ETV Bharat / state

ಗುಜರಿ ಸೇರುತ್ತಿವೆ ಚಿತ್ರದುರ್ಗ ಜಿಲ್ಲೆಯ 108 ಆ್ಯಂಬುಲೆನ್ಸ್

ಸರಿಯಾದ ನಿರ್ವಹಣೆ ಕೊರತೆ ಕಾರಣ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸೇರಿದ ಆ್ಯಂಬುಲೆನ್ಸ್​ಗಳು ಗುಜರಿ ಪಾಲಾಗ್ತಿವೆ.

author img

By

Published : Jul 20, 2019, 10:01 AM IST

ಗುಜರಿ ಸೇರುತ್ತಿವೆ 108 ಆ್ಯಂಬುಲೆನ್ಸ್

ಚಿತ್ರದುರ್ಗ : ಬಡವರಿಗೆ ಉಪಯೋಗವಾಗಲೆಂದು ಒದಗಿಸಲಾದ 108 ಆರೋಗ್ಯ ಕವಚಗಳು ಇದೀಗ ಸರಿಯಾದ ನಿರ್ವಹಣೆ ಇಲ್ಲದೆ ಗುಜರಿ ಸೇರಿವೆ. ಬಡ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ 13 ಆ್ಯಂಬುಲೆನ್ಸ್ ಗಳನ್ನು ಗುಜುರಿ ಲೆಕ್ಕಕ್ಕೆ ತೂಕ ಹಾಕಲು ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ.

ಚಿಕ್ಕ ಪುಟ್ಟ ದೋಷಗಳಿಂದ ಮೂಲೆ ಸೇರಿರುವ ಆ್ಯಂಬುಲೆನ್ಸ್ ಗಳಿಂದ ಚಾಲಕರು ದೂರ ಉಳಿದಿದ್ದು, ಹಳೇ ಆರೋಗ್ಯ ಕವಚಗಳು ಅನಾಥವಾಗಿ ಗುಜುರಿ ಸೇರುವುದು ಕೂಡ ಖಚಿತವಾಗಿದೆಯಂತೆ.ಈ ಹಿಂದೆ ಅದರ ನಿರ್ವಹಣೆ ಹೊತ್ತಿದ್ದ ಜಿವಿಕೆ ಖಾಸಗಿ ಸಂಸ್ಥೆಯ ಕಳಪೆ ನಿರ್ವಹಣೆಯಿಂದಾಗಿ ಕೇವಲ ಹತ್ತು ವರ್ಷಗಳಲ್ಲೇ ಆಂಬ್ಯುಲೆನ್ಸ್ ವಾಹನಗಳು ಕೆಟ್ಟು ನಿಂತಿವೆ. ಕೆಲವು ಆಂಬುಲೆನ್ಸ್​ಗಳು ಕಿಡಿಗೇಡಿಗಳಿಂದ ಬೆಂಕಿಗಾಹುತಿಯಾಗಿವೆ. ಇನ್ನೂ ಕೆಲವು ಆ್ಯಂಬುಲೆನ್ಸ್ ಸುಸ್ಥಿತಿಯಲ್ಲಿದ್ದರೂ ಅವುಗಳನ್ನ ಉಪಯೋಗಿಸದೇ, ಖಾಸಗಿ ಆ್ಯಂಬುಲೆನ್ಸ್​ಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.

ಗುಜರಿ ಸೇರುತ್ತಿವೆ 108 ಆ್ಯಂಬುಲೆನ್ಸ್

ಚಿತ್ರದುರ್ಗ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ನೆಪವೊಡ್ಡಿ ದಾವಣಗೆರೆ ಆಸ್ಪತ್ರೆಗೆ ಸಾಗಿ ಹಾಕುವ ಕೆಲಸ ನಿರಂತರವಾಗಿದ್ದು, ಖಾಸಗಿ ಅಂಬ್ಯುಲೆನ್ಸ್ ಮಾಲಿಕರು ಬಡ ರೋಗಿಗಳನ್ನ ಸುಲಿಗೆ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಅಲ್ಪ ಸ್ವಲ್ಪ ತೊಂದರೆ ಆಗಿರುವ ಆಂಬ್ಯಲೆನ್ಸ್​ಗಳನ್ನ ರಿಪೇರಿ ಮಾಡಿಸಿದ್ರೆ ಜಿಲ್ಲೆಯ ಬಡ ರೋಗಿಗಳಿಗೆ ಅನುಕೂಲ ಆಗುತ್ತದೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ : ಬಡವರಿಗೆ ಉಪಯೋಗವಾಗಲೆಂದು ಒದಗಿಸಲಾದ 108 ಆರೋಗ್ಯ ಕವಚಗಳು ಇದೀಗ ಸರಿಯಾದ ನಿರ್ವಹಣೆ ಇಲ್ಲದೆ ಗುಜರಿ ಸೇರಿವೆ. ಬಡ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ 13 ಆ್ಯಂಬುಲೆನ್ಸ್ ಗಳನ್ನು ಗುಜುರಿ ಲೆಕ್ಕಕ್ಕೆ ತೂಕ ಹಾಕಲು ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ.

ಚಿಕ್ಕ ಪುಟ್ಟ ದೋಷಗಳಿಂದ ಮೂಲೆ ಸೇರಿರುವ ಆ್ಯಂಬುಲೆನ್ಸ್ ಗಳಿಂದ ಚಾಲಕರು ದೂರ ಉಳಿದಿದ್ದು, ಹಳೇ ಆರೋಗ್ಯ ಕವಚಗಳು ಅನಾಥವಾಗಿ ಗುಜುರಿ ಸೇರುವುದು ಕೂಡ ಖಚಿತವಾಗಿದೆಯಂತೆ.ಈ ಹಿಂದೆ ಅದರ ನಿರ್ವಹಣೆ ಹೊತ್ತಿದ್ದ ಜಿವಿಕೆ ಖಾಸಗಿ ಸಂಸ್ಥೆಯ ಕಳಪೆ ನಿರ್ವಹಣೆಯಿಂದಾಗಿ ಕೇವಲ ಹತ್ತು ವರ್ಷಗಳಲ್ಲೇ ಆಂಬ್ಯುಲೆನ್ಸ್ ವಾಹನಗಳು ಕೆಟ್ಟು ನಿಂತಿವೆ. ಕೆಲವು ಆಂಬುಲೆನ್ಸ್​ಗಳು ಕಿಡಿಗೇಡಿಗಳಿಂದ ಬೆಂಕಿಗಾಹುತಿಯಾಗಿವೆ. ಇನ್ನೂ ಕೆಲವು ಆ್ಯಂಬುಲೆನ್ಸ್ ಸುಸ್ಥಿತಿಯಲ್ಲಿದ್ದರೂ ಅವುಗಳನ್ನ ಉಪಯೋಗಿಸದೇ, ಖಾಸಗಿ ಆ್ಯಂಬುಲೆನ್ಸ್​ಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.

ಗುಜರಿ ಸೇರುತ್ತಿವೆ 108 ಆ್ಯಂಬುಲೆನ್ಸ್

ಚಿತ್ರದುರ್ಗ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ನೆಪವೊಡ್ಡಿ ದಾವಣಗೆರೆ ಆಸ್ಪತ್ರೆಗೆ ಸಾಗಿ ಹಾಕುವ ಕೆಲಸ ನಿರಂತರವಾಗಿದ್ದು, ಖಾಸಗಿ ಅಂಬ್ಯುಲೆನ್ಸ್ ಮಾಲಿಕರು ಬಡ ರೋಗಿಗಳನ್ನ ಸುಲಿಗೆ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಅಲ್ಪ ಸ್ವಲ್ಪ ತೊಂದರೆ ಆಗಿರುವ ಆಂಬ್ಯಲೆನ್ಸ್​ಗಳನ್ನ ರಿಪೇರಿ ಮಾಡಿಸಿದ್ರೆ ಜಿಲ್ಲೆಯ ಬಡ ರೋಗಿಗಳಿಗೆ ಅನುಕೂಲ ಆಗುತ್ತದೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Intro:ಗುಜುರಿ ಸೇರುತ್ತಿವೆ ಜಿಲ್ಲಾ 108 ಆ್ಯಂಬುಲೆನ್ಸ್ : ರಿಪೇರಿ ಮಾಡ್ಸಿದ್ರೇ ಇನ್ನೋಷ್ಟು ದಿನ ಚಲಿಸುತ್ತಿದ್ವೇನೋ

ವಿಶೇಷ ವರದಿ…

ಆ್ಯಂಕರ್:- ಮಾಜಿ ಸಿಎಂ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರಿಗೆ ಉಪಯೋಗವಾಗಲೆಂದು ನೀಡಿದ್ದ 108 ಆರೋಗ್ಯ ಕವಚಗಳು ಇದೀಗ ಸರಿಯಾದ ನಿರ್ವಹಣೆ ಇಲ್ಲದೆ ಐಸಿಯು ಸೇರಿವೆ. ಬಡ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ 13 ಆ್ಯಂಬುಲೆನ್ಸ್ ಗಳನ್ನು ಗುಜುರಿ ಲೆಕ್ಕಕ್ಕೆ ತೂಕ ಹಾಕಲು ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಚಿಕ್ಕ ಪುಟ್ಟ ದೋಷಗಳಿಂದ ಮೂಲೆ ಸೇರಿರುವ ಆ್ಯಂಬುಲೆನ್ಸ್ ಗಳಿಂದ ಚಾಲಕರು ದೂರ ಉಳಿದಿದ್ದು, ಹಳೇ ಆರೋಗ್ಯ ಕವಚಗಳು ಅನಾಥವಾಗಿ ಗುಜುರಿ ಸೇರುವುದು ಕೂಡ ಕಚಿತವಾಗಿದೆಯಂತೆ.

ಲುಕ್,,,,,

ಫ್ಲೋ,,,,,

ವಾಯ್ಸ್01:- ಸರಿಯಾದ ನಿರ್ವಹಣೆ ಇಲ್ಲದೆ ಜಿಲ್ಲಾ ಸರ್ಕಾರಿ ಆ್ಯಂಬುಲೆನ್ಸ್ ಗಳು ಮೂಲೆ ಸೇರಿದ್ದು, ಅವುಗಳನ್ನು ಗುಜುರಿಗೆ ತೂಕ ಹಾಕಲು ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ಸಜ್ಜಾಗಿದೆ. ಹೌದು ಪ್ರತಿಯೊಂದು ಜಿಲ್ಲೆಗೂ ರಾಜ್ಯ ಸರ್ಕಾರ ಬಡ ರೋಗಿಗಳ ತುರ್ತು ಸೇವೆಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಆಂಬ್ಯುಲೆನ್ಸ್ಗಳನ್ನ ನೀಡುತ್ತಿದೆ. ಆದರೆ ಈ ಹಿಂದೆ ಅದರ ನಿರ್ವಹಣೆ ಹೊತ್ತಿದ್ದ ಜಿವಿಕೆ ಖಾಸಗಿ ಸಂಸ್ಥೆಯ ಕಳಪೆ ನಿರ್ವಹಣೆಯಿಂದಾಗಿ ಕೇವಲ ಹತ್ತು ವರ್ಷಗಳಲ್ಲೇ ಆಂಬ್ಯುಲೆನ್ಸ್ ವಾಹನಗಳು ಕೆಟ್ಟು ನಿಂತಿವೆ, ಹೀಗೆ ನಿಲ್ಲಿಸಿದ್ದ ವೇಳೆ ಕೆಲವು ಆಂಬ್ಯುಲೆನ್ಸ್ಗಳು ಕಿಡಿಗೇಡಿಗಳಿಂದ ಬೆಂಕಿಗಾಹುತಿಯಾಗಿವೆ. ಇನ್ನೂ ಕೆಲವಷ್ಟು ಆಂಬ್ಯಲೆನ್ಸ್ಗಳು ಸುಸ್ಥಿತಿಯಲ್ಲಿದ್ದರೂ ಅವುಗಳನ್ನ ಆಸ್ಪತ್ರೆ ಹಿಂಬಾಗದಲ್ಲಿ ನಿಲ್ಲಿಸಿ, ಖಾಸಗಿ ಆಂಬ್ಯುಲೆನ್ಸ್ಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ನೆಪವೊಡ್ಡಿ ದಾವಣಗೆರೆ ಆಸ್ಪತ್ರೆಗೆ ಸಾಗಹಾಕುವ ಕೆಲಸ ನಿರಂತರವಾಗಿದ್ದು, ಖಾಸಗಿ ಅಂಬ್ಯುಲೆನ್ಸ್ ಮಾಲಿಕರು ಬಡ ರೋಗಿಗಳನ್ನ ಸುಲಿಗೆ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಅಲ್ಪ ಸ್ವಲ್ಪ ತೊಂದರೆ ಆಗಿರುವ ಆಂಬ್ಯಲೆನ್ಸ್ಗಳನ್ನ ರಿಪೇರಿ ಮಾಡಿಸಿದ್ರೆ ಜಿಲ್ಲೆಯ ಬಡ ರೋಗಿಗಳಿಗೆ ಅನುಕೂಲ ಆಗುತ್ತದೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

ಫ್ಲೋ,,,,,

ಬೈಟ್01:- ರುದ್ರೇಶ್, ಸ್ಥಳೀಯ ಚಿತ್ರದುರ್ಗ.

ವಾಯ್ಸ್02:- ಇನ್ನೂ ಈಗಾಗಲೇ ಮೂಲೆ ಸೇರಿರುವ 13 ಆ್ಯಂಬುಲೆನ್ಸ್ ಗಳು ಸಂಚಾರ ಆರಂಭಿಸಿ ಕೇವಲ 10 ವರ್ಷಗಳು ಕಳೆದಿವೆಯಂತೆ. ಇತಂಹ ಆರೋಗ್ಯ ಕವಚಗಳನ್ನು ಜಿಲ್ಲಾ ಆರ್ಟಿಓ ಕೂಡ ಉಪಯೋಗಕ್ಕೆ ಬಾರದ ವಾಹನಗಳೆಂದು ಜಿಲ್ಲಾ ಆರೋಗ್ಯ ಇಲಾಖೆಗೆ ವರದಿ ನೀಡಿದೆಯಂತೆ. ಇದರಿಂದ ರಾಜ್ಯದಂತ್ಯ ಆರೋಗ್ಯ ಇಲಾಖೆಯ ಮಿತಿಯಲ್ಲಿರುವ ಆ್ಯಂಬುಲೆನ್ಸ್ ಗಳನ್ನು ಗುಜುರಿಗೆ ನೀಡುವ ಸಲುವಾಗಿ ಹರಾಜು ಹಾಕಲು ತಯಾರಿ ಕೂಡ ನಡೆದಿದೆಯಂತೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 26 ಆ್ಯಂಬುಲೆನ್ಸ್ ಗಳಿದ್ದು, ಇದರ ಪೈಕಿ 13 ಆಂಬ್ಯುಲೆನ್ಸ್ಗಳು ಮಾತ್ರ ಕೆಟ್ಟು ನಿಂತಿವೆ, ಹೀಗಾಗಿ ಅವುಗಳನ್ನ ತೂಕಕ್ಕೆ ಹಾಕಲು ಸರ್ಕಾರ ಮುಂದಾಗಿದೆಯಂತೆ. ಹಳೆ ಆ್ಯಂಬುಲೆನ್ಸ್ ಗಳ ಸ್ಥಾನ ತುಂಬಲು ಹೊಸದಾಗಿ 13 ಆಂಬ್ಯುಲೆನ್ಸ್ಗಳನ್ನ ತರೆಸಲಾಗಿದೆಯಂತೆ. ಇದರಿಂದ ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಆಂಬ್ಯುಲೆನ್ಸ್ ಕೊರತೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್ ಪಾಲಾಕ್ಷ ಸಮಜಾಯಿಷಿ ನೀಡಿದ್ದಾರೆ..

ಫ್ಲೋ,,,,,

ಬೈಟ್02:- ಡಾ.ಸಿ.ಎಲ್ ಪಾಲಾಕ್ಷ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ.

ವಾಯ್ಸ್03:- ಒಟ್ಟಾರೆ ಖಾಸಗಿ ವಾಹನಗಳು 20 ವರ್ಷಗಳು ಕಳೆದರೂ ಸುಸ್ಥಿತಿಯಲ್ಲಿದ್ದರೂ, ಸರ್ಕಾರಿ ವಾಹನಗಳು ಮಾತ್ರ ಕೇವಲ ಹತ್ತು ವರ್ಷಗಳಲ್ಲೇ ಗುಜರಿ ಸೇರುತ್ತಿರೋದು ಮಾತ್ರ ಅಧಿಕಾರಿಗಳ ಕಾರ್ಯ ವೈಕರಿಗೆ ಕನ್ನಡಿ ಹಿಡಿದಂತಾಗಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕ ಆಸ್ತಿಪಾಸ್ತಿಗಳನ್ನ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಸಂರಕ್ಷಣೆಗೆ ಮುಂದಾದ್ರೆ, ಸರ್ಕಾರದ ಬೊಕ್ಕಸಕ್ಕೆ ಆಗುವ ಕೋಟ್ಯಾಂತರ ರೂಪಾಯಿ ನಷ್ಟಕ್ಕೆ ಕಡಿವಾಣ ಹಾಕಬಹುದಾಗಿದೆ.

ಡಿ ನೂರುಲ್ಲಾ ಈ ಟಿವಿ ಭಾರತ ಚಿತ್ರದುರ್ಗ
Body:108 inConclusion:icu
ETV Bharat Logo

Copyright © 2024 Ushodaya Enterprises Pvt. Ltd., All Rights Reserved.