ETV Bharat / state

ಕೊಡಗು ಸಾಹಿತ್ಯ ಚಂಗೋಲೆ ಆರಂಭಿಸಿದ ಯುವಕರಿಗೆ ಸಂಸದೆ ಶೋಭಾ ಕರಂದ್ಲಾಜೆ ಅಭಿನಂದನೆ

author img

By

Published : May 12, 2020, 8:01 PM IST

ಕೊಡಗು ಸಾಹಿತ್ಯ ಚಂಗೋಲೆ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಸಂತಸ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ಕೊಡಗು ಸಾಹಿತ್ಯ ಚಂಗೋಲೆಯನ್ನು ಆರಂಭಿಸಿದ ಕೊಡಗಿನ ವೀರ ಯುವಕರಿಗೆ ಸಂಸದೆ ಶೋಭಾ ಕರಂದ್ಲಾಜೆ ಅಭಿನಂದನೆ ತಿಳಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ

ಈ ಕುರಿತು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕೊಡಗು ಅನ್ನುವುದೇ ನಮ್ಮಲ್ಲಿ ಹುರುಪು ಹಾಗೂ ಉತ್ಸಾಹ, ಶೌರ್ಯವನ್ನು ತೋರಿಸುತ್ತದೆ. ನಮ್ಮೆಲ್ಲರಿಗೂ ಅದರ ಅನುಭವ ಆಗುತ್ತದೆ. ಕೊಡಗು ಒಂದು ಬಹು ದೊಡ್ಡ ಸಾಹಿತ್ಯ ಲೋಕ ಎಂದು ಹೇಳುತ್ತಾರೆ. ಕೊಡಗು ಸಾಹಿತ್ಯ ಚಂಗೋಲೆಯನ್ನು ಆರಂಭಿಸಿದ, ಅದರ ಮೂಲಕ ಕೊರೊನಾ ಬಗ್ಗೆ ಹಾಗೂ ಬೇರೆ ಬೇರೆ ಗೀತೆಗಳ ಮೂಲಕ ಜನರಿಗೆ ಮನದಟ್ಟು ಆಗುವಂತೆ ಹೇಳುತ್ತಿರುವ ಎಲ್ಲರಿಗೂ ಅಭಿನಂದನೆಗಳು ಎಂದರು.

ಅಪ್ಪಚ್ಚು ಕವಿಗಳು ಬಹಳ ಪ್ರಸಿದ್ಧರಾಗಿದ್ದರು ಎಂದ ಅವರು, ಅಪ್ಪಚ್ಚು ಕವಿಯ ಒಂದು ಕವನವನ್ನು ವಾಚಿಸಿದರು. ಕೊರೊನಾ ಬೇಗ ಹೋಗಲಿ, ಕಾವೇರಮ್ಮ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಚಿಕ್ಕಮಗಳೂರು: ಕೊಡಗು ಸಾಹಿತ್ಯ ಚಂಗೋಲೆಯನ್ನು ಆರಂಭಿಸಿದ ಕೊಡಗಿನ ವೀರ ಯುವಕರಿಗೆ ಸಂಸದೆ ಶೋಭಾ ಕರಂದ್ಲಾಜೆ ಅಭಿನಂದನೆ ತಿಳಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ

ಈ ಕುರಿತು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕೊಡಗು ಅನ್ನುವುದೇ ನಮ್ಮಲ್ಲಿ ಹುರುಪು ಹಾಗೂ ಉತ್ಸಾಹ, ಶೌರ್ಯವನ್ನು ತೋರಿಸುತ್ತದೆ. ನಮ್ಮೆಲ್ಲರಿಗೂ ಅದರ ಅನುಭವ ಆಗುತ್ತದೆ. ಕೊಡಗು ಒಂದು ಬಹು ದೊಡ್ಡ ಸಾಹಿತ್ಯ ಲೋಕ ಎಂದು ಹೇಳುತ್ತಾರೆ. ಕೊಡಗು ಸಾಹಿತ್ಯ ಚಂಗೋಲೆಯನ್ನು ಆರಂಭಿಸಿದ, ಅದರ ಮೂಲಕ ಕೊರೊನಾ ಬಗ್ಗೆ ಹಾಗೂ ಬೇರೆ ಬೇರೆ ಗೀತೆಗಳ ಮೂಲಕ ಜನರಿಗೆ ಮನದಟ್ಟು ಆಗುವಂತೆ ಹೇಳುತ್ತಿರುವ ಎಲ್ಲರಿಗೂ ಅಭಿನಂದನೆಗಳು ಎಂದರು.

ಅಪ್ಪಚ್ಚು ಕವಿಗಳು ಬಹಳ ಪ್ರಸಿದ್ಧರಾಗಿದ್ದರು ಎಂದ ಅವರು, ಅಪ್ಪಚ್ಚು ಕವಿಯ ಒಂದು ಕವನವನ್ನು ವಾಚಿಸಿದರು. ಕೊರೊನಾ ಬೇಗ ಹೋಗಲಿ, ಕಾವೇರಮ್ಮ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.