ETV Bharat / state

ಸಿಎಂ ಬಿಎಸ್​ವೈ ವಿರುದ್ಧದ 'ಸಿಡಿ'ತಲೆಗಳ ಹೇಳಿಕೆಗೆ ವಿ ಎಸ್‌ ಉಗ್ರಪ್ಪ ಹೀಗಂದರು.. - ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಸುದ್ದಿಗೋಷ್ಠಿ

ದುಡ್ಡು ತಗೊಂಡು, ಬಕೆಟ್ ಹಿಡಿಯುವವರಿಗೆ ಹಾಗೂ ಬ್ಲ್ಯಾಕ್​ಮೇಲ್​​ ಮಾಡುವವರಿಗೆ ಸಚಿವ ಸ್ಥಾನ ನೀಡುತ್ತಿದ್ದಾರೆ ಎಂದು ಅವರ ಪಕ್ಷದವರು ಹೇಳುತ್ತಿದ್ದಾರೆ. ಆದ್ದರಿಂದ ಸಿಡಿಯಲ್ಲಿ ಏನೋ ಇದೆ..

v s ugrappa pressmeet in chitradurga
ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಸುದ್ದಿಗೋಷ್ಠಿ
author img

By

Published : Jan 17, 2021, 5:18 PM IST

ಚಿತ್ರದುರ್ಗ : ಬಿಜೆಪಿ ನಾಯಕರು ಮಾಡಿರುವ ಸಿಡಿ ಆರೋಪದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು‌ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಆಗ್ರಹಿಸಿದರು‌. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಮಿತ್ರರೊಂದಿಗೆ ಮಾತನಾಡಿದ ಅವರು, ಸಿಡಿಯಲ್ಲಿ ಏನಿದೆ ಎಂಬುದು ಅವರ ನಾಯಕರಿಗೆ ಗೊತ್ತಿದೆ‌ ಎಂದರು.

ಹೆಚ್​​. ವಿಶ್ವನಾಥ್, ಸಿ ಪಿ ಯೋಗೇಶ್ವರ್, ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರಿ‌ಗೆ ಸಿಡಿ ಇರುವ ಬಗ್ಗೆ ಗೊತ್ತಿದೆ‌‌‌. ಯತ್ನಾಳ್ ಅವರು ಸಿಡಿ ನೋಡಿರುವುದಾಗಿ ಹೇಳಿದ್ದಾರೆ‌. ಸಿಡಿಯಲ್ಲಿ ಭ್ರಷ್ಟಾಚಾರದ ವಿಡಿಯೋ ಇದಿಯೋ ಅಥವಾ ಬೇರೆ ಇದೆಯೋ ನನಗೆ ಗೊತ್ತಿಲ್ಲ. ಈ ಕುರಿತು ನ್ಯಾಯಾಂಗ ತನಿಖೆ ಆಗುವಂತೆ ಒತ್ತಾಯಿಸಿದರು‌.

ಬಿಜೆಪಿ ನಾಯಕರ ಸಿಡಿ ಕುರಿತ ಹೇಳಿಕೆಗಳಿಗೆ ಕೈ ಮುಖಂಡ ವಿ ಎಸ್ ಉಗ್ರಪ್ಪ ಪ್ರತಿಕ್ರಿಯೆ..

ಓದಿ: ಸಿಡಿ ಆರೋಪ, ಆಪರೇಷನ್ ಕಮಲದಲ್ಲಿ ಹಣದ ಪ್ರಭಾವದ ಬಗ್ಗೆ ತನಿಖೆಯಾಗಲಿ: ಸಿದ್ದರಾಮಯ್ಯ ಒತ್ತಾಯ

ಇನ್ನು, ಸಿಡಿಯಲ್ಲಿ ಏನೂ ಇಲ್ಲ ಅಂದಿದ್ರೆ ನ್ಯಾಯಾಂಗ ತನಿಖೆಗೆ ಆದೇಶ ಮಾಡಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸವಾಲೆಸೆದರು. ಸಿಡಿ ಕುರಿತು ಭಯವಿಲ್ಲದಿದ್ದರೆ, ತನಿಖೆ ಮಾಡಿಸಬೇಕು. ಈ ವಿಚಾರವಾಗಿ ಸಿಎಂ ಬಿಎಸ್​ವೈ ಸಂಪೂರ್ಣ ಮೌನವಾಗಿದ್ದಾರೆ. ಇದನ್ನೆಲ್ಲ ನೋಡಿದ್ರೆ ಸಿಡಿಯಲ್ಲಿ ಏನೋ ಇದೆ ಎಂದು ತಿಳಿಯುತ್ತದೆ ಎಂದರು.

ದುಡ್ಡು ತಗೊಂಡು, ಬಕೆಟ್ ಹಿಡಿಯುವವರಿಗೆ ಹಾಗೂ ಬ್ಲ್ಯಾಕ್​ಮೇಲ್​​ ಮಾಡುವವರಿಗೆ ಸಚಿವ ಸ್ಥಾನ ನೀಡುತ್ತಿದ್ದಾರೆ ಎಂದು ಅವರ ಪಕ್ಷದವರು ಹೇಳುತ್ತಿದ್ದಾರೆ. ಆದ್ದರಿಂದ ಸಿಡಿಯಲ್ಲಿ ಏನೋ ಇದೆ ಎಂಬ ಸಂಶಯ ವ್ಯಕ್ತಪಡಿಸಿದರು.

ಚಿತ್ರದುರ್ಗ : ಬಿಜೆಪಿ ನಾಯಕರು ಮಾಡಿರುವ ಸಿಡಿ ಆರೋಪದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು‌ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಆಗ್ರಹಿಸಿದರು‌. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಮಿತ್ರರೊಂದಿಗೆ ಮಾತನಾಡಿದ ಅವರು, ಸಿಡಿಯಲ್ಲಿ ಏನಿದೆ ಎಂಬುದು ಅವರ ನಾಯಕರಿಗೆ ಗೊತ್ತಿದೆ‌ ಎಂದರು.

ಹೆಚ್​​. ವಿಶ್ವನಾಥ್, ಸಿ ಪಿ ಯೋಗೇಶ್ವರ್, ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರಿ‌ಗೆ ಸಿಡಿ ಇರುವ ಬಗ್ಗೆ ಗೊತ್ತಿದೆ‌‌‌. ಯತ್ನಾಳ್ ಅವರು ಸಿಡಿ ನೋಡಿರುವುದಾಗಿ ಹೇಳಿದ್ದಾರೆ‌. ಸಿಡಿಯಲ್ಲಿ ಭ್ರಷ್ಟಾಚಾರದ ವಿಡಿಯೋ ಇದಿಯೋ ಅಥವಾ ಬೇರೆ ಇದೆಯೋ ನನಗೆ ಗೊತ್ತಿಲ್ಲ. ಈ ಕುರಿತು ನ್ಯಾಯಾಂಗ ತನಿಖೆ ಆಗುವಂತೆ ಒತ್ತಾಯಿಸಿದರು‌.

ಬಿಜೆಪಿ ನಾಯಕರ ಸಿಡಿ ಕುರಿತ ಹೇಳಿಕೆಗಳಿಗೆ ಕೈ ಮುಖಂಡ ವಿ ಎಸ್ ಉಗ್ರಪ್ಪ ಪ್ರತಿಕ್ರಿಯೆ..

ಓದಿ: ಸಿಡಿ ಆರೋಪ, ಆಪರೇಷನ್ ಕಮಲದಲ್ಲಿ ಹಣದ ಪ್ರಭಾವದ ಬಗ್ಗೆ ತನಿಖೆಯಾಗಲಿ: ಸಿದ್ದರಾಮಯ್ಯ ಒತ್ತಾಯ

ಇನ್ನು, ಸಿಡಿಯಲ್ಲಿ ಏನೂ ಇಲ್ಲ ಅಂದಿದ್ರೆ ನ್ಯಾಯಾಂಗ ತನಿಖೆಗೆ ಆದೇಶ ಮಾಡಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸವಾಲೆಸೆದರು. ಸಿಡಿ ಕುರಿತು ಭಯವಿಲ್ಲದಿದ್ದರೆ, ತನಿಖೆ ಮಾಡಿಸಬೇಕು. ಈ ವಿಚಾರವಾಗಿ ಸಿಎಂ ಬಿಎಸ್​ವೈ ಸಂಪೂರ್ಣ ಮೌನವಾಗಿದ್ದಾರೆ. ಇದನ್ನೆಲ್ಲ ನೋಡಿದ್ರೆ ಸಿಡಿಯಲ್ಲಿ ಏನೋ ಇದೆ ಎಂದು ತಿಳಿಯುತ್ತದೆ ಎಂದರು.

ದುಡ್ಡು ತಗೊಂಡು, ಬಕೆಟ್ ಹಿಡಿಯುವವರಿಗೆ ಹಾಗೂ ಬ್ಲ್ಯಾಕ್​ಮೇಲ್​​ ಮಾಡುವವರಿಗೆ ಸಚಿವ ಸ್ಥಾನ ನೀಡುತ್ತಿದ್ದಾರೆ ಎಂದು ಅವರ ಪಕ್ಷದವರು ಹೇಳುತ್ತಿದ್ದಾರೆ. ಆದ್ದರಿಂದ ಸಿಡಿಯಲ್ಲಿ ಏನೋ ಇದೆ ಎಂಬ ಸಂಶಯ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.