ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ಎರಡನೇ ಹಂತದ ಲಾಕ್ಡೌನ್ನಲ್ಲೂ ಜಿಲ್ಲೆಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿರೇಬೈಲಿನಲ್ಲಿ ಸಾಮಾಜಿಕ ಅಂತರವನ್ನು ಜನರು ಮರೆತಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ಜನರು ನಿಂತುಕೊಂಡಿದ್ದಾರೆ. ಅಂತರ ಕಾಯ್ದುಕೊಳ್ಳದೇ ಸರತಿ ಸಾಲಿನಲ್ಲಿ ನಿಂತಿದ್ದು, ಜನರಿಗೆ ಎಷ್ಟೇ ಹೇಳಿದರೂ ಜನರು ಮಾತ್ರ ಬುದ್ಧಿ ಕಲಿಯುತ್ತಿಲ್ಲ.
ಇನ್ನು ಸಾಮಾಜಿಕ ಅಂತರವನ್ನು ಜನರು ಗಾಳಿಗೆ ತೂರಿದ್ದು, ಲಾಕ್ಡೌನ್ಗೆ ಜನರು ಸರಿಯಾಗಿ ಸ್ವಂದನೆ ನೀಡುತ್ತಿಲ್ಲ.