ETV Bharat / state

ಮುಂದುವರೆದ ರೈತರ ಆತ್ಮಹತ್ಯೆ: ನೆರೆ ಪರಿಹಾರ ನೀಡದ ಕ್ರಮ ಖಂಡಿಸಿ ಕಳಸ ಬಂದ್​

author img

By

Published : Oct 3, 2019, 1:54 PM IST

Updated : Oct 3, 2019, 6:58 PM IST

ನೆರೆ ಪರಿಹಾರ ಬಾರದ ಹಿನ್ನೆಲೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಮೂಡಿಗೆರೆ ತಾಲೂಕಿನ ಕಳಸ ಬಂದ್ ಮಾಡಿ ಜನರು ಪ್ರತಿಭಟನೆ ನಡೆಸಿದರು.

ಮುಂದುವರೆದ ರೈತರ ಆತ್ಮಹತ್ಯೆ ಖಂಡಿಸಿ ಕಳಸ ಬಂದ್​

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನೆರೆ ಸಂತ್ರಸ್ತ ರೈತರಿಗೆ ಹಾಗೂ ಜನರಿಗೆ ಪರಿಹಾರ ಬಾರದ ಕಾರಣ ಕಳಸ ತಾಲೂಕಿನಲ್ಲಿ ಮನನೊಂದು ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನಲೆಯಲ್ಲಿ, ಸಾರ್ವಜನಿಕರು ಮೂಡಿಗೆರೆ ತಾಲೂಕಿನ ಕಳಸ ಬಂದ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಅಂಗಡಿ-ಮುಂಗಟ್ಟು ಬಂದ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಗದ್ದೆ ಗ್ರಾಮದಲ್ಲಿ ರೈತನೋರ್ವ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಇನ್ನೋರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದು, ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆಯೆಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರೆದ ರೈತರ ಆತ್ಮಹತ್ಯೆ ಖಂಡಿಸಿ ಕಳಸ ಬಂದ್​

ನೆರೆ ಪರಿಹಾರ ವಿಳಂಬ: ಚಿಕ್ಕಮಗಳೂರಲ್ಲಿ ರೈತ ಆತ್ಮಹತ್ಯೆ

ಸಚಿವರು, ಶಾಸಕರು, ಸಿಎಂ ಭೇಟಿ ನಾಮಕಾವಸ್ತೆಗಷ್ಟೇ ಎಂಬಂತಾಗಿದ್ದು, ಕಳಸದ ಬಹುತೇಕ ಭಾಗ ಮಹಾ ಮಳೆಯಿಂದ ತೀವ್ರ ಸಂಕಷ್ಟಕ್ಕೀಡಾಗಿದೆ. ಸರ್ಕಾರದ ಪರಿಹಾರ ಇನ್ನೂ ಮರಿಚಿಕೆ ಆಗಿದೆ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನೆರೆ ಸಂತ್ರಸ್ತ ರೈತರಿಗೆ ಹಾಗೂ ಜನರಿಗೆ ಪರಿಹಾರ ಬಾರದ ಕಾರಣ ಕಳಸ ತಾಲೂಕಿನಲ್ಲಿ ಮನನೊಂದು ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನಲೆಯಲ್ಲಿ, ಸಾರ್ವಜನಿಕರು ಮೂಡಿಗೆರೆ ತಾಲೂಕಿನ ಕಳಸ ಬಂದ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಅಂಗಡಿ-ಮುಂಗಟ್ಟು ಬಂದ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಗದ್ದೆ ಗ್ರಾಮದಲ್ಲಿ ರೈತನೋರ್ವ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಇನ್ನೋರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದು, ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆಯೆಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರೆದ ರೈತರ ಆತ್ಮಹತ್ಯೆ ಖಂಡಿಸಿ ಕಳಸ ಬಂದ್​

ನೆರೆ ಪರಿಹಾರ ವಿಳಂಬ: ಚಿಕ್ಕಮಗಳೂರಲ್ಲಿ ರೈತ ಆತ್ಮಹತ್ಯೆ

ಸಚಿವರು, ಶಾಸಕರು, ಸಿಎಂ ಭೇಟಿ ನಾಮಕಾವಸ್ತೆಗಷ್ಟೇ ಎಂಬಂತಾಗಿದ್ದು, ಕಳಸದ ಬಹುತೇಕ ಭಾಗ ಮಹಾ ಮಳೆಯಿಂದ ತೀವ್ರ ಸಂಕಷ್ಟಕ್ಕೀಡಾಗಿದೆ. ಸರ್ಕಾರದ ಪರಿಹಾರ ಇನ್ನೂ ಮರಿಚಿಕೆ ಆಗಿದೆ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Intro:Kn_ckm_02_Kalasa bund_av_7202347Body:ಚಿಕ್ಕಮಗಳೂರು : -

ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆರೆ ಸಂತ್ರಸ್ತ ರೈತರಿಗೆ ಹಾಗೂ ಜನರಿಗೆ ಪರಿಹಾರ ಬಾರದೆ ಹಿನ್ನಲೆ ಕಳಸ ತಾಲೂಕಿನಲ್ಲಿ ಮನನೊಂದು ರೈತ ಆತ್ಮಹತ್ಯೆ ಶರಣಾಗಿದ್ದಾರೆ. ಈ ಹಿನ್ನಲೆ ಸಾರ್ವಜನಿಕರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಂದ್ ಮಾಡಿ ಸರ್ಕಾರದ ವಿರುದ್ಧ‌ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಯಂ ಘೋಷಿತ ಅಂಗಡಿ-ಮುಂಗಟ್ಟು ಬಂದ್ ಮಾಡಿದ್ದು ಒಂದೇ ತಿಂಗಳ ಅವಧಿಯಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಗದ್ದೆ ಗ್ರಾಮದಲ್ಲಿ ರೈತನೊರ್ವ ಶೂಟ್ ಔಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಇನ್ನೊಬ್ಬ ರೈತ ಆತ್ಮಹತ್ಯೆ ಗೆ ಶರಣಾಗಿರೋದು ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಸಚಿವರು, ಶಾಸಕರು, ಸಿಎಂ ಭೇಟಿ ನಾಮಕಾವಸ್ಥೆಗಷ್ಟೆ ಎಂಬಂತಾಗಿದ್ದು ಕಳಸದ ಬಹುತೇಕ ಭಾಗ ಮಹಾ ಮಳೆಯಿಂದ ತೀವ್ರ ಸಂಕಷ್ಟಕ್ಕೀಡಾಗಿದೆ. ಸರ್ಕಾರದ ಪರಿಹಾರ ಇನ್ನೂ ಮರೀಚಿಕೆ ಆಗಿದ್ದು ಕಳಸ ಬಂದ್ ಮಾಡಿ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ....


Conclusion:ರಾಜಕುಮಾರ್.....
ಈಟಿವಿ ಭಾರತ್.....
ಚಿಕ್ಕಮಗಳೂರು.....
Last Updated : Oct 3, 2019, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.