ETV Bharat / state

ಲಾಕ್​​ಡೌನ್​​​​ ಮುಂದುವರಿಕೆ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ! - Bhatkal people on the road amid the lockdown

ಹಳದಿ ವಲಯದಲ್ಲಿರುವ ಭಟ್ಕಳ ತಾಲೂಕಿನಲ್ಲಿ ಸರ್ಕಾರದ ಆದೇಶವನ್ನು ಜನರು ಪಾಲನೆ ಮಾಡದೆ ರಸ್ತೆಗಿಳಿದಿದ್ದಾರೆ. ಭಟ್ಕಳದ ನಗರ ವ್ಯಾಪ್ತಿಯಲ್ಲಿ ಜನರ ಓಡಾಟ ಸೋಮವಾರ ಬೆಳಗ್ಗೆಯಿಂದಲೇ ಆರಂಭಗೊಂಡಿದೆ. ಜನರನ್ನು ತಡೆದು ವಾಪಸ್​ ಕಳುಹಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.

ಲಾಕ್​​ಡೌನ್​​ ಮುಂದುವರಿಕೆಯ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ
ಲಾಕ್​​ಡೌನ್​​ ಮುಂದುವರಿಕೆಯ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ
author img

By

Published : May 4, 2020, 9:10 PM IST

ಭಟ್ಕಳ: ಕೊರೊನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಮೂರನೇ ಹಂತದ ಲಾಕ್​​ಡೌನ್​ ಮುಂದುವರೆಸಿದೆ. ಸದ್ಯ ಹಳದಿ ವಲಯದಲ್ಲಿರುವ ಭಟ್ಕಳ ತಾಲೂಕಿನಲ್ಲಿ ಸರ್ಕಾರದ ಆದೇಶವನ್ನು ಜನರು ಪಾಲನೆ ಮಾಡದೆ ರಸ್ತೆಗಿಳಿದಿದ್ದಾರೆ. ಜನರನ್ನು ತಡೆದು ವಾಪಸ್​ ಕಳುಹಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.

ಲಾಕ್​​ಡೌನ್​​ ಮುಂದುವರಿಕೆಯ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ
ಲಾಕ್​​ಡೌನ್​​ ಮುಂದುವರಿಕೆಯ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ

ಭಟ್ಕಳದ ನಗರ ವ್ಯಾಪ್ತಿಯಲ್ಲಿ ಜನರ ಓಡಾಟ ಸೋಮವಾರ ಬೆಳಗ್ಗೆಯಿಂದಲೇ ಆರಂಭಗೊಂಡಿದೆ. ನಗರ ವ್ಯಾಪ್ತಿಯಲ್ಲಿ ಪಾಸ್​​ ಪಡೆಯದೆ ಮೊಬೈಲ್ ಶಾಪ್, ಹಳೇ ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ ಕೆಲವು ಬೇಕರಿ ಅಂಗಡಿಗಳು ಪೊಲೀಸರ ಭಯವಿಲ್ಲದೆ ತೆರೆದು ವ್ಯಾಪಾರಕ್ಕಿಳಿದಿವೆ. ತಾಲೂಕಾಡಳಿತ ಕಣ್ಣಿದ್ದೂ ಕುರುಡಾಗಿರುವ ಸ್ಥಿತಿಯಲ್ಲಿದೆ.

ಲಾಕ್​​ಡೌನ್​​ ಮುಂದುವರಿಕೆಯ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ
ಲಾಕ್​​ಡೌನ್​​ ಮುಂದುವರಿಕೆ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ

ಪಾಸ್​ ಪಡೆಯಲು ಜನಸಂದಣಿ:

ಇನ್ನು ತಹಶೀಲ್ದಾರ್​ ಕಚೇರಿಯ ಪಾಸ್​​ ವಿತರಣೆ ಕೇಂದ್ರದಲ್ಲಿ ನೂರಾರು ಮಂದಿ ಪಾಸ್​​ ಪಡೆಯಲು ಜಮಾಯಿಸಿದ್ದರು. ಕಚೇರಿಯಲ್ಲಿ ಲಾಕ್​ಡೌನ್​​ ಪೂರ್ವದಲ್ಲಿ ಸೇರುತ್ತಿದ್ದ ಜನಸಂದಣಿಯೇ ಮುಂದುವರೆದಂತಿದೆ. ಈಗಾಗಲೇ ಅನಗತ್ಯವಾಗಿ ಕೆಲವರಿಗೆ ತಾಲೂಕಾಡಳಿತ ಪಾಸ್ ವಿತರಣೆ ಮಾಡಿದ್ದು, ಒಂದೇ ದಿನಸಿ ಅಂಗಡಿಗಳಿಗೆ 5-6 ಮಂದಿ ಪಾಸ್​ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಲಾಕ್​​ಡೌನ್​​ ಮುಂದುವರಿಕೆಯ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ
ಲಾಕ್​​ಡೌನ್​​ ಮುಂದುವರಿಕೆ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ

ಸಂಶುದ್ದೀನ್ ಸರ್ಕಲ್​​ನಲ್ಲಿ ಪಾಸ್​ ತಪಾಸಣೆ:

ಲಾಕ್​ಡೌನ್​​ ಸಡಿಲಿಕೆ ಆಗಿದೆ ಎಂದು ಜನರು ತಪ್ಪು ಕಲ್ಪನೆಯಲ್ಲಿ ತಮ್ಮ ವಾಹನವನ್ನೇರಿ ಬೇಕಾಬಿಟ್ಟಿ ಓಡಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆ ಡಿವೈಎಸ್​ಪಿ ಗೌತಮ್ ಕೆ.ಸಿ. ಅವರಿಂದ ಅನಗತ್ಯ ವಾಹನ ಓಡಾಟ ಮಾಡುವವರ ಪರಿಶೀಲನೆ ಮಾಡಲಾಗುತ್ತಿದೆ. ಜನರಿಗೆ ಮತ್ತೆ ರಸ್ತೆಗಿಳಿಯದಂತೆ ಲಾಕ್​​ಡೌನ್ ವಿಸ್ತರಣೆ ಆಗಿರುವ ಬಗ್ಗೆ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.

ಭಟ್ಕಳ: ಕೊರೊನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಮೂರನೇ ಹಂತದ ಲಾಕ್​​ಡೌನ್​ ಮುಂದುವರೆಸಿದೆ. ಸದ್ಯ ಹಳದಿ ವಲಯದಲ್ಲಿರುವ ಭಟ್ಕಳ ತಾಲೂಕಿನಲ್ಲಿ ಸರ್ಕಾರದ ಆದೇಶವನ್ನು ಜನರು ಪಾಲನೆ ಮಾಡದೆ ರಸ್ತೆಗಿಳಿದಿದ್ದಾರೆ. ಜನರನ್ನು ತಡೆದು ವಾಪಸ್​ ಕಳುಹಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.

ಲಾಕ್​​ಡೌನ್​​ ಮುಂದುವರಿಕೆಯ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ
ಲಾಕ್​​ಡೌನ್​​ ಮುಂದುವರಿಕೆಯ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ

ಭಟ್ಕಳದ ನಗರ ವ್ಯಾಪ್ತಿಯಲ್ಲಿ ಜನರ ಓಡಾಟ ಸೋಮವಾರ ಬೆಳಗ್ಗೆಯಿಂದಲೇ ಆರಂಭಗೊಂಡಿದೆ. ನಗರ ವ್ಯಾಪ್ತಿಯಲ್ಲಿ ಪಾಸ್​​ ಪಡೆಯದೆ ಮೊಬೈಲ್ ಶಾಪ್, ಹಳೇ ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ ಕೆಲವು ಬೇಕರಿ ಅಂಗಡಿಗಳು ಪೊಲೀಸರ ಭಯವಿಲ್ಲದೆ ತೆರೆದು ವ್ಯಾಪಾರಕ್ಕಿಳಿದಿವೆ. ತಾಲೂಕಾಡಳಿತ ಕಣ್ಣಿದ್ದೂ ಕುರುಡಾಗಿರುವ ಸ್ಥಿತಿಯಲ್ಲಿದೆ.

ಲಾಕ್​​ಡೌನ್​​ ಮುಂದುವರಿಕೆಯ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ
ಲಾಕ್​​ಡೌನ್​​ ಮುಂದುವರಿಕೆ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ

ಪಾಸ್​ ಪಡೆಯಲು ಜನಸಂದಣಿ:

ಇನ್ನು ತಹಶೀಲ್ದಾರ್​ ಕಚೇರಿಯ ಪಾಸ್​​ ವಿತರಣೆ ಕೇಂದ್ರದಲ್ಲಿ ನೂರಾರು ಮಂದಿ ಪಾಸ್​​ ಪಡೆಯಲು ಜಮಾಯಿಸಿದ್ದರು. ಕಚೇರಿಯಲ್ಲಿ ಲಾಕ್​ಡೌನ್​​ ಪೂರ್ವದಲ್ಲಿ ಸೇರುತ್ತಿದ್ದ ಜನಸಂದಣಿಯೇ ಮುಂದುವರೆದಂತಿದೆ. ಈಗಾಗಲೇ ಅನಗತ್ಯವಾಗಿ ಕೆಲವರಿಗೆ ತಾಲೂಕಾಡಳಿತ ಪಾಸ್ ವಿತರಣೆ ಮಾಡಿದ್ದು, ಒಂದೇ ದಿನಸಿ ಅಂಗಡಿಗಳಿಗೆ 5-6 ಮಂದಿ ಪಾಸ್​ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಲಾಕ್​​ಡೌನ್​​ ಮುಂದುವರಿಕೆಯ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ
ಲಾಕ್​​ಡೌನ್​​ ಮುಂದುವರಿಕೆ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ

ಸಂಶುದ್ದೀನ್ ಸರ್ಕಲ್​​ನಲ್ಲಿ ಪಾಸ್​ ತಪಾಸಣೆ:

ಲಾಕ್​ಡೌನ್​​ ಸಡಿಲಿಕೆ ಆಗಿದೆ ಎಂದು ಜನರು ತಪ್ಪು ಕಲ್ಪನೆಯಲ್ಲಿ ತಮ್ಮ ವಾಹನವನ್ನೇರಿ ಬೇಕಾಬಿಟ್ಟಿ ಓಡಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆ ಡಿವೈಎಸ್​ಪಿ ಗೌತಮ್ ಕೆ.ಸಿ. ಅವರಿಂದ ಅನಗತ್ಯ ವಾಹನ ಓಡಾಟ ಮಾಡುವವರ ಪರಿಶೀಲನೆ ಮಾಡಲಾಗುತ್ತಿದೆ. ಜನರಿಗೆ ಮತ್ತೆ ರಸ್ತೆಗಿಳಿಯದಂತೆ ಲಾಕ್​​ಡೌನ್ ವಿಸ್ತರಣೆ ಆಗಿರುವ ಬಗ್ಗೆ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.