ETV Bharat / state

ಚಾರ್ಮಾಡಿ ಘಾಟ್​ನಲ್ಲಿ ಭೂ ಕುಸಿತ: ಸಚಿವ ಸಿ.ಟಿ.ರವಿ ಭೇಟಿ, ಪರಿಶೀಲನೆ

ಚಾರ್ಮಾಡಿ ಘಾಟ್ ರಸ್ತೆಯಲ್ಲಿ 6 ಕ್ಕೂ ಹೆಚ್ಚು ಭಾಗದಲ್ಲಿ ಭೂ ಕುಸಿತ ಉಂಟಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

author img

By

Published : Aug 8, 2020, 8:55 PM IST

Updated : Aug 8, 2020, 9:00 PM IST

ಚಾರ್ಮಾಡಿ ಘಾಟ್​ಗೆ ಸಚಿವ ಸಿ.ಟಿ.ರವಿ ಭೇಟಿ
ಚಾರ್ಮಾಡಿ ಘಾಟ್​ಗೆ ಸಚಿವ ಸಿ.ಟಿ.ರವಿ ಭೇಟಿ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ, ಹಲವಾರು ಅವಘಡಗಳು ಸೃಷ್ಟಿಯಾಗಿವೆ. ಭೂ ಕುಸಿತ ಸಂಭವಿಸಿದ್ದು, ಮಲೆನಾಡಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭೂ ಕುಸಿತ ಸ್ಥಳಕ್ಕೆ ಸಚಿವ ಸಿ.ಟಿ.ರವಿ ಭೇಟಿ

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ 6 ಕ್ಕೂ ಹೆಚ್ಚು ಭಾಗದಲ್ಲಿ ಭೂ ಕುಸಿತ ಉಂಟಾಗಿರುವ ಜಾಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಭೂ ಕುಸಿತದಿಂದ ಬಿದ್ದಿರುವಂತಹ ಮಣ್ಣನ್ನು ಶೀಘ್ರವಾಗಿ ತೆರವು ಮಾಡುವಂತೆ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗೆ ಸೂಚನೆ ನೀಡಿದರು.

ಆಗಸ್ಟ್ 11 ರ ವರೆಗೂ ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧ ಮಾಡಲಾಗಿದೆ. ಈ ವೇಳೆ ಭೂಕುಸಿತದಿಂದ ಅಪ್ಪಳಿಸಿದ ಮಣ್ಣನ್ನು ತೆರವು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ, ಹಲವಾರು ಅವಘಡಗಳು ಸೃಷ್ಟಿಯಾಗಿವೆ. ಭೂ ಕುಸಿತ ಸಂಭವಿಸಿದ್ದು, ಮಲೆನಾಡಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭೂ ಕುಸಿತ ಸ್ಥಳಕ್ಕೆ ಸಚಿವ ಸಿ.ಟಿ.ರವಿ ಭೇಟಿ

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ 6 ಕ್ಕೂ ಹೆಚ್ಚು ಭಾಗದಲ್ಲಿ ಭೂ ಕುಸಿತ ಉಂಟಾಗಿರುವ ಜಾಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಭೂ ಕುಸಿತದಿಂದ ಬಿದ್ದಿರುವಂತಹ ಮಣ್ಣನ್ನು ಶೀಘ್ರವಾಗಿ ತೆರವು ಮಾಡುವಂತೆ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗೆ ಸೂಚನೆ ನೀಡಿದರು.

ಆಗಸ್ಟ್ 11 ರ ವರೆಗೂ ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧ ಮಾಡಲಾಗಿದೆ. ಈ ವೇಳೆ ಭೂಕುಸಿತದಿಂದ ಅಪ್ಪಳಿಸಿದ ಮಣ್ಣನ್ನು ತೆರವು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.

Last Updated : Aug 8, 2020, 9:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.