ETV Bharat / state

ಕೊರೊನಾ ಭೀತಿ: ವಿದೇಶಿ ಪ್ರಯಾಣಿಕರ ಮೇಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿಗಾ

author img

By

Published : Mar 12, 2020, 8:11 PM IST

ಮಂಗಳೂರು ವಿಮಾನ ನಿಲ್ದಾಣ ಮತ್ತು ಎನ್​​ಎಂಪಿಟಿಯಲ್ಲಿ ಇಂದು ವಿದೇಶದಿಂದ ಬಂದ 614 ಮಂದಿಯನ್ನು ತಪಾಸಣೆ ಮಾಡಲಾಗಿದೆ.

Corona panic in Dakshina Kannada district
ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್

ಮಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ನಿಗಾ ವಹಿಸಲಾಗುತ್ತಿದೆ. ಇಂದು ಐದು ಮಂದಿಯ ಗಂಟಲು ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳೂರು ವಿಮಾನ ನಿಲ್ದಾಣ ಮತ್ತು ಎನ್​​ಎಂಪಿಟಿಯಲ್ಲಿ ಇಂದು ವಿದೇಶದಿಂದ ಬಂದ 614 ಮಂದಿಯನ್ನು ತಪಾಸಣೆ ಮಾಡಲಾಗಿದೆ.

Corona panic in Dakshina Kannada district
ಜಿಲ್ಲಾಡಳಿತದ ಪ್ರಕಟಣೆ ಪ್ರತಿ

ವಿದೇಶದಿಂದ ಬಂದ ಪ್ರಯಾಣಿಕರಲ್ಲಿ 50 ಮಂದಿ 14 ದಿನದ ವೈದ್ಯಕೀಯ ನಿಗಾದಲ್ಲಿದ್ದಾರೆ. ಇಂದಿಗೆ 14 ದಿನಗಳ ವೈದ್ಯಕೀಯ ನಿಗಾವನ್ನು 11 ಮಂದಿ ಪೂರೈಸಿದ್ದು, 11ಮಂದಿಯಲ್ಲಿಯೂ ಸೋಂಕು ಇಲ್ಲವೆಂಬುದು ದೃಢಪಟ್ಟಿದೆ. ಮೂವರ ಗಂಟಲು ದ್ರವ ಪರೀಕ್ಷೆಗೆ ವರದಿ ಸ್ವೀಕೃತವಾಗಿದ್ದು, ಇವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಪ್ರಕಟಣೆಯಲ್ಲಿ ಜಿಲ್ಲಾಡಳಿತ ತಿಳಿಸಿದೆ.

ಮಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ನಿಗಾ ವಹಿಸಲಾಗುತ್ತಿದೆ. ಇಂದು ಐದು ಮಂದಿಯ ಗಂಟಲು ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳೂರು ವಿಮಾನ ನಿಲ್ದಾಣ ಮತ್ತು ಎನ್​​ಎಂಪಿಟಿಯಲ್ಲಿ ಇಂದು ವಿದೇಶದಿಂದ ಬಂದ 614 ಮಂದಿಯನ್ನು ತಪಾಸಣೆ ಮಾಡಲಾಗಿದೆ.

Corona panic in Dakshina Kannada district
ಜಿಲ್ಲಾಡಳಿತದ ಪ್ರಕಟಣೆ ಪ್ರತಿ

ವಿದೇಶದಿಂದ ಬಂದ ಪ್ರಯಾಣಿಕರಲ್ಲಿ 50 ಮಂದಿ 14 ದಿನದ ವೈದ್ಯಕೀಯ ನಿಗಾದಲ್ಲಿದ್ದಾರೆ. ಇಂದಿಗೆ 14 ದಿನಗಳ ವೈದ್ಯಕೀಯ ನಿಗಾವನ್ನು 11 ಮಂದಿ ಪೂರೈಸಿದ್ದು, 11ಮಂದಿಯಲ್ಲಿಯೂ ಸೋಂಕು ಇಲ್ಲವೆಂಬುದು ದೃಢಪಟ್ಟಿದೆ. ಮೂವರ ಗಂಟಲು ದ್ರವ ಪರೀಕ್ಷೆಗೆ ವರದಿ ಸ್ವೀಕೃತವಾಗಿದ್ದು, ಇವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಪ್ರಕಟಣೆಯಲ್ಲಿ ಜಿಲ್ಲಾಡಳಿತ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.