ETV Bharat / state

ಕಾಫಿ ದೊರೆ ವಿ ಜಿ ಸಿದ್ದಾರ್ಥ ಹೆಗ್ಡೆಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು.. - ಸಿದ್ದಾರ್ಥ ಹೆಗಡೆ

ಖ್ಯಾತ ಉದ್ಯಮಿ, ಕಾಫಿ ದೊರೆಯೆಂದೆ ಪ್ರಖ್ಯಾತಿ ಹೊಂದಿದ್ದ ವಿ ಜಿ ಸಿದ್ದಾರ್ಥ ಹೆಗ್ಡೆ ಅವರ ನಿಧನಕ್ಕೆ ಅವರ ಸ್ನೇಹಿತರು, ಹಿತೈಷಿಗಳು, ಅಕ್ಕ ಪಕ್ಕದ ಗ್ರಾಮಸ್ಥರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

Chikmagalur,ಚಿಕ್ಕಮಗಳೂರು
author img

By

Published : Aug 2, 2019, 8:45 PM IST

ಚಿಕ್ಕಮಗಳೂರು : ಮಲೆನಾಡಿನ ಕಾಫಿಯನ್ನು ಇಡೀ ವಿಶ್ವಕ್ಕೆ ಪರಿಚಯ ಮಾಡಿ ಕೊಟ್ಟಿದ್ದ ಕಾಫಿ ಉದ್ಯಮಿ ವಿ.ಜಿ ಸಿದ್ದಾರ್ಥ ಹೆಗ್ಡೆಗೆ ಅವರ ಸ್ನೇಹಿತರು, ಹಿತೈಷಿಗಳು, ಅಕ್ಕ ಪಕ್ಕದ ಗ್ರಾಮಸ್ಥರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಕಾಫಿ ದೊರೆ ವಿ.ಜಿ ಸಿದ್ದಾರ್ಥ ಹೆಗ್ಡೆಗೆ ಭಾವಪೂರ್ಣ ಶ್ರದ್ಧಾಂಜಲಿ..

ಜಿಲ್ಲೆ ಮೂಡಿಗೆರೆ ತಾಲೂಕಿನ ಚಟ್ಟನಹಳ್ಳಿ ಸಮೀಪದಲ್ಲಿ ಅವರ ತಂದೆ ಗಂಗಯ್ಯ ಹೆಗ್ಡೆ ಅವರು ಸಾರ್ವಜನಿಕರಿಗಾಗಿ ನಿರ್ಮಾಣ ಮಾಡಿರುವ ವಿವೇಕಾನಂದ ಸಭಾಂಗಣದಲ್ಲಿ ನೂರಾರು ಜನರು ಸೇರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಚಟ್ಟನ ಹಳ್ಳಿ, ಚೀಕನಹಳ್ಳಿ, ಗೌತಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶದಿಂದ ಜನರು ಆಗಮಿಸಿದ್ದರು.

ನೂರಾರು ಜನರು ಸಾಲುಗಟ್ಟಿ ನಿಂತು ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಮಲೆನಾಡ ಮಾಣಿಕ್ಯನನ್ನು ನೆನೆದು ಅಪೂರ್ವವಾದ ಕ್ಷಣಗಳನ್ನು ಮೆಲುಕು ಹಾಕಿದರು. ಯಾರದಾರೂ ನಿಮ್ಮ ಊರು ಯಾವುದು ಎಂದರೆ ಸಿದ್ದಾರ್ಥ ಅವರ ಪಕ್ಕದ ಊರು ಎಂದೂ ಹೇಳಿಕೊಳ್ಳುತ್ತಿದ್ದೆವು. ಸಿದ್ದಾರ್ಥ ಅವರು ಮಾಡಿರುವಂತಹ ಶಾಲೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾಡಿರುವಂತಹ ಕೆಲಸ ಹಾಗೂ ಉಚಿತವಾಗಿ ರೋಗಿಗಳಿಗೆ ಆಸ್ವತ್ರೆಯಲ್ಲಿ ಚಿಕಿತ್ಸೆ ಈ ಕೆಸಲಗಳು ನಿಲ್ಲಬಾರದು. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಸಿದ್ದಾರ್ಥ್ ಸಾವಿಗೆ ಪರೋಕ್ಷವಾಗಿ ಕಾರಣವಾದ ವ್ಯವಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜನರು ಆಗ್ರಹಿಸಿದರು.

ಚಿಕ್ಕಮಗಳೂರು : ಮಲೆನಾಡಿನ ಕಾಫಿಯನ್ನು ಇಡೀ ವಿಶ್ವಕ್ಕೆ ಪರಿಚಯ ಮಾಡಿ ಕೊಟ್ಟಿದ್ದ ಕಾಫಿ ಉದ್ಯಮಿ ವಿ.ಜಿ ಸಿದ್ದಾರ್ಥ ಹೆಗ್ಡೆಗೆ ಅವರ ಸ್ನೇಹಿತರು, ಹಿತೈಷಿಗಳು, ಅಕ್ಕ ಪಕ್ಕದ ಗ್ರಾಮಸ್ಥರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಕಾಫಿ ದೊರೆ ವಿ.ಜಿ ಸಿದ್ದಾರ್ಥ ಹೆಗ್ಡೆಗೆ ಭಾವಪೂರ್ಣ ಶ್ರದ್ಧಾಂಜಲಿ..

ಜಿಲ್ಲೆ ಮೂಡಿಗೆರೆ ತಾಲೂಕಿನ ಚಟ್ಟನಹಳ್ಳಿ ಸಮೀಪದಲ್ಲಿ ಅವರ ತಂದೆ ಗಂಗಯ್ಯ ಹೆಗ್ಡೆ ಅವರು ಸಾರ್ವಜನಿಕರಿಗಾಗಿ ನಿರ್ಮಾಣ ಮಾಡಿರುವ ವಿವೇಕಾನಂದ ಸಭಾಂಗಣದಲ್ಲಿ ನೂರಾರು ಜನರು ಸೇರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಚಟ್ಟನ ಹಳ್ಳಿ, ಚೀಕನಹಳ್ಳಿ, ಗೌತಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶದಿಂದ ಜನರು ಆಗಮಿಸಿದ್ದರು.

ನೂರಾರು ಜನರು ಸಾಲುಗಟ್ಟಿ ನಿಂತು ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಮಲೆನಾಡ ಮಾಣಿಕ್ಯನನ್ನು ನೆನೆದು ಅಪೂರ್ವವಾದ ಕ್ಷಣಗಳನ್ನು ಮೆಲುಕು ಹಾಕಿದರು. ಯಾರದಾರೂ ನಿಮ್ಮ ಊರು ಯಾವುದು ಎಂದರೆ ಸಿದ್ದಾರ್ಥ ಅವರ ಪಕ್ಕದ ಊರು ಎಂದೂ ಹೇಳಿಕೊಳ್ಳುತ್ತಿದ್ದೆವು. ಸಿದ್ದಾರ್ಥ ಅವರು ಮಾಡಿರುವಂತಹ ಶಾಲೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾಡಿರುವಂತಹ ಕೆಲಸ ಹಾಗೂ ಉಚಿತವಾಗಿ ರೋಗಿಗಳಿಗೆ ಆಸ್ವತ್ರೆಯಲ್ಲಿ ಚಿಕಿತ್ಸೆ ಈ ಕೆಸಲಗಳು ನಿಲ್ಲಬಾರದು. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಸಿದ್ದಾರ್ಥ್ ಸಾವಿಗೆ ಪರೋಕ್ಷವಾಗಿ ಕಾರಣವಾದ ವ್ಯವಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜನರು ಆಗ್ರಹಿಸಿದರು.

Intro:Kn_Ckm_09_Siddarahta santapa_pkg_7202347Body:

ಚಿಕ್ಕಮಗಳೂರು :-

ಮಲೆನಾಡಿನ ಕಾಫೀಯನ್ನು ಇಡೀ ವಿಶ್ವಕ್ಕೆ ಪರಿಚಯ ಮಾಡಿಕೊಟ್ಟಿದ್ದ ಕಾಫೀಯ ಉದ್ಯಮಿ ವಿ.ಜಿ ಸಿದ್ದಾರ್ಥ ಹೆಗ್ಡೆ ಅವರ ಅವರ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಟ್ಟನಹಳ್ಳಿ ಸಮೀಪದಲ್ಲಿ ಸಿದ್ದಾರ್ಥ ಅವರಿಗೆ ಅವರ ಸ್ನೇಹಿತರು, ಹಿತೈಷಿಗಳು, ಅಕ್ಕ ಪಕ್ಕದ ಗ್ರಾಮಸ್ಥರು ಭಾವ ಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸಿದ್ದಾರೆ. ಈ ಹಿಂದೇ ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಅವರು ಊರಿನಲ್ಲಿಯೇ ಸಾರ್ವಜನಿಕರಿಗಾಗಿ ನಿರ್ಮಾಣ ಮಾಡಿಕೊಟ್ಟಿದ ವಿವೇಕನಂದ ಸಭಾಂಗಣದಲ್ಲಿ ನೂರಾರು ಜನರು ಸೇರಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದು ಚಟ್ಟನ ಹಳ್ಳಿ, ಚೀಕನಹಳ್ಳಿ, ಗೌತಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ನೂರಾರು ಜನರು ಶ್ರದ್ದಾಂಜಲಿಯನ್ನು ಸಲ್ಲಿಸಿದರು. ನೂರಾರು ಜನರು ಸಾಲುಗಟ್ಟಿ ನಿಂತೂ ಅವರ ಭಾವಚಿತ್ರಕ್ಕೆ ಗಂಧದ ಕಡ್ಡಿ ಬೆಳಗಿ, ಹೂ ಹಾಕಿ ಅವರ ಪೋಟೋಗೆ ನಮಸ್ಕರಿಸುವುದರ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದು ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮಲೆನಾಡ ಮಾಣಿಕ್ಯ ನ ಬಗ್ಗೆ ಮಾತನಾಡಿದರು. ಅವರ ಕುರಿತು ನೆನೆದು ಅಪೂರ್ವವಾದ ಕ್ಷಣಗಳನ್ನು ಮೆಲುಕು ಹಾಕಿದರು. ಸಿದ್ದಾರ್ಥ ಅವರ ಬಗ್ಗೆ ಮಾತನಾಡುವ ವೇಳೆ ಪ್ರತಿಯೊಬ್ಬರೂ ಭಾವುಕರಾಗಿ ಮಾತನಾಡಿದ್ದು ಕಂಬನಿಯನ್ನು ಮೀಡಿದರು. ಯಾರದಾರೂ ನಿಮ್ಮ ಊರು ಯಾವುದು ಎಂದರೇ ಸಿದ್ದಾರ್ಥ ಅವರ ಪಕ್ಕದ ಊರು ಎಂದೂ ಹೇಳಿಕೊಳ್ಳುತ್ತಿದ್ದೇವು ಈಗ ಏನು ಮಾಡೋದು ಎಂದೂ ಹಲವಾರು ಜನರು ನೆನಪಿಸಿಕೊಂಡರು. ಸಿದ್ದಾರ್ಥ ಅವರು ಮಾಡಿರುವಂತಹ ಶಾಲೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾಡಿರುವಂತಹ ಕೆಲಸ ಹಾಗೂ ಉಚಿತವಾಗಿ ರೋಗಿಗಳಿಗೆ ಆಸ್ವತ್ರೆಯಲ್ಲಿ ಚಿಕಿತ್ಸೆ ಈ ಪ್ರಾಜೆಕ್ಟ್ ಗಳು ನಿಲ್ಲಬಾರದು ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದೂ ಮನವಿ ಮಾಡಿದರು.ಸಿದ್ದಾರ್ಥ ನೀವು ಮತ್ತೆ ಹುಟ್ಟಿ ಬನ್ನಿ ಎಂದೂ ಒಂದು ನಿಮಿಷ ನಿಂತೂ ಮೌನಚರಣೆಯನ್ನೂ ಸಹ ಮಾಡಿದ್ದು ಇದೇ ವೇಳೆ ಗ್ರಾಮಸ್ಥರು ಮಾತನಾಡಿ ಸಿದ್ದಾರ್ಥ್ ಸಾವಿಗೆ ಪರೋಕ್ಷವಾಗಿ ಕಾರಣವಾದ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೀವು ಎಲ್ಲೂ ಹೋಗಿಲ್ಲ ನಮ್ಮ ಜೊತೆಯೇ ಇದ್ದೀರಾ ಎಂದೂ ಭಾವುಕರಾಗಿ ಮಾತನಾಡಿದರು......

byte:-1 ಗೋಪಾಲ್ ಗೌಡ......... ಸ್ಥಳೀಯರು
byte:-2 ಪಲ್ಲವಿ........ ಗ್ರಾಮಸ್ಥರು

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.