ETV Bharat / state

ನಿಶ್ಚಿತಾರ್ಥದ ದಿನವೇ ಸಸಿ ನೆಟ್ಟು ಪರಿಸರ ಪ್ರೇಮ... ಮದುವೆವರೆಗೂ ಪೋಷಣೆಯ ಹೊಣೆ ಹೊತ್ತ ಜೋಡಿ

ನಿಶ್ಚಿತಾರ್ಥ ಮತ್ತು ಮದುವೆಯ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ತಮ್ಮ ನೆಂಟರು, ಸಂಬಂಧಿಗಳೊಂದಿಗೆ ಸಂಭ್ರಮದ ಖುಷಿಯಲ್ಲಿರುತ್ತಾರೆ. ಆದ್ರೆ ಯುವಜೋಡಿಯೊಂದು ನಿಶ್ಚಿತಾರ್ಥದ ದಿನವೇ ವಿಶಿಷ್ಟತೆ ಮೆರೆದಿದೆ. ಸಸಿ ನೆಟ್ಟು, ಪರಿಸರ ಪ್ರೇಮ ವ್ಯಕ್ತಪಡಿಸುವ ಮೂಲಕ ನಿಶ್ಚಿತಾರ್ಥವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಿದ್ದಾರೆ.

author img

By

Published : Jun 14, 2019, 11:59 AM IST

ನಿಶ್ಚಿತಾರ್ಥ ದಿನದಂದು ಪರಿಸರ ಪ್ರೇಮಮೆರದ ಜೋಡಿ

ಚಿಕ್ಕಮಗಳೂರು: ಮದುವೆಗೂ ಮುನ್ನ ಯುವಜೋಡಿಯೊಂದು ತಮ್ಮ ನಿಶ್ಚಿತಾರ್ಥದ ದಿನ ವಿಶಿಷ್ಟವಾಗಿ ಸಂಭ್ರಮಿಸಿದೆ. ಯುವಕ-ಯುವತಿ ಸಸಿ ನೆಟ್ಟು, ಪರಿಸರ ಪ್ರೇಮ ಮೆರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ನಿಶ್ಚಿತಾರ್ಥ ದಿನದಂದು ಪರಿಸರ ಪ್ರೇಮಮೆರದ ಜೋಡಿ

ಇಂದು ನಗರದ ರಾಮನಹಳ್ಳಿಯಲ್ಲಿ ಮಂಗಳೂರು ಮೂಲದ ರಂಜು ಹಾಗೂ ರಾಮನಹಳ್ಳಿಯ ಕಾವ್ಯ ಜೊತೆ ನಿಶ್ಚಿತಾರ್ಥ ನೆರವೇರಿತು. ಒಬ್ಬರಿಗೊಬ್ಬರು ಉಂಗುರವನ್ನು ಬದಾಲವಣೆ ಮಾಡಿಕೊಂಡ ನಂತರ ಈ ಜೋಡಿ ಒಟ್ಟಿಗೆ ನಗರದ ಕೋರ್ಟ್ ಆವರಣದ ಪಕ್ಕ ಇರುವ ಗಾಂಧೀ ಪಾರ್ಕ್​ನಲ್ಲಿ ಸಸಿ ನೆಟ್ಟರು. ಅಲ್ಲದೆ ತಮ್ಮ ಮದುವೆ ಆಗುವವರೆಗೂ ಇದರ ಪಾಲನೆ ಪೋಷಣೆ ಮಾಡಿ ಈ ಗಿಡವನ್ನು ಬೆಳೆಸುತ್ತೇವೆ ಎಂದು ವಾಗ್ದಾನ ಮಾಡಿದರು. ಅಲ್ಲದೆ, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅದಕ್ಕೆ ಮಣ್ಣು ಹಾಕಿ ನೀರನ್ನು ಹಾಕಿ, ಅತ್ಯಂತ ಮಹತ್ವದ ಕಾರ್ಯ ಮಾಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಗಿಡ ನೆಟ್ಟು ಪರಿಸರ ಉಳಿಸಿ ಅದನ್ನು ಬೆಳೆಸಿ ಎಂಬ ಸಂದೇಶವನ್ನು ಸಮಾಜಕ್ಕೆ ಈ ನೂತನ ವಧು -ವರ ನೀಡಿದ್ದಾರೆ.

ಚಿಕ್ಕಮಗಳೂರು: ಮದುವೆಗೂ ಮುನ್ನ ಯುವಜೋಡಿಯೊಂದು ತಮ್ಮ ನಿಶ್ಚಿತಾರ್ಥದ ದಿನ ವಿಶಿಷ್ಟವಾಗಿ ಸಂಭ್ರಮಿಸಿದೆ. ಯುವಕ-ಯುವತಿ ಸಸಿ ನೆಟ್ಟು, ಪರಿಸರ ಪ್ರೇಮ ಮೆರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ನಿಶ್ಚಿತಾರ್ಥ ದಿನದಂದು ಪರಿಸರ ಪ್ರೇಮಮೆರದ ಜೋಡಿ

ಇಂದು ನಗರದ ರಾಮನಹಳ್ಳಿಯಲ್ಲಿ ಮಂಗಳೂರು ಮೂಲದ ರಂಜು ಹಾಗೂ ರಾಮನಹಳ್ಳಿಯ ಕಾವ್ಯ ಜೊತೆ ನಿಶ್ಚಿತಾರ್ಥ ನೆರವೇರಿತು. ಒಬ್ಬರಿಗೊಬ್ಬರು ಉಂಗುರವನ್ನು ಬದಾಲವಣೆ ಮಾಡಿಕೊಂಡ ನಂತರ ಈ ಜೋಡಿ ಒಟ್ಟಿಗೆ ನಗರದ ಕೋರ್ಟ್ ಆವರಣದ ಪಕ್ಕ ಇರುವ ಗಾಂಧೀ ಪಾರ್ಕ್​ನಲ್ಲಿ ಸಸಿ ನೆಟ್ಟರು. ಅಲ್ಲದೆ ತಮ್ಮ ಮದುವೆ ಆಗುವವರೆಗೂ ಇದರ ಪಾಲನೆ ಪೋಷಣೆ ಮಾಡಿ ಈ ಗಿಡವನ್ನು ಬೆಳೆಸುತ್ತೇವೆ ಎಂದು ವಾಗ್ದಾನ ಮಾಡಿದರು. ಅಲ್ಲದೆ, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅದಕ್ಕೆ ಮಣ್ಣು ಹಾಕಿ ನೀರನ್ನು ಹಾಕಿ, ಅತ್ಯಂತ ಮಹತ್ವದ ಕಾರ್ಯ ಮಾಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಗಿಡ ನೆಟ್ಟು ಪರಿಸರ ಉಳಿಸಿ ಅದನ್ನು ಬೆಳೆಸಿ ಎಂಬ ಸಂದೇಶವನ್ನು ಸಮಾಜಕ್ಕೆ ಈ ನೂತನ ವಧು -ವರ ನೀಡಿದ್ದಾರೆ.

Intro:R_Kn_Ckm_05_13_Youngagement_Rajkumar_Ckm_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ನಗರದಲ್ಲಿ ಮದುವೆಯ ನಿಶ್ಚಿತಾರ್ಥ ಮಾಡಿಕೊಂಡು ವಧು ಹಾಗೂ ವರ ಅತ್ಯಂತ ಮಹತ್ವದ ಕಾರ್ಯ ಮಾಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂದು ಚಿಕ್ಕಮಗಳೂರು ನಗರದ ರಾಮನಹಳ್ಳಿಯಲ್ಲಿ ಮಂಗಳೂರು ಮೂಲದ ರಂಜು ಎಂಬ ವ್ಯಕ್ತಿಗೆ ರಾಮನಹಳ್ಳಿಯಲ್ಲಿರುವ ಕಾವ್ಯ ಜೊತೆ ವಿವಾಹದ ನಿಶ್ಚಿತಾರ್ಥ ಏರ್ಪಾಡು ಮಾಡಲಾಗಿತ್ತು. ಒಬ್ಬರಿಗೊಬ್ಬರು ಉಂಗುರವನ್ನು ಬದಾಲವಣೆ ಮಾಡಿಕೊಂಡ ನಂತರ ವಧು ವರ ಇಬ್ಬರೂ ಸೇರಿ ನಗರದ ಕೋರ್ಟ್ ಆವರಣದ ಪಕ್ಕ ಇರುವಂತಹ ಗಾಂಧೀ ಪಾರ್ಕ್ ನಲ್ಲಿ ಗಿಡ ನೆಟ್ಟು ನಮ್ಮ ಮದುವೆ ಆಗುವ ವರೆಗೂ ಇದರ ಪಾಲನೆ ಪೋಷಣೆ ನಾವು ಮಾಡಿ ಈ ಗಿಡವನ್ನು ಬೆಳೆಸುತ್ತೇವೆ ಎಂದೂ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗಿಡ ನೆಟ್ಟು ಅದಕ್ಕೆ ಮಣ್ಣು ಹಾಕಿ ನೀರನ್ನು ಸಿಂಪರಣೆ ಮಾಡಿ ತುಂಬಾ ವಿಶೇಷ ವಾಗಿ ತಮ್ಮ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅರ್ಥ ತಂದುಕೊಂಡಿದ್ದಾರೆ.ಈ ಮೂಲಕ ಗಿಡ ನೆಟ್ಟು ಪರಿಸರ ಉಳಿಸಿ ಅದನ್ನು ಬೆಳೆಸಿ ಎಂಬ ಸಂದೇಶವನ್ನು ಸಮಾಜಕ್ಕೆ ಈ ನೂತನ ವಧು ವರ ನೀಡಿದ್ದಾರೆ.......

Conclusion:ರಾಜಕುಮಾರ್......
ಈ ಟಿವಿ ಭಾರತ್.....
ಚಿಕ್ಕಮಗಳೂರು.......
ETV Bharat Logo

Copyright © 2024 Ushodaya Enterprises Pvt. Ltd., All Rights Reserved.