ETV Bharat / state

ಕಾಫಿನಾಡಿನ ಪ್ರಕೃತಿ ಸೊಬಗಿಗೆ ಮರುಳಾದ ಬಹು ಭಾಷಾ ನಟಿ - ಚಿಕ್ಕಮಗಳೂರು

ಕಾಫಿನಾಡಿನ ಪ್ರಕೃತಿ ಸೊಬಗು ಸವಿಯುತ್ತಿರುವ ಬಹು ಭಾಷಾನಟಿ ಸಮೀರಾ ರೆಡ್ಡಿ. ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಸ. ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್.

Sameera reddy
author img

By

Published : Oct 1, 2019, 6:09 AM IST

Updated : Oct 1, 2019, 10:43 AM IST

ಚಿಕ್ಕಮಗಳೂರು: ಬಹು ಭಾಷಾ ನಟಿ ಸಮೀರಾ ರೆಡ್ಡಿ ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದು, ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ.

ಜಿಲ್ಲೆಗೆ ಆಗಮಿಸಿರುವ ನಟಿ ಸುತ್ತ ಮುತ್ತಲಿರುವ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ರಾಜ್ಯದಲ್ಲಿಯೇ ಅತ್ಯಂತ ಎತ್ತರ ಶಿಖರ ಎಂದು ಖ್ಯಾತಿ ಪಡೆದಿರುವ ಮುಳ್ಳಯ್ಯನಗಿರಿಗೆ ಭೇಟಿ ನೀಡಿದ್ದಾರೆ. ಮೊಬೈಲ್​​ನಲ್ಲಿ ಸೆಲ್ಫಿ ವಿಡಿಯೋ ಮಾಡುವ ಜೊತೆಗೆ ಪ್ರಕೃತಿ ಸೊಬಗನ್ನು ವರ್ಣಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಕಾಫಿನಾಡಿನ ಪ್ರಕೃತಿ ಸೊಬಗಿಗೆ ಮರುಳಾದ ಬಹು ಭಾಷಾ ನಟಿ

ಇನ್ನೂ ಜಿಲ್ಲೆಯ ಸೊಬಗನ್ನು ಹಾಡಿ ಹೊಗಳಿರುವ ಸಮೀರಾ ಇದೊಂದು ಅತ್ಯಂತ ಸುಂದರ ಸ್ಥಳವಾಗಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ ಮಾತೇ ಬರುತ್ತಿಲ್ಲ. ಪ್ರವಾಸಕ್ಕೆ ಇದೊಂದು ಅತ್ಯಂತ ಸುಂದರ ತಾಣ ಎಂದು ತಮ್ಮ ಅನುಭವವನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಚಿಕ್ಕಮಗಳೂರು: ಬಹು ಭಾಷಾ ನಟಿ ಸಮೀರಾ ರೆಡ್ಡಿ ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದು, ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ.

ಜಿಲ್ಲೆಗೆ ಆಗಮಿಸಿರುವ ನಟಿ ಸುತ್ತ ಮುತ್ತಲಿರುವ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ರಾಜ್ಯದಲ್ಲಿಯೇ ಅತ್ಯಂತ ಎತ್ತರ ಶಿಖರ ಎಂದು ಖ್ಯಾತಿ ಪಡೆದಿರುವ ಮುಳ್ಳಯ್ಯನಗಿರಿಗೆ ಭೇಟಿ ನೀಡಿದ್ದಾರೆ. ಮೊಬೈಲ್​​ನಲ್ಲಿ ಸೆಲ್ಫಿ ವಿಡಿಯೋ ಮಾಡುವ ಜೊತೆಗೆ ಪ್ರಕೃತಿ ಸೊಬಗನ್ನು ವರ್ಣಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಕಾಫಿನಾಡಿನ ಪ್ರಕೃತಿ ಸೊಬಗಿಗೆ ಮರುಳಾದ ಬಹು ಭಾಷಾ ನಟಿ

ಇನ್ನೂ ಜಿಲ್ಲೆಯ ಸೊಬಗನ್ನು ಹಾಡಿ ಹೊಗಳಿರುವ ಸಮೀರಾ ಇದೊಂದು ಅತ್ಯಂತ ಸುಂದರ ಸ್ಥಳವಾಗಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ ಮಾತೇ ಬರುತ್ತಿಲ್ಲ. ಪ್ರವಾಸಕ್ಕೆ ಇದೊಂದು ಅತ್ಯಂತ ಸುಂದರ ತಾಣ ಎಂದು ತಮ್ಮ ಅನುಭವವನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

Intro:Kn_Ckm_01_Sameera reddy_av_7202347Body:ಚಿಕ್ಕಮಗಳೂರು :-

ಬಹು ಭಾಷ ನಟಿ ಸಮೀರಾ ರೆಡ್ಡಿ ಚಿಕ್ಕಮಗಳೂರಿಗೆ ಪ್ರವಾಸಕ್ಕಾಗಿ ಆಗಮಿಸಿದ್ದಾರೆ. ಕಳೆದ ಎರಡೂ ದಿನಗಳಿಂದಾ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿರುವ ನಟಿ ಸಮೀರಾ ರೆಡ್ಡಿ ತನ್ನ ಇಬ್ಬರೂ ಮಕ್ಕಳನ್ನು ಕರೆದುಕೊಂಡು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ.ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಆಗಮಿಸಿರುವ ಇವರು ತನ್ನ ಮಗನ ಜೊತೆ ಒಂದು ವಿಡಿಯೋದಲ್ಲಿ ಚಿಕ್ಕಮಗಳೂರಿನ ಕಾಫೀ ತೋಟಗಳ ವಾತವರಣದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ತನ್ನ ಮಗನ ಇಲ್ಲಿನ ಆಹಾರದ ಬಗ್ಗೆಯೂ ಮಾತನಾಡಿದ್ದಾನೆ.ನಂತರ ಎರಡನೇ ವಿಡಿಯೋದಲ್ಲಿ ತನ್ನ ಎರಡನೇ ಮಗುವನ್ನು ತನ್ನ ಎದೆಗೆ ಸುತ್ತಿಕೊಂಡು ರಾಜ್ಯದಲ್ಲಿಯೇ ಅತ್ಯಂತ ಎತ್ತರ ಶಿಖರ ಎಂದೂ ಖ್ಯಾತಿ ಪಡೆದಿರುವ ಮುಳ್ಳಯ್ಯನ ಗಿರಿ ಗಿರಿಯನ್ನು ನೆಡೆದುಕೊಂಡೇ ಸುಮಾರು 500 ಮೆಟ್ಟಿಲುಗಳನ್ನು ಏರಿದ ನಂತರ ಸುಸ್ತಾಗಿ ಹೋಗಿದ್ದಾರೆ. ಅಲ್ಲದೇ ತನ್ನ ಮೊಬೈಲ್ ನಲ್ಲಿ ಸೆಲ್ವಿ ವಿಡಿಯೋ ಮಾಡುವ ವೇಳೆ ಮುಳ್ಳಯ್ಯನ ಗಿರಿಯ ಪ್ರಕೃತಿಯ ಸೊಬಗನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅತ್ಯಂತ ಸುಂದರ ಸ್ಥಳವಾಗಿದ್ದು ಇಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ ಹಾಡಿ ಹೋಗಳಿರುವ ವಿಡಿಯೋ ಈಗ ಚಿಕ್ಕಮಗಳೂರಿನ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು ಚಿಕ್ಕಮಗಳೂರು ಜಿಲ್ಲೆಯ ಬಗ್ಗೆ ಸಮೀರಾ ರೆಡ್ಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
Last Updated : Oct 1, 2019, 10:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.