ETV Bharat / state

ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ ವಾರ್: ಯುವಕನ ಮೇಲೆ ಹಲ್ಲೆ ಮಾಡಿದ್ದ ನಾಲ್ವರ ಬಂಧನ

author img

By

Published : Dec 4, 2021, 6:39 PM IST

ನವೆಂಬರ್ 28 ರಂದು 8 ಮಂದಿಯ ತಂಡವು ಮಾರಕಾಸ್ತ್ರಗಳಿಂದ ಶ್ರವಣ್ ಮೇಲೆ ದಾಳಿ‌ ನಡೆಸಿದೆ. ಘಟನೆಯಲ್ಲಿ ಶ್ರವಣ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯುವಕನ ಮೇಲೆ ಹಲ್ಲೆ ಮಾಡಿದ್ದ ನಾಲ್ವರ ಬಂಧನ
ಯುವಕನ ಮೇಲೆ ಹಲ್ಲೆ ಮಾಡಿದ್ದ ನಾಲ್ವರ ಬಂಧನ

ಮಂಗಳೂರು: ನಗರದಲ್ಲಿ ಮತ್ತೆ ರೌಡಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯುವಕನೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್​ ಆಯುಕ್ತ ಎನ್​​. ಶಶಿಕುಮಾರ್​

ಮಂಗಳೂರು ಅಶೋಕನಗರ ನಿವಾಸಿ ನವನೀತ್, ಹೊಯಿಗೆಬೈಲ್ ನಿವಾಸಿ ಹೇಮಂತ್, ಬೋಳೂರು ನಿವಾಸಿ ದೀಕ್ಷಿತ್, ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿರುವ ಸಂದೇಶ್ ಬಂಧಿತ‌ ಆರೋಪಿಗಳು. ಅಳಕೆ ಗ್ಯಾಂಗ್​​​ಗೆ ಸೇರಿದ ಶ್ರವಣ್ ಗ್ಯಾಂಗ್ ವಾರ್ ನಿಂದ ಗಂಭೀರವಾಗಿ ಗಾಯಗೊಂಡ‌ ಯುವಕ.

2020ರಲ್ಲಿ ಬರ್ಕೆಯಲ್ಲಿ ನಡೆದ ಇಂದ್ರಜಿತ್ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕೊಲೆ ಆರೋಪಿಗಳು ಗಾಯಾಳು ಶ್ರವಣ್ ಸಹೋದರರಾಗಿದ್ದಾರೆ. ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆಯತ್ನ ನಡೆದಿದೆ.

ನವೆಂಬರ್ 28 ರಂದು 8 ಮಂದಿಯ ತಂಡವು ಮಾರಕಾಸ್ತ್ರಗಳಿಂದ ಶ್ರವಣ್ ಮೇಲೆ ದಾಳಿ‌ ನಡೆಸಿದೆ. ಘಟನೆಯಲ್ಲಿ ಶ್ರವಣ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ದೇಹಕ್ಕೆ 17 ಕಡೆಗೆ ಸ್ಟಿಚ್ ಹಾಕಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಈ ಕೃತ್ಯಕ್ಕೆ ಬಳಸಿರುವ ಮೂರು ತಲವಾರು, ಮೂರು ದ್ವಿಚಕ್ರ ವಾಹನಗಳು, ಒಂದು ಆಟೊ ರಿಕ್ಷಾವನ್ನು ಸ್ವಾಧೀನಪಡಿಸಲಾಗಿದೆ. ಈ‌ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಶಾಲಾ ವಾಹನ ಚಾಲಕ ಅರೆಸ್ಟ್

ಮಂಗಳೂರು: ನಗರದಲ್ಲಿ ಮತ್ತೆ ರೌಡಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯುವಕನೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್​ ಆಯುಕ್ತ ಎನ್​​. ಶಶಿಕುಮಾರ್​

ಮಂಗಳೂರು ಅಶೋಕನಗರ ನಿವಾಸಿ ನವನೀತ್, ಹೊಯಿಗೆಬೈಲ್ ನಿವಾಸಿ ಹೇಮಂತ್, ಬೋಳೂರು ನಿವಾಸಿ ದೀಕ್ಷಿತ್, ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿರುವ ಸಂದೇಶ್ ಬಂಧಿತ‌ ಆರೋಪಿಗಳು. ಅಳಕೆ ಗ್ಯಾಂಗ್​​​ಗೆ ಸೇರಿದ ಶ್ರವಣ್ ಗ್ಯಾಂಗ್ ವಾರ್ ನಿಂದ ಗಂಭೀರವಾಗಿ ಗಾಯಗೊಂಡ‌ ಯುವಕ.

2020ರಲ್ಲಿ ಬರ್ಕೆಯಲ್ಲಿ ನಡೆದ ಇಂದ್ರಜಿತ್ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕೊಲೆ ಆರೋಪಿಗಳು ಗಾಯಾಳು ಶ್ರವಣ್ ಸಹೋದರರಾಗಿದ್ದಾರೆ. ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆಯತ್ನ ನಡೆದಿದೆ.

ನವೆಂಬರ್ 28 ರಂದು 8 ಮಂದಿಯ ತಂಡವು ಮಾರಕಾಸ್ತ್ರಗಳಿಂದ ಶ್ರವಣ್ ಮೇಲೆ ದಾಳಿ‌ ನಡೆಸಿದೆ. ಘಟನೆಯಲ್ಲಿ ಶ್ರವಣ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ದೇಹಕ್ಕೆ 17 ಕಡೆಗೆ ಸ್ಟಿಚ್ ಹಾಕಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಈ ಕೃತ್ಯಕ್ಕೆ ಬಳಸಿರುವ ಮೂರು ತಲವಾರು, ಮೂರು ದ್ವಿಚಕ್ರ ವಾಹನಗಳು, ಒಂದು ಆಟೊ ರಿಕ್ಷಾವನ್ನು ಸ್ವಾಧೀನಪಡಿಸಲಾಗಿದೆ. ಈ‌ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಶಾಲಾ ವಾಹನ ಚಾಲಕ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.