ETV Bharat / state

ಮಲೆನಾಡು ಗುಡ್ಡ ಪ್ರದೇಶದಲ್ಲಿ ಸಿಲುಕಿಕೊಂಡ 75 ಜನರ ರಕ್ಷಣೆ - Hill Station Chikmagalur

ವರುಣನ ಆರ್ಭಟಕ್ಕೆ ರಾಜ್ಯವೇ ನಲುಗಿ ಹೋಗಿದ್ದು, ಮಲೆನಾಡು ಭಾಗದ ಗುಡ್ಡ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 75 ಜನರನ್ನು ಯೋಧರು ರಕ್ಷಣೆ ಮಾಡಿದ್ದಾರೆ.

ಮಲೆನಾಡು ಗುಡ್ಡ ಪ್ರದೇಶದಲ್ಲಿ ಸಿಲುಕಿಕೊಂಡ 75 ಜನರ ರಕ್ಷಣೆ
author img

By

Published : Aug 11, 2019, 11:56 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹಾಗೂ ಎನ್.ಆರ್​​.ಪುರ ತಾಲೂಕಿನಲ್ಲಿ ಸಂಪರ್ಕಕ್ಕೂ ಸಿಗದೇ ಗುಡ್ಡಗಾಡು ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 75 ಜನರನ್ನು ಭಾರತೀಯ ಸೇನೆಯ ಯೋಧರು ರಕ್ಷಣೆ ಮಾಡಿದ್ದಾರೆ.

ಮಲೆನಾಡು ಗುಡ್ಡ ಪ್ರದೇಶದಲ್ಲಿ ಸಿಲುಕಿಕೊಂಡ 75 ಜನರ ರಕ್ಷಣೆ

ನಿನ್ನೆ ಜಿಲ್ಲೆಗೆ 40 ಜನ ಭಾರತೀಯ ಸೇನೆಯ ಯೋಧರು ಆಗಮಿಸಿದ್ದು, ಇಂದು ಆ ಎಲ್ಲಾ ಯೋಧರು ಕೊಟ್ಟಿಗೆಹಾರದ ಬಳಿ ಇರುವ ಆಲೇಖಾನ್ ಹೊರಟ್ಟಿ ಗ್ರಾಮಕ್ಕೆ ತೆರಳಿ ಸುಮಾರು 75 ಜನರನ್ನು ರಕ್ಷಣೆ ಮಾಡಿದ್ದಾರೆ. ಈ ಗ್ರಾಮದ ಎಲ್ಲಾ ಜನರು ಸುಮಾರು ನಾಲ್ಕು ದಿನಗಳಿಂದ ಸಂಪರ್ಕ ಕಳೆದುಕೊಂಡು ಗ್ರಾಮದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಇಂದು ಅಲ್ಲಿ ತೆರಳಿದ ಸೇನಾ ಸಿಬ್ಬಂದಿ ಗುಡ್ಡಗಾಡು ಪ್ರದೇಶದಲ್ಲಿ ಹಗ್ಗ ಕಟ್ಟಿ ಜನರನ್ನು ಹೆಗಲ ಮೇಲೆ ಹೊತ್ತು ಕೊಟ್ಟಿಗೆಹಾರಕ್ಕೆ ಕರೆದುಕೊಂಡು ಬಂದಿದ್ದು, ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟಿದ್ದಾರೆ. ಇದರಿಂದ ಪ್ರತಿಯೊಬ್ಬರೂ ನಿಟ್ಟುಸಿರು ಬಿಡುವಂತಾಗಿದೆ. ಯೋಧರು ಬಂದು ನಮ್ಮನ್ನು ರಕ್ಷಣೆ ಮಾಡಿ ನಮಗೆ ಮರುಜೀವ ನೀಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹಾಗೂ ಎನ್.ಆರ್​​.ಪುರ ತಾಲೂಕಿನಲ್ಲಿ ಸಂಪರ್ಕಕ್ಕೂ ಸಿಗದೇ ಗುಡ್ಡಗಾಡು ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 75 ಜನರನ್ನು ಭಾರತೀಯ ಸೇನೆಯ ಯೋಧರು ರಕ್ಷಣೆ ಮಾಡಿದ್ದಾರೆ.

ಮಲೆನಾಡು ಗುಡ್ಡ ಪ್ರದೇಶದಲ್ಲಿ ಸಿಲುಕಿಕೊಂಡ 75 ಜನರ ರಕ್ಷಣೆ

ನಿನ್ನೆ ಜಿಲ್ಲೆಗೆ 40 ಜನ ಭಾರತೀಯ ಸೇನೆಯ ಯೋಧರು ಆಗಮಿಸಿದ್ದು, ಇಂದು ಆ ಎಲ್ಲಾ ಯೋಧರು ಕೊಟ್ಟಿಗೆಹಾರದ ಬಳಿ ಇರುವ ಆಲೇಖಾನ್ ಹೊರಟ್ಟಿ ಗ್ರಾಮಕ್ಕೆ ತೆರಳಿ ಸುಮಾರು 75 ಜನರನ್ನು ರಕ್ಷಣೆ ಮಾಡಿದ್ದಾರೆ. ಈ ಗ್ರಾಮದ ಎಲ್ಲಾ ಜನರು ಸುಮಾರು ನಾಲ್ಕು ದಿನಗಳಿಂದ ಸಂಪರ್ಕ ಕಳೆದುಕೊಂಡು ಗ್ರಾಮದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಇಂದು ಅಲ್ಲಿ ತೆರಳಿದ ಸೇನಾ ಸಿಬ್ಬಂದಿ ಗುಡ್ಡಗಾಡು ಪ್ರದೇಶದಲ್ಲಿ ಹಗ್ಗ ಕಟ್ಟಿ ಜನರನ್ನು ಹೆಗಲ ಮೇಲೆ ಹೊತ್ತು ಕೊಟ್ಟಿಗೆಹಾರಕ್ಕೆ ಕರೆದುಕೊಂಡು ಬಂದಿದ್ದು, ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟಿದ್ದಾರೆ. ಇದರಿಂದ ಪ್ರತಿಯೊಬ್ಬರೂ ನಿಟ್ಟುಸಿರು ಬಿಡುವಂತಾಗಿದೆ. ಯೋಧರು ಬಂದು ನಮ್ಮನ್ನು ರಕ್ಷಣೆ ಮಾಡಿ ನಮಗೆ ಮರುಜೀವ ನೀಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Intro:Kn_Ckm_12_Ahlekhan horatti people safe_pkg_7202347
Body:
ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹಾಗೂ ಎನ್ ಪುರ ತಾಲೂಕಿನಲ್ಲಿ ಸಂಪರ್ಕಕ್ಕೂ ಸಿಗದೇ ಗುಡ್ಡ ಗಾಡು ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಣೆ ಮಾಡಲು ನಿನ್ನೆ ಚಿಕ್ಕಮಗಳೂರು ಜಿಲ್ಲೆಯ 40 ಜನ ಭಾರತೀಯ ಯೋಧರು ಆಗಮಿಸಿದ್ದರು.ಇಂದೂ ಆ ಎಲ್ಲಾ ಯೋಧರು ಕೊಟ್ಟಿಗೆಹಾರದ ಬಳಿ ಇರುವ ಆಲೇಖಾನ್ ಹೊರಟ್ಟಿ ಗ್ರಾಮಕ್ಕೆ ಹೋಗಿ ಸುಮಾರು 75 ಜನರನ್ನು ರಕ್ಷಣೆ ಮಾಡಿದ್ದಾರೆ.ಈ ಗ್ರಾಮದ ಎಲ್ಲಾ ಜನರು ಸುಮಾರು ನಾಲ್ಕು ದಿನಗಳಲ್ಲಿ ಸಂಪರ್ಕವನ್ನು ಕಳೆದು ಕೊಂಡಿದ್ದು ಗ್ರಾಮದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸಿದ್ದಾರೆ.ಇವರ ಕಣ್ಣುಗಳ ಎದುರೇ ಜಾನುವಾರುಗಳು ಕೊಚ್ಚಿ ಹೋಗಿರೋದನ್ನು ನೋಡಿ ಭಯಭೀತರಾಗಿದ್ದರು.ಇನ್ನು ನಮ್ಮ ಜೀವನ ಮುಗಿಯಿತು ಅಂತಾ ಯೋಚನೆ ಮಾಡಬೇಕಾದರೇ ನಮ್ಮ ಯೋಧರು ಈ ಗ್ರಾಮಕ್ಕೆ ಹೋಗಿ ಜನರನ್ನು ರಕ್ಷಣೆ ಮಾಡಿದ್ದಾರೆ. ಗುಡ್ಡ ಗಾಡು ಪ್ರದೇಶದಲ್ಲಿ ಹಗ್ಗ ಕಟ್ಟಿ ಜನರನ್ನು ಹೆಗಲ ಮೇಲೆ ಹೊತ್ತು ಕೊಟ್ಟಿಗೆಹಾರಕ್ಕೆ ಕರೆದು ಕೊಂಡು ಬಂದಿದ್ದು ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟಿದ್ದಾರೆ. ಇದರಿಂದ ಪ್ರತಿಯೊಬ್ಬರೂ ನಿಟ್ಟುಸಿರು ಬಿಡುವಂತಾಗಿದ್ದು ಕಣ್ಣಲ್ಲಿ ನೀರು ಹಾಕುತ್ತಿದ್ದಾರೆ.ಶುಕ್ರವಾರ ಪ್ರಾರಂಭವಾದ ಮಳೆ ಒಂದು ಹನಿಯೂ ನಿಲ್ಲಲಿಲ್ಲ ನಮ್ಮ ತೋಟ ಮನೆ ಮುಚ್ಚಿ ಹೋಗಿದೆ. ಊರಿನಲ್ಲಿರು ಹೊಳೆ ತುಂಬಿ ಹರಿಯುತ್ತಿದ್ದು ಇದು ನಮ್ಮಗೆ ಭಯ ಪಡಿಸಿತ್ತು. ನಮ್ಮಗೆ ಸಂಪರ್ಕವೇ ಇಲ್ಲದಂತಾಗಿದ್ದು ಗುಡ್ಡದ ಮೇಲೆ ಹೋಗಿ ನಾವು ರಕ್ಷಣೆ ಮಾಡಿಕೊಂಡಿದ್ದವು.ಯೋಧರು ಬಂಧೂ ನಮ್ಮ ರಕ್ಷಣೆ ಮಾಡಿದ್ದು ನಮ್ಮಗೇ ಇನ್ನೋಂದು ಜೀವನವನ್ನು ಯೋಧರು ನೀಡಿದ್ದಾರೆ ಎಂದೂ ಶ್ಲಾಘನೆ ವ್ಯಕ್ತಪಡಿಸಿದರು. ಮತ್ತೋಬ್ಬ ಮಹಿಳೆ ಮಾತನಾಡಿ ಗುಡ್ಡ ಗಳು ಕುಸಿದಿವೆ. ದೊಡ್ಡ ಗುಡ್ಡಗಳು ಕುಸಿದಿವೆ. 30 ಮನೆಯ ಜನರು ಜೀವ ಕೈ ಯಲ್ಲಿ ಇಟ್ಟು ಕುಳಿತುಕೊಂಡಿದ್ದರು.ನಾವು ಬದುಕುತ್ತೇವೆ ಎಂದೂ ತಿಳಿದಿರಲಿಲ್ಲ.ಮತ್ತೆ ನಾವು ಊರಿಗೆ ಹೋಗಲು ಸಾಧ್ಯವಿಲ್ಲ. ಅಲ್ಲಿ ಬದುಕಲು ಸಾಧ್ಯವಿಲ್ಲ. ನಮ್ಮ ಮಕ್ಕಳನ್ನು ನೋಡುತ್ತೇವಾ ಎಂದೂ ಅಳಲು ತೊಡಿಕೊಂಡರು.ಜಾನುವಾರುಗಳು ಇನ್ನು ಮನೆಯ ಬಳಿಯೇ ಇದ್ದು ಮತ್ತೆ ನಾವು ತಿರುಗಿ ಬಂದಿರೋದು ಇತಿಹಾಸ ಎಂದೂ ಸಂತ್ರಸ್ಥ ಮಹಿಳೆ ತನ್ನ ಅಳಲು ಹೇಳಿಕೊಂಡರು.

byte:-1 ದಿವಾರಕ್........ಆಲೇಖಾನ್ ಹೊರಟ್ಟಿ ಗ್ರಾಮಸ್ಥ
byte:-2 ಪವಿತ್ರ ಗೋಪಾಲ್ ಗೌಡ.....ಆಲೇಖಾನ್ ಹೊರಟ್ಟಿ ಗ್ರಾಮಸ್ಥೆ

Conclusion:ರಾಜಕುಮಾರ್......
ಈ ಟಿವಿ ಭಾರತ್.....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.