ETV Bharat / state

ಮುರಿದು ಬೀಳುವ ಸ್ಥಿತಿಯಲ್ಲಿದೆ ಬಂಕೇನಹಳ್ಳಿ ಕಾಲುಸಂಕ - Bankenahalli of Moodigere Taluk in Chikkamagaluru District

2019 ರ ಆಗಸ್ಟ್ ತಿಂಗಳು ಸುರಿದ ಜಡಿ ಮಳೆಗೆ ಈ ಸೇತುವೆ ಹಾಳಾಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಸಂಸದೆ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿಗೆ ಘೇರಾವ್ ಹಾಕಿದ ಮೇಲೆ ಕಬ್ಬಿಣದ ತಾತ್ಕಾಲಿಕ ಕಾಲುಸಂಕ ಹಾಕಿ ಶೀಘ್ರವೇ ಸೇತುವೆ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದರು.

Bankenahalli Bridge
ಮುರಿದು ಬೀಳುವ ಸ್ಥಿತಿಯಲ್ಲಿ ಕಾಲುಸಂಕ
author img

By

Published : Mar 7, 2021, 3:47 PM IST

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಸೇತುವೆ ರಣಮಳೆಗೆ ಕೊಚ್ಚಿ ಹೋಗಿತ್ತು. ಅಂದಿನಿಂದ ಸೇತುವೆಗಾಗಿ ಸ್ಥಳೀಯರು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಮುರಿದು ಬೀಳುವ ಸ್ಥಿತಿಯಲ್ಲಿ ಕಾಲುಸಂಕ

ಈ ಬಗ್ಗೆ ರಾಜ್ಯದ ಬಹುತೇಕ ಎಲ್ಲಾ ಮಂತ್ರಿಗಳು ಬಂದು ಪರಿಶೀಲನೆ ನಡೆಸಿದರೂ ಪ್ರಯೋಜನ ಆಗಿಲ್ಲ. ಮಳೆ ಬಂದಾಗೆಲ್ಲ ನೀರು ವೇಗವಾಗಿ ಹರಿದರೆ ಸಿಮೆಂಟ್ ಪೈಪ್ ಮೇಲೆ ಕೊಟ್ಟಿರುವ ಸಪೋರ್ಟಿಂಗ್ ಪಿಲ್ಲರ್ ಮುರಿದು ಬೀಳುವ ಆತಂಕವಿದೆ. 2019 ರ ಆಗಸ್ಟ್ ತಿಂಗಳು ಸುರಿದ ಜಡಿ ಮಳೆಗೆ ಈ ಸೇತುವೆ ಹಾಳಾಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಸಂಸದೆ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿಗೆ ಘೇರಾವ್ ಹಾಕಿದ ಮೇಲೆ ಕಬ್ಬಿಣದ ತಾತ್ಕಾಲಿಕ ಕಾಲುಸಂಕ ಹಾಕಿ ಶೀಘ್ರವೇ ಸೇತುವೆ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದರು.

ಮಣ್ಣು ಕುಸಿದರೆ ಕಾಲುಸಂಕಕ್ಕೆ ಗ್ರಿಪ್ ಇರಲ್ಲ. ಈ ಕಾಲುಸಂಕದ ಮೇಲೆ ಜನರು ಭಯದಿಂದಲೇ ಓಡಾಡುವ ಪರಿಸ್ಥಿತಿಯಿದೆ. ಇದರ ಮೇಲೆ ನಡೆಯುವಾಗ ಬರುವ ಶಬ್ದ ಹಳ್ಳಿಗರನ್ನು ಮತ್ತಷ್ಟು ಕಂಗಾಲಾಗಿಸಿದೆ. ಈ ಸೇತುವೆಯನ್ನು ಎಂಟಕ್ಕೂ ಹೆಚ್ಚು ಹಳ್ಳಿಯ ಜನ ಅವಲಂಬಿಸಿದ್ದಾರೆ. ಈ ಸಂಕವೂ ಕೊಚ್ಚಿ ಹೋದರೆ ಅವರ ಬದುಕು ಮತ್ತಷ್ಟು ಅತಂತ್ರವಾಗಲಿದೆ.

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಸೇತುವೆ ರಣಮಳೆಗೆ ಕೊಚ್ಚಿ ಹೋಗಿತ್ತು. ಅಂದಿನಿಂದ ಸೇತುವೆಗಾಗಿ ಸ್ಥಳೀಯರು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಮುರಿದು ಬೀಳುವ ಸ್ಥಿತಿಯಲ್ಲಿ ಕಾಲುಸಂಕ

ಈ ಬಗ್ಗೆ ರಾಜ್ಯದ ಬಹುತೇಕ ಎಲ್ಲಾ ಮಂತ್ರಿಗಳು ಬಂದು ಪರಿಶೀಲನೆ ನಡೆಸಿದರೂ ಪ್ರಯೋಜನ ಆಗಿಲ್ಲ. ಮಳೆ ಬಂದಾಗೆಲ್ಲ ನೀರು ವೇಗವಾಗಿ ಹರಿದರೆ ಸಿಮೆಂಟ್ ಪೈಪ್ ಮೇಲೆ ಕೊಟ್ಟಿರುವ ಸಪೋರ್ಟಿಂಗ್ ಪಿಲ್ಲರ್ ಮುರಿದು ಬೀಳುವ ಆತಂಕವಿದೆ. 2019 ರ ಆಗಸ್ಟ್ ತಿಂಗಳು ಸುರಿದ ಜಡಿ ಮಳೆಗೆ ಈ ಸೇತುವೆ ಹಾಳಾಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಸಂಸದೆ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿಗೆ ಘೇರಾವ್ ಹಾಕಿದ ಮೇಲೆ ಕಬ್ಬಿಣದ ತಾತ್ಕಾಲಿಕ ಕಾಲುಸಂಕ ಹಾಕಿ ಶೀಘ್ರವೇ ಸೇತುವೆ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದರು.

ಮಣ್ಣು ಕುಸಿದರೆ ಕಾಲುಸಂಕಕ್ಕೆ ಗ್ರಿಪ್ ಇರಲ್ಲ. ಈ ಕಾಲುಸಂಕದ ಮೇಲೆ ಜನರು ಭಯದಿಂದಲೇ ಓಡಾಡುವ ಪರಿಸ್ಥಿತಿಯಿದೆ. ಇದರ ಮೇಲೆ ನಡೆಯುವಾಗ ಬರುವ ಶಬ್ದ ಹಳ್ಳಿಗರನ್ನು ಮತ್ತಷ್ಟು ಕಂಗಾಲಾಗಿಸಿದೆ. ಈ ಸೇತುವೆಯನ್ನು ಎಂಟಕ್ಕೂ ಹೆಚ್ಚು ಹಳ್ಳಿಯ ಜನ ಅವಲಂಬಿಸಿದ್ದಾರೆ. ಈ ಸಂಕವೂ ಕೊಚ್ಚಿ ಹೋದರೆ ಅವರ ಬದುಕು ಮತ್ತಷ್ಟು ಅತಂತ್ರವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.