ETV Bharat / state

ವರುಣನ ಆಗಮನದ ಖುಷಿಯಲ್ಲಿ ಕೊಳವೆ ಬಾವಿ ಮರೆತ ರೈತ... ಕಳ್ಳರು ಮಾಡಿದ್ದೇನು ಗೊತ್ತಾ?

ಚಿತ್ರದುರ್ಗದಲ್ಲಿ ಮಳೆ ಆಗಮಿಸುತ್ತಿದ್ದಂತೆ ತಮ್ಮ ಬೋರ್​ವೆಲ್​ಗಳನ್ನು ಮರೆತಿರುವ ರೈತರಿಗೆ ಕಳ್ಳರು ಕೇಬಲ್ ಕದಿಯುವ ಮೂಲಕ ಶಾಕ್​ ನೀಡಿದ್ದಾರೆ.

author img

By

Published : Oct 29, 2019, 9:13 PM IST

bore-well-cable-theft-in-chitradurga

ಚಿತ್ರದುರ್ಗ: ಜಿಲ್ಲೆಯಲ್ಲಿ ಮಳೆ ಆಗಮಿಸುತ್ತಿದ್ದಂತೆ ತಮ್ಮ ಬೋರ್​ವೆಲ್​ಗಳನ್ನು ಮರೆತಿರುವ ರೈತರಿಗೆ ಕಳ್ಳರು ಕೇಬಲ್ ಕದಿಯುವ ಮೂಲಕ ಶಾಕ್​ ನೀಡಿದ್ದಾರೆ. ಹೊಸದುರ್ಗ ತಾಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮದ 25 ಬೋರ್​ವೆಲ್​ಗಳ ಕೇಬಲ್​​ಗಳನ್ನು ಕಳ್ಳರು ಕದ್ದಿದ್ದಾರೆ.

ಮಳೆಯಿಲ್ಲದೆ ಪರಿತಪಿಸುತಿದ್ದ ರೈತರು ಪ್ರತಿದಿನ ತಪ್ಪದೇ ಬೋರ್​ವೆಲ್ ಚಾಲು ಮಾಡುತ್ತಿದ್ದರು. ಅದ್ರೆ ಒಂದು ತಿಂಗಳಿಂದ ತಾಲೂಕಿನಲ್ಲಿ ಸಮೃದ್ಧಿ ಮಳೆಯಾದ ಪರಿಣಾಮ ರೈತರು ಬೋರ್​ವೆಲ್​​​ಗಳ ಕಡೆ ತಲೆಯೇ ಹಾಕಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಕೇಬಲ್​ ಕದ್ದಿರುವುದು

ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಲ್ಲದೆ ಒಂದೊಂದು ಬೋರ್​ವೆಲ್ ಮೋಟಾರ್ ಮೇಲೆತ್ತಿ ಕೇಬಲ್ ಜೋಡಿಸಿಕೊಳ್ಳವ ಅನಿವಾರ್ಯತೆ ಎದುರಾಗಿದೆ. ಇನ್ನೂ ಬೇರೆ ಬೇರೆ ಜಮೀನುಗಳಲ್ಲಿ ಕೇಬಲ್ ಕಳ್ಳತನ ಮಾಡುವ ಸಾಧ್ಯತೆಯಿದ್ದು, ರಾತ್ರಿ, ಹಗಲು ವೇಳೆ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಮೇಲೆ ಗ್ರಾಮಸ್ಥರು ನಿಗವಹಿಸಿದ್ದಾರೆ.

ಚಿತ್ರದುರ್ಗ: ಜಿಲ್ಲೆಯಲ್ಲಿ ಮಳೆ ಆಗಮಿಸುತ್ತಿದ್ದಂತೆ ತಮ್ಮ ಬೋರ್​ವೆಲ್​ಗಳನ್ನು ಮರೆತಿರುವ ರೈತರಿಗೆ ಕಳ್ಳರು ಕೇಬಲ್ ಕದಿಯುವ ಮೂಲಕ ಶಾಕ್​ ನೀಡಿದ್ದಾರೆ. ಹೊಸದುರ್ಗ ತಾಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮದ 25 ಬೋರ್​ವೆಲ್​ಗಳ ಕೇಬಲ್​​ಗಳನ್ನು ಕಳ್ಳರು ಕದ್ದಿದ್ದಾರೆ.

ಮಳೆಯಿಲ್ಲದೆ ಪರಿತಪಿಸುತಿದ್ದ ರೈತರು ಪ್ರತಿದಿನ ತಪ್ಪದೇ ಬೋರ್​ವೆಲ್ ಚಾಲು ಮಾಡುತ್ತಿದ್ದರು. ಅದ್ರೆ ಒಂದು ತಿಂಗಳಿಂದ ತಾಲೂಕಿನಲ್ಲಿ ಸಮೃದ್ಧಿ ಮಳೆಯಾದ ಪರಿಣಾಮ ರೈತರು ಬೋರ್​ವೆಲ್​​​ಗಳ ಕಡೆ ತಲೆಯೇ ಹಾಕಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಕೇಬಲ್​ ಕದ್ದಿರುವುದು

ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಲ್ಲದೆ ಒಂದೊಂದು ಬೋರ್​ವೆಲ್ ಮೋಟಾರ್ ಮೇಲೆತ್ತಿ ಕೇಬಲ್ ಜೋಡಿಸಿಕೊಳ್ಳವ ಅನಿವಾರ್ಯತೆ ಎದುರಾಗಿದೆ. ಇನ್ನೂ ಬೇರೆ ಬೇರೆ ಜಮೀನುಗಳಲ್ಲಿ ಕೇಬಲ್ ಕಳ್ಳತನ ಮಾಡುವ ಸಾಧ್ಯತೆಯಿದ್ದು, ರಾತ್ರಿ, ಹಗಲು ವೇಳೆ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಮೇಲೆ ಗ್ರಾಮಸ್ಥರು ನಿಗವಹಿಸಿದ್ದಾರೆ.

Intro:ಮಳೆ ಆಗಮನದಿಂದ ತಮ್ಮ ಕೊಳವೆ ಬಾವಿ ಮರೆತ್ರು, ಕಳ್ಳರು ಏನ್ ಮಾಡಿದ್ರು ಗೊತ್ತಾ

ಆ್ಯಂಕರ್:- ಮಳೆ ಆಗಮದಿಂದ ಬೋರ್ ವೆಲ್ ಗಳನ್ನು ಮರೆತಿದ್ದ ರೈತರಿಗೆ ಕಳ್ಳರು ಕೇಬಲ್ ಕದಿಯುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮದ ಇಪ್ಪತ್ತೈದು ಬೋರ್ವೆಲ್ ಗಳ ಕೇಬಲ್ ಗೆ ಕಳ್ಳರು ಕನ್ನ ಹಾಕಿದ್ದಾರೆ. ಮಳೆಯಿಲ್ಲದೆ ಪರಿತಪಿಸುತಿದ್ದ ರೈತರು ಪ್ರತಿದಿನ ತಪ್ಪದೆ ಬೋರ್ ವೆಲ್ ಚಾಲು ಮಾಡುತ್ತಿದ್ದರು, ಅದ್ರೇ ಕಳೆದ ಒಂದು ತಿಂಗಳಿಂದ ತಾಲೂಕಿನಲ್ಲಿ ಸಮೃದ್ಧಿ ಮಳೆಯಾದ ಪರಿಣಾಮ ರೈತರು ಬೋರ್ ಗಳ ಕಡೆ ತಲೆಹಾಕಿ ಮಲಗಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಇದರಿಂದ ರೈತರಿಗೆ ಲಕ್ಷಾಂತರ ರೂ ನಷ್ಟವಾಗಿದಲ್ಲದೆ ಒಂದೊಂದು ಬೋರ್ ವೆಲ್ ಮೋಟಾರ್ ಮೇಲೆತ್ತಿ ಕೇಬಲ್ ಜೋಡಿಸಿಕೊಳ್ಳವ ಅನಿವಾರ್ಯತೆ ಎದುರಾಗಿದೆ. ಇನ್ನೂ ಬೇರೆ ಬೇರೆ ಜಮೀನುಗಳಲ್ಲಿ ಇರುವ ಬೋರ್ ವೆಲ್ ಗಳ ಕೇಬಲ್ ಕಳ್ಳತನ ಮಾಡುವ ಸಾದ್ಯತೆ ಇದ್ದು ರೈತರು ರಾತ್ರಿ, ಹಗಲು ವೇಳೆ ಅನುಮಾನಸ್ಪದ ತಿರುಗಾಡುವ ವ್ಯಕ್ತಿಗಳ ಮೇಲೆ ಗ್ರಾಮಸ್ಥರು ನಿಗವಹಿಸಿದ್ದಾರೆ.

ಫ್ಲೋ....Body:Cabel Conclusion:Kallatana
ETV Bharat Logo

Copyright © 2024 Ushodaya Enterprises Pvt. Ltd., All Rights Reserved.