ETV Bharat / state

ಬತ್ತಿದ ಕೊಳವೆ ಬಾವಿಗಳಿಗೆ ಮರುಜೀವ, ರೈತರ ಮೊಗದಲ್ಲಿ ನಗು ತುಂಬುವ ಭಗೀರಥ

ಚಿತ್ರದುರ್ಗದಲ್ಲಿ ಮಳೆ ಇಲ್ಲದೆ ಅದೆಷ್ಟೋ ಕೊಳವೆ ಬಾವಿಗಳು ಬತ್ತಿ ಹೋಗಿ ನೀರಿನೊಂದಿಗೆ ಸಂಪರ್ಕ ಕಳೆದುಕೊಂಡಿವೆ.‌ ಅದರೆ ಅಂತಹ ಎಷ್ಟೋ ಕೊಳವೆಬಾವಿಗಳಿಗೆ ಇಲ್ಲೊಬ್ಬರು ಮರುಜೀವ ನೀಡಿ ಚಿತ್ರದುರ್ಗ ಭಗೀರಥ ಎಂದು ಖ್ಯಾತಿಯಾಗಿದ್ದಾರೆ. ರಾಜ್ಯ ಹೊರ ರಾಜ್ಯಗಳಲ್ಲೂ ಅಂತರ್ಜಲದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಸಾಧಕ ಎನ್ನಿಸಿಕೊಂಡಿದ್ದಾರೆ.

author img

By

Published : Aug 18, 2020, 6:13 PM IST

bore well recharge
ಬೋರ್​ವೆಲ್​ ರಿಚಾರ್ಜ್​

ಚಿತ್ರದುರ್ಗ: ಕೋಟೆನಾಡಿನಲ್ಲಿ ಈಗಾಗಲೇ ಮಳೆ‌ ಇಲ್ಲದೆ, ಅಂತರ್ಜಲ ಕುಗ್ಗಿ ಹೋಗಿ ಕೊಳವೆ ಬಾವಿಗಳು ನೀರಿನೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿವೆ. ಅಂತಹ ಕೊಳವೆ ಬಾವಿಗಳಿಗೆ ಮರು ಜೀವ ಕಾರ್ಯವನ್ನು ಜಲತಜ್ಞ ದೇವರಾಜ್ ರೆಡ್ಡಿ ಸದ್ದಿಲ್ಲದೆ ಮಾಡುತ್ತಿದ್ದಾರೆ.

ಇವರು ಚಿತ್ರದುರ್ಗ ಭಾಗದಲ್ಲಿ ಬೋರ್​ವೆಲ್​ ರಿಚಾರ್ಜ್​ ಮಾಡುವ ಕಾರ್ಯದಿಂದ ಎಷ್ಟೋ ರೈತರು ಇಂದಿಗೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದು, ಚಿತ್ರದುರ್ಗ ಜಿಲ್ಲೆ ಹೊರತುಪಡಿಸಿ ಹೊರ ರಾಜ್ಯಗಳಲ್ಲೂ ದೇವರಾಜ ರೆಡ್ಡಿ ಕೂಡ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಬೋರ್​ವೆಲ್​ ರಿಚಾರ್ಜ್​

ಇಲ್ಲಿಯವರೆಗೆ 150ಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ರಿಚಾರ್ಜ್​ ಮೂಲಕ ಮರು ಜೀವ ನೀಡಿ ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡುವಂತೆ ಮಾಡಿರುವ ಇವರ ಕಾರ್ಯಕ್ಕೆ ಸಾಕಷ್ಟು ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಅಂತರ್ಜಲವನ್ನೇ ಜನರು ಹೆಚ್ಚಾಗಿ ನೆಚ್ಚಿಕೊಂಡಿದ್ದು, ದೇವರಾಜ್ ರೆಡ್ಡಿ ಇವರ ಪಾಲಿಗೆ ರಕ್ಷಕರಾಗಿದ್ದಾರೆ. ಇದರ ಜೊತೆಗೆ ಸರ್ಕಾರ ನೀಗಿಸದ ನೀರಿನ ಕೊರತೆಯನ್ನು ಅಲ್ಪಸ್ವಲ್ಪ ಮಟ್ಟಿಗೆ ಇವರು ನೀಗಿಸುತ್ತಿದ್ದು, ರೈತರು ಹಾಗೂ ಹಲವು ಸಂಘಟನೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಚಿತ್ರದುರ್ಗ: ಕೋಟೆನಾಡಿನಲ್ಲಿ ಈಗಾಗಲೇ ಮಳೆ‌ ಇಲ್ಲದೆ, ಅಂತರ್ಜಲ ಕುಗ್ಗಿ ಹೋಗಿ ಕೊಳವೆ ಬಾವಿಗಳು ನೀರಿನೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿವೆ. ಅಂತಹ ಕೊಳವೆ ಬಾವಿಗಳಿಗೆ ಮರು ಜೀವ ಕಾರ್ಯವನ್ನು ಜಲತಜ್ಞ ದೇವರಾಜ್ ರೆಡ್ಡಿ ಸದ್ದಿಲ್ಲದೆ ಮಾಡುತ್ತಿದ್ದಾರೆ.

ಇವರು ಚಿತ್ರದುರ್ಗ ಭಾಗದಲ್ಲಿ ಬೋರ್​ವೆಲ್​ ರಿಚಾರ್ಜ್​ ಮಾಡುವ ಕಾರ್ಯದಿಂದ ಎಷ್ಟೋ ರೈತರು ಇಂದಿಗೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದು, ಚಿತ್ರದುರ್ಗ ಜಿಲ್ಲೆ ಹೊರತುಪಡಿಸಿ ಹೊರ ರಾಜ್ಯಗಳಲ್ಲೂ ದೇವರಾಜ ರೆಡ್ಡಿ ಕೂಡ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಬೋರ್​ವೆಲ್​ ರಿಚಾರ್ಜ್​

ಇಲ್ಲಿಯವರೆಗೆ 150ಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ರಿಚಾರ್ಜ್​ ಮೂಲಕ ಮರು ಜೀವ ನೀಡಿ ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡುವಂತೆ ಮಾಡಿರುವ ಇವರ ಕಾರ್ಯಕ್ಕೆ ಸಾಕಷ್ಟು ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಅಂತರ್ಜಲವನ್ನೇ ಜನರು ಹೆಚ್ಚಾಗಿ ನೆಚ್ಚಿಕೊಂಡಿದ್ದು, ದೇವರಾಜ್ ರೆಡ್ಡಿ ಇವರ ಪಾಲಿಗೆ ರಕ್ಷಕರಾಗಿದ್ದಾರೆ. ಇದರ ಜೊತೆಗೆ ಸರ್ಕಾರ ನೀಗಿಸದ ನೀರಿನ ಕೊರತೆಯನ್ನು ಅಲ್ಪಸ್ವಲ್ಪ ಮಟ್ಟಿಗೆ ಇವರು ನೀಗಿಸುತ್ತಿದ್ದು, ರೈತರು ಹಾಗೂ ಹಲವು ಸಂಘಟನೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.