ETV Bharat / state

ಕೆಎಸ್​ಪಿ ಆ್ಯಪ್ ಮೂಲಕ ಕೊಲೆ ಬೆದರಿಕೆ: ಎಸ್​ಪಿ ಕೆ. ಪರಶುರಾಮ್

author img

By

Published : Jul 15, 2022, 8:51 PM IST

ಕೊಲೆ ಬೆದರಿಕೆ ಹಿನ್ನೆಲೆ ಚಿತ್ರದುರ್ಗದ ಎಸ್​ಪಿ ಕಚೇರಿಗೆ ಆಗಮಿಸಿದ ಸಿದ್ದರಾಮೇಶ್ವರ ಸ್ವಾಮೀಜಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಎಸ್​ಪಿ ಕೆ. ಪರಶುರಾಮ್
ಎಸ್​ಪಿ ಕೆ. ಪರಶುರಾಮ್

ಚಿತ್ರದುರ್ಗ: ಬೋವಿ ಸ್ವಾಮೀಜಿ ಸೇರಿ ಬೋವಿ ಸಮುದಾಯದ ಶಾಸಕರಿಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆ ಎಸ್​ಪಿ ಕೆ ಪರಶುರಾಮ್ ಪ್ರತಿಕ್ರಿಯಿಸಿದ್ದು, ಕೆಎಸ್​ಪಿ ಆ್ಯಪ್ ಮೂಲಕ ನಮ್ಮ ಕಚೇರಿಗೆ ಕೊಲೆ ಬೆದರಿಕೆ ಬಂದಿದೆ. ಬೋವಿ ಗುರುಪೀಠದ ಹಿಮ್ಮಡಿ ಸಿದ್ದರಾಮೇಶ್ವರ ಶ್ರೀ, ಹೊಳಲ್ಕೆರೆ ಎಂಎಲ್​ಎ ಚಂದ್ರಪ್ಪ, ಹೊಸದುರ್ಗ ಎಂಎಲ್​ಎ ಗೂಳಿಹಟ್ಟಿ ಶೇಖರ್ ಹೆಸರಿದೆ ಎಂದಿದ್ದಾರೆ.

ಎಸ್​ಪಿ ಕೆ. ಪರಶುರಾಮ್ ಅವರು ಮಾತನಾಡಿದರು

ಈ ಕುರಿತು ಮಾತನಾಡಿದ ಅವರು, ಬೋವಿ ಗುರುಪೀಠದ ಹಿಮ್ಮಡಿ ಸಿದ್ದರಾಮೇಶ್ವರ ಶ್ರೀ, ಹೊಳಲ್ಕೆರೆ ಎಂಎಲ್​ಎ ಚಂದ್ರಪ್ಪ, ಹೊಸದುರ್ಗ ಎಂಎಲ್​ಎ ಗೂಳಿಹಟ್ಟಿ ಶೇಖರ್ ಹೆಸರಿದೆ. ಇವರು ಮಾತ್ರ ಅಲ್ಲದೇ ಬೋವಿ ಸಮುದಾಯದ ಹಲವರ ಹೆಸರುಗಳು ಪ್ರಸ್ತಾಪ ಆಗಿದೆ. ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದರು.

ಬೋವಿ ಸಮುದಾಯಕ್ಕೆ ರಕ್ಷಣೆ ನೀಡುವಂತೆ ಪತ್ರ ಬರೆದಿರುವುದು
ಬೋವಿ ಸಮುದಾಯಕ್ಕೆ ರಕ್ಷಣೆ ನೀಡುವಂತೆ ಪತ್ರ ಬರೆದಿರುವುದು

ಈ ಪ್ರಕರಣ ಗಂಭೀರವಾಗಿದ್ದು, ತನಿಖೆ ಆರಂಭಿಸಿದ್ದೇವೆ. ಬೋವಿ ಸಮುದಾಯದ ಶಾಸಕರನ್ನ ಸೇರಿ ಹಲವರ ಹತ್ಯೆಗೆ ಸಂಚು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ನಾಲ್ಕು ಮಂದಿ ಹತ್ಯೆ ಸಂಚು ರೂಪಿಸಿದ್ದಾರೆ ಎಂದು ಅವರ ಹೆಸರು ಕೂಡ ಉಲ್ಲೇಖವಾಗಿದೆ ಎಂದು ತಿಳಿಸಿದರು.

ಕೊಲೆ ಬೆದರಿಕೆ ಹಿನ್ನೆಲೆ ರಕ್ಷಣೆ ಕೋರಿ ಸಿದ್ದರಾಮೇಶ್ವರ ಸ್ವಾಮೀಜಿ ಎಸ್​ಪಿ ಕಚೇರಿ ಮೊರೆ.. ಕೊಲೆ ಬೆದರಿಕೆ ಹಿನ್ನೆಲೆ ಎಸ್​ಪಿ ಕಚೇರಿಗೆ ಆಗಮಿಸಿದ ಸಿದ್ದರಾಮೇಶ್ವರ ಸ್ವಾಮೀಜಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮಠದ ಆಸ್ತಿಗಳಿಗೆ ಕೆಲ ದುಷ್ಕರ್ಮಿಗಳಿಂದ ಅಪಾಯವಿದೆ. ಜುಲೈ 18 ಕ್ಕೆ ಬೋವಿ ಜನೋತ್ಸವ ನಡೆಯುತ್ತಿದೆ. ಆಗಸ್ಟ್​ 1 ರಂದು ಸಿದ್ದರಾಮೇಶ್ವರ ರಥೋತ್ಸವ ಬೃಹತ್ ಆಗಿ ನಡೆಯುತ್ತಿದೆ ಎಂದು ಮನವಿ ಪತ್ರ ನೀಡಿದ್ದಾರೆ.

ಓದಿ: ಚಂದ್ರು ಕೊಲೆ‌ ಕೇಸ್ - ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ: ಕೊಲೆಯಾಗಿದ್ದು ಇದೇ ವಿಚಾರಕ್ಕಂತೆ!

ಚಿತ್ರದುರ್ಗ: ಬೋವಿ ಸ್ವಾಮೀಜಿ ಸೇರಿ ಬೋವಿ ಸಮುದಾಯದ ಶಾಸಕರಿಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆ ಎಸ್​ಪಿ ಕೆ ಪರಶುರಾಮ್ ಪ್ರತಿಕ್ರಿಯಿಸಿದ್ದು, ಕೆಎಸ್​ಪಿ ಆ್ಯಪ್ ಮೂಲಕ ನಮ್ಮ ಕಚೇರಿಗೆ ಕೊಲೆ ಬೆದರಿಕೆ ಬಂದಿದೆ. ಬೋವಿ ಗುರುಪೀಠದ ಹಿಮ್ಮಡಿ ಸಿದ್ದರಾಮೇಶ್ವರ ಶ್ರೀ, ಹೊಳಲ್ಕೆರೆ ಎಂಎಲ್​ಎ ಚಂದ್ರಪ್ಪ, ಹೊಸದುರ್ಗ ಎಂಎಲ್​ಎ ಗೂಳಿಹಟ್ಟಿ ಶೇಖರ್ ಹೆಸರಿದೆ ಎಂದಿದ್ದಾರೆ.

ಎಸ್​ಪಿ ಕೆ. ಪರಶುರಾಮ್ ಅವರು ಮಾತನಾಡಿದರು

ಈ ಕುರಿತು ಮಾತನಾಡಿದ ಅವರು, ಬೋವಿ ಗುರುಪೀಠದ ಹಿಮ್ಮಡಿ ಸಿದ್ದರಾಮೇಶ್ವರ ಶ್ರೀ, ಹೊಳಲ್ಕೆರೆ ಎಂಎಲ್​ಎ ಚಂದ್ರಪ್ಪ, ಹೊಸದುರ್ಗ ಎಂಎಲ್​ಎ ಗೂಳಿಹಟ್ಟಿ ಶೇಖರ್ ಹೆಸರಿದೆ. ಇವರು ಮಾತ್ರ ಅಲ್ಲದೇ ಬೋವಿ ಸಮುದಾಯದ ಹಲವರ ಹೆಸರುಗಳು ಪ್ರಸ್ತಾಪ ಆಗಿದೆ. ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದರು.

ಬೋವಿ ಸಮುದಾಯಕ್ಕೆ ರಕ್ಷಣೆ ನೀಡುವಂತೆ ಪತ್ರ ಬರೆದಿರುವುದು
ಬೋವಿ ಸಮುದಾಯಕ್ಕೆ ರಕ್ಷಣೆ ನೀಡುವಂತೆ ಪತ್ರ ಬರೆದಿರುವುದು

ಈ ಪ್ರಕರಣ ಗಂಭೀರವಾಗಿದ್ದು, ತನಿಖೆ ಆರಂಭಿಸಿದ್ದೇವೆ. ಬೋವಿ ಸಮುದಾಯದ ಶಾಸಕರನ್ನ ಸೇರಿ ಹಲವರ ಹತ್ಯೆಗೆ ಸಂಚು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ನಾಲ್ಕು ಮಂದಿ ಹತ್ಯೆ ಸಂಚು ರೂಪಿಸಿದ್ದಾರೆ ಎಂದು ಅವರ ಹೆಸರು ಕೂಡ ಉಲ್ಲೇಖವಾಗಿದೆ ಎಂದು ತಿಳಿಸಿದರು.

ಕೊಲೆ ಬೆದರಿಕೆ ಹಿನ್ನೆಲೆ ರಕ್ಷಣೆ ಕೋರಿ ಸಿದ್ದರಾಮೇಶ್ವರ ಸ್ವಾಮೀಜಿ ಎಸ್​ಪಿ ಕಚೇರಿ ಮೊರೆ.. ಕೊಲೆ ಬೆದರಿಕೆ ಹಿನ್ನೆಲೆ ಎಸ್​ಪಿ ಕಚೇರಿಗೆ ಆಗಮಿಸಿದ ಸಿದ್ದರಾಮೇಶ್ವರ ಸ್ವಾಮೀಜಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮಠದ ಆಸ್ತಿಗಳಿಗೆ ಕೆಲ ದುಷ್ಕರ್ಮಿಗಳಿಂದ ಅಪಾಯವಿದೆ. ಜುಲೈ 18 ಕ್ಕೆ ಬೋವಿ ಜನೋತ್ಸವ ನಡೆಯುತ್ತಿದೆ. ಆಗಸ್ಟ್​ 1 ರಂದು ಸಿದ್ದರಾಮೇಶ್ವರ ರಥೋತ್ಸವ ಬೃಹತ್ ಆಗಿ ನಡೆಯುತ್ತಿದೆ ಎಂದು ಮನವಿ ಪತ್ರ ನೀಡಿದ್ದಾರೆ.

ಓದಿ: ಚಂದ್ರು ಕೊಲೆ‌ ಕೇಸ್ - ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ: ಕೊಲೆಯಾಗಿದ್ದು ಇದೇ ವಿಚಾರಕ್ಕಂತೆ!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.