ETV Bharat / state

ಬೆಡ್​​ ಕೊರತೆ ನೀಗಿಸಲು ಜಿಲ್ಲಾಡಳಿತ ಹೊಸ ತಂತ್ರ: ಶ್ರೀಮಂತರಿಗಷ್ಟೇ ಸೀಮಿತವಾಯ್ತಾ ಮನೆ ಚಿಕಿತ್ಸೆ?

author img

By

Published : Jul 29, 2020, 9:27 PM IST

ಜಿಲ್ಲೆಯಲ್ಲಿ ಉಂಟಾಗಿರುವ ಬೆಡ್​ ಕೊರತೆ ನೀಗಿಸಲು ಜಿಲ್ಲಾಡಳಿತ ಹೊಸ ಯೋಜನೆ ರೂಪಿಸಿದೆ. ಇದೀಗ ಈ ಯೋಜನೆ ವಿರುದ್ಧ ಅಪಸ್ವರ ಕೇಳಿಬಂದಿದೆ. ಹೀಗಾದರೆ, ಬಡ ಕೊರೊನಾ ಸೋಂಕಿತನ ಗತಿ ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Chitradurga administration find new strategy to reduce bed shortage
ಬೆಡ್​​ ಕೊರತೆ ನೀಗಿಸಲು ಜಿಲ್ಲಾಡಳಿತ ಹೊಸ ತಂತ್ರ...ಶ್ರೀಮಂತರಿಗಷ್ಟೇ ಸೀಮಿತವಾಯ್ತಾ ಮನೆ ಚಿಕಿತ್ಸೆ..?

ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಸೋಂಕಿತರ ಸಂಖ್ಯೆ 500 ದಾಟಿದ್ದರಿಂದ ಸೋಂಕಿತರಿಗೆ ಇನ್ಮುಂದೆ ಮನೆಯಲ್ಲೇ ಚಿಕಿತ್ಸೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಈ ನಡುವೆ ಮನೆಯಲ್ಲೇ ಅರೈಕೆ ಮಾಡುವ ವ್ಯವಸ್ಥೆ ಇದ್ದವರಿಗೆ ಮಾತ್ರ ಈ ವ್ಯವಸ್ಥೆ ಸೀಮಿತವಾಗಿದೆಯೇ? ಎಂಬ ಅನುಮಾನ ಜನರನ್ನು ಕಾಡತೊಡಗಿದೆ. ಈಗಾಗಲೇ ಜಿಲ್ಲೆಯಲ್ಲಿ 24ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದು, ಅಕ್ಕಪಕ್ಕದ‌ ಮನೆಯವರು ಆತಂಕದಲ್ಲಿ ಕಾಲ ಕಳೆಯಬೇಕಾಗಿದೆ. ಚಿತ್ರದುರ್ಗ ನಗರದಲ್ಲಿರುವ ಕೋವಿಡ್​​​-19 ಆಸ್ಪತ್ರೆಯಲ್ಲಿ ಸೋಂಕಿತರು ದಾಖಲಾಗಲು ಬಯಸದಿರುವಾಗ ಅಂತಹ ರೋಗಿಗಳಿಗೆ ತಮ್ಮ ಮನೆಯಲ್ಲೇ ಅಗತ್ಯ ಸೌಲಭ್ಯ ಹೊಂದಿರುವಂತಹ ವ್ಯವಸ್ಥೆ ಇದ್ದರೆ ಮಾತ್ರ ಆರೈಕೆ‌‌ ಮಾಡಿ ಚಿಕಿತ್ಸೆ ನೀಡಲು ಮುಂದಾಗಿದೆ.

ಬೆಡ್​​ ಕೊರತೆ ನೀಗಿಸಲು ಜಿಲ್ಲಾಡಳಿತ ಹೊಸ ತಂತ್ರ, ಶ್ರೀಮಂತರಿಗಷ್ಟೇ ಸೀಮಿತವಾಯ್ತಾ ಮನೆ ಚಿಕಿತ್ಸೆ..?

ಈ ವ್ಯವಸ್ಥೆ ಶ್ರೀಮಂತರಿಗೆ ಮಾತ್ರ ಅನ್ವಯವಾಗುತ್ತಾ ಎಂಬ ಅನುಮಾನ ಕಾಡತೊಡಗಿದ್ದು, ಮಧ್ಯಮ ವರ್ಗದ ಜನರಿಗೆ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​​ಗಳೇ ಗತಿ ಎಂಬಂತಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ 24ಕ್ಕೂ ಹೆಚ್ಚು ಸೋಂಕಿತರ ಮನೆ ಪರಿಶೀಲನೆ‌ ನಡೆಸಿ ಅಗತ್ಯ ಸೌಲಭ್ಯ ಇರುವುದನ್ನು ಗಮನಿಸಿ ಹೋಂ ಐಸೊಲೇಷನ್‌ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದ್ದರಿಂದ ಹೆಚ್ಚು ಶ್ರೀಮಂತರಿಗೆ ಈ ಉಪಯೋಗ ದೊರಕಿದೆ.

ಇದರಿಂದ ಎಲ್ಲಾ ಸೌಲಭ್ಯ ಹೊಂದಿರುವರಿಗೆ ಮಾತ್ರ ಈ ಸೌಲಭ್ಯ ಸಿಗುತ್ತಿದೆ, ಇನ್ನು ಸ್ವಂತ ಮನೆ ಹಾಗೂ ಅದಕ್ಕೆ ಬೆಡ್ ರೂಮ್ ಇದ್ದರೂ ಮಧ್ಯಮವರ್ಗದ ಜನರು ಮಾತ್ರ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಬೇಕಾಗಿದೆ. ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ ಎಂದು ಡಿಹೆಚ್ಓ ಪಾಲಾಕ್ಷ ತಿಳಿಸಿದ್ದಾರೆ.

ಈಗಾಗಲೇ 24 ಮಂದಿ ಈ ಸೌಲಭ್ಯವನ್ನು ಪಡೆದುಕೊಂಡು ಕೋವಿಡ್​ ಆಸ್ಪತ್ರೆಗೆ ತೆರಳದೆ ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಎಲ್ಲಾ ವ್ಯವಸ್ಥೆ ಇದ್ದರೂ ಮಧ್ಯಮವರ್ಗದ ಜನರು ಮಾತ್ರ ಆಸ್ಪತ್ರೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಸೋಂಕಿತರ ಸಂಖ್ಯೆ 500 ದಾಟಿದ್ದರಿಂದ ಸೋಂಕಿತರಿಗೆ ಇನ್ಮುಂದೆ ಮನೆಯಲ್ಲೇ ಚಿಕಿತ್ಸೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಈ ನಡುವೆ ಮನೆಯಲ್ಲೇ ಅರೈಕೆ ಮಾಡುವ ವ್ಯವಸ್ಥೆ ಇದ್ದವರಿಗೆ ಮಾತ್ರ ಈ ವ್ಯವಸ್ಥೆ ಸೀಮಿತವಾಗಿದೆಯೇ? ಎಂಬ ಅನುಮಾನ ಜನರನ್ನು ಕಾಡತೊಡಗಿದೆ. ಈಗಾಗಲೇ ಜಿಲ್ಲೆಯಲ್ಲಿ 24ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದು, ಅಕ್ಕಪಕ್ಕದ‌ ಮನೆಯವರು ಆತಂಕದಲ್ಲಿ ಕಾಲ ಕಳೆಯಬೇಕಾಗಿದೆ. ಚಿತ್ರದುರ್ಗ ನಗರದಲ್ಲಿರುವ ಕೋವಿಡ್​​​-19 ಆಸ್ಪತ್ರೆಯಲ್ಲಿ ಸೋಂಕಿತರು ದಾಖಲಾಗಲು ಬಯಸದಿರುವಾಗ ಅಂತಹ ರೋಗಿಗಳಿಗೆ ತಮ್ಮ ಮನೆಯಲ್ಲೇ ಅಗತ್ಯ ಸೌಲಭ್ಯ ಹೊಂದಿರುವಂತಹ ವ್ಯವಸ್ಥೆ ಇದ್ದರೆ ಮಾತ್ರ ಆರೈಕೆ‌‌ ಮಾಡಿ ಚಿಕಿತ್ಸೆ ನೀಡಲು ಮುಂದಾಗಿದೆ.

ಬೆಡ್​​ ಕೊರತೆ ನೀಗಿಸಲು ಜಿಲ್ಲಾಡಳಿತ ಹೊಸ ತಂತ್ರ, ಶ್ರೀಮಂತರಿಗಷ್ಟೇ ಸೀಮಿತವಾಯ್ತಾ ಮನೆ ಚಿಕಿತ್ಸೆ..?

ಈ ವ್ಯವಸ್ಥೆ ಶ್ರೀಮಂತರಿಗೆ ಮಾತ್ರ ಅನ್ವಯವಾಗುತ್ತಾ ಎಂಬ ಅನುಮಾನ ಕಾಡತೊಡಗಿದ್ದು, ಮಧ್ಯಮ ವರ್ಗದ ಜನರಿಗೆ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​​ಗಳೇ ಗತಿ ಎಂಬಂತಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ 24ಕ್ಕೂ ಹೆಚ್ಚು ಸೋಂಕಿತರ ಮನೆ ಪರಿಶೀಲನೆ‌ ನಡೆಸಿ ಅಗತ್ಯ ಸೌಲಭ್ಯ ಇರುವುದನ್ನು ಗಮನಿಸಿ ಹೋಂ ಐಸೊಲೇಷನ್‌ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದ್ದರಿಂದ ಹೆಚ್ಚು ಶ್ರೀಮಂತರಿಗೆ ಈ ಉಪಯೋಗ ದೊರಕಿದೆ.

ಇದರಿಂದ ಎಲ್ಲಾ ಸೌಲಭ್ಯ ಹೊಂದಿರುವರಿಗೆ ಮಾತ್ರ ಈ ಸೌಲಭ್ಯ ಸಿಗುತ್ತಿದೆ, ಇನ್ನು ಸ್ವಂತ ಮನೆ ಹಾಗೂ ಅದಕ್ಕೆ ಬೆಡ್ ರೂಮ್ ಇದ್ದರೂ ಮಧ್ಯಮವರ್ಗದ ಜನರು ಮಾತ್ರ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಬೇಕಾಗಿದೆ. ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ ಎಂದು ಡಿಹೆಚ್ಓ ಪಾಲಾಕ್ಷ ತಿಳಿಸಿದ್ದಾರೆ.

ಈಗಾಗಲೇ 24 ಮಂದಿ ಈ ಸೌಲಭ್ಯವನ್ನು ಪಡೆದುಕೊಂಡು ಕೋವಿಡ್​ ಆಸ್ಪತ್ರೆಗೆ ತೆರಳದೆ ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಎಲ್ಲಾ ವ್ಯವಸ್ಥೆ ಇದ್ದರೂ ಮಧ್ಯಮವರ್ಗದ ಜನರು ಮಾತ್ರ ಆಸ್ಪತ್ರೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.