ETV Bharat / state

ಬ್ಯಾಂಕಿನಲ್ಲಿ ಅಡವಿಟ್ಟ ಚಿನ್ನ ನಾಪತ್ತೆ.. ದೂರು ನೀಡಿದ ಬಳಿಕ ಕಿವಿಯೋಲೆ ವಾಪಸ್​ ಕೊಟ್ಟ ಬ್ಯಾಂಕ್ ಸಿಬ್ಬಂದಿ - Bank staff returned the earring after the complaint

ಪುಷ್ಪಲತಾ ಎಂಬುವರು ಸ್ಥಳೀಯ ಕೆನರಾ ಬ್ಯಾಂಕ್​ನಲ್ಲಿ ತಮ್ಮ ಚಿನ್ನದೊಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಕೆಲ ದಿನಗಳ ಬಳಿಕ ಚಿನ್ನದೊಡವೆಗಳನ್ನು ಪರಶೀಲಿಸಿದಾಗ ಅದರಲ್ಲಿ ಕಿವಿಯೋಲೆಯೊಂದು ನಾಪತ್ತೆಯಾಗಿತ್ತು.

gold earring
ಕಿವಿಯೋಲೆ
author img

By

Published : Dec 6, 2021, 10:57 PM IST

ಕಡಬ(ದಕ್ಷಿಣ ಕನ್ನಡ): ಇಲ್ಲಿನ ಕೆನರಾ ಬ್ಯಾಂಕ್​ನಲ್ಲಿ ಅಡವಿಟ್ಟ ಚಿನ್ನದ ಪೈಕಿ ಕಿವಿಯೋಲೆ ನಾಪತ್ತೆಯಾದ ಹಿನ್ನೆಲೆ ವಾರಸುದಾರರು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಕಿವಿಯೋಲೆಯನ್ನು ಬ್ಯಾಂಕ್​ ಸಿಬ್ಬಂದಿ ಹಿಂತಿರುಗಿಸಿದ ಘಟನೆ ಸೋಮವಾರ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಪುಷ್ಪಲತಾ ಎಂಬುವರು ಸ್ಥಳೀಯ ಕೆನರಾ ಬ್ಯಾಂಕ್​ನಲ್ಲಿ ತಮ್ಮ ಚಿನ್ನದೊಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಕೆಲ ದಿನಗಳ ಬಳಿಕ ಚಿನ್ನದೊಡವೆಗಳನ್ನು ಪರಶೀಲಿಸಿದಾಗ ಅದರಲ್ಲಿ ಕಿವಿಯೋಲೆಯೊಂದು ನಾಪತ್ತೆಯಾಗಿತ್ತು. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಒಪ್ಪದ ಬ್ಯಾಂಕ್​ ಸಿಬ್ಬಂದಿ ನೀವು ಅಡಮಾನ ಇಟ್ಟ ಚಿನ್ನ ಇಷ್ಟೇ ಎಂದು ವಾದಿಸಿದ್ದರು.

ಈ ಬಗ್ಗೆ ಪುಷ್ಪಲತಾ ಅವರು ಮಂಗಳೂರು ರೀಜನಲ್​ ಅಧಿಕಾರಿಗೆ ದೂರು ನೀಡಿದ್ದಾರೆ. ಅವರು ಕೂಡ ಬ್ಯಾಂಕ್​ ಸಿಬ್ಬಂದಿಯ ಮಾತಿಗೆ ಸೊಪ್ಪು ಹಾಕಿದ್ದಾರೆ. ಇದರಿಂದ ಕೆರಳಿದ ವಾರಸುದಾರರು ಡಿ.2ರಂದು ಕಡಬ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಮಲೇರಿಯಾ ಕಂಟಕ.. ಸಾವಿನ ಪ್ರಮಾಣ ಶೇ.14ರಷ್ಟು ಏರಿಕೆ

ಇಂದು ವಿಚಾರಣೆಗಾಗಿ ಪುಷ್ಪಲತಾ ಅವರನ್ನು ಠಾಣೆಗೆ ಕರೆದಾಗ, ಅದೇ ಸಮಯಕ್ಕೆ ಠಾಣೆಗೆ ಬಂದ ಬ್ಯಾಂಕ್​ ಸಿಬ್ಬಂದಿ ನಿಮ್ಮ ಕಿವಿಯೋಲೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಬ್ಯಾಂಕ್​ನ ಹಳೆಯ ಮ್ಯಾನೇಜರ್​ ಅದನ್ನು ಬೇರೆ ಲಾಕರ್​ನಲ್ಲಿ ಇಟ್ಟ ಕಾರಣ ಅದು ನಾಪತ್ತೆಯಾಗಿತ್ತು. ತಪಾಸಣೆ ಬಳಿಕ ಕಿವಿಯೋಲೆ ಸಿಕ್ಕಿದೆ ಎಂದು ಬ್ಯಾಂಕ್​ ಸಿಬ್ಬಂದಿ ಸಮಜಾಯಿಷಿ ನೀಡಿದ್ದಾರೆ. ಕೊನೆಗೂ ಬ್ಯಾಂಕ್​ ಸಿಬ್ಬಂದಿ ಮೇಲೆ ದೂರು ನೀಡಿದ ಬಳಿಕ ಚಿನ್ನದೊಡವೆಯನ್ನು ವಾಪಸ್​ ನೀಡಿದ್ದಾರೆ.

ಕಡಬ(ದಕ್ಷಿಣ ಕನ್ನಡ): ಇಲ್ಲಿನ ಕೆನರಾ ಬ್ಯಾಂಕ್​ನಲ್ಲಿ ಅಡವಿಟ್ಟ ಚಿನ್ನದ ಪೈಕಿ ಕಿವಿಯೋಲೆ ನಾಪತ್ತೆಯಾದ ಹಿನ್ನೆಲೆ ವಾರಸುದಾರರು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಕಿವಿಯೋಲೆಯನ್ನು ಬ್ಯಾಂಕ್​ ಸಿಬ್ಬಂದಿ ಹಿಂತಿರುಗಿಸಿದ ಘಟನೆ ಸೋಮವಾರ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಪುಷ್ಪಲತಾ ಎಂಬುವರು ಸ್ಥಳೀಯ ಕೆನರಾ ಬ್ಯಾಂಕ್​ನಲ್ಲಿ ತಮ್ಮ ಚಿನ್ನದೊಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಕೆಲ ದಿನಗಳ ಬಳಿಕ ಚಿನ್ನದೊಡವೆಗಳನ್ನು ಪರಶೀಲಿಸಿದಾಗ ಅದರಲ್ಲಿ ಕಿವಿಯೋಲೆಯೊಂದು ನಾಪತ್ತೆಯಾಗಿತ್ತು. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಒಪ್ಪದ ಬ್ಯಾಂಕ್​ ಸಿಬ್ಬಂದಿ ನೀವು ಅಡಮಾನ ಇಟ್ಟ ಚಿನ್ನ ಇಷ್ಟೇ ಎಂದು ವಾದಿಸಿದ್ದರು.

ಈ ಬಗ್ಗೆ ಪುಷ್ಪಲತಾ ಅವರು ಮಂಗಳೂರು ರೀಜನಲ್​ ಅಧಿಕಾರಿಗೆ ದೂರು ನೀಡಿದ್ದಾರೆ. ಅವರು ಕೂಡ ಬ್ಯಾಂಕ್​ ಸಿಬ್ಬಂದಿಯ ಮಾತಿಗೆ ಸೊಪ್ಪು ಹಾಕಿದ್ದಾರೆ. ಇದರಿಂದ ಕೆರಳಿದ ವಾರಸುದಾರರು ಡಿ.2ರಂದು ಕಡಬ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಮಲೇರಿಯಾ ಕಂಟಕ.. ಸಾವಿನ ಪ್ರಮಾಣ ಶೇ.14ರಷ್ಟು ಏರಿಕೆ

ಇಂದು ವಿಚಾರಣೆಗಾಗಿ ಪುಷ್ಪಲತಾ ಅವರನ್ನು ಠಾಣೆಗೆ ಕರೆದಾಗ, ಅದೇ ಸಮಯಕ್ಕೆ ಠಾಣೆಗೆ ಬಂದ ಬ್ಯಾಂಕ್​ ಸಿಬ್ಬಂದಿ ನಿಮ್ಮ ಕಿವಿಯೋಲೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಬ್ಯಾಂಕ್​ನ ಹಳೆಯ ಮ್ಯಾನೇಜರ್​ ಅದನ್ನು ಬೇರೆ ಲಾಕರ್​ನಲ್ಲಿ ಇಟ್ಟ ಕಾರಣ ಅದು ನಾಪತ್ತೆಯಾಗಿತ್ತು. ತಪಾಸಣೆ ಬಳಿಕ ಕಿವಿಯೋಲೆ ಸಿಕ್ಕಿದೆ ಎಂದು ಬ್ಯಾಂಕ್​ ಸಿಬ್ಬಂದಿ ಸಮಜಾಯಿಷಿ ನೀಡಿದ್ದಾರೆ. ಕೊನೆಗೂ ಬ್ಯಾಂಕ್​ ಸಿಬ್ಬಂದಿ ಮೇಲೆ ದೂರು ನೀಡಿದ ಬಳಿಕ ಚಿನ್ನದೊಡವೆಯನ್ನು ವಾಪಸ್​ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.