ಚಿಕ್ಕಮಗಳೂರು: ಅಪರಿಚಿತ ಮಹಿಳೆಯೊಬ್ಬರ ಶವ ಚಿಕ್ಕಮಗಳೂರಿನ ಅಯ್ಯನ ಕೆರೆ ಬಳಿ ಪತ್ತೆಯಾಗಿದೆ.
ಸಖರಾಯಪಟ್ಟಣದ ಬಳಿ ಇರುವ ಅಯ್ಯನ ಕೆರೆಯಲ್ಲಿ ಸುಮಾರು 55-60 ವಯಸ್ಸಿನ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಕಡೂರಿನಿಂದ ಸಖರಾಯಪಟ್ಟಣಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲಿ ಈ ಮಹಿಳೆ ಆಗಮಿಸಿದ್ದಾಳೆ ಎನ್ನಲಾಗಿದ್ದು, ಶವದ ಪಕ್ಕದಲ್ಲಿ ಪರ್ಸ್ ಪತ್ತೆಯಾಗಿದೆ.
ಇನ್ನು ಸಖರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕೆರೆಯಲ್ಲಿದ್ದ ಶವವನ್ನು ಹೊರ ತೆಗೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.