ETV Bharat / state

ಕುಕ್ಕೇ ಸುಬ್ರಹ್ಮಣ್ಯ ಪ್ರಸಾದವಿದ್ದ ವಾಹನ ಚಾಲಕರಿಂದ ಮದ್ಯ ಸೇವನೆ: ಭಕ್ತರು ಪ್ರಶ್ನಿಸಿದಾಗ ಎಸ್ಕೇಪ್​!! - ದೇವರ ಅನ್ನ ಪ್ರಸಾದ

ನವರಾತ್ರಿ ಹಬ್ಬದ ಪ್ರಯುಕ್ತ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಿಂದ ಶಾಲೆಯೊಂದಕ್ಕೆ ಭೋಜನ ವ್ಯವಸ್ಥೆ ಮಾಡಿ ವಾಹನವೊಂದರಲ್ಲಿ ಕಳುಹಿಸಲಾಗಿತ್ತು. ಆದರೆ ವಾಹನ ಚಾಲಕರು ಮದ್ಯ ಸೇವನೆಯಲ್ಲಿ ನಿರತರಾಗಿ ಕುಕ್ಕೇ ಸುಬ್ರಹ್ಮಣ್ಯ ಶ್ರೀ ದೇವರ ಅನ್ನ ಪ್ರಸಾದಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪವೊಂದು ಕೇಳಿ ಬಂದಿದೆ.

Delay to reach Kukke Subramanya
author img

By

Published : Oct 10, 2019, 2:27 PM IST

ಮಂಗಳೂರು: ನವರಾತ್ರಿ ಹಬ್ಬದ ಪ್ರಯುಕ್ತ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಿಂದ ಶಾಲೆಯೊಂದಕ್ಕೆ ಭೋಜನ ವ್ಯವಸ್ಥೆ ಮಾಡಿ ವಾಹನವೊಂದರಲ್ಲಿ ಕಳುಹಿಸಲಾಗಿತ್ತು. ಆದರೆ ವಾಹನ ಚಾಲಕರು ಮದ್ಯ ಸೇವನೆಯಲ್ಲಿ ನಿರತರಾಗಿ ಕುಕ್ಕೇ ಸುಬ್ರಹ್ಮಣ್ಯ ಶ್ರೀ ದೇವರ ಅನ್ನ ಪ್ರಸಾದಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪವೊಂದು ಕೇಳಿ ಬಂದಿದೆ.

ಕುಕ್ಕೇ ಸುಬ್ರಹ್ಮಣ್ಯ ಅನ್ನ ಪ್ರಸಾದಕ್ಕೆ ಅವಮಾನ ಆರೋಪ

ನವರಾತ್ರಿ ಹಬ್ಬದ ಪ್ರಯುಕ್ತ ಶಾರದಾ ಪೂಜಾ ದಿನದಂದು ಸುಳ್ಯದ ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆಯನ್ನು ಏರ್ಪಡಿಲಾಗಿತ್ತು. ಇದಕ್ಕಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಭೋಜನಕ್ಕಾಗಿ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಿಂದ ಭೋಜನ ವ್ಯವಸ್ಥೆ ಮಾಡಿ ವಾಹನವೊಂದರಲ್ಲಿ ಕಳುಹಿಸಿ ಕೊಟ್ಟಿದ್ದಾರೆ. ಆದರೆ ಈ ಪ್ರಸಾದವನ್ನು ಶಾಲೆಗೆ ತಲುಪಿಸಲು ಐವರ್ನಾಡಿನಿಂದ ಹೊರಟ ಪಿಕ್ಕಪ್ ವಾಹನದಲ್ಲಿದ್ದ ವ್ಯಕ್ತಿಗಳು ಬೂದಿಪಲ್ಲ ಸಮೀಪದ ಬಾರ್ & ರೆಸ್ಟೋರೆಂಟ್​ಗೆ ಹೋಗಿ ಮದ್ಯ ಸೇವನೆಯಲ್ಲಿ ನಿರತರಾಗಿದ್ದು, ಸುಮಾರು ಮುಕ್ಕಾಲು ಗಂಟೆಗಳ ಕಾಲ ಬಾರ್ ಬಳಿಯಲ್ಲಿ ವಾಹನ ನಿಂತಿತ್ತು ಎನ್ನುವ ಆರೋಪ ವ್ಯಕ್ತವಾಗಿದೆ.

ಇದನ್ನು ಗಮನಿಸಿದ ಸ್ಥಳೀಯರು ವಾಹನದ ಬಳಿ ಹೋಗಿ ವಿಚಾರಿಸಿದಾಗ ವಾಹನದಲ್ಲಿದ್ದವರಿಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಮದ್ಯ ಸೇವನೆ ಮಾಡಿದ್ದ ವ್ಯಕ್ತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯರು ಅಸಮಾಧಾನಗೊಂಡಿದ್ದು, ಶ್ರೀ ಸುಬ್ರಹ್ಮಣ್ಯ ದೇವರ ಪ್ರಸಾದಕ್ಕೆ ಅವಮಾನ ಮಾಡಿದ್ದಾರೆ. ಪ್ರಸಾದವನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ನೇರವಾಗಿ ತೆಗೆದುಕೊಂಡು ಹೋಗಬೇಕು. ಅದನ್ನು ಬಿಟ್ಟು ಬಾರ್​ಗೆ ತೆಗೆದುಕೊಂಡು ಹೋದದ್ದು, ಅಲ್ಲಿ ಮದ್ಯ ಸೇವನೆ ಮಾಡಿರುವುದು ಎಷ್ಟು ಸರಿ, ಪವಿತ್ರ ಪ್ರಸಾದವನ್ನು ಈ ರೀತಿ ಮಾಡುವುದು ತಪ್ಪು ಎಂಬುದಾಗಿ ಆರೋಪಿಸಿದ್ದಾರೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಇನ್ನು ಮುಂದೆ ಈ ರೀತಿ ಘಟನೆ ಮರುಕಳಿಸಿದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮಂಗಳೂರು: ನವರಾತ್ರಿ ಹಬ್ಬದ ಪ್ರಯುಕ್ತ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಿಂದ ಶಾಲೆಯೊಂದಕ್ಕೆ ಭೋಜನ ವ್ಯವಸ್ಥೆ ಮಾಡಿ ವಾಹನವೊಂದರಲ್ಲಿ ಕಳುಹಿಸಲಾಗಿತ್ತು. ಆದರೆ ವಾಹನ ಚಾಲಕರು ಮದ್ಯ ಸೇವನೆಯಲ್ಲಿ ನಿರತರಾಗಿ ಕುಕ್ಕೇ ಸುಬ್ರಹ್ಮಣ್ಯ ಶ್ರೀ ದೇವರ ಅನ್ನ ಪ್ರಸಾದಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪವೊಂದು ಕೇಳಿ ಬಂದಿದೆ.

ಕುಕ್ಕೇ ಸುಬ್ರಹ್ಮಣ್ಯ ಅನ್ನ ಪ್ರಸಾದಕ್ಕೆ ಅವಮಾನ ಆರೋಪ

ನವರಾತ್ರಿ ಹಬ್ಬದ ಪ್ರಯುಕ್ತ ಶಾರದಾ ಪೂಜಾ ದಿನದಂದು ಸುಳ್ಯದ ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆಯನ್ನು ಏರ್ಪಡಿಲಾಗಿತ್ತು. ಇದಕ್ಕಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಭೋಜನಕ್ಕಾಗಿ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಿಂದ ಭೋಜನ ವ್ಯವಸ್ಥೆ ಮಾಡಿ ವಾಹನವೊಂದರಲ್ಲಿ ಕಳುಹಿಸಿ ಕೊಟ್ಟಿದ್ದಾರೆ. ಆದರೆ ಈ ಪ್ರಸಾದವನ್ನು ಶಾಲೆಗೆ ತಲುಪಿಸಲು ಐವರ್ನಾಡಿನಿಂದ ಹೊರಟ ಪಿಕ್ಕಪ್ ವಾಹನದಲ್ಲಿದ್ದ ವ್ಯಕ್ತಿಗಳು ಬೂದಿಪಲ್ಲ ಸಮೀಪದ ಬಾರ್ & ರೆಸ್ಟೋರೆಂಟ್​ಗೆ ಹೋಗಿ ಮದ್ಯ ಸೇವನೆಯಲ್ಲಿ ನಿರತರಾಗಿದ್ದು, ಸುಮಾರು ಮುಕ್ಕಾಲು ಗಂಟೆಗಳ ಕಾಲ ಬಾರ್ ಬಳಿಯಲ್ಲಿ ವಾಹನ ನಿಂತಿತ್ತು ಎನ್ನುವ ಆರೋಪ ವ್ಯಕ್ತವಾಗಿದೆ.

ಇದನ್ನು ಗಮನಿಸಿದ ಸ್ಥಳೀಯರು ವಾಹನದ ಬಳಿ ಹೋಗಿ ವಿಚಾರಿಸಿದಾಗ ವಾಹನದಲ್ಲಿದ್ದವರಿಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಮದ್ಯ ಸೇವನೆ ಮಾಡಿದ್ದ ವ್ಯಕ್ತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯರು ಅಸಮಾಧಾನಗೊಂಡಿದ್ದು, ಶ್ರೀ ಸುಬ್ರಹ್ಮಣ್ಯ ದೇವರ ಪ್ರಸಾದಕ್ಕೆ ಅವಮಾನ ಮಾಡಿದ್ದಾರೆ. ಪ್ರಸಾದವನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ನೇರವಾಗಿ ತೆಗೆದುಕೊಂಡು ಹೋಗಬೇಕು. ಅದನ್ನು ಬಿಟ್ಟು ಬಾರ್​ಗೆ ತೆಗೆದುಕೊಂಡು ಹೋದದ್ದು, ಅಲ್ಲಿ ಮದ್ಯ ಸೇವನೆ ಮಾಡಿರುವುದು ಎಷ್ಟು ಸರಿ, ಪವಿತ್ರ ಪ್ರಸಾದವನ್ನು ಈ ರೀತಿ ಮಾಡುವುದು ತಪ್ಪು ಎಂಬುದಾಗಿ ಆರೋಪಿಸಿದ್ದಾರೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಇನ್ನು ಮುಂದೆ ಈ ರೀತಿ ಘಟನೆ ಮರುಕಳಿಸಿದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

Intro:ಸುಬ್ರಹ್ಮಣ್ಯ

ಕುಕ್ಕೇ ಸುಬ್ರಹ್ಮಣ್ಯ ಶ್ರೀ ದೇವರ ಅನ್ನ ಪ್ರಸಾದಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪವೊಂದು ಕೇಳಿಬಂದಿದೆ.

ನವರಾತ್ರಿ ಹಬ್ಬದ ಪ್ರಯುಕ್ತ ಶಾರದಾ ಪೂಜಾ ದಿನದಂದು ಸುಳ್ಯದ ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ ಇದ್ದ ಕಾರಣ ಮಕ್ಕಳಿಗೆ ಮಧ್ಯಾಹ್ನದ ಭೋಜನಕ್ಕಾಗಿ
ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಿನಂತಿ ಮಾಡಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಬೇಕಾದಷ್ಟು ಅನ್ನ, ಸಾರು, ಸಾಂಬಾರು, ಚಟ್ನಿ, ಮಜ್ಜಿಗೆಯನ್ನು ದೇವಸ್ಥಾನದಿಂದ ನೀಡಿದ್ದಾರೆ.

ಆದರೆ ಈ ಪ್ರಸಾದವನ್ನು ಶಾಲೆಗೆ ತಲುಪಿಸಲು ಐವರ್ನಾಡಿನಿಂದ
KA 12 A 3566 ನಂಬರಿನ ಪಿಕ್ಕಪ್ ವಾಹನ ತರಲಾಗಿದ್ದು, ಜೊತೆಗೆ ಏಳು ಜನರೂ ಬಂದಿದ್ದರು ಎನ್ನಲಾಗಿದೆ.

ಅನ್ನ ಪ್ರಸಾದವನ್ನು ಹೇರಿಕೊಂಡು ಹೊರಟ ವಾಹನ ನೇರವಾಗಿ ಬೂದಿಪಲ್ಲ ಸಮೀಪದ ಬಾರ್ & ರೆಸ್ಟೋರೆಂಟ್ ಗೆ ಹೋಗಿದ್ದು,ವಾಹನ ಅಲ್ಲೇ ಪಕ್ಕದಲ್ಲಿ ವಾಹನವನ್ನು ಹಾಕಿ ಈ ವಾಹನದಲ್ಲಿದ್ದವರು ಮದ್ಯ ಸೇವನೆಯಲ್ಲಿ ನಿರತರಾಗಿದ್ದರು ಎನ್ನಲಾಗಿದೆ.

ಸುಮಾರು ಮುಕ್ಕಾಲು ಗಂಟೆಗಳ ಕಾಲ ಪ್ರಸಾದ ಹೇರಿಕೊಂಡಿದ್ದ ಪಿಕ್ಕಪ್ ವಾಹನ ಬಾರ್ ಪರಿಸರದಲ್ಲೇ ನಿಂತಿತ್ತು ಎನ್ನುವ ಆರೋಪ ವ್ಯಕ್ತವಾಗಿದೆ.

ಇದನ್ನು ಸ್ಥಳೀಯರು ಗಮನಿಸಿ, ವಾಹನದಲ್ಲಿ ಬಂದವರ ಜೊತೆಗೆ ಮಾತಿಗಿಳಿದು ವಾಗ್ವಾದವೂ ನಡೆದಿತ್ತು.
ಪಿಕ್ಕಪ್ ವಾಹನದಲ್ಲಿ ಇದ್ದವರು ನೀವು ಯಾರು ಇದನ್ನೆಲಾ ಕೇಳೋಕೆ ಎಂದು ಗದರಿಸಿದ್ದಾರೆ ಎಂದು ಸ್ಧಳೀಯರು ಮಾಹಿತಿ ನೀಡಿದ್ದಾರೆ. ಕೊನೆಗೆ ಸಾರ್ವಜನಿಕರು ಜಮಾಯಿಸುದನ್ನು ಅರಿತ ಮದ್ಯ ಸೇವನೆ ಮಾಡಿದ ವ್ಯಕ್ತಿಗಳು ನಾವು ಮಾಡಿದ ತಪ್ಪು ನಮಗೆ ಅರಿವಾಗಿದೆ, ನಮ್ಮದು ತಪ್ಪಾಯಿತು ಕ್ಷಮಿಸಿ ಎಂದು ಎಂಬುದಾಗಿ ಸ್ಥಳೀಯರ ಜೊತೆ ಕೇಳಿಕೊಂಡು ಕಾಲ್ಕಿತ್ತಿದ್ದಾರೆ.

ಈ ಘಟನೆಯಿಂದಾಗಿ ಸ್ಥಳೀಯರು ಅಸಮಾಧಾನಗೊಂಡಿದ್ದು, ಶ್ರೀ ಸುಬ್ರಹ್ಮಣ್ಯ ದೇವರ ಪ್ರಸಾದಕ್ಕೆ ಅವಮಾನ ಮಾಡಿದ್ದಾರೆ, ಪ್ರಸಾದವನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೇ ನೇರವಾಗಿ ತೆಗೆದುಕೊಂಡು ಹೋಗಬೇಕು ಅದನ್ನು ಬಿಟ್ಟು ಬಾರ್ ತೆಗೆದು ಕೊಂಡು ಹೋದದ್ದು ಹಾಗೂ ಅಲ್ಲಿ ಮದ್ಯಸೇವನೆ ಮಾಡಿದ್ದು ಎಷ್ಟು ಸರಿ, ಪವಿತ್ರ ಪ್ರಸಾದವನ್ನು ಈ ರೀತಿ ಮಾಡುವುದು ತಪ್ಪು, ಎಂಬುದಾಗಿ ಆರೋಪಿಸಿದ್ದಾರೆ.
ಈ ಘಟನೆ ಯನ್ನು ನಾವು ಖಂಡಿಸುತ್ತೇವೆ, ಇನ್ನು ಮುಂದೆ ಈ ರೀತಿ ಘಟನೆ ಮರುಕಳಿಸಿದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಈ ವಿಚಾರದ ಬಗ್ಗೆ ಚಿಂತನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಮನವಿ ಮಾಡಿಕೊಂಡಿದ್ದಾರೆ.Body:ಸುಬ್ರಹ್ಮಣ್ಯ ಅನ್ನ ಪ್ರಸಾದಕ್ಕೆ ಅವಮಾನ ಆರೋಪConclusion:ಪ್ರಕಾಶ್ ಕಡಬ,ಸುಳ್ಯ(ಮಂಗಳೂರು)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.