ಲಿ ನಟಿ ಸಾನ್ಯಾ ಅಯ್ಯರ್​ಗೆ​​ ಕಿರುಕುಳ: ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸ್ಪಷ್ಟನೆ

author img

By

Published : Jan 31, 2023, 6:28 PM IST

Updated : Jan 31, 2023, 8:03 PM IST

ಇತಿಹಾಸ ಪ್ರಸಿದ್ಧ ಪುತ್ತೂರು ಕಂಬಳದಲ್ಲಿ ನಟಿ ಸಾನ್ಯಾ ಅಯ್ಯರ್​ಗೆ​​ ಕಿರುಕುಳ - ಕಂಬಳ ಆಯೋಜಕರ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ - ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ

Harassment On actress Sanya Iyer
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸ್ಪಷ್ಟನೆ

ಪುತ್ತೂರು (ದಕ್ಷಿಣಕನ್ನಡ): ಪುತ್ತೂರಿನ ಇತಿಹಾಸ ಪ್ರಸಿದ್ಧ ಕೋಟಿ-ಚೆನ್ನಯ ಜೋಡು ಕರೆ ಕಂಬಳದಲ್ಲಿ ಚಿತ್ರನಟಿ, ಬಿಗ್​ಬಾಸ್​ ತಾರೆ ಸಾನ್ಯಾ ಅಯ್ಯರ್​​ಗೆ ಕಿರುಕುಳ ನೀಡಿದ್ದಾರೆ ಎನ್ನಲಾಗುತ್ತಿದ್ದು ಈ ಬಗ್ಗೆ ಕಂಬಳದ ವ್ಯವಸ್ಥಾಪಕರಲ್ಲಿ ಓರ್ವರಾದ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದ ನವದಂಪತಿ ಕೆಎಲ್​ ರಾಹುಲ್ - ಅಥಿಯಾ ಶೆಟ್ಟಿ

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಪ್ರಕರಣವು ಕಂಬಳ ಸಮಿತಿಯ ಪ್ರಮುಖರು ಸಭೆಯನ್ನು ಮುಗಿಸಿ ಮನೆಗೆ ಹೋದ ಬಳಿಕ ನಡೆದ ಘಟನೆಯಾಗಿದೆ. ಇದು ಕಂಬಳಕ್ಕೆ ಸಂಬಂಧಿಸಿದ ವಿಷಯವಲ್ಲ. ಅದನ್ನು ಉದ್ದೇಶಪೂರ್ವಕವಾಗಿ ಎಳೆದು ತರಲಾಗಿದೆ. ಈ ಪ್ರಕರಣಕ್ಕೂ ಕಂಬಳ ಸಮಿತಿಗೂ ಸಂಬಂಧವಿಲ್ಲ ಎಂದಿದ್ದಾರೆ.

ನಾನು ರಾತ್ರಿ 11 ಗಂಟೆಯ ತನಕ ಕಂಬಳದಲ್ಲಿದ್ದೆ. ಈ ನಡುವೆ ಸಾನ್ಯಾ ಅಯ್ಯರ್ ಅವರನ್ನು ಕಾರ್ಯಕ್ರಮ ಮುಗಿದ ಬಳಿಕ ಅವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಿ ಅವರನ್ನು ವಿಶ್ರಾಂತಿ ಕೊಠಡಿಯಲ್ಲಿ ಬಿಡಲಾಗಿತ್ತು. ಆ ಬಳಿಕ ಅವರು ಮತ್ತೆ ಕಾರ್ಯಕ್ರಮದತ್ತ ಬಂದದಕ್ಕೆ ನಾವು ಹೊಣೆಗಾರರಲ್ಲ. ಅಲ್ಲದೆ, ಮಾರನೆಯ ದಿನ ಕುತ್ತಾರ್‍ನಲ್ಲಿ ನಡೆದ ಕೊರಗಜ್ಜನ ಕಾರ್ಯಕ್ರಮದಲ್ಲಿ ಮೂವರು ಯುವಕರು ಹಾಗೂ ಮೂವರು ಯುವತಿಯರು ನನಗೆ ಸಿಕ್ಕಿ ನನ್ನೊಂದಿಗೆ ಮಾತುಕತೆ ಮಾಡಿದ್ದರು. ಆಗ ಅವರು ನಾವು ಸಾನ್ಯಾ ಜೊತೆಗೆ ಬಂದವರು. ಕಂಬಳವನ್ನು ವೀಕ್ಷಣೆ ಮಾಡಿದ್ದೇವೆ. ತುಂಬಾ ಖುಷಿಯಾಯಿತು ಎಂದು ಹೇಳಿದ್ದರು. ಘಟನೆಯ ಬಗ್ಗೆ ಅವರು ಯಾರೂ ನನ್ನಲ್ಲಿ ಈ ಪ್ರಸ್ತಾಪವೇ ಮಾಡಿಲ್ಲ.

ಇದನ್ನೂ ಓದಿ: ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 27 ವಸಂತ..ಪ್ಯಾನ್​ ಇಂಡಿಯಾ ಸ್ಟಾರ್​ ಜರ್ನಿ ಇಲ್ಲಿದೆ

ಬಳಿಕ ಮಾಧ್ಯಮದವರು ಕೇಳಿದಾಗ ನನಗೆ ಗೊತ್ತಾಯಿತು. ಈ ಬಗ್ಗೆ ವ್ಯವಸ್ಥಾಪಕರಲ್ಲಿ ವಿಚಾರಿಸಿದಾಗ ಅವರಿಗೂ ಗೊತ್ತಿರಲಿಲ್ಲ. ಸಾನ್ಯಾ ಮತ್ತು ತಂಡ ರಾತ್ರಿ ಮತ್ತೆ ಕಂಬಳಕ್ಕೆ ಬರುತ್ತಿರುವ ಬಗ್ಗೆ ನಮಗೆ ತಿಳಿಸಿದ್ದಲ್ಲಿ ಅವರಿಗೆ ಸ್ವಯಂ ಸೇವಕರ ವ್ಯವಸ್ಥೆ ಮಾಡುತ್ತಿದ್ದೆವು. ಅವರು ಯಾರ ಗಮನಕ್ಕೂ ತರದೆ ತಡರಾತ್ರಿ ಮತ್ತೆ ಬಂದಿದ್ದಾರೆ. ಆದಾಗ್ಯೂ ಅವರು ಪೊಲೀಸರಿಗೆ ದೂರು ನೀಡಿದಲ್ಲಿ ಅವರಿಗೆ ಸೂಕ್ತ ನ್ಯಾಯಕ್ಕಾಗಿ ನಾನೂ ಪ್ರಯತ್ನಿಸುತ್ತೇನೆ. ಇದು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಕಳೆದ 30 ವರ್ಷಗಳಿಂದ ನಡೆಯುತ್ತಿರುವ ಕಂಬಳ. ಇದರ ಹೆಸರು ಹಾಳು ಮಾಡಲು ಪ್ರಯತ್ನಿಸಿದರೆ ಅವರನ್ನು ಮಹಾಲಿಂಗೇಶ್ವರನೇ ನೋಡಿಕೊಳ್ಳುತ್ತಾನೆ ಎಂದು ಹೇಳಿಕೆ ನೀಡಿದ್ದಾರೆ.

ಪ್ರಕರಣ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದೂ ಮುಖಂಡ ದಿನೇಶ್ ಜೈನ್, ಜನವರಿ 28 ರಂದು ಪುತ್ತೂರು ಕಂಬಳದಲ್ಲಿ ಈ ರೀತಿ ಕಿರುಕುಳ ನೀಡಿದ ಎರಡು ಘಟನೆ ನಡೆದಿವೆ. ಎರಡೂ ಘಟನೆಗಳು ಅಸಹ್ಯ ತರಿಸುವಂತಹದ್ದು. ಈ ರೀತಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ ಈ ಕೃತ್ಯಗಳು ಮತ್ತೆ ನಡೆಯದಂತೆ ಎಚ್ಚರ ವಹಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಶಮಿತಾ ಶೆಟ್ಟಿ ಕೆನ್ನೆಗೆ ಮುತ್ತಿಟ್ಟ ಆಮೀರ್ ಅಲಿ: ಡೇಟಿಂಗ್​ ವದಂತಿ ಬಗ್ಗೆ ನಟಿಯ ಪ್ರತಿಕ್ರಿಯೆ ಹೀಗಿದೆ

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸ್ಪಷ್ಟನೆ

ಪುತ್ತೂರು (ದಕ್ಷಿಣಕನ್ನಡ): ಪುತ್ತೂರಿನ ಇತಿಹಾಸ ಪ್ರಸಿದ್ಧ ಕೋಟಿ-ಚೆನ್ನಯ ಜೋಡು ಕರೆ ಕಂಬಳದಲ್ಲಿ ಚಿತ್ರನಟಿ, ಬಿಗ್​ಬಾಸ್​ ತಾರೆ ಸಾನ್ಯಾ ಅಯ್ಯರ್​​ಗೆ ಕಿರುಕುಳ ನೀಡಿದ್ದಾರೆ ಎನ್ನಲಾಗುತ್ತಿದ್ದು ಈ ಬಗ್ಗೆ ಕಂಬಳದ ವ್ಯವಸ್ಥಾಪಕರಲ್ಲಿ ಓರ್ವರಾದ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದ ನವದಂಪತಿ ಕೆಎಲ್​ ರಾಹುಲ್ - ಅಥಿಯಾ ಶೆಟ್ಟಿ

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಪ್ರಕರಣವು ಕಂಬಳ ಸಮಿತಿಯ ಪ್ರಮುಖರು ಸಭೆಯನ್ನು ಮುಗಿಸಿ ಮನೆಗೆ ಹೋದ ಬಳಿಕ ನಡೆದ ಘಟನೆಯಾಗಿದೆ. ಇದು ಕಂಬಳಕ್ಕೆ ಸಂಬಂಧಿಸಿದ ವಿಷಯವಲ್ಲ. ಅದನ್ನು ಉದ್ದೇಶಪೂರ್ವಕವಾಗಿ ಎಳೆದು ತರಲಾಗಿದೆ. ಈ ಪ್ರಕರಣಕ್ಕೂ ಕಂಬಳ ಸಮಿತಿಗೂ ಸಂಬಂಧವಿಲ್ಲ ಎಂದಿದ್ದಾರೆ.

ನಾನು ರಾತ್ರಿ 11 ಗಂಟೆಯ ತನಕ ಕಂಬಳದಲ್ಲಿದ್ದೆ. ಈ ನಡುವೆ ಸಾನ್ಯಾ ಅಯ್ಯರ್ ಅವರನ್ನು ಕಾರ್ಯಕ್ರಮ ಮುಗಿದ ಬಳಿಕ ಅವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಿ ಅವರನ್ನು ವಿಶ್ರಾಂತಿ ಕೊಠಡಿಯಲ್ಲಿ ಬಿಡಲಾಗಿತ್ತು. ಆ ಬಳಿಕ ಅವರು ಮತ್ತೆ ಕಾರ್ಯಕ್ರಮದತ್ತ ಬಂದದಕ್ಕೆ ನಾವು ಹೊಣೆಗಾರರಲ್ಲ. ಅಲ್ಲದೆ, ಮಾರನೆಯ ದಿನ ಕುತ್ತಾರ್‍ನಲ್ಲಿ ನಡೆದ ಕೊರಗಜ್ಜನ ಕಾರ್ಯಕ್ರಮದಲ್ಲಿ ಮೂವರು ಯುವಕರು ಹಾಗೂ ಮೂವರು ಯುವತಿಯರು ನನಗೆ ಸಿಕ್ಕಿ ನನ್ನೊಂದಿಗೆ ಮಾತುಕತೆ ಮಾಡಿದ್ದರು. ಆಗ ಅವರು ನಾವು ಸಾನ್ಯಾ ಜೊತೆಗೆ ಬಂದವರು. ಕಂಬಳವನ್ನು ವೀಕ್ಷಣೆ ಮಾಡಿದ್ದೇವೆ. ತುಂಬಾ ಖುಷಿಯಾಯಿತು ಎಂದು ಹೇಳಿದ್ದರು. ಘಟನೆಯ ಬಗ್ಗೆ ಅವರು ಯಾರೂ ನನ್ನಲ್ಲಿ ಈ ಪ್ರಸ್ತಾಪವೇ ಮಾಡಿಲ್ಲ.

ಇದನ್ನೂ ಓದಿ: ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 27 ವಸಂತ..ಪ್ಯಾನ್​ ಇಂಡಿಯಾ ಸ್ಟಾರ್​ ಜರ್ನಿ ಇಲ್ಲಿದೆ

ಬಳಿಕ ಮಾಧ್ಯಮದವರು ಕೇಳಿದಾಗ ನನಗೆ ಗೊತ್ತಾಯಿತು. ಈ ಬಗ್ಗೆ ವ್ಯವಸ್ಥಾಪಕರಲ್ಲಿ ವಿಚಾರಿಸಿದಾಗ ಅವರಿಗೂ ಗೊತ್ತಿರಲಿಲ್ಲ. ಸಾನ್ಯಾ ಮತ್ತು ತಂಡ ರಾತ್ರಿ ಮತ್ತೆ ಕಂಬಳಕ್ಕೆ ಬರುತ್ತಿರುವ ಬಗ್ಗೆ ನಮಗೆ ತಿಳಿಸಿದ್ದಲ್ಲಿ ಅವರಿಗೆ ಸ್ವಯಂ ಸೇವಕರ ವ್ಯವಸ್ಥೆ ಮಾಡುತ್ತಿದ್ದೆವು. ಅವರು ಯಾರ ಗಮನಕ್ಕೂ ತರದೆ ತಡರಾತ್ರಿ ಮತ್ತೆ ಬಂದಿದ್ದಾರೆ. ಆದಾಗ್ಯೂ ಅವರು ಪೊಲೀಸರಿಗೆ ದೂರು ನೀಡಿದಲ್ಲಿ ಅವರಿಗೆ ಸೂಕ್ತ ನ್ಯಾಯಕ್ಕಾಗಿ ನಾನೂ ಪ್ರಯತ್ನಿಸುತ್ತೇನೆ. ಇದು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಕಳೆದ 30 ವರ್ಷಗಳಿಂದ ನಡೆಯುತ್ತಿರುವ ಕಂಬಳ. ಇದರ ಹೆಸರು ಹಾಳು ಮಾಡಲು ಪ್ರಯತ್ನಿಸಿದರೆ ಅವರನ್ನು ಮಹಾಲಿಂಗೇಶ್ವರನೇ ನೋಡಿಕೊಳ್ಳುತ್ತಾನೆ ಎಂದು ಹೇಳಿಕೆ ನೀಡಿದ್ದಾರೆ.

ಪ್ರಕರಣ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದೂ ಮುಖಂಡ ದಿನೇಶ್ ಜೈನ್, ಜನವರಿ 28 ರಂದು ಪುತ್ತೂರು ಕಂಬಳದಲ್ಲಿ ಈ ರೀತಿ ಕಿರುಕುಳ ನೀಡಿದ ಎರಡು ಘಟನೆ ನಡೆದಿವೆ. ಎರಡೂ ಘಟನೆಗಳು ಅಸಹ್ಯ ತರಿಸುವಂತಹದ್ದು. ಈ ರೀತಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ ಈ ಕೃತ್ಯಗಳು ಮತ್ತೆ ನಡೆಯದಂತೆ ಎಚ್ಚರ ವಹಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಶಮಿತಾ ಶೆಟ್ಟಿ ಕೆನ್ನೆಗೆ ಮುತ್ತಿಟ್ಟ ಆಮೀರ್ ಅಲಿ: ಡೇಟಿಂಗ್​ ವದಂತಿ ಬಗ್ಗೆ ನಟಿಯ ಪ್ರತಿಕ್ರಿಯೆ ಹೀಗಿದೆ

Last Updated : Jan 31, 2023, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.