ETV Bharat / state

ಹೆದ್ದಾರಿ ಪಕ್ಕ ಎಲ್ಲೆಂದರಲ್ಲಿ ಕಸ: ಗುಂಡ್ಯ ಗ್ರಾಮ ಪಂಚಾಯತ್​ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

author img

By

Published : Sep 26, 2019, 12:50 PM IST

ಪುಷ್ಪಗಿರಿ ವನ್ಯಧಾಮದ ಸುಂದರ ಪ್ರಕೃತಿಯ ನಡುವೆ ಹರಿದು ಬರುವ ಒಂದು ಚಿಕ್ಕ ತೊರೆಯ ನೀರಿಗೆ ಈ ಪ್ರದೇಶದ ಎಲ್ಲಾ ಕಸ, ತ್ಯಾಜ್ಯಗಳನ್ನು ತಂದು ಸುರಿದು ಗಬ್ಬು ನಾರುವಂತೆ ಮಾಡಲಾಗಿದೆ. ಇದು ಗುಂಡ್ಯ ಗ್ರಾಮ ಪಂಚಾಯತ್​ ನಿರ್ಲಕ್ಷ್ಯವೆಂದು ನೀತಿ ಟ್ರಸ್ಟ್​ ಅಧ್ಯಕ್ಷರು ಆರೋಪಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ಎಲ್ಲೆಂದರಲ್ಲಿ ಕಸ

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ ಗುಂಡ್ಯ ಗ್ರಾಮದ ಬಳಿ ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಎಸೆಯಲಾಗಿದೆ. ಇಲ್ಲಿ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಸ್ಥಳೀಯ ಗ್ರಾಮ ಪಂಚಾಯತ್​ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬದಿ ಎಲ್ಲೆಂದರಲ್ಲಿ ಕಸ

ಪುಷ್ಪಗಿರಿ ವನ್ಯಧಾಮದ ಸುಂದರ ಪ್ರಕೃತಿಯ ನಡುವೆ ಹರಿದು ಬರುವ ಒಂದು ಚಿಕ್ಕ ತೊರೆಯ ನೀರಿಗೆ ಈ ಪ್ರದೇಶದ ಎಲ್ಲಾ ಕಸ, ತ್ಯಾಜ್ಯಗಳನ್ನು ತಂದು ಸುರಿದು ಗಬ್ಬು ನಾರುವಂತೆ ಮಾಡಲಾಗಿದೆ. ಇದೇ ನೀರನ್ನು ಪ್ರವಾಸಿಗರು ಸೇರಿದಂತೆ‌ ಸಾರ್ವಜನಿಕರು ಕುಡಿಯಲು ಉಪಯೋಗಿಸುತ್ತಾರೆ. ಆದರೂ ಕ್ರಮ ಕೈಗೊಳ್ಳದ ಗ್ರಾಮ ಪಂಚಾಯತ್​ ನಡೆಯಿಂದ ಸ್ಥಳೀಯರಿಗೆ ಕಿರಿ ಕಿರಿ ಉಂಟಾಗಿದೆ.

ಈ ಕುರಿತಂತೆ ನೀತಿ ಸಾಮಾಜಿಕ ಸಂಘಟನೆ ಗ್ರಾಮ ಪಂಚಾಯತ್​ ಎಚ್ಚರಿಕೆ ನೀಡಿದ್ದು, ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಅವರು ಈ ಪ್ರದೇಶದಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಕಸವನ್ನು ಕೂಡಲೇ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಗ್ರಾಮ ಪಂಚಾಯತ್​ಗೆ ಆಗ್ರಹಿಸಿದ್ದಾರೆ.

ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು, ಉಡುಪಿ, ಸೇರಿದಂತೆ ದಕ್ಷಿಣ ಕನ್ನಡದ ಪ್ರವಾಸಿ ಕೇಂದ್ರಗಳಿಗೆ ಬರುವ ಪ್ರವಾಸಿಗರು ಇಲ್ಲಿ ಚಹ-ತಿಂಡಿಗಳನ್ನು ಸೇವಿಸಿ, ಸ್ವಲ್ಪ ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ. ಆದುದರಿಂದ ಈ ಗ್ರಾಮೀಣ ಪ್ರದೇಶ ದಿನದಿಂದ ದಿನಕ್ಕೆ ಅಭಿವೃದ್ಧಿಯ ಜೊತೆಗೆ ಸ್ಥಳೀಯ ವ್ಯಾಪಾರಸ್ಥರಿಗೆ ಜೀವನೋಪಾಯ ಕಲ್ಪಿಸಿದೆ.

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ ಗುಂಡ್ಯ ಗ್ರಾಮದ ಬಳಿ ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಎಸೆಯಲಾಗಿದೆ. ಇಲ್ಲಿ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಸ್ಥಳೀಯ ಗ್ರಾಮ ಪಂಚಾಯತ್​ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬದಿ ಎಲ್ಲೆಂದರಲ್ಲಿ ಕಸ

ಪುಷ್ಪಗಿರಿ ವನ್ಯಧಾಮದ ಸುಂದರ ಪ್ರಕೃತಿಯ ನಡುವೆ ಹರಿದು ಬರುವ ಒಂದು ಚಿಕ್ಕ ತೊರೆಯ ನೀರಿಗೆ ಈ ಪ್ರದೇಶದ ಎಲ್ಲಾ ಕಸ, ತ್ಯಾಜ್ಯಗಳನ್ನು ತಂದು ಸುರಿದು ಗಬ್ಬು ನಾರುವಂತೆ ಮಾಡಲಾಗಿದೆ. ಇದೇ ನೀರನ್ನು ಪ್ರವಾಸಿಗರು ಸೇರಿದಂತೆ‌ ಸಾರ್ವಜನಿಕರು ಕುಡಿಯಲು ಉಪಯೋಗಿಸುತ್ತಾರೆ. ಆದರೂ ಕ್ರಮ ಕೈಗೊಳ್ಳದ ಗ್ರಾಮ ಪಂಚಾಯತ್​ ನಡೆಯಿಂದ ಸ್ಥಳೀಯರಿಗೆ ಕಿರಿ ಕಿರಿ ಉಂಟಾಗಿದೆ.

ಈ ಕುರಿತಂತೆ ನೀತಿ ಸಾಮಾಜಿಕ ಸಂಘಟನೆ ಗ್ರಾಮ ಪಂಚಾಯತ್​ ಎಚ್ಚರಿಕೆ ನೀಡಿದ್ದು, ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಅವರು ಈ ಪ್ರದೇಶದಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಕಸವನ್ನು ಕೂಡಲೇ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಗ್ರಾಮ ಪಂಚಾಯತ್​ಗೆ ಆಗ್ರಹಿಸಿದ್ದಾರೆ.

ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು, ಉಡುಪಿ, ಸೇರಿದಂತೆ ದಕ್ಷಿಣ ಕನ್ನಡದ ಪ್ರವಾಸಿ ಕೇಂದ್ರಗಳಿಗೆ ಬರುವ ಪ್ರವಾಸಿಗರು ಇಲ್ಲಿ ಚಹ-ತಿಂಡಿಗಳನ್ನು ಸೇವಿಸಿ, ಸ್ವಲ್ಪ ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ. ಆದುದರಿಂದ ಈ ಗ್ರಾಮೀಣ ಪ್ರದೇಶ ದಿನದಿಂದ ದಿನಕ್ಕೆ ಅಭಿವೃದ್ಧಿಯ ಜೊತೆಗೆ ಸ್ಥಳೀಯ ವ್ಯಾಪಾರಸ್ಥರಿಗೆ ಜೀವನೋಪಾಯ ಕಲ್ಪಿಸಿದೆ.

Intro:ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬರುವ ಗುಂಡ್ಯ ಎಂಬ ಗ್ರಾಮೀಣ ಪ್ರದೇಶ. ಸುಬ್ರಹ್ಮಣ್ಯ,ಧರ್ಮಸ್ಥಳ, ಮಂಗಳೂರು, ಉಡುಪಿ, ಸೇರಿದಂತೆ ದಕ್ಷಿಣ ಕನ್ನಡದ ಪ್ರವಾಸಿ ಕೇಂದ್ರಗಳಿಗೆ ಬರುವ ಪ್ರವಾಸಿಗರು ಇಲ್ಲಿ ಚಾ-ತಿಂಡಿಗಳನ್ನು ಸೇವಿಸಿ, ಸ್ವಲ್ಪ ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ. ಆದುದರಿಂದ ಈ ಗ್ರಾಮೀಣ ಪ್ರದೇಶ ದಿನದಿಂದ ದಿನಕ್ಕೆ ಅಭಿವೃದ್ಧಿಯ ಜೊತೆಗೆ ಸ್ಥಳೀಯ ವ್ಯಾಪಾರಸ್ಥರಿಗೆ ಜೀವನೋಪಾಯ ಕಲ್ಪಿಸಿದೆ.

ಆದರೆ ಇಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ, ಕಸದಿಂದ ತುಂಬಿ ತುಳುಕುತ್ತಿದೆ. ಇಲ್ಲಿ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಸ್ಥಳೀಯ ಗ್ರಾಮ ಪಂಚಾಯತ್ ಮುಂದಾಗುತ್ತಿಲ್ಲ. ಪುಷ್ಪಗಿರಿ ವನ್ಯಧಾಮದ ಸುಂದರ ಪ್ರಕೃತಿಯ ನಡುವೆ ಹರಿದು ಬರುವ ಒಂದು ಚಿಕ್ಕ ತೊರೆಯ ನೀರಿಗೆ ಈ ಪ್ರದೇಶದ ಎಲ್ಲಾ ಕಸ,ತ್ಯಾಜ್ಯಗಳನ್ನು ತಂದು ಸುರಿದು ಗಬ್ಬು ನಾರುವಂತೆ ಮಾಡಲಾಗುತ್ತಿದೆ. ಇದೇ ನೀರನ್ನು ಪ್ರವಾಸಿಗರು ಸೇರಿದಂತೆ‌ ಸಾರ್ವಜನಿಕರು ಕುಡಿಯಲೂ ಉಪಯೋಗಿಸುತ್ತಾರೆ.
ಈ ಕುರಿತಂತೆ ನೀತಿ ಸಾಮಾಜಿಕ ಸಂಘಟನೆ ಗ್ರಾಮ ಪಂಚಾಯತಿಗೆ ಎಚ್ಚರಿಕೆ ನೀಡಿದ್ದು, ನೀತಿ ತಂಡದ ರಾಜ್ಯಾಧ್ಯಕ್ಷರಾದ ಜಯನ್ ಅವರು ಈ ಪ್ರದೇಶದಲ್ಲಿ ರಾಶಿ ರಾಶಿ ಬಿದ್ದಿರುವ ಕಸವನ್ನು ಕೂಡಲೇ ತೆರವುಗೊಳಿಸಿ ಸ್ವಚ್ಚತೆ ಕಾಪಾಡುವಂತೆ ಗ್ರಾಮ ಪಂಚಾಯತ ಗೆ ತಾಕೀತು ಮಾಡಿದ್ದಾರೆ.Body:ಜಯನ್ ನೀತಿ ಟ್ರಸ್ಟ್ ಅಧ್ಯಕ್ಷರುConclusion:ಪ್ರಕಾಶ್ ಕಡಬ ದಕ್ಷಿಣಕನ್ನಡ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.