ETV Bharat / state

ಪೌರಕಾರ್ಮಿಕರೊಂದಿಗೆ ಸಂಕ್ರಾಂತಿ ಆಚರಿಸಿದ ಶಾಸಕಿ ಸೌಮ್ಯ ರೆಡ್ಡಿ

ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಪೌರಕಾಕರ್ಮಿಕರೊಂದಿಗೆ ಸ್ಥಳೀಯ ಗಣೇಶನ ದೇವಸ್ಥಾನದ ಬಳಿ ಗೋ‌ ಮಾತೆಗೆ ಪೂಜೆ ಸಲ್ಲಿಸಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

author img

By

Published : Jan 14, 2021, 7:58 PM IST

MLA Soumya Reddy celebrates Sankranthi along with civil workers
ಪೌರಕಾರ್ಮಿರೊಂದಿಗೆ ಸಂಕ್ರಾಂತಿ ಆಚರಿಸಿದ ಶಾಸಕಿ ಸೌಮ್ಯ ರೆಡ್ಡಿ

ಬೆಂಗಳೂರು: ಇಂದು ನಗರದೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ‌ ಮಾಡಿದ್ದು, ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಪೌರಕಾರ್ಮಿಕರೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಪೌರಕಾರ್ಮಿರೊಂದಿಗೆ ಸಂಕ್ರಾಂತಿ ಆಚರಿಸಿದ ಶಾಸಕಿ ಸೌಮ್ಯ ರೆಡ್ಡಿ

ಸ್ಥಳೀಯ ಗಣೇಶನ ದೇವಸ್ಥಾನದ ಬಳಿ ಗೋ‌ ಮಾತೆಗೆ ಪೂಜೆ ಸಲ್ಲಿಸಿದರು. ನಂತರ ತಯಾರಿಸಿದ್ದ ಸಿಹಿ ಮತ್ತು ಖಾರ ಪೊಂಗಲ್, ಎಳ್ಳು ಬೆಲ್ಲ, ಕಬ್ಬನ್ನು ರಾಸುಗಳಿಗೆ ತಿನ್ನಿಸಿದರು. ಆನಂತರ ಸುಮಾರು‌ 200ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಎಳ್ಳು-ಬೆಲ್ಲ, ಕಬ್ಬು ನೀಡಿ ಸಂಕ್ರಾಂತಿ ಹಬ್ಬದ ಶುಭಾಯಗಳನ್ನು ತಿಳಿಸಿದರು.

ಈ ವೇಳೆ ಶಾಸಕಿ‌ ಸೌಮ್ಯ ರೆಡ್ಡಿ ಮಾತನಾಡಿ, 2020ರ ವರ್ಷ ಎಲ್ಲರಿಗೂ ಸಂಕಟ ತಂದಿದೆ. ಎಷ್ಟೋ ಜನ‌ ಕೆಲಸ ಕಳೆದುಕೊಂಡು ಮನೆಯಲ್ಲೇ ಇರುವಂತಾಗಿದೆ. ಮುಂದಿನ ದಿನಗಳು ಎಲ್ಲರ ಬಾಳಲ್ಲೂ ಸಂತಸ ತರಲಿ ಮತ್ತು ಈ ಸಂಕ್ರಾಂತಿ ಹಬ್ಬ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು.‌ ಇವರಿಗೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ನಾಗರಾಜ್ ಸಾಥ್​ ನೀಡಿದರು.

ಬೆಂಗಳೂರು: ಇಂದು ನಗರದೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ‌ ಮಾಡಿದ್ದು, ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಪೌರಕಾರ್ಮಿಕರೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಪೌರಕಾರ್ಮಿರೊಂದಿಗೆ ಸಂಕ್ರಾಂತಿ ಆಚರಿಸಿದ ಶಾಸಕಿ ಸೌಮ್ಯ ರೆಡ್ಡಿ

ಸ್ಥಳೀಯ ಗಣೇಶನ ದೇವಸ್ಥಾನದ ಬಳಿ ಗೋ‌ ಮಾತೆಗೆ ಪೂಜೆ ಸಲ್ಲಿಸಿದರು. ನಂತರ ತಯಾರಿಸಿದ್ದ ಸಿಹಿ ಮತ್ತು ಖಾರ ಪೊಂಗಲ್, ಎಳ್ಳು ಬೆಲ್ಲ, ಕಬ್ಬನ್ನು ರಾಸುಗಳಿಗೆ ತಿನ್ನಿಸಿದರು. ಆನಂತರ ಸುಮಾರು‌ 200ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಎಳ್ಳು-ಬೆಲ್ಲ, ಕಬ್ಬು ನೀಡಿ ಸಂಕ್ರಾಂತಿ ಹಬ್ಬದ ಶುಭಾಯಗಳನ್ನು ತಿಳಿಸಿದರು.

ಈ ವೇಳೆ ಶಾಸಕಿ‌ ಸೌಮ್ಯ ರೆಡ್ಡಿ ಮಾತನಾಡಿ, 2020ರ ವರ್ಷ ಎಲ್ಲರಿಗೂ ಸಂಕಟ ತಂದಿದೆ. ಎಷ್ಟೋ ಜನ‌ ಕೆಲಸ ಕಳೆದುಕೊಂಡು ಮನೆಯಲ್ಲೇ ಇರುವಂತಾಗಿದೆ. ಮುಂದಿನ ದಿನಗಳು ಎಲ್ಲರ ಬಾಳಲ್ಲೂ ಸಂತಸ ತರಲಿ ಮತ್ತು ಈ ಸಂಕ್ರಾಂತಿ ಹಬ್ಬ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು.‌ ಇವರಿಗೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ನಾಗರಾಜ್ ಸಾಥ್​ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.