ETV Bharat / state

ಮಲೆನಾಡಿನಲ್ಲಿ ಮಳೆಯ ಅಬ್ಬರ: ಹಲವೆಡೆ ಅಪಾರ ಹಾನಿ

author img

By

Published : Aug 10, 2019, 11:08 PM IST

ಮಳೆಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧರೆ ಕುಸಿತ, ಗುಡ್ಡ ಕುಸಿತ, ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನಲ್ಲಿ ಹೆಚ್ಚಳ ಕಂಡು ಬಂದಿದ್ದು, ಭದ್ರಾ ನದಿಗೆ 79.158 ಕ್ಯೂಸೆಕ್​ ನೀರು ಹರಿದುಬರುತ್ತಿದೆ.

ಮಲೆನಾಡಿನಲ್ಲಿ ಮಳೆಯ ಅಬ್ಬರ: ಹಲವೆಡೆ ಹಾನಿ

ಚಿಕ್ಕಮಗಳೂರು: ಜಿಲ್ಲಾದ್ಯಂತ ಮಳೆ ಆರ್ಭಟಿಸುತ್ತಿದ್ದು, ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಆ. 11ರವರೆಗೂ ಇದೇ ರೀತಿಯ ಮಳೆ ಮುಂದುವರೆಯುವ ಸಾಧ್ಯತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

ಮಲೆನಾಡಿನಲ್ಲಿ ಮಳೆಯ ಅಬ್ಬರ: ಹಲವೆಡೆ ಹಾನಿ

ಆ. 1ರಿಂದ 9 ರವರೆಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆಗಿರುವ ಪ್ರಮಾಣ.
1. ಚಿಕ್ಕಮಗಳೂರು - 326.2 ಮೀ.ಮೀ
2.ಕಡೂರು -126.2 ಮೀ.ಮೀ
3. ಕೊಪ್ಪ - 693.4 ಮೀ. ಮೀ
4. ಮೂಡಿಗೆರೆ - 844.8 ಮೀ.ಮೀ
5. ಎನ್.ಆರ್ ಪುರ - 442.9 ಮೀ ಮೀ
6. ಶೃಂಗೇರಿ - 796.6 ಮೀ.ಮೀ
7. ತರೀಕೆರೆ - 275.9 ಮೀ ಮೀ

ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟಿ ರಸ್ತೆ, ಹಳುವಳ್ಳಿ- ಹೊರನಾಡು ರಸ್ತೆ, ಸುಂಕಸಾಲೆ, ದುರ್ಗದಹಳ್ಳಿ, ಕೊಟ್ಟಿಗೆಹಾರ - ಕಳಸ ರಸ್ತೆ, ತತ್ಕೋಳ - ಕುಂದೂರು, ಚನ್ನಹಡ್ಲು - ಹಿರೇಭೈಲು - ಮಲ್ಲೇಶನ ಗುಡ್ಡ ರಸ್ತೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಈ ಕುರಿತು ಯಾವುದೇ ರೀತಿಯ ತೊಂದರೆ ಆಗದಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತಿದೆ.

ಭೂ ಕುಸಿತದಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಎನ್​ಡಿಆರ್​ಎಫ್​ ಸಹಾಯವನ್ನು ಕೋರಲಾಗಿದೆ. ಈಗಾಗಲೇ ಈ ಕುರಿತು ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದ್ದು, ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಕಾಯುತ್ತಿದೆ. ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾದಲ್ಲಿ ಸಾರ್ವಜನಿಕರು ಮಾಹಿತಿ ನೀಡಲು ದಿನದ 24 ಗಂಟೆ ಕಾಲ ಕಾರ್ಯನಿರ್ವಹಿಸುವಂತೆ ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನೆರೆಪೀಡಿತ ಪ್ರದೇಶಗಳಲ್ಲಿ ಎಲ್ಲಾ ರೀತಿಯ ರಕ್ಷಣಾ ದೋಣಿಗಳು, ಲೈಫ್ ಜಾಕೇಟ್, ಪ್ರಥಮ ಚಿಕಿತ್ಸೆ ಕಿಟ್, ಇತ್ಯಾದಿ ಸಲಕರಣೆಗಳನ್ನು ಸಂಗ್ರಹಿಸಲಾಗಿದ್ದು, ರಕ್ಷಣಾ ಇಲಾಖೆಗಳಾದ ಅಗ್ನಿಶಾಮಕ ದಳ, ಪೊಲೀಸ್ ಗೃಹ ರಕ್ಷಕ ದಳ ಸಿಬ್ಬಂದಿ ಮೂಲಕ ರಕ್ಷಣಾ ಕಾರ್ಯ ಮಾಡಿಸಲಾಗುತ್ತಿದೆ.

ಮೂಡಿಗೆರೆ - ಚಾರ್ಮಾಡಿ ಘಾಟ್​​ ಮೂಲಕ ಮಂಗಳೂರು- ಧರ್ಮಸ್ಥಳ ಕಡೆಗೆ ಸಂಚಾರ ಮಾಡುವ ರಸ್ತೆಯಲ್ಲಿ ನಿರಂತರ ಧರೆ ಕುಸಿಯುತ್ತಿದ್ದು, ಸಂಪರ್ಕಕ್ಕೆ ತೊಂದರೆ ಆಗುವ ಕಾರಣ ಚಾರ್ಮಾಡಿ ಘಾಟಿಯಲ್ಲಿ ವಾಹನಗಳ ಸಂಚಾರವನ್ನು 14 ರವರೆಗೂ ನಿಷೇಧ ಮಾಡಲಾಗಿದೆ.

ಹಾಗೆಯೇ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ, ಮಾಣಿಕ್ಯಧಾರ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಈ ಸ್ಥಳಗಳಲ್ಲಿ ಭೂಮಿ ಕುಸಿಯುತ್ತಿರುವುದರಿಂದ ಪ್ರವಾಸಿಗರು ಈ ಜಾಗಗಳಿಗೆ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಪರಿಹಾರ ಕೇಂದ್ರಗಳ ಸ್ಥಾಪನೆ:

ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿರುವ ಮೋರಾರ್ಜಿ ಶಾಲೆ, ಕೊಟ್ಟಿಗೆಹಾರದಲ್ಲಿ 150 ಜನ ಸಂತ್ರಸ್ತರು, ಕಳಸದ ಗಣಪತಿ ಸಮುದಾಯ ಭವನ -ಹೀರೇಬೈಲು - 40 ಜನ, ಸರ್ಕಾರಿ ಪ್ರಾಥಮಿಕ ಶಾಲೆ, ಹಿರೈಬೈಲು- 50 ಜನರು, ಗೋಣಿಬೀಡು ಮೆಟ್ರಿಕ್ ಪೂರ್ವ ವಸತಿ ನಿಲಯ - 35 ಜನ, ಬಾಳೆಹೊನ್ನೂರಿನ ಚರ್ಚ್​ ಹಾಲ್-50 ಜನ, ಸರ್ಕಾರಿ ಪ್ರೌಡಶಾಲೆ ಬಾಳೆಹೊನ್ನೂರು -40 ಜನ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ.

ಚಿಕ್ಕಮಗಳೂರು: ಜಿಲ್ಲಾದ್ಯಂತ ಮಳೆ ಆರ್ಭಟಿಸುತ್ತಿದ್ದು, ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಆ. 11ರವರೆಗೂ ಇದೇ ರೀತಿಯ ಮಳೆ ಮುಂದುವರೆಯುವ ಸಾಧ್ಯತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

ಮಲೆನಾಡಿನಲ್ಲಿ ಮಳೆಯ ಅಬ್ಬರ: ಹಲವೆಡೆ ಹಾನಿ

ಆ. 1ರಿಂದ 9 ರವರೆಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆಗಿರುವ ಪ್ರಮಾಣ.
1. ಚಿಕ್ಕಮಗಳೂರು - 326.2 ಮೀ.ಮೀ
2.ಕಡೂರು -126.2 ಮೀ.ಮೀ
3. ಕೊಪ್ಪ - 693.4 ಮೀ. ಮೀ
4. ಮೂಡಿಗೆರೆ - 844.8 ಮೀ.ಮೀ
5. ಎನ್.ಆರ್ ಪುರ - 442.9 ಮೀ ಮೀ
6. ಶೃಂಗೇರಿ - 796.6 ಮೀ.ಮೀ
7. ತರೀಕೆರೆ - 275.9 ಮೀ ಮೀ

ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟಿ ರಸ್ತೆ, ಹಳುವಳ್ಳಿ- ಹೊರನಾಡು ರಸ್ತೆ, ಸುಂಕಸಾಲೆ, ದುರ್ಗದಹಳ್ಳಿ, ಕೊಟ್ಟಿಗೆಹಾರ - ಕಳಸ ರಸ್ತೆ, ತತ್ಕೋಳ - ಕುಂದೂರು, ಚನ್ನಹಡ್ಲು - ಹಿರೇಭೈಲು - ಮಲ್ಲೇಶನ ಗುಡ್ಡ ರಸ್ತೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಈ ಕುರಿತು ಯಾವುದೇ ರೀತಿಯ ತೊಂದರೆ ಆಗದಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತಿದೆ.

ಭೂ ಕುಸಿತದಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಎನ್​ಡಿಆರ್​ಎಫ್​ ಸಹಾಯವನ್ನು ಕೋರಲಾಗಿದೆ. ಈಗಾಗಲೇ ಈ ಕುರಿತು ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದ್ದು, ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಕಾಯುತ್ತಿದೆ. ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾದಲ್ಲಿ ಸಾರ್ವಜನಿಕರು ಮಾಹಿತಿ ನೀಡಲು ದಿನದ 24 ಗಂಟೆ ಕಾಲ ಕಾರ್ಯನಿರ್ವಹಿಸುವಂತೆ ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನೆರೆಪೀಡಿತ ಪ್ರದೇಶಗಳಲ್ಲಿ ಎಲ್ಲಾ ರೀತಿಯ ರಕ್ಷಣಾ ದೋಣಿಗಳು, ಲೈಫ್ ಜಾಕೇಟ್, ಪ್ರಥಮ ಚಿಕಿತ್ಸೆ ಕಿಟ್, ಇತ್ಯಾದಿ ಸಲಕರಣೆಗಳನ್ನು ಸಂಗ್ರಹಿಸಲಾಗಿದ್ದು, ರಕ್ಷಣಾ ಇಲಾಖೆಗಳಾದ ಅಗ್ನಿಶಾಮಕ ದಳ, ಪೊಲೀಸ್ ಗೃಹ ರಕ್ಷಕ ದಳ ಸಿಬ್ಬಂದಿ ಮೂಲಕ ರಕ್ಷಣಾ ಕಾರ್ಯ ಮಾಡಿಸಲಾಗುತ್ತಿದೆ.

ಮೂಡಿಗೆರೆ - ಚಾರ್ಮಾಡಿ ಘಾಟ್​​ ಮೂಲಕ ಮಂಗಳೂರು- ಧರ್ಮಸ್ಥಳ ಕಡೆಗೆ ಸಂಚಾರ ಮಾಡುವ ರಸ್ತೆಯಲ್ಲಿ ನಿರಂತರ ಧರೆ ಕುಸಿಯುತ್ತಿದ್ದು, ಸಂಪರ್ಕಕ್ಕೆ ತೊಂದರೆ ಆಗುವ ಕಾರಣ ಚಾರ್ಮಾಡಿ ಘಾಟಿಯಲ್ಲಿ ವಾಹನಗಳ ಸಂಚಾರವನ್ನು 14 ರವರೆಗೂ ನಿಷೇಧ ಮಾಡಲಾಗಿದೆ.

ಹಾಗೆಯೇ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ, ಮಾಣಿಕ್ಯಧಾರ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಈ ಸ್ಥಳಗಳಲ್ಲಿ ಭೂಮಿ ಕುಸಿಯುತ್ತಿರುವುದರಿಂದ ಪ್ರವಾಸಿಗರು ಈ ಜಾಗಗಳಿಗೆ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಪರಿಹಾರ ಕೇಂದ್ರಗಳ ಸ್ಥಾಪನೆ:

ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿರುವ ಮೋರಾರ್ಜಿ ಶಾಲೆ, ಕೊಟ್ಟಿಗೆಹಾರದಲ್ಲಿ 150 ಜನ ಸಂತ್ರಸ್ತರು, ಕಳಸದ ಗಣಪತಿ ಸಮುದಾಯ ಭವನ -ಹೀರೇಬೈಲು - 40 ಜನ, ಸರ್ಕಾರಿ ಪ್ರಾಥಮಿಕ ಶಾಲೆ, ಹಿರೈಬೈಲು- 50 ಜನರು, ಗೋಣಿಬೀಡು ಮೆಟ್ರಿಕ್ ಪೂರ್ವ ವಸತಿ ನಿಲಯ - 35 ಜನ, ಬಾಳೆಹೊನ್ನೂರಿನ ಚರ್ಚ್​ ಹಾಲ್-50 ಜನ, ಸರ್ಕಾರಿ ಪ್ರೌಡಶಾಲೆ ಬಾಳೆಹೊನ್ನೂರು -40 ಜನ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ.

Intro:Kn_Ckm_07_Dist over all deatiles_pkg_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲಾದ್ಯಂತ ಮುಂಗಾರು ಮಳೆ ಪ್ರಾರಂಭವಾಗಿದ್ದು ಜಿಲ್ಲೆಯಲ್ಲಿ ಮಳೆಯ ತೀರ್ವ್ರತೆ ಹೆಚ್ಚಾಗಿದೆ. ಹವಮಾನ ಇಲಾಖೆಯ ಮುನ್ಸೂಚನೆಯಂತೆ ದಿನಾಂಕ 11 ರ ವರೆಗೂ ಇದೇ ರೀತಿಯಾ ಮಳೆ ಮುಂದುವರೆಯುವ ಸಾಧ್ಯತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

ದಿನಾಂಕ 1 ರಿಂದ 9 ರ ವರೆಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆಗಿರುವ ಪ್ರಮಾಣ.

1. ಚಿಕ್ಕಮಗಳೂರು -----326.2 ಮೀ. ಮೀ

2.ಕಡೂರು ----- 126.2 ಮೀ.ಮೀ

3. ಕೊಪ್ಪ -----693.4 ಮೀ. ಮೀ

4. ಮೂಡಿಗೆರೆ ----844.8 ಮೀ.ಮೀ

5. ಎನ್ ಆರ್ ಪುರ -----442.9 ಮೀ ಮೀ

6. ಶೃಂಗೇರಿ -----796.6 ಮೀ.ಮೀ

7. ತರೀಕೆರೆ -----275.9 ಮೀ ಮೀ

ಮಳೆಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧರೆ ಕುಸಿತ, ಗುಡ್ಡ ಕುಸಿತ, ಮತ್ತು ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದು ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು ತುಂಗಾ, ಭದ್ರಾ, ಹೇಮಾವತಿ ನದಿಗಳ ಹರಿಯುವಿಕೆಯಲ್ಲಿ ಹೆಚ್ಚಳ ಕಂಡು ಬಂದಿದ್ದು ಭದ್ರಾ ನದಿಗೆ 79.158 ಕ್ಯೂಸೆಕ್ಸ್ ನೀರು ಹರಿದುಕೊಂಡು ಬರುತ್ತಿದೆ.

ಮೂಡಿಗೆರೆ ತಾಲೂಕ್ ಚಾರ್ಮಾಡಿ ಘಾಟಿ ರಸ್ತೆ,ಹಳುವಳ್ಳಿ- ಹೊರನಾಡು ರಸ್ತೆ, ಸುಂಕಸಾಲೆ, ದುರ್ಗದಹಳ್ಳಿ, ಕೊಟ್ಟಿಗೆಹಾರ - ಕಳಸ ರಸ್ತೆ, ತತ್ಕೋಳ - ಕುಂದೂರು, ಚನ್ನಹಡ್ಲು - ಹಿರೇಭೈಲು - ಮಲ್ಲೇಶನ ಗುಡ್ಡ ರಸ್ತೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಈ ಕುರಿತು ಯಾವುದೇ ರೀತಿಯಾ ತೊಂದರೆ ಆಗದಂತೆ ಜಿಲ್ಲಾಡಳಿತ ಕ್ರಮವನ್ನು ತೆಗೆದುಕೊಳ್ಳುತ್ತಿದೆ.

ಮೂಡಿಗೆರೆ ತಾಲೂಕಿನಲ್ಲಿ ಭೂ ಕುಸಿತ ಉಂಟಾಗಿದ್ದು ಇದರಿಂದ ತುಂಬಾ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಕೆಲ ಪ್ರದೇಶಗಳಲ್ಲಿ ವಾಯು ಮಾರ್ಗದಲ್ಲಿ ರಕ್ಷಣೆ ಮಾಡುವ ಅವಶ್ಯಕತೆ ಇರೋದರಿಂದ ಎನ್ ಡಿ ಆರ್ ಎಫ್ ಸಹಾಯವನ್ನು ಕೋರಲಾಗಿದೆ. ಈಗಾಗಲೇ ಈ ಕುರಿತು ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದ್ದು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಕಾಯುತ್ತಿದೆ.

ಜಿಲ್ಲೆಯಲ್ಲಿ ನಿರಂತರ ಮಳೆಯ ಕಾರಣ ಸಂದರ್ಭ ಹಾಗೂ ಸನ್ನಿವೇಶಗಳನ್ನು ಅರ್ಥಮಾಡಿಕೊಂಡು ಅವಶ್ಯಕತೆ ಮತ್ತು ಅದರ ಅನುಸಾರವಾಗಿ ಶಾಲಾ - ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದ್ದು ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ಮೂಡಿಗೆರೆ ತಾಲೂಕಿನಲ್ಲಿ ಇದೇ 10 ರ ವರೆಗೂ ರಜೆಯನ್ನು ಘೋಷಣೆ ಮಾಡಲಾಗಿದೆ.

ನೆರೆ ಪೀಡಿತ ಪ್ರದೇಶಗಳಲ್ಲಿ ಎಲ್ಲಾ ರೀತಿಯಾ ರಕ್ಷಣಾ ಕಾರ್ಯಕ್ಕೆ ದೋಣಿಗಳು, ಲೈಫ್ ಜಾಕೆಟ್, ಪ್ರಥಮ ಚಿಕಿತ್ಸೆ ಕಿಟ್, ಇತ್ಯಾದಿ ಸಲಕರಣೆಗಳನ್ನು ಸಂಗ್ರಹಿಸಲಾಗಿದ್ದು ರಕ್ಷಣಾ ಇಲಾಖೆಗಳಾದ ಅಗ್ನಿಶಾಮಕ ದಳ, ಪೋಲಿಸ್ ಗೃಹ ರಕ್ಷಕ ದಳ ಸಿಬ್ಬಂಧಿಗಳ ಮೂಲಕ ರಕ್ಷಣೆಯನ್ನು ಮಾಡಿಸಲಾಗುತ್ತಿದೆ.

ಮಳೆಯ ಕಾರಣದಿಂದಾ ಯಾವುದೇ ರೀತಿಯಾ ಸಮಸ್ಯೆಗಳು ಉದ್ಬವವಾದಲ್ಲಿ ಸಾರ್ವಜನಿಕರು ಮಾಹಿತಿ ನೀಡಲು ದಿನದ 24 ಗಂಟೆ ಕಾಲ ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕ್ ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.

ಮೂಡಿಗೆರೆ - ಚಾರ್ಮಾಡಿಘಾಟಿ ಮೂಲಕ ಮಂಗಳೂರು- ಧರ್ಮಸ್ಥಳ ಕಡೆಗೆ ಸಂಚಾರ ಮಾಡುವ ರಸ್ತೆಯಲ್ಲಿ ನಿರಂತರ ಧರೆ ಕುಸಿಯುತ್ತಿದ್ದು ಸಂಪರ್ಕಕ್ಕೆ ತೊಂದರೆ ಆಗುವ ಕಾರಣ ಚಾರ್ಮಾಡಿ ಘಾಟಿಯಲ್ಲಿ ವಾಹನಗಳ ಸಂಚಾರವನ್ನು 14 ರ ವರೆಗೂ ನಿಷೇಧ ಮಾಡಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನ ಗಿರಿ ,ಬಾಬಾ ಬುಡನ್ ಗಿರಿ, ಮಾಣಿಕ್ಯಧಾರ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಈ ಸ್ಥಳಗಳಲ್ಲಿ ಧರೆ ಕುಸಿಯುತ್ತಿರುವುದರಿಂದ ಪ್ರವಾಸಿಗರು ಈ ಜಾಗಗಳಿಗೆ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಧರೆ ಕುಸಿತದಿಂದಾ ರಸ್ತೆ ಸಂಪರ್ಕವನ್ನು ಕಡಿದುಕೊಂಡಿರುವ ಪ್ರಮುಖವಾದ ಸ್ಥಳಗಳು

ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಚನ್ನಹಡ್ಲು ಗ್ರಾಮದಲ್ಲಿ 20 ಜನರು, ದುರ್ಗದಹಳ್ಳಿಯಲ್ಲಿ 25 ಜನರು ಬಲಿಗೆಯಲ್ಲಿ 20 ಜನರು ಸಂಕಸಾಲೆಯಲ್ಲಿ 25 ಜನರು ಇದ್ದು ರಸ್ತೆ ಸಂಪರ್ಕ ಕಳೆದುಕೊಂಡಿದ್ದಾರೆ. ಕಳಸದ ಇಡಕಣಿ, ಹಿರೇಬೈಲು, ಮಲ್ಲೇಶನ ಗುಡ್ಡದಿಂದಾ ಒಟ್ಟು 30 ಜನರು ರಸ್ತೆ ಸಂಪರ್ಕವನ್ನು ಕಳೆದುಕೊಂಡಿದ್ದಾರೆ.

ಗಂಜಿ ಕೇಂದ್ರಗಳ ಸ್ಥಾಪನೆ.

ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿರುವ ಮೋರಾರ್ಜಿ ಶಾಲೆ,ಕೊಟ್ಟಿಗೆಹಾರದಲ್ಲಿ 150 ಜನ ಸಂತ್ರಸ್ಥರು, ಕಳಸದ ಗಣಪತಿ ಸಮುದಾಯ ಭವನ -ಹೀರೇಬೈಲು - 40 ಜನರು, ಸರ್ಕಾರಿ ಪ್ರಾಥಮಿಕ ಶಾಲೆ,ಹಿರೈಬೈಲು - 50 ಜನರು ಗೋಣಿಬೀಡು ,ಮೆಟ್ರಿಕ್ ಪೂರ್ವ ವಸತಿ ನಿಲಯ - 35 ಜನ, ಬಾಳೆಹೊನ್ನೂರಿನ ಚರ್ಚ ಹಾಲ್, 50 ಜನ ಸರ್ಕಾರಿ ಪ್ರೌಡಶಾಲೆ ಬಾಳೆಹೊನ್ನೂರು -40 ಜನ ಗಂಜಿ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಮೃತ ಪಟ್ಟ ಮತ್ತು ಕಾಣೆಯಾದವರು.

ಮೂಡಿಗೆರೆ ತಾಲೂಕ್ ಗೋಣಿಬೀಡು ಬಳಿ ಆಲೂರು ಗ್ರಾಮದ ಶ್ರೀವತ್ಸಾ ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದು ಸಂತೋಷ್ ಚನ್ನಹಡ್ಲು ಗ್ರಾಮ ಭೂ ಕುಸಿತದಿಂದಾ ಮೃತ ಪಟ್ಟಿದ್ದಾನೆ.ಕೂದುವಳ್ಳಿಯಲ್ಲಿ ಹಳ್ಳದಾಟುವಾಗ ಚಂದ್ರೇಗೌಡ ಸಾವು, ಮೂಡಿಗೆರೆಯ ಬಾಳೂರ ಹೊರಟ್ಟಿ ಗ್ರಾಮದಲ್ಲಿ ಗುಡ್ಡ ಕುಸಿತದಿಂದಾ ತಾಯಿ ಮತ್ತು ಮಗ ಕಣ್ಮರೆಯಾಗಿರುವ ವರದಿ ಲಭ್ಯವಾಗುತ್ತಿದೆ....

byte:- ಕುಮಾರ್.....ಅಪಾರ ಜಿಲ್ಲಾಧಿಕಾರಿ.

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.