ETV Bharat / state

ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರು.. ಕಣ್ಮುಚ್ಚಿ ಕುಳಿತ ಅಧಿಕಾರಿಗಳು

author img

By

Published : Sep 27, 2020, 7:35 PM IST

Updated : Sep 27, 2020, 11:38 PM IST

ಕುಡಿಯುವ ನೀರಿಗೆ ಜನ ಪರದಾಡುವ ಸ್ಥಿತಿ ಇದೆ. ಇಷ್ಟಾದ್ರೂ ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ..

Drinking water problem in Kadaba
ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರು

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಣಾಜೆ ಗ್ರಾಮ ಪಂಚಾಯತ್‌ ಅಧೀನಕ್ಕೊಳಪಟ್ಟ 40 ಮನೆಗಳಿರುವ ಕಾಲೋನಿ ಜನ 2-3 ತಿಂಗಳಿನಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರು

ದಿನ ಬೆಳಗಾದ್ರೆ ಇಲ್ಲಿನ ನಿವಾಸಿಗಳು ಕ್ಯಾನ್, ಬಿಂದಿಗೆ, ಬಕೆಟ್ ಹಿಡಿದುಕೊಂಡು ಅರ್ಧ ಕಿಲೋಮೀಟರ್ ದೂರದ ರಬ್ಬರ್ ತೋಟದೊಳಗೆ ಹರಿಯುವ ತೊರೆ ನೀರನ್ನು ಸಂಗ್ರಹಿಸುವಂತಾಗಿದೆ.

ಇಲ್ಲಿನ ಸಿಆರ್​ಸಿ ಕಾಲೋನಿಯ ಜನರು ಕುಡಿಯುವ ನೀರುಗಾಗಿ ಹಾತೊರೆಯುವಂತಾಗಿದೆ. ಬೇಸಿಗೆ ಕಾಲ ಬಂದ್ರೆ ತೊರೆಯ ನೀರು ಸಹ ಬತ್ತಿ ಹೋಗುತ್ತದೆ. ಎರಡು ನೀರಿನ ಟ್ಯಾಂಕ್​ಗಳಿದ್ದು, ನೀರು ತುಂಬಿಸುವ ವ್ಯವಸ್ಥೆಯಿಲ್ಲದೆ ಖಾಲಿಯಾಗಿ ಬಿದ್ದಿವೆ.

ಇದರಿಂದಾಗಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದ್ರೂ ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಣಾಜೆ ಗ್ರಾಮ ಪಂಚಾಯತ್‌ ಅಧೀನಕ್ಕೊಳಪಟ್ಟ 40 ಮನೆಗಳಿರುವ ಕಾಲೋನಿ ಜನ 2-3 ತಿಂಗಳಿನಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರು

ದಿನ ಬೆಳಗಾದ್ರೆ ಇಲ್ಲಿನ ನಿವಾಸಿಗಳು ಕ್ಯಾನ್, ಬಿಂದಿಗೆ, ಬಕೆಟ್ ಹಿಡಿದುಕೊಂಡು ಅರ್ಧ ಕಿಲೋಮೀಟರ್ ದೂರದ ರಬ್ಬರ್ ತೋಟದೊಳಗೆ ಹರಿಯುವ ತೊರೆ ನೀರನ್ನು ಸಂಗ್ರಹಿಸುವಂತಾಗಿದೆ.

ಇಲ್ಲಿನ ಸಿಆರ್​ಸಿ ಕಾಲೋನಿಯ ಜನರು ಕುಡಿಯುವ ನೀರುಗಾಗಿ ಹಾತೊರೆಯುವಂತಾಗಿದೆ. ಬೇಸಿಗೆ ಕಾಲ ಬಂದ್ರೆ ತೊರೆಯ ನೀರು ಸಹ ಬತ್ತಿ ಹೋಗುತ್ತದೆ. ಎರಡು ನೀರಿನ ಟ್ಯಾಂಕ್​ಗಳಿದ್ದು, ನೀರು ತುಂಬಿಸುವ ವ್ಯವಸ್ಥೆಯಿಲ್ಲದೆ ಖಾಲಿಯಾಗಿ ಬಿದ್ದಿವೆ.

ಇದರಿಂದಾಗಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದ್ರೂ ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Last Updated : Sep 27, 2020, 11:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.