ETV Bharat / state

ಮಳೆಗಾಗಿ ಪ್ರಾರ್ಥಿಸಿ ಕಾವೇರಿ ನದಿಗೆ ವಿಶೇಷ ಪೂಜೆ: ವಿನಯ್​ ಗುರೂಜಿ ವಿಡಿಯೋ ವೈರಲ್​​

ಈ ಬಾರಿ ರಾಜ್ಯದಲ್ಲಿ ಮುಂಗಾರು ಸರಿಯಾಗಿ ಆರಂಭವಾಗದಿದ್ದ ಕಾರಣ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ವಿನಯ್​ ಗುರೂಜಿ ವಿಶೇಷ ಪೂಜೆ ಸಲ್ಲಿಸಿದ್ದ ವಿಡಿಯೋಗಳು ಈಗ ವೈರಲ್​ ಆಗಿವೆ.

author img

By

Published : Jun 26, 2019, 10:18 PM IST

Updated : Jun 27, 2019, 5:51 PM IST

ಪೂಜೆ

ಚಿಕ್ಕಮಗಳೂರು: ರಾಜ್ಯದಲ್ಲಿ ಈ ಬಾರಿ ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಮಳೆಗಾಗಿ ಪ್ರಾರ್ಥಿಸಿ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಜು. 18ರಂದು ಕಾವೇರಿ ನದಿಗೆ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಮತ್ತು ರೈತರಿಗೆ ಅನುಕೂಲ ಆಗಲಿ ಎಂದು ಶ್ರೀರಂಗಪಟ್ಟಣದ ಕಾವೇರಿ ನದಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ವಿನಯ್ ಗುರೂಜಿ ಅವರು ಶ್ರೀರಂಗಪಟ್ಟಣಕ್ಕೆ ತೆರಳಿ ಕಾವೇರಿ ನದಿ ದಡದಲ್ಲಿ ನೂರಾರು ಭಕ್ತರೊಂದಿಗೆ ಸೇರಿ ಕಾವೇರಿ ನದಿಗೆ ವಿಶೇಷ ಪೂಜೆ ಸಲ್ಲಿಸಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ರು. ಇದೇ ಸಂದರ್ಭದಲ್ಲಿ ಅವರ ಭಕ್ತರು ಮಳೆಗಾಗಿ ಭಜನೆ ಹಾಗೂ ಪಾರ್ಥನೆ ಸಲ್ಲಿಸಿದ್ದರು.

ಮಳೆಗಾಗಿ ಪ್ರಾರ್ಥಿಸಿ ಕಾವೇರಿ ನದಿಗೆ ವಿಶೇಷ ಪೂಜೆ

ಕಾವೇರಿ ನದಿಗೆ ವಿನಯ್ ಗೂರೂಜಿ ಅವರು ಬಾಗಿನ ಅರ್ಪಿಸಿದ್ದು, ರಾಜ್ಯಕ್ಕೆ ಉತ್ತಮ ಮಳೆಯಾಗಲಿ ಹಾಗೂ ರೈತರಿಗೆ ಒಳ್ಳೆಯದಾಗಲಿ ಎಂದು ಪಾರ್ಥನೆ ಸಲ್ಲಿಸಿದ್ದರು. ನಂತರ ಕಾವೇರಿ ನದಿಯ ನೀರನ್ನು ತೀರ್ಥದ ರೂಪದಲ್ಲಿ ಸ್ವೀಕರಿಸಿ, ನದಿಯ ದಡದಲ್ಲಿ ನೆರೆದಿದ್ದಂತಹ ನೂರೂರು ಭಕ್ತರ ತಲೆಯ ಮೇಲೆ ನೀರನ್ನು ಪ್ರಸಾದವಾಗಿ ಪ್ರೋಕ್ಷಣೆ ಮಾಡಿದ್ದರು. ಇದೀಗ ಈ ವಿಶೇಷ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚಿಕ್ಕಮಗಳೂರು: ರಾಜ್ಯದಲ್ಲಿ ಈ ಬಾರಿ ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಮಳೆಗಾಗಿ ಪ್ರಾರ್ಥಿಸಿ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಜು. 18ರಂದು ಕಾವೇರಿ ನದಿಗೆ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಮತ್ತು ರೈತರಿಗೆ ಅನುಕೂಲ ಆಗಲಿ ಎಂದು ಶ್ರೀರಂಗಪಟ್ಟಣದ ಕಾವೇರಿ ನದಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ವಿನಯ್ ಗುರೂಜಿ ಅವರು ಶ್ರೀರಂಗಪಟ್ಟಣಕ್ಕೆ ತೆರಳಿ ಕಾವೇರಿ ನದಿ ದಡದಲ್ಲಿ ನೂರಾರು ಭಕ್ತರೊಂದಿಗೆ ಸೇರಿ ಕಾವೇರಿ ನದಿಗೆ ವಿಶೇಷ ಪೂಜೆ ಸಲ್ಲಿಸಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ರು. ಇದೇ ಸಂದರ್ಭದಲ್ಲಿ ಅವರ ಭಕ್ತರು ಮಳೆಗಾಗಿ ಭಜನೆ ಹಾಗೂ ಪಾರ್ಥನೆ ಸಲ್ಲಿಸಿದ್ದರು.

ಮಳೆಗಾಗಿ ಪ್ರಾರ್ಥಿಸಿ ಕಾವೇರಿ ನದಿಗೆ ವಿಶೇಷ ಪೂಜೆ

ಕಾವೇರಿ ನದಿಗೆ ವಿನಯ್ ಗೂರೂಜಿ ಅವರು ಬಾಗಿನ ಅರ್ಪಿಸಿದ್ದು, ರಾಜ್ಯಕ್ಕೆ ಉತ್ತಮ ಮಳೆಯಾಗಲಿ ಹಾಗೂ ರೈತರಿಗೆ ಒಳ್ಳೆಯದಾಗಲಿ ಎಂದು ಪಾರ್ಥನೆ ಸಲ್ಲಿಸಿದ್ದರು. ನಂತರ ಕಾವೇರಿ ನದಿಯ ನೀರನ್ನು ತೀರ್ಥದ ರೂಪದಲ್ಲಿ ಸ್ವೀಕರಿಸಿ, ನದಿಯ ದಡದಲ್ಲಿ ನೆರೆದಿದ್ದಂತಹ ನೂರೂರು ಭಕ್ತರ ತಲೆಯ ಮೇಲೆ ನೀರನ್ನು ಪ್ರಸಾದವಾಗಿ ಪ್ರೋಕ್ಷಣೆ ಮಾಡಿದ್ದರು. ಇದೀಗ ಈ ವಿಶೇಷ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Intro:R_Kn_Ckm_03_26_Pooja for Rain_Rajkumar_Ckm_av_7202347Body:

ಚಿಕ್ಕಮಗಳೂರು :-

ರಾಜ್ಯದಲ್ಲಿ ಈ ಬಾರೀ ಸರಿಯಾದ ಸಮಯಕ್ಕೆ ಮಳೆಯಾಗದೇ ಭೀಕರ ಬರಗಾಲ ಮತ್ತು ರೈತರು ನೀರಿಗಾಗಿ ತೊಂದರೆ ಅನುಭವಿಸುತ್ತಿರುವ ಹಿನ್ನಲೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಮತ್ತು ರೈತರಿಗೆ ಅನುಕೂಲ ಆಗಲಿ ಎಂದೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಅವರು ಶ್ರೀರಂಗ ಪಟ್ಟಣಕ್ಕೆ ಭೇಟಿ ಕೊಟ್ಟು ಕಾವೇರಿ ನದಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಶ್ರೀರಂಗ ಪಟ್ಟಣದಲ್ಲಿರುವ ಕಾವೇರಿ ನದಿಯ ದಡದಲ್ಲಿ ತಮ್ಮ ನೂರಾರೂ ಭಕ್ತರೊಂದಿಗೆ ಸೇರಿ ಅವಧೂತ ವಿನಯ್ ಗುರೂಜಿ ಅವರು ಕಾವೇರಿ ನದಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದೂ ಪ್ರಾರ್ಥನೆ ಮಾಡಿದರು. ಇದೇ ಸಂದರ್ಭದಲ್ಲಿ ಅವರ ನೂರಾರೂ ಭಕ್ತರು ಭಜನೆ ಹಾಗೂ ಪಾರ್ಥನೆ ಸಲ್ಲಿಸಿದರು. ನಂತರ ಕಾವೇರಿ ನದಿಗೆ ವಿನಯ್ ಗೂರೂಜಿ ಅವರು ಭಾಗೀನ ಅರ್ಪಿಸಿದ್ದು ರಾಜ್ಯಕ್ಕೆ ಉತ್ತಮ ಮಳೆಯಾಗಲಿ ಹಾಗೂ ರೈತರಿಗೆ ಒಳ್ಳೆಯದಾಗಲಿ ಎಂದೂ ಪಾರ್ಥನೆ ಸಲ್ಲಿಸಿದರು. ನಂತರ ಕಾವೇರಿ ನದಿಯ ನೀರನ್ನು ತೀರ್ಥದ ರೂಪದಲ್ಲಿ ಸ್ವೀಕರಲಿ ನದಿಯ ದಡದಲ್ಲಿ ನೆರೆದಿದ್ದಂತಹ ನೂರೂರು ಭಕ್ತರಿಗೆ ಕಾವೇರಿ ನದಿಯ ನೀರನ್ನು ಅವರ ತಲೆಯ ಮೇಲೆ ಪ್ರಸಾದವಾಗಿ ಪ್ರೋಕ್ಷಣೆ ಮಾಡಿದರು. ಕಳೆದ 18 ತಾರೀಕಿನಂದೂ ಕಾವೇರಿ ನದಿಗೆ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ದೃಶ್ಯದ ಚಿತ್ರಣಗಳು ಇದಾಗಿದ್ದು ಈಗ ಚಿಕ್ಕಮಗಳೂರಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Conclusion:ರಾಜಕುಮಾರ್......
ಈ ಟಿವಿ ಭಾರತ್.....
ಚಿಕ್ಕಮಗಳೂರು......
Last Updated : Jun 27, 2019, 5:51 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.