ETV Bharat / state

ಮೃತ ರೈತ ಕುಟುಂಬಕ್ಕೆ ₹50 ಸಾವಿರ ನೆರವು ನೀಡಿದ ಸಿದ್ದರಾಮಯ್ಯ.. ಸರ್ಕಾರಕ್ಕೂ ಮೊದಲೇ ಮಿಡಿದ ಮಾಜಿ ಸಿಎಂ.. - Siddaramaiah has donated 50 thousand to the family of the deceased farmer

ಕಾರ್ಗದ್ದೆ ಹಾಗೂ ಎಸ್ ಕೆ ಮೆಗಲು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಂದ್ರೇಗೌಡ ಹಾಗೂ ಚನಪ್ಪಗೌಡ ಮನೆಗೆ ಸಿದ್ದರಾಮಯ್ಯ ಭೇಟಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಇದೇ ವೇಳೆ ಎರಡು ಕುಟುಂಬಗಳಿಗೆ ತಲಾ 50 ಸಾವಿರ ರೂ. ಧನ ಸಹಾಯ ಮಾಡಿದರು.

ಮೃತ ರೈತ ಕುಟುಂಬಕ್ಕೆ 50 ಸಾವಿರ ಧನಸಹಾಯ ಮಾಡಿದ ಸಿದ್ದರಾಮಯ್ಯ
author img

By

Published : Oct 5, 2019, 5:03 PM IST

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದ ಇಬ್ಬರು ರೈತರು ಸರಿಯಾದ ಸಮಯಕ್ಕೆ ಪರಿಹಾರ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಮೃತ ರೈತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಕಾರ್ಗದ್ದೆ ಹಾಗೂ ಎಸ್ ಕೆ ಮೆಗಲು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಂದ್ರೇಗೌಡ ಹಾಗೂ ಚನಪ್ಪಗೌಡ ಮನೆಗೆ ಸಿದ್ದರಾಮಯ್ಯ ಭೇಟಿ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಇದೇ ವೇಳೆ ಎರಡು ಕುಟುಂಬಗಳಿಗೆ ತಲಾ 50 ಸಾವಿರ ರೂ. ಧನ ಸಹಾಯ ಮಾಡಿದರು.

ಮೃತ ರೈತರ ಕುಟುಂಬಸ್ಥರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಾಂತ್ವನ..

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಸಿಎಲ್​ಪಿ ನಾಯಕ, ಮಾಜಿ ಮುಖ್ಯಮಂತ್ರಿ. ಆದರೆ, ಇಲ್ಲಿ ತಹಶೀಲ್ದಾರ್ ಬಂದಿಲ್ಲ. ನಾನು ಬಂದರೂ ಯಾವ ಅಧಿಕಾರಿಗಳೂ ಇಲ್ಲ. ಈ ಸರ್ಕಾರವನ್ನ ಏನಂತಾ ಕರೆಯೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೃತ ರೈತರ ಕುಟುಂಬಕ್ಕೆ ಸರ್ಕಾರ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಕೊಟ್ಟಿಲ್ಲ. ಸುಳ್ಳು ಹೇಳಿಕೊಂಡು ಎಲ್ಲರೂ ತಿರುಗಾಡುತ್ತಿದ್ದಾರೆ. ಜನ ಗೊಂದಲದಲ್ಲಿದ್ದಾರೆ. ಹಾಗಾದರೆ ಜನ ಏನು ಮಾಡಬೇಕು. ಈ ಕೂಡಲೇ ಸರ್ಕಾರವನ್ನ ಕಿತ್ತು ಎಸೆಯಬೇಕು ಎಂದು ವಾಗ್ದಾಳಿ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಈ ಕಡೆ ಬಂದೇ ಇಲ್ಲ. ಇದಕ್ಕಿಂತ ಒಳ್ಳೆ ಕೆಲಸ ಏನಿದೆ ಎಂದು ಏಕವಚನದಲ್ಲೇ ಸಿ ಟಿ ರವಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದ ಇಬ್ಬರು ರೈತರು ಸರಿಯಾದ ಸಮಯಕ್ಕೆ ಪರಿಹಾರ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಮೃತ ರೈತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಕಾರ್ಗದ್ದೆ ಹಾಗೂ ಎಸ್ ಕೆ ಮೆಗಲು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಂದ್ರೇಗೌಡ ಹಾಗೂ ಚನಪ್ಪಗೌಡ ಮನೆಗೆ ಸಿದ್ದರಾಮಯ್ಯ ಭೇಟಿ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಇದೇ ವೇಳೆ ಎರಡು ಕುಟುಂಬಗಳಿಗೆ ತಲಾ 50 ಸಾವಿರ ರೂ. ಧನ ಸಹಾಯ ಮಾಡಿದರು.

ಮೃತ ರೈತರ ಕುಟುಂಬಸ್ಥರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಾಂತ್ವನ..

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಸಿಎಲ್​ಪಿ ನಾಯಕ, ಮಾಜಿ ಮುಖ್ಯಮಂತ್ರಿ. ಆದರೆ, ಇಲ್ಲಿ ತಹಶೀಲ್ದಾರ್ ಬಂದಿಲ್ಲ. ನಾನು ಬಂದರೂ ಯಾವ ಅಧಿಕಾರಿಗಳೂ ಇಲ್ಲ. ಈ ಸರ್ಕಾರವನ್ನ ಏನಂತಾ ಕರೆಯೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೃತ ರೈತರ ಕುಟುಂಬಕ್ಕೆ ಸರ್ಕಾರ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಕೊಟ್ಟಿಲ್ಲ. ಸುಳ್ಳು ಹೇಳಿಕೊಂಡು ಎಲ್ಲರೂ ತಿರುಗಾಡುತ್ತಿದ್ದಾರೆ. ಜನ ಗೊಂದಲದಲ್ಲಿದ್ದಾರೆ. ಹಾಗಾದರೆ ಜನ ಏನು ಮಾಡಬೇಕು. ಈ ಕೂಡಲೇ ಸರ್ಕಾರವನ್ನ ಕಿತ್ತು ಎಸೆಯಬೇಕು ಎಂದು ವಾಗ್ದಾಳಿ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಈ ಕಡೆ ಬಂದೇ ಇಲ್ಲ. ಇದಕ್ಕಿಂತ ಒಳ್ಳೆ ಕೆಲಸ ಏನಿದೆ ಎಂದು ಏಕವಚನದಲ್ಲೇ ಸಿ ಟಿ ರವಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.

Intro:Kn_ckm_04_Ex Cm Siddaramaiah_pkg_7202347Body:ಚಿಕ್ಕಮಗಳೂರು : -

ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆರೆ ಪ್ರವಾಹದಿಂದ ತೋಟ ಹಾಗೂ ಮನೆ ಕಳೆದು ಕೊಂಡ ಇಬ್ಬರು ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ಸಿಕ್ಕಿಲ್ಲ ಎಂದೂ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲು ಕಳಸಕ್ಕೆ ಬಂದಿದ್ದಾರೆ. ಕಾರ್ಗದ್ದೆ ಹಾಗೂ ಎಸ್ ಕೆ ಮೆಗಲು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಂದ್ರೇಗೌಡ ಹಾಗೂ ಚನಪ್ಪ ಗೌಡ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನ ಹೇಳಿದರು.ಸರ್ಕಾರದಿಂದ ನೆರೆ ಪರಿಹಾರ ಬಂದಿಲ್ಲ ಎಂದು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು.ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.ನಾನು ಸಿ ಎಲ್ ಪಿ ಲೀಡರ್ ಇದೀನಿ, ಮಾಜಿ ಮುಖ್ಯಮಂತ್ರಿ ಇದೀನಿ. ಆದ್ರೆ ಇಲ್ಲಿ ತಹಸೀಲ್ದಾರ್ ಪತ್ತೆನೇ ಇಲ್ಲ. ರೆವೆನ್ಯೂ ಇನ್ಸಪೆಕ್ಟರ್, ಅಲ್ಲೇ ಮುಖ ತೋರಿಸಿ ಗಿರಾಕಿ ಹೋಗೇ ಬಿಟ್ಟ ಎಂದೂ ಹೇಳಿದರು.ನಾನು ಬಂದರೂ ಯಾವನೂ ಅಧಿಕಾರಿಗಳು ಇಲ್ಲ. ಈ ಸರ್ಕಾರವನ್ನ ಏನೂ ಅಂತ ಕರೆಯೋದು ಎಂದೂ ಮೃತ ರೈತರ ಮನೆಗೆ ಭೇಟಿ ಕೊಟ್ಟ ಬಳಿಕ ಸಿದ್ದು ಗರಂ ಆದರು. ಮೃತ ರೈತರ ಕುಟುಂಬಕ್ಕೆ ಸರ್ಕಾರ ಸಾಂತ್ವಾನ ಹೇಳೋ ಕೆಲ್ಸ ಮಾಡಿಲ್ಲ.
ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಮಂತ್ರಿ ಭೇಟಿ ಕೊಟ್ಟಿಲ್ಲ. ಸುಳ್ಳು ಹೇಳಿಕೊಂಡು ಎಲ್ಲರೂ ತಿರುಗಾಡುತ್ತಿದ್ದಾರೆ. ಜನ ಗೊಂದಲದಲ್ಲಿ ಇದ್ದಾರೆ, ಹಾಗಾದ್ರೆ ಜನ ಏನ್ ಮಾಡ್ಬೇಕು ಸಾರ್ ಎಂದು ಪ್ರಶ್ನೆ.ಮಾಡಿದರು.
ಕೂಡಲೇ ಈ ಸರ್ಕಾರವನ್ನ ಕಿತ್ತು ಎಸೆಯಬೇಕು.ಎಂದೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಚಿಕ್ಕಮಗಳೂರು ಇಲ್ಲಿ ಯಾರು ಜಿಲ್ಲಾ ಉಸ್ತುವಾರಿ ಸಚಿವರು ಎಂದೂ ಪಕ್ಕದಲ್ಲಿ ಇದ್ದ ಶಾಸಕ ರಾಜೇಗೌಡ ರನ್ನ ಕೇಳಿದ ಸಿದ್ದರಾಮಯ್ಯ ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿ ಅವನು ಈ ಕಡೆ ಬಂದೇ ಇಲ್ಲ ಅಂತ ಹೇಳಿದರು.
ಇದಕ್ಕಿಂತ ಒಳ್ಳೆ ಕೆಲಸ ಏನ್ ಅವನಿಗೆ ಎಂದೂ ಏಕವಚನದಲ್ಲೇ ಸಿಟಿ ರವಿ ವಿರುದ್ಧ ಸಿದ್ದರಾಮಯ್ಯ ಸಿಟ್ಟಾಗಿದು ಸ್ಥಳೀಯ ಶಾಸಕರು ಬಂದಿಲ್ಲ ಸಂಸದರು, ಮಂತ್ರಿ ಯಾರು ಬಂದಿಲ್ಲ? ನೋಡಿ ಜನ ಇಂಥವರಿಗೆ ವೋಟ್ ಹಾಕ್ತಾರೆ. ಹಳ್ಳಿಗಳಿಗೆ ಹೋಗದರಿಗೆ ಜನರು ವೋಟ್ ಹಾಕ್ತಾರೆ ಎಂದೂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಇದು ನಮ್ಮ ನಿಮ್ಮೆಲ್ಲರ ದುರ್ದೈವ.
ರೈತರಿಗೆ ಸಾಂತ್ವಾನ ಹೇಳದಿದ್ದಕ್ಕೆ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಮೇಲೆ ಲೇವಡಿ ಮಾಡಿದರು...

Byte :- ಸಿದ್ದರಾಮಯ್ಯ.... ಮಾಜಿ ಮುಖ್ಯಮಂತ್ರಿ..



Conclusion:ರಾಜಕುಮಾರ್....
ಈಟಿವಿ ಭಾರತ್...
ಚಿಕ್ಕಮಗಳೂರು...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.