ETV Bharat / state

ಶೃಂಗೇರಿಯಲ್ಲಿ ವಿಜೃಂಭಣೆಯ ಲಕ್ಷದೀಪೋತ್ಸವ... ಹರಿದು ಬಂದ ಜನಸಾಗರ - ಚಿಕ್ಕಮಗಳೂರು ಶಾರದ ಶ್ರೀಮಠ

ಚಿಕ್ಕಮಗಳೂರು ಜಿಲ್ಲೆಯ ಶಾರದ ಪೀಠದಲ್ಲಿ ಕಾರ್ತಿಕ ಹುಣ್ಣಿಮೆ ಹಿನ್ನಲೆ ಶಾರದ ಶ್ರೀಮಠದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ತುಂಬಾ ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಲಕ್ಷದೀಪೋತ್ಸವ
author img

By

Published : Nov 15, 2019, 5:41 AM IST

ಚಿಕ್ಕಮಗಳೂರು: ಜಿಲ್ಲೆಯ ಶಾರದ ಪೀಠದಲ್ಲಿ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಶಾರದ ಮಠದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ವಿಧುಶೇಖರಭಾರತೀ ಸ್ವಾಮಿ ಅವರು ದೀಪೋತ್ಸವಕ್ಕೆ ಚಾಲನೆ ನೀಡಿದರು. ಶಾರದ ಪೀಠ ಮಠದಿಂದ ಮುಖ್ಯ ಬೀದಿಯಲ್ಲಿ ಸಾಗಿ ಮಲಹಾನಿಕರೇಶ್ವರ ದೇವಾಲಯಕ್ಕೆ ಜಗದ್ಗುರು ವಿಧುಶೇಖರಭಾರತೀ ಸ್ವಾಮೀಜಿಗಳು ಮೆರವಣಿಗೆಯಲ್ಲಿ ಸಾಗಿದರು. ದೇವಸ್ಥಾನ ಆವರಣದಲ್ಲಿರುವ ಬೆಟ್ಟದ ಸ್ತಂಭಗಣಪತಿ, ಭವಾನಿ ಅಮ್ಮನವರು ಹಾಗೂ ಮಲಹಾನಿಕರೇಶ್ವರ ಸ್ವಾಮಿಯ ಸನ್ನಿಧಿಗೆ ರಂಗಪೂಜೆ, ಅಷ್ಟವಧನ ಸೇವೆ ಸೇರಿದಂತೆ ವಿಶೇಷಪೂಜೆ ನೆರವೇರಿಸಲಾಯಿತು.

ಶೃಂಗೇರಿಯಲ್ಲಿ ವಿಜೃಂಭಣೆಯ ಲಕ್ಷದೀಪೋತ್ಸವ

ಮಠದ ಆವರಣದಲ್ಲಿರುವ ಎಲ್ಲಾ ದೇವಾಲಯಗಳು ಹಾಗೂ ಮಠದ ಮುಖ್ಯ ಬೀದಿಯ ಎರಡೂ ಭಾಗದಲ್ಲಿ ಭಕ್ತರು ಸಾವಿರಾರೂ ದೀಪಗಳನ್ನು ಹಚ್ಚಿ ಅಷ್ಟವಧನ ಸೇವೆ, ಮಹಾ ಮಂಗಳಾರತಿ ಪೂಜೆ ನೆರವೇರಿಸಿದರು. ನಂತರ ತುಂಗಾನದಿಯ ದಡಕ್ಕೆ ತೆರಳಿ ಮಲಹಾನಿಕರೇಶ್ವರಸ್ವಾಮಿ, ಶಾರದಾಂಬೆ ಹಾಗೂ ವಿದ್ಯಾಶಂಕರ ಉತ್ಸವ ಮೂರ್ತಿಗಳನ್ನು ತರಲಾಯಿತು.

ಶಾರದ ಪೀಠದಲ್ಲಿರುವ ಶಾರದಾಂಬೆ ಹಾಗೂ ವಿದ್ಯಾಶಂಕರ ಮೂರ್ತಿಗಳಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಆರ್ಚಕರಿಂದ ತುಂಗಾ ನದಿಗೆ ಉತ್ತರ ಭಾರತ ಶೈಲಿಯಲ್ಲಿ ಆರತಿ ಮಾಡಿದರು. ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಅವರು ತೆಪ್ಪೋತ್ಸವ ಕಾರ್ಯಕ್ರಮವನ್ನು ನೆರವೇರಿಸಿದರು.

ಚಿಕ್ಕಮಗಳೂರು: ಜಿಲ್ಲೆಯ ಶಾರದ ಪೀಠದಲ್ಲಿ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಶಾರದ ಮಠದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ವಿಧುಶೇಖರಭಾರತೀ ಸ್ವಾಮಿ ಅವರು ದೀಪೋತ್ಸವಕ್ಕೆ ಚಾಲನೆ ನೀಡಿದರು. ಶಾರದ ಪೀಠ ಮಠದಿಂದ ಮುಖ್ಯ ಬೀದಿಯಲ್ಲಿ ಸಾಗಿ ಮಲಹಾನಿಕರೇಶ್ವರ ದೇವಾಲಯಕ್ಕೆ ಜಗದ್ಗುರು ವಿಧುಶೇಖರಭಾರತೀ ಸ್ವಾಮೀಜಿಗಳು ಮೆರವಣಿಗೆಯಲ್ಲಿ ಸಾಗಿದರು. ದೇವಸ್ಥಾನ ಆವರಣದಲ್ಲಿರುವ ಬೆಟ್ಟದ ಸ್ತಂಭಗಣಪತಿ, ಭವಾನಿ ಅಮ್ಮನವರು ಹಾಗೂ ಮಲಹಾನಿಕರೇಶ್ವರ ಸ್ವಾಮಿಯ ಸನ್ನಿಧಿಗೆ ರಂಗಪೂಜೆ, ಅಷ್ಟವಧನ ಸೇವೆ ಸೇರಿದಂತೆ ವಿಶೇಷಪೂಜೆ ನೆರವೇರಿಸಲಾಯಿತು.

ಶೃಂಗೇರಿಯಲ್ಲಿ ವಿಜೃಂಭಣೆಯ ಲಕ್ಷದೀಪೋತ್ಸವ

ಮಠದ ಆವರಣದಲ್ಲಿರುವ ಎಲ್ಲಾ ದೇವಾಲಯಗಳು ಹಾಗೂ ಮಠದ ಮುಖ್ಯ ಬೀದಿಯ ಎರಡೂ ಭಾಗದಲ್ಲಿ ಭಕ್ತರು ಸಾವಿರಾರೂ ದೀಪಗಳನ್ನು ಹಚ್ಚಿ ಅಷ್ಟವಧನ ಸೇವೆ, ಮಹಾ ಮಂಗಳಾರತಿ ಪೂಜೆ ನೆರವೇರಿಸಿದರು. ನಂತರ ತುಂಗಾನದಿಯ ದಡಕ್ಕೆ ತೆರಳಿ ಮಲಹಾನಿಕರೇಶ್ವರಸ್ವಾಮಿ, ಶಾರದಾಂಬೆ ಹಾಗೂ ವಿದ್ಯಾಶಂಕರ ಉತ್ಸವ ಮೂರ್ತಿಗಳನ್ನು ತರಲಾಯಿತು.

ಶಾರದ ಪೀಠದಲ್ಲಿರುವ ಶಾರದಾಂಬೆ ಹಾಗೂ ವಿದ್ಯಾಶಂಕರ ಮೂರ್ತಿಗಳಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಆರ್ಚಕರಿಂದ ತುಂಗಾ ನದಿಗೆ ಉತ್ತರ ಭಾರತ ಶೈಲಿಯಲ್ಲಿ ಆರತಿ ಮಾಡಿದರು. ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಅವರು ತೆಪ್ಪೋತ್ಸವ ಕಾರ್ಯಕ್ರಮವನ್ನು ನೆರವೇರಿಸಿದರು.

Intro:Kn_Ckm_01_Srungeri_tepostava_Spl_pkg_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಶಾರದ ಫೀಠದಲ್ಲಿ ಕಾರ್ತಿಕ ಹುಣ್ಣಿಮೆ ಹಿನ್ನಲೆ ಶಾರದ ಶ್ರೀ ಮಠದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿಂದ ನೆರವೇರಿತು. ಲಕ್ಷದೀಪೋತ್ಸವದ ಅಂಗವಾಗಿ ಸಾಂಪ್ರಾದಾಯಿಕ ಪೂಜಾರಾಧನೆಗಳು,ಶ್ರೀರುದ್ರಯಾಗದ ಪೂರ್ಣಾಹುತಿ ಮುಂತಾದ ಧಾರ್ಮಿಕ ಕಾರ್ಯಕ್ರಮ ಹಾಗೂ ತೆಪ್ಪೋತ್ಸವ ನೆರೆವೆರಿದ ಕುರಿತ ಒಂದು ವಿಶೇಷ ವರದಿ ಇಲ್ಲಿದೇ ನೋಡಿ.....

ಹೌದು ಶೃಂಗೇರಿ ಶಾರದ ಫೀಠದ ಶ್ರೀಮಠ ದಿಂದ ಮುಖ್ಯ ಬೀದಿಯಲ್ಲಿ ಸಾಗಿ ಶ್ರೀಮಲಹಾನಿಕರೇಶ್ವರ ದೇವಾಲಯಕ್ಕೆ ಜಗದ್ಗುರು ಶ್ರೀ ವಿಧುಶೇಖರಬಾರತೀ ಸ್ವಾಮಜೀಗಳು ಅವರು ಕಾಲ್ನಡಿಗೆಯಿಂದಾ ಬಂದೂ ದೇವಸ್ಥಾನದ ಆವರಣದಲ್ಲಿರುವ ಬೆಟ್ಟದ ಸ್ತಂಭಗಣಪತಿ, ಶ್ರೀಭವಾನಿ ಅಮ್ಮ ನವರು ಹಾಗೂ ಶ್ರೀ ಮಲಹಾನಿಕರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ರಂಗಪೂಜೆ, ಅಷ್ಟವಧಾನ ಸೇವೆ ಮುಂತಾದ ವಿಶೇಷಪೂಜೆ ನೆರವೇರಿಲಾಯಿತು. ನಂತರ ಧ್ವಜಸ್ತಂಭದ ಮುಂಭಾಗದಲ್ಲಿ ಪರಕಾಳಿಯನ್ನು ಸುಡಲಾಯಿತು. ಪ್ರಥಮ ದೀಪವನ್ನು ಬೆಳಗಿಸಿ ಶ್ರೀ ವಿಧುಶೇಖರಭಾರತೀ ಸ್ವಾಮಿ ಅವರು ದೀಪೋತ್ಸವಕ್ಕೆ ಚಾಲನೆ ನೀಡಿದರು.

ಮಠದ ಆವರಣದಲ್ಲಿರುವ ಎಲ್ಲಾ ದೇವಾಲಯಗಳು ಹಾಗೂ ನಗರದಲ್ಲಿರುವ ಶ್ರೀ ಮಲಹಾನಿಕರೇಶ್ವರ ದೇವಾಲಯ ಹಾಗೂ ಮುಖ್ಯ ಬೀದಿ ಶ್ರೀ ಮಠದ ಎರಡೂ ಭಾಗದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದಾ ಸಾವಿರಾರೂ ದೀಪಗಳನ್ನು ಹಚ್ಚಿ ನಂತರ ಅಷ್ಟವಧಾನಸೇವೆ, ಮಹಾಮಂಗಳಾರತಿ ಪೂಜೆಗಳು ಮಾಡಿದರು. ನಂತರ ತುಂಗಾನದಿಯ ದಡಕ್ಕೆ ತೆರಳಿ ಶ್ರೀಮಲಹಾನಿಕರೇಶ್ವರಸ್ವಾಮಿ, ಶ್ರೀಶಾರದಾಂಬೆ ಹಾಗೂ ಶ್ರೀವಿದ್ಯಾಶಂಕರ ಉತ್ಸವಮೂರ್ತಿಗಳನ್ನು ತರಲಾಯಿತು.

ಒಟ್ಟಾರೆಯಾಗಿ ಶೃಂಗೇರಿಯ ಶಾರದ ಪೀಠದಲ್ಲಿ ಶ್ರೀಶಾರದಾಂಬೆ ಹಾಗೂ ಶ್ರೀ ವಿದ್ಯಾಶಂಕರ ಮೂರ್ತಿಗಳಿಗೆ ಪೂಜೆ ಮಾಡಿ ತೆಪೋತ್ಸವ ಮಾಡಿ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಂತರ ಆರ್ಚಕರಿಂದ ತುಂಗಾ ನದಿಗೆ ಉತ್ತರ ಭಾರತದ ಶೈಲಿಯಲ್ಲಿ ಆರತಿ ಮಾಡಿ ಜಗದ್ಗುರು ಶ್ರೀಭಾರತೀತೀರ್ಥ ಸ್ವಾಮೀಜಿ ಹಾಗೂ ಜಗದ್ಗುರು ಶ್ರೀವಿಧುಶೇಖರಭಾರತೀ ಅವರು ತೆಪ್ಪೋತ್ಸವ ಕಾರ್ಯಕ್ರಮವನ್ನು ನೆರೆವೆರಿಸಿದರು....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.