ETV Bharat / state

ತಲೆ ತೆಗೆಯುತ್ತೇವೆ ಎಂದವರ ಬಗ್ಗೆ ಕನಿಕರ ವ್ಯಕ್ತಪಡಿಸಿದ ಮಾಜಿ ಸಚಿವ ಯು.ಟಿ. ಖಾದರ್ - ಮಾಜಿ ಸಚಿವ ಯು.ಟಿ ಖಾದರ್ ಮಂಗಳೂರು

ಸಿಎಎ ಪರ ರ್ಯಾಲಿಯಲ್ಲಿ ತಲೆ ಕಡಿಯುತ್ತೇವೆ ಎಂದು ಘೋಷಣೆ ಕೂಗಿದ ಯುವಕರಿಗೆ ಸಿಎಎ, ಎನ್ಆರ್​​ಸಿ ಬಗ್ಗೆ ನಿಜಾಂಶ ಗೊತ್ತಾದರೆ ನನ್ನ ವಿರುದ್ಧ ಅಲ್ಲ, ಅವರ ವಿರುದ್ಧವೇ ಘೋಷಣೆ ಕೂಗಬಹುದು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

Former minister UT Khader
ಮಾಜಿ ಸಚಿವ ಯು.ಟಿ ಖಾದರ್
author img

By

Published : Jan 28, 2020, 10:09 PM IST

ಮಂಗಳೂರು: ಸೋಮವಾರ ನಡೆದಿದ್ದ ಸಿಎಎ ಪರ ರ್ಯಾಲಿಯಲ್ಲಿ ನನ್ನ ತಲೆ ಕಡಿಯುತ್ತೇವೆ ಎಂದು ಘೋಷಣೆ ಕೂಗಿದ ಯುವಕರಿಗೆ ಸಿಎಎ, ಎನ್ಆರ್​​ಸಿ ಬಗ್ಗೆ ನಿಜಾಂಶ ಗೊತ್ತಾದರೆ ನನ್ನ ವಿರುದ್ಧ ಅಲ್ಲ, ಅವರ ವಿರುದ್ಧವೇ ಘೋಷಣೆ ಕೂಗಬಹುದು ಎಂದು ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವು ಯುವಕರಿಗೆ ಸರಿಯಾಗಿ ವಿಷಯ ಗೊತ್ತಿಲ್ಲದೆ ಘೋಷಣೆ ಕೂಗಿದ್ದಾರೆ. ಅವರಿಗೆ ಸರಿಯಾಗಿ ವಿಷಯ ಗೊತ್ತಾಗಿ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಬಂದಾಗ ಎನ್ಆರ್​​ಸಿ ಕಾನೂನು ತಂದವರ ವಿರುದ್ಧ ಘೋಷಣೆ ಕೂಗಬಹುದು ಎಂದರು. ಎನ್‌ಆರ್​​ಸಿ ಕಾನೂನು ಬಂದಾಗ ಇವರು ಮೈದಾನಕ್ಕೆ ಹೋಗಿದ್ದಾರೆ, ರಕ್ಷಣಾ ಸಚಿವರ ಭಾಷಣ ಕೇಳಿದ್ದಾರೆ. ಇವರನ್ನು ಸಹ ಎನ್ಆರ್​​ಸಿ ಯಲ್ಲಿ ಕೇಂದ್ರ ಸರ್ಕಾರ ಬಿಡುವುದಿಲ್ಲ ಎಂದರು.

ತಲೆ ತೆಗೆಯುತ್ತೇವೆ ಎಂದವರ ಬಗ್ಗೆ ಕನಿಕರವಿದೆ: ಮಾಜಿ ಸಚಿವ ಯು.ಟಿ. ಖಾದರ್

ಇನ್ನು, ಈ ಬೆದರಿಕೆ ಘೋಷಣೆ ಬಗ್ಗೆ ದೂರು ದಾಖಲಿಸುವುದಿಲ್ಲ. ಅವರನ್ನು ಜೈಲಿಗೆ ಕಳುಹಿಸಬಹುದು. ಆದರೆ ಅವರ ತಂದೆ ತಾಯಿಗಳು ಇವರನ್ನು ಜೈಲಿನಿಂದ ಬಿಡಿಸಲು, ಜಾಮೀನು ನೀಡಲು ಕಷ್ಟ ಪಡಬೇಕಾಗುತ್ತದೆ. ಅದಕ್ಕಾಗಿ ನಾನು ದೂರು ನೀಡುವುದಿಲ್ಲ. ಆದರೆ ಕೆಲವು ಬೆಂಬಲಿಗರು ದೂರು ನೀಡುತ್ತಿದ್ದಾರೆ ಎಂದರು. ನನ್ಮ ತಲೆ ತೆಗೆದು ಬಳಿಕ ಕೈಕಾಲು ತೆಗೆಯುತ್ತೇನೆ ಅನ್ನುತ್ತಾರೆ. ಆದ್ರೆ ತಲೆ ತೆಗೆದ ಬಳಿಕ ಕೈಕಾಲು ತೆಗೆದು ಏನು ಪ್ರಯೋಜನ ಎಂದು ಯು ಟಿ ಖಾದರ್​ ನಗೆಚಟಾಕಿ ಹಾರಿಸಿದ್ರು.

ಈ ಬೆದರಿಕೆ ಘೋಷಣೆ ನಮ್ಮ ಜಿಲ್ಲೆಯವರು ಮಾಡಿದ್ದಲ್ಲ. ಹೊರ ಜಿಲ್ಲೆಯವರು ಮಾಡಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.

ಮಂಗಳೂರು: ಸೋಮವಾರ ನಡೆದಿದ್ದ ಸಿಎಎ ಪರ ರ್ಯಾಲಿಯಲ್ಲಿ ನನ್ನ ತಲೆ ಕಡಿಯುತ್ತೇವೆ ಎಂದು ಘೋಷಣೆ ಕೂಗಿದ ಯುವಕರಿಗೆ ಸಿಎಎ, ಎನ್ಆರ್​​ಸಿ ಬಗ್ಗೆ ನಿಜಾಂಶ ಗೊತ್ತಾದರೆ ನನ್ನ ವಿರುದ್ಧ ಅಲ್ಲ, ಅವರ ವಿರುದ್ಧವೇ ಘೋಷಣೆ ಕೂಗಬಹುದು ಎಂದು ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವು ಯುವಕರಿಗೆ ಸರಿಯಾಗಿ ವಿಷಯ ಗೊತ್ತಿಲ್ಲದೆ ಘೋಷಣೆ ಕೂಗಿದ್ದಾರೆ. ಅವರಿಗೆ ಸರಿಯಾಗಿ ವಿಷಯ ಗೊತ್ತಾಗಿ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಬಂದಾಗ ಎನ್ಆರ್​​ಸಿ ಕಾನೂನು ತಂದವರ ವಿರುದ್ಧ ಘೋಷಣೆ ಕೂಗಬಹುದು ಎಂದರು. ಎನ್‌ಆರ್​​ಸಿ ಕಾನೂನು ಬಂದಾಗ ಇವರು ಮೈದಾನಕ್ಕೆ ಹೋಗಿದ್ದಾರೆ, ರಕ್ಷಣಾ ಸಚಿವರ ಭಾಷಣ ಕೇಳಿದ್ದಾರೆ. ಇವರನ್ನು ಸಹ ಎನ್ಆರ್​​ಸಿ ಯಲ್ಲಿ ಕೇಂದ್ರ ಸರ್ಕಾರ ಬಿಡುವುದಿಲ್ಲ ಎಂದರು.

ತಲೆ ತೆಗೆಯುತ್ತೇವೆ ಎಂದವರ ಬಗ್ಗೆ ಕನಿಕರವಿದೆ: ಮಾಜಿ ಸಚಿವ ಯು.ಟಿ. ಖಾದರ್

ಇನ್ನು, ಈ ಬೆದರಿಕೆ ಘೋಷಣೆ ಬಗ್ಗೆ ದೂರು ದಾಖಲಿಸುವುದಿಲ್ಲ. ಅವರನ್ನು ಜೈಲಿಗೆ ಕಳುಹಿಸಬಹುದು. ಆದರೆ ಅವರ ತಂದೆ ತಾಯಿಗಳು ಇವರನ್ನು ಜೈಲಿನಿಂದ ಬಿಡಿಸಲು, ಜಾಮೀನು ನೀಡಲು ಕಷ್ಟ ಪಡಬೇಕಾಗುತ್ತದೆ. ಅದಕ್ಕಾಗಿ ನಾನು ದೂರು ನೀಡುವುದಿಲ್ಲ. ಆದರೆ ಕೆಲವು ಬೆಂಬಲಿಗರು ದೂರು ನೀಡುತ್ತಿದ್ದಾರೆ ಎಂದರು. ನನ್ಮ ತಲೆ ತೆಗೆದು ಬಳಿಕ ಕೈಕಾಲು ತೆಗೆಯುತ್ತೇನೆ ಅನ್ನುತ್ತಾರೆ. ಆದ್ರೆ ತಲೆ ತೆಗೆದ ಬಳಿಕ ಕೈಕಾಲು ತೆಗೆದು ಏನು ಪ್ರಯೋಜನ ಎಂದು ಯು ಟಿ ಖಾದರ್​ ನಗೆಚಟಾಕಿ ಹಾರಿಸಿದ್ರು.

ಈ ಬೆದರಿಕೆ ಘೋಷಣೆ ನಮ್ಮ ಜಿಲ್ಲೆಯವರು ಮಾಡಿದ್ದಲ್ಲ. ಹೊರ ಜಿಲ್ಲೆಯವರು ಮಾಡಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.