ETV Bharat / state

ಕಡಬ ತಹಶೀಲ್ದಾರ್ ಕಚೇರಿ ಟೇಬಲ್ ಮೇಲೆಯೇ ಕುಳಿತ ದಲ್ಲಾಳಿ: ವಿಡಿಯೋ ವೈರಲ್​

author img

By

Published : Mar 5, 2022, 10:01 PM IST

ಸರ್ಕಾರಿ ಕಚೇರಿಗಳಿಗೆ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಆದರೆ ಕಡಬ ತಾಲೂಕಿನಲ್ಲಿನ ತಹಶೀಲ್ದಾರ್​ ಕಚೇರಿ ಒಳಗೆ ಟೇಬಲ್​ ಮೇಲೆ ದಲ್ಲಾಳಿಯೋರ್ವರು ಕುಳಿತುಕೊಂಡಿರುವ ವಿಡಿಯೋ ವೈರಲ್​ ಆಗಿದೆ.

Broker sittings in Kadaba tahsildar office table - video viral
ಕಡಬ ತಹಶೀಲ್ದಾರ್ ಕಚೇರಿ ಟೇಬಲ್ ಕುಳಿತ ದಲ್ಲಾಳಿ ವಿಡಿಯೋ ವೈರಲ್​

ಕಡಬ(ದಕ್ಷಿಣ ಕನ್ನಡ): ಯಾವುದೇ ಸರ್ಕಾರಿ ಕಚೇರಿಗಳ ಒಳಗೆ ಮಧ್ಯವರ್ತಿಗಳು, ಬ್ರೋಕರ್​ಗಳು ಓಡಾಡದಂತೆ ಎಲ್ಲಾ ಇಲಾಖೆಗಳ ಅಧೀನ ಕಚೇರಿಗಳಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಆದರೆ ಕಡಬದಲ್ಲಿ ಮಾತ್ರ ಚಿತ್ರಣ ಬೇರೆಯೇ ಇದೆ.

ಕಡಬ ತಹಶೀಲ್ದಾರ್ ಕಚೇರಿ ಟೇಬಲ್ ಕುಳಿತ ದಲ್ಲಾಳಿ ವಿಡಿಯೋ ವೈರಲ್​

ಮಾರ್ಚ್ ​.5 ರಂದು ಇಲ್ಲಿನ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ದಲ್ಲಾಳಿಯೋರ್ವರು ಮೇಜಿನ ಮೇಲೆ ರಾಜಾರೋಷವಾಗಿ ಕುಳಿತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು. ಸಾರ್ವಜನಿಕರು ತಮ್ಮ ಕೆಲಸಕ್ಕೆ ಬಂದಾಗ ಹೊರ ಭಾಗದಲ್ಲಿ ನಿಂತು ಸಹಕರಿಸುತ್ತಾರೆ. ಆದರೆ ವ್ಯಕ್ತಿ ಕಚೇರಿಯ ಟೇಬಲ್​ ಮೇಲೆ ಕುಳಿತುಕೊಳ್ಳುವಷ್ಟು ಅಧಿಕಾರಿಗಳು ಸಲುಗೆ ನೀಡಿದ್ದಾರೆ ಎಂಬುದರ ಕುರಿತಂತೆ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ಕೆಲ ದಿನಗಳಿಂದ ಅಕ್ರಮ-ಸಕ್ರಮ ಫೈಲ್​​ಗಳ ಕೆಲಸಗಳು ಆಗುತ್ತಿದ್ದು, ಮಧ್ಯವರ್ತಿಗಳಿಂದ ಅಧಿಕಾರಿಗಳಿಗೆ ಇದು ಸುಗ್ಗಿಕಾಲವಾಗಿದೆ. ಜನಗಳು ಕೂಡ ದುಡ್ಡು ಕೊಡುವುದರಲ್ಲಿ ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಟೇಬಲ್ ಮೇಲೆ ವ್ಯಕ್ತಿ ಕುಳಿತುಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ಸಿಬ್ಬಂದಿಯ ವರ್ತನೆ ಖಂಡಿನೀಯ. ಈ ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಕಚೇರಿಯೊಳಗೆ ವ್ಯಕ್ತಿ ಪ್ರವೇಶ ಮಾಡಿದ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು. ಈ ಬಗ್ಗೆ ದೂರು ನೀಡಲಾಗುವುದು ಎಂದು 'ಈಟಿವಿ ಭಾರತ'ಕ್ಕೆ ಕಡಬ ತಹಶೀಲ್ದಾರ್ ಅನಂತ ಶಂಕರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಮೃತಪಟ್ಟ ಹಾವೇರಿಯ ನವೀನ್​ ಕುಟುಂಬಕ್ಕೆ ಸರ್ಕಾರದಿಂದ ₹25 ಲಕ್ಷ ಪರಿಹಾರ

ಕಡಬ(ದಕ್ಷಿಣ ಕನ್ನಡ): ಯಾವುದೇ ಸರ್ಕಾರಿ ಕಚೇರಿಗಳ ಒಳಗೆ ಮಧ್ಯವರ್ತಿಗಳು, ಬ್ರೋಕರ್​ಗಳು ಓಡಾಡದಂತೆ ಎಲ್ಲಾ ಇಲಾಖೆಗಳ ಅಧೀನ ಕಚೇರಿಗಳಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಆದರೆ ಕಡಬದಲ್ಲಿ ಮಾತ್ರ ಚಿತ್ರಣ ಬೇರೆಯೇ ಇದೆ.

ಕಡಬ ತಹಶೀಲ್ದಾರ್ ಕಚೇರಿ ಟೇಬಲ್ ಕುಳಿತ ದಲ್ಲಾಳಿ ವಿಡಿಯೋ ವೈರಲ್​

ಮಾರ್ಚ್ ​.5 ರಂದು ಇಲ್ಲಿನ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ದಲ್ಲಾಳಿಯೋರ್ವರು ಮೇಜಿನ ಮೇಲೆ ರಾಜಾರೋಷವಾಗಿ ಕುಳಿತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು. ಸಾರ್ವಜನಿಕರು ತಮ್ಮ ಕೆಲಸಕ್ಕೆ ಬಂದಾಗ ಹೊರ ಭಾಗದಲ್ಲಿ ನಿಂತು ಸಹಕರಿಸುತ್ತಾರೆ. ಆದರೆ ವ್ಯಕ್ತಿ ಕಚೇರಿಯ ಟೇಬಲ್​ ಮೇಲೆ ಕುಳಿತುಕೊಳ್ಳುವಷ್ಟು ಅಧಿಕಾರಿಗಳು ಸಲುಗೆ ನೀಡಿದ್ದಾರೆ ಎಂಬುದರ ಕುರಿತಂತೆ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ಕೆಲ ದಿನಗಳಿಂದ ಅಕ್ರಮ-ಸಕ್ರಮ ಫೈಲ್​​ಗಳ ಕೆಲಸಗಳು ಆಗುತ್ತಿದ್ದು, ಮಧ್ಯವರ್ತಿಗಳಿಂದ ಅಧಿಕಾರಿಗಳಿಗೆ ಇದು ಸುಗ್ಗಿಕಾಲವಾಗಿದೆ. ಜನಗಳು ಕೂಡ ದುಡ್ಡು ಕೊಡುವುದರಲ್ಲಿ ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಟೇಬಲ್ ಮೇಲೆ ವ್ಯಕ್ತಿ ಕುಳಿತುಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ಸಿಬ್ಬಂದಿಯ ವರ್ತನೆ ಖಂಡಿನೀಯ. ಈ ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಕಚೇರಿಯೊಳಗೆ ವ್ಯಕ್ತಿ ಪ್ರವೇಶ ಮಾಡಿದ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು. ಈ ಬಗ್ಗೆ ದೂರು ನೀಡಲಾಗುವುದು ಎಂದು 'ಈಟಿವಿ ಭಾರತ'ಕ್ಕೆ ಕಡಬ ತಹಶೀಲ್ದಾರ್ ಅನಂತ ಶಂಕರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಮೃತಪಟ್ಟ ಹಾವೇರಿಯ ನವೀನ್​ ಕುಟುಂಬಕ್ಕೆ ಸರ್ಕಾರದಿಂದ ₹25 ಲಕ್ಷ ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.