ಚಿತ್ರದುರ್ಗ: ಅಪರಿಚಿತ ವಾಹನ ಡಿಕ್ಕಿಯಾಗಿ 25 ಕ್ಕೂ ಹೆಚ್ಚು ಕುರಿಗಳು ಸಾವನಪ್ಪಿರುವ ಮನ ಕಲಕುವ ಘಟನೆ ಜಿಲ್ಲೆ ಯ ಹಿರಿಯೂರು ನಗರದ ವಿವಿ ಪುರ ಕ್ರಾಸ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಕುರಿಗಳಿಗೆ ಡಿಕ್ಕಿ ಹೊಡೆದ ಬಳಿಕ ವಾಹನ ಸಮೇತ ಚಾಲಕ ಪರಾರಿಯಾಗಿದ್ದು, ಮಾಹಿತಿ ಲಭ್ಯವಾಗಿಲ್ಲ.
ಇನ್ನು ಸಾವನ್ನಪ್ಪಿರುವ ಕುರಿಗಳು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗೌಡಗೆರೆ ಗ್ರಾಮದ ತಿಮ್ಮಣ್ಣನವರಿಗೆ ಸೇರಿವೆ ಎಂದು ತಿಳಿದು ಬಂದಿದೆ. ಶಿರಾದಿಂದ ಶಿವಮೊಗ್ಗ ಕಡೆ ವಲಸೆ ಹೋಗುವಾಗ ಘಟನೆ ನಡೆದಿದೆ.