ETV Bharat / state

ಹೈ ವೋಲ್ಟೇಜ್ ಲೈನ್​​ನಿಂದ ಕಟ್ಟಡಗಳು ಸುರಕ್ಷಿತ ಅಂತರದಲ್ಲಿರುವಂತೆ ಕಟ್ಟೆಚ್ಚರ! - mangalore latest news

ಜಿಲ್ಲೆಯಲ್ಲಿ 110 ಮತ್ತು 220 ಕೆವಿ ಲೈನ್​​ಗಳು ಕಾರ್ಯ ನಿರ್ವಹಿಸುತ್ತಿದೆ. ಇವುಗಳ ಸುತ್ತಲೂ ಮನೆ, ಕಟ್ಟಡ ನಿರ್ಮಾಣ ಮಾಡುವುದಿದ್ದರೆ ಕೆಪಿಟಿಸಿಎಲ್ ನಿಯಮಾವಳಿ ಪಾಲಿಸಬೇಕಾಗುತ್ತದೆ. 110 ಕೆ ವಿ ವಿದ್ಯುತ್ ಪ್ರಸರಣ ಲೈನ್​​ನ ಎರಡು ಭಾಗದಲ್ಲಿ 11 ಮೀಟರ್ ಮತ್ತು 220 ಕೆವಿ ವಿದ್ಯುತ್ ಪ್ರಸರಣ ಲೈನ್​ನ ಎರಡು ಭಾಗದಲ್ಲಿ 17.5 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಪಿಟಿಸಿಎಲ್​​ನಿಂದ ಎನ್ಒಸಿ ಪಡೆದು ಮನೆ ಸೇರಿದಂತೆ ಕಟ್ಟಡಗಳನ್ನು ನಿರ್ಮಾಣ ಮಾಡಬಹುದಾಗಿದೆ.

Buildings should be in safe position from power transmission line!
ವಿದ್ಯುತ್​​ ಪ್ರಸರಣ ಲೈನ್​​ನಿಂದ ಕಟ್ಟಡಗಳು ಸುರಕ್ಷಿತ ಅಂತರದಲ್ಲಿರುವಂತೆ ಕಟ್ಟೆಚ್ಚರ!
author img

By

Published : Mar 26, 2021, 2:01 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಪ್ರಸರಣ ಲೈನ್​​​​​​​ಗಳಿಂದ ಮನೆ, ಕಟ್ಟಡಗಳು ಸುರಕ್ಷಿತ ಅಂತರದಲ್ಲಿರುವಂತೆ ಕಟ್ಟೆಚ್ಚರ ವಹಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆಸ್ಕಾಂ ಮತ್ತು ಕೆಪಿಟಿಸಿಎಲ್​​ನಿಂದ ವಿದ್ಯುತ್ ಪ್ರಸರಣ ಲೈನ್​​​​ಗಳು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಮೆಸ್ಕಾಂನಿಂದ ಇರುವ ವಿದ್ಯುತ್ ಪ್ರಸರಣ ಲೈನ್​​ಗಳು ಹೈ ವೋಲ್ಟೇಜ್ ಲೈನ್​ಗಳಲ್ಲ. ಕೆಪಿಟಿಸಿಎಲ್​​ನಿಂದ ಕಾರ್ಯನಿರ್ವಹಿಸುವ ಹೈ ವೋಲ್ಟೇಜ್ ಲೈನ್​​ಗಳ ಬಗ್ಗೆ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ.

ವಿದ್ಯುತ್​​ ಪ್ರಸರಣ ಲೈನ್​​ನಿಂದ ಕಟ್ಟಡಗಳು ಸುರಕ್ಷಿತ ಅಂತರದಲ್ಲಿರುವಂತೆ ಕಟ್ಟೆಚ್ಚರ!

ಜಿಲ್ಲೆಯಲ್ಲಿ 110 ಮತ್ತು 220 ಕೆವಿ ಲೈನ್​​ಗಳು ಕಾರ್ಯ ನಿರ್ವಹಿಸುತ್ತಿದೆ. ಇವುಗಳ ಸುತ್ತಲೂ ಮನೆ, ಕಟ್ಟಡ ನಿರ್ಮಾಣ ಮಾಡುವುದಿದ್ದರೆ ಕೆಪಿಟಿಸಿಎಲ್ ನಿಯಮಾವಳಿ ಪಾಲಿಸಬೇಕಾಗುತ್ತದೆ. 110 ಕೆ ವಿ ವಿದ್ಯುತ್ ಪ್ರಸರಣ ಲೈನ್​​ನ ಎರಡು ಭಾಗದಲ್ಲಿ 11 ಮೀಟರ್ ಮತ್ತು 220 ಕೆವಿ ವಿದ್ಯುತ್ ಪ್ರಸರಣ ಲೈನ್​ನ ಎರಡು ಭಾಗದಲ್ಲಿ 17.5 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಪಿಟಿಸಿಎಲ್​​ನಿಂದ ಎನ್​​​​​ಓಸಿ ಪಡೆದು ಮನೆ ಸೇರಿದಂತೆ ಕಟ್ಟಡಗಳನ್ನು ನಿರ್ಮಾಣ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಈ ನಿಯಮಾವಳಿಗಳನ್ನು ಕಟ್ಟುನಿಟ್ಟಿನ ಜಾರಿಗೆ ಕೆಪಿಟಿಸಿಎಲ್ ಕ್ರಮ ವಹಿಸುತ್ತಿದೆ. ಈ ನಿಯಾಮವಳಿಗಳನ್ನು ಮೀರಿರುವ ಪ್ರಕರಣಗಳು ಈವರೆಗೆ ವರದಿಯಾಗಿಲ್ಲ.

ಭೂಗತ ಕೇಬಲ್ ಅಳವಡಿಕೆಗೆ ಬೇಡಿಕೆ: ಇನ್ನೂ ಕಂಬಗಳ ಮೂಲಕ ವಿದ್ಯುತ್​​​ ಪ್ರಸರಣ ಮಾಡುವ ಬದಲಿಗೆ ಭೂಗತ ಕೇಬಲ್ ಅಳವಡಿಸಿ ಪ್ರಸರಣ ಮಾಡಿದರೆ ದೊಡ್ಡ ಪ್ರಮಾಣದ ಅಪಾಯವಿಲ್ಲ. ಇಂತಹ ಬೇಡಿಕೆ ಜನರಲ್ಲಿ ಇದೆಯಾದರೂ ಅದು ಭಾರಿ ವೆಚ್ಚದಾಯಕ ಪ್ರಕ್ರಿಯೆಯಾಗಿರುವುದರಿಂದ ಕೆಲವೇ ಕೆಲವು ಪ್ರದೇಶದಲ್ಲಿ ಇಂತಹ ಕಾರ್ಯ ನಡೆದಿದೆ.

ಆರೋಗ್ಯಕ್ಕೆ ಅಪಾಯಕಾರಿಯಲ್ಲ: ಹೈ ವೋಲ್ಟೇಜ್ ವಿದ್ಯುತ್ ಪ್ರಸರಣ ಲೈನ್​ಗಳು ಆರೋಗ್ಯಕ್ಕೆ ಅಪಾಯಕಾರಿಯಲ್ಲ. ಇದರಲ್ಲಿ ಯಾವುದೇ ರೇಡಿಯೇಷನ್​ ಘಟನೆಗಳು ನಡೆದರೆ 25 ಮಿಲಿ ಸೆಕೆಂಡ್​​ನೊಳಗೆ ಟ್ರಿಪ್ ಆಗುವ ವ್ಯವಸ್ಥೆ ಇಲಾಖೆಯಲ್ಲಿದೆ. ಈ ಕಾರಣದಿಂದ ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವ್ಯವಸ್ಥೆ ಈ ವಿದ್ಯುತ್ ಪ್ರಸರಣ ಲೈನ್​​ಗಳಲ್ಲಿ ಇರುತ್ತದೆ.

ಇದನ್ನೂ ಓದಿ: ಸಿಡಿ ಲೇಡಿ ಪ್ರತ್ಯಕ್ಷವಾದಾಗ ಸತ್ಯ ಬಹಿರಂಗ: ಸಚಿವ ಸುರೇಶ್ ಕುಮಾರ್

ಇನ್ನು ಈ ಬಗ್ಗೆ ಈಟಿವಿ ಭಾರತ ವರದಿಗಾರರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಮಾಹಿತಿ ಕೊಡಲು ನಿರಾಕರಿಸಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಪ್ರಸರಣ ಲೈನ್​​​​​​​ಗಳಿಂದ ಮನೆ, ಕಟ್ಟಡಗಳು ಸುರಕ್ಷಿತ ಅಂತರದಲ್ಲಿರುವಂತೆ ಕಟ್ಟೆಚ್ಚರ ವಹಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆಸ್ಕಾಂ ಮತ್ತು ಕೆಪಿಟಿಸಿಎಲ್​​ನಿಂದ ವಿದ್ಯುತ್ ಪ್ರಸರಣ ಲೈನ್​​​​ಗಳು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಮೆಸ್ಕಾಂನಿಂದ ಇರುವ ವಿದ್ಯುತ್ ಪ್ರಸರಣ ಲೈನ್​​ಗಳು ಹೈ ವೋಲ್ಟೇಜ್ ಲೈನ್​ಗಳಲ್ಲ. ಕೆಪಿಟಿಸಿಎಲ್​​ನಿಂದ ಕಾರ್ಯನಿರ್ವಹಿಸುವ ಹೈ ವೋಲ್ಟೇಜ್ ಲೈನ್​​ಗಳ ಬಗ್ಗೆ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ.

ವಿದ್ಯುತ್​​ ಪ್ರಸರಣ ಲೈನ್​​ನಿಂದ ಕಟ್ಟಡಗಳು ಸುರಕ್ಷಿತ ಅಂತರದಲ್ಲಿರುವಂತೆ ಕಟ್ಟೆಚ್ಚರ!

ಜಿಲ್ಲೆಯಲ್ಲಿ 110 ಮತ್ತು 220 ಕೆವಿ ಲೈನ್​​ಗಳು ಕಾರ್ಯ ನಿರ್ವಹಿಸುತ್ತಿದೆ. ಇವುಗಳ ಸುತ್ತಲೂ ಮನೆ, ಕಟ್ಟಡ ನಿರ್ಮಾಣ ಮಾಡುವುದಿದ್ದರೆ ಕೆಪಿಟಿಸಿಎಲ್ ನಿಯಮಾವಳಿ ಪಾಲಿಸಬೇಕಾಗುತ್ತದೆ. 110 ಕೆ ವಿ ವಿದ್ಯುತ್ ಪ್ರಸರಣ ಲೈನ್​​ನ ಎರಡು ಭಾಗದಲ್ಲಿ 11 ಮೀಟರ್ ಮತ್ತು 220 ಕೆವಿ ವಿದ್ಯುತ್ ಪ್ರಸರಣ ಲೈನ್​ನ ಎರಡು ಭಾಗದಲ್ಲಿ 17.5 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಪಿಟಿಸಿಎಲ್​​ನಿಂದ ಎನ್​​​​​ಓಸಿ ಪಡೆದು ಮನೆ ಸೇರಿದಂತೆ ಕಟ್ಟಡಗಳನ್ನು ನಿರ್ಮಾಣ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಈ ನಿಯಮಾವಳಿಗಳನ್ನು ಕಟ್ಟುನಿಟ್ಟಿನ ಜಾರಿಗೆ ಕೆಪಿಟಿಸಿಎಲ್ ಕ್ರಮ ವಹಿಸುತ್ತಿದೆ. ಈ ನಿಯಾಮವಳಿಗಳನ್ನು ಮೀರಿರುವ ಪ್ರಕರಣಗಳು ಈವರೆಗೆ ವರದಿಯಾಗಿಲ್ಲ.

ಭೂಗತ ಕೇಬಲ್ ಅಳವಡಿಕೆಗೆ ಬೇಡಿಕೆ: ಇನ್ನೂ ಕಂಬಗಳ ಮೂಲಕ ವಿದ್ಯುತ್​​​ ಪ್ರಸರಣ ಮಾಡುವ ಬದಲಿಗೆ ಭೂಗತ ಕೇಬಲ್ ಅಳವಡಿಸಿ ಪ್ರಸರಣ ಮಾಡಿದರೆ ದೊಡ್ಡ ಪ್ರಮಾಣದ ಅಪಾಯವಿಲ್ಲ. ಇಂತಹ ಬೇಡಿಕೆ ಜನರಲ್ಲಿ ಇದೆಯಾದರೂ ಅದು ಭಾರಿ ವೆಚ್ಚದಾಯಕ ಪ್ರಕ್ರಿಯೆಯಾಗಿರುವುದರಿಂದ ಕೆಲವೇ ಕೆಲವು ಪ್ರದೇಶದಲ್ಲಿ ಇಂತಹ ಕಾರ್ಯ ನಡೆದಿದೆ.

ಆರೋಗ್ಯಕ್ಕೆ ಅಪಾಯಕಾರಿಯಲ್ಲ: ಹೈ ವೋಲ್ಟೇಜ್ ವಿದ್ಯುತ್ ಪ್ರಸರಣ ಲೈನ್​ಗಳು ಆರೋಗ್ಯಕ್ಕೆ ಅಪಾಯಕಾರಿಯಲ್ಲ. ಇದರಲ್ಲಿ ಯಾವುದೇ ರೇಡಿಯೇಷನ್​ ಘಟನೆಗಳು ನಡೆದರೆ 25 ಮಿಲಿ ಸೆಕೆಂಡ್​​ನೊಳಗೆ ಟ್ರಿಪ್ ಆಗುವ ವ್ಯವಸ್ಥೆ ಇಲಾಖೆಯಲ್ಲಿದೆ. ಈ ಕಾರಣದಿಂದ ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವ್ಯವಸ್ಥೆ ಈ ವಿದ್ಯುತ್ ಪ್ರಸರಣ ಲೈನ್​​ಗಳಲ್ಲಿ ಇರುತ್ತದೆ.

ಇದನ್ನೂ ಓದಿ: ಸಿಡಿ ಲೇಡಿ ಪ್ರತ್ಯಕ್ಷವಾದಾಗ ಸತ್ಯ ಬಹಿರಂಗ: ಸಚಿವ ಸುರೇಶ್ ಕುಮಾರ್

ಇನ್ನು ಈ ಬಗ್ಗೆ ಈಟಿವಿ ಭಾರತ ವರದಿಗಾರರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಮಾಹಿತಿ ಕೊಡಲು ನಿರಾಕರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.