ETV Bharat / state

ವಿಶ್ವಮಟ್ಟದಲ್ಲಿ 'ನಿಖಿಲ್ ಎಲ್ಲಿದ್ದಿಯಪ್ಪ' ಆಯ್ತು ಈಗ 'ಬೈಕ್​ ಬೆನ್ನಟ್ಟಿದ ಹುಲಿ' ವಿಡಿಯೋ ಸರದಿ.. - ಕೇರಳ

ಜಗತ್ತಿನಲ್ಲಿ ಅತಿ ಹೆಚ್ಚು ಓದಲ್ಪಡುವ ಹಾಗೂ ಓದುಗರು ಸೂಚಿಸುವ ಸುದ್ದಿ ಮತ್ತು ವಿಡಿಯೋ ತುಣುಕುಗಳು ಅಪ್​ಲೋಡ್ ಆಗುವ 'ಡಿಗ್ಗ್​' ನ್ಯೂಸ್ ಜಾಲ ತಾಣದಲ್ಲಿ ಈ ಕುರಿತ ವಿಡಿಯೋ ಸುದ್ದಿ11ನೇ ಸ್ಥಾನ ಪಡೆದಿದೆ. ಯೂಟ್ಯೂಬ್​ನಲ್ಲಿ ಅಪ್ ಲೋಡ್ ಮಾಡಿದ 24 ಗಂಟೆಯೊಳಗೆ 11 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಬೈಕ್ ಬೆನ್ನಟ್ಟಿದ್ದ ಹುಲಿ
author img

By

Published : Jun 30, 2019, 9:18 PM IST

ಚಾಮರಾಜನಗರ: ಬೈಕ್ ಸವಾರರ ಮೇಲೆ ದಾಳಿಯಿಡಲು ಬಂದ ಹುಲಿರಾಯನ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದಾಗುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ 'ನಿಖಿಲ್​ ಎಲ್ಲಿದ್ದಿಯಪ್ಪ' ಸಂಭಾಷಣೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ವದಾದ್ಯಂತ ಹರಡಿತ್ತು. ಅದೇ ಮಾದರಿಯಲ್ಲಿ ಬೈಕ್​ ಸವಾರನ ಬೆನ್ನಟ್ಟುತ್ತಿರುವ ಹುಲಿಯ ವಿಡಿಯೋ ಫೇಸ್​ಬುಕ್​, ಟ್ವಿಟರ್​, ಇನ್​ಸ್ಟಾಗ್ರಾಮ್, ವಾಟ್ಸ್​ಆ್ಯಪ್​ ಸ್ಟೇಟಸ್​ ಸೇರಿದಂತೆ ಇತರೆಡೆ ಹರಿದಾಡುತ್ತಿದೆ.

ಜಗತ್ತಿನಲ್ಲಿ ಅತಿಹೆಚ್ಚು ಓದಲ್ಪಡುವ ಹಾಗೂ ಓದುಗರು ಸೂಚಿಸುವ ಸುದ್ದಿ ಮತ್ತು ವಿಡಿಯೋ ತುಣಕುಗಳನ್ನು ಅಪ್​ಲೋಡ್ ಆಗುವ 'ಡಿಗ್ಗ್​' ನ್ಯೂಸ್ ಜಾಲತಾಣದಲ್ಲಿ ಈ ಕುರಿತ ವಿಡಿಯೋ ಸುದ್ದಿ 11ನೇ ಸ್ಥಾನ ಪಡೆದಿದೆ. ಯೂಟ್ಯೂಬ್​ನಲ್ಲಿ ಅಪ್ ಲೋಡ್ ಮಾಡಿದ 24 ಗಂಟೆಯೊಳಗೆ 11 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಘಟನೆ ನಡೆದದ್ದು ಎಲ್ಲಿ? ಏಕೆ?

ವಿಡಿಯೋ ವೈರಲ್ ಆದ ಆರಂಭದಲ್ಲಿ ಬಂಡೀಪುರ-ಊಟಿ ರಸ್ತೆಯ ಮಧುಮಲೆ ಅರಣ್ಯ ವಲಯದಲ್ಲಿ ನಡೆದಿದೆ ಎಂದು ವರದಿಯಾಗಿತ್ತು. ಬಳಿಕ, ವೈನಾಡಿನಿಂದ ಪುಲ್ಪಳ್ಳಿಗೆ ತೆರಳುವ ರಸ್ತೆಯಲ್ಲಿ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ವೈನಾಡಿನ ವಿಮಲ್ ಎಂಬ ಯುವಕ ತನ್ನ ಸ್ನೇಹಿತನೊಂದಿಗೆ ತೆರಳಿದ್ದಾಗ ಹುಲಿ ಇವರಿಬ್ಬರ ಮೇಲೆ ಮುಗಿಬಿದ್ದಿದೆ ಎಂದು ತಿಳಿದುಬಂದಿದೆ. ವಿಮಲ್ ಮತ್ತು ಸ್ನೇಹಿತ ಕಿಡಿಗೇಡಿ ಕೃತ್ಯ ಮಾಡಿದ್ದರಿಂದಲೇ ಹುಲಿ ರೊಚ್ಚಿಗೆದ್ದು ಮುಗಿಬಿದ್ದಿದ್ದು, ಬೈಕ್ ವೇಗ ಹೆಚ್ಚಾಗುವ ವೇಳೆ ಬಂದ ಕರ್ಕಶ ಶಬ್ಧದಿಂದ ಬೆದರಿ ಹುಲಿ ಬೇರೆಡೆ ಓಡಿದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ.

ಬೈಕ್ ಬೆನ್ನಟ್ಟಿದ್ದ ಹುಲಿ ವಿಡಿಯೋ

ಘಟನೆ ಸಂಬಂಧ ಬಂಡೀಪುರ ಸಿಎಫ್ಒ ಬಾಲಚಂದ್ರ ಈಟಿವಿಗೆ ಪ್ರತಿಕ್ರಿಯಿಸಿ ಘಟನೆ ಬಂಡೀಪುರ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ಬೆಳಗ್ಗೆಯಿಂದ ಸುದ್ದಿಯಾಗಿ ವೈರಲಾದ ಟೈಗರ್ ಚೇಸಿಂಗ್ ವಿಡಿಯೋ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ.

ಚಾಮರಾಜನಗರ: ಬೈಕ್ ಸವಾರರ ಮೇಲೆ ದಾಳಿಯಿಡಲು ಬಂದ ಹುಲಿರಾಯನ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದಾಗುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ 'ನಿಖಿಲ್​ ಎಲ್ಲಿದ್ದಿಯಪ್ಪ' ಸಂಭಾಷಣೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ವದಾದ್ಯಂತ ಹರಡಿತ್ತು. ಅದೇ ಮಾದರಿಯಲ್ಲಿ ಬೈಕ್​ ಸವಾರನ ಬೆನ್ನಟ್ಟುತ್ತಿರುವ ಹುಲಿಯ ವಿಡಿಯೋ ಫೇಸ್​ಬುಕ್​, ಟ್ವಿಟರ್​, ಇನ್​ಸ್ಟಾಗ್ರಾಮ್, ವಾಟ್ಸ್​ಆ್ಯಪ್​ ಸ್ಟೇಟಸ್​ ಸೇರಿದಂತೆ ಇತರೆಡೆ ಹರಿದಾಡುತ್ತಿದೆ.

ಜಗತ್ತಿನಲ್ಲಿ ಅತಿಹೆಚ್ಚು ಓದಲ್ಪಡುವ ಹಾಗೂ ಓದುಗರು ಸೂಚಿಸುವ ಸುದ್ದಿ ಮತ್ತು ವಿಡಿಯೋ ತುಣಕುಗಳನ್ನು ಅಪ್​ಲೋಡ್ ಆಗುವ 'ಡಿಗ್ಗ್​' ನ್ಯೂಸ್ ಜಾಲತಾಣದಲ್ಲಿ ಈ ಕುರಿತ ವಿಡಿಯೋ ಸುದ್ದಿ 11ನೇ ಸ್ಥಾನ ಪಡೆದಿದೆ. ಯೂಟ್ಯೂಬ್​ನಲ್ಲಿ ಅಪ್ ಲೋಡ್ ಮಾಡಿದ 24 ಗಂಟೆಯೊಳಗೆ 11 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಘಟನೆ ನಡೆದದ್ದು ಎಲ್ಲಿ? ಏಕೆ?

ವಿಡಿಯೋ ವೈರಲ್ ಆದ ಆರಂಭದಲ್ಲಿ ಬಂಡೀಪುರ-ಊಟಿ ರಸ್ತೆಯ ಮಧುಮಲೆ ಅರಣ್ಯ ವಲಯದಲ್ಲಿ ನಡೆದಿದೆ ಎಂದು ವರದಿಯಾಗಿತ್ತು. ಬಳಿಕ, ವೈನಾಡಿನಿಂದ ಪುಲ್ಪಳ್ಳಿಗೆ ತೆರಳುವ ರಸ್ತೆಯಲ್ಲಿ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ವೈನಾಡಿನ ವಿಮಲ್ ಎಂಬ ಯುವಕ ತನ್ನ ಸ್ನೇಹಿತನೊಂದಿಗೆ ತೆರಳಿದ್ದಾಗ ಹುಲಿ ಇವರಿಬ್ಬರ ಮೇಲೆ ಮುಗಿಬಿದ್ದಿದೆ ಎಂದು ತಿಳಿದುಬಂದಿದೆ. ವಿಮಲ್ ಮತ್ತು ಸ್ನೇಹಿತ ಕಿಡಿಗೇಡಿ ಕೃತ್ಯ ಮಾಡಿದ್ದರಿಂದಲೇ ಹುಲಿ ರೊಚ್ಚಿಗೆದ್ದು ಮುಗಿಬಿದ್ದಿದ್ದು, ಬೈಕ್ ವೇಗ ಹೆಚ್ಚಾಗುವ ವೇಳೆ ಬಂದ ಕರ್ಕಶ ಶಬ್ಧದಿಂದ ಬೆದರಿ ಹುಲಿ ಬೇರೆಡೆ ಓಡಿದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ.

ಬೈಕ್ ಬೆನ್ನಟ್ಟಿದ್ದ ಹುಲಿ ವಿಡಿಯೋ

ಘಟನೆ ಸಂಬಂಧ ಬಂಡೀಪುರ ಸಿಎಫ್ಒ ಬಾಲಚಂದ್ರ ಈಟಿವಿಗೆ ಪ್ರತಿಕ್ರಿಯಿಸಿ ಘಟನೆ ಬಂಡೀಪುರ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ಬೆಳಗ್ಗೆಯಿಂದ ಸುದ್ದಿಯಾಗಿ ವೈರಲಾದ ಟೈಗರ್ ಚೇಸಿಂಗ್ ವಿಡಿಯೋ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ.

Intro:ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದಾಯ್ತು ಹುಲಿ ಅಟ್ಯಾಕ್ ಸುದ್ದಿ: ಟಾಪ್ ೧೦ರಲ್ಲಿ ಸ್ಥಾನ ಪಡೆದ ಟೈಗರ್ ಚೇಸ್!

ಚಾಮರಾಜನಗರ: ಬೈಕ್ ಸವಾರರರ ಮೇಲೆ ದಾಳಿಯಿಡಲು ಬಂದ ಹುಲಿರಾಯನ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದಾಗಿದ್ದು, ವಿಶ್ವದ ಪ್ರಮುಖ ೧೦ ಸುದ್ದಿಗಳಲ್ಲಿ ಟೈಗರ್ ಚೇಸಿಂಗ್ ಸುದ್ದಿ ಒಂದಾಗಿದೆ.

Body:ವಿಶ್ವಮಟ್ಟದ ಟ್ರೆಂಡಿಗ್ ಸುದ್ದಿಗಳನ್ನು ಕೊಡುವ ಡಿಗ್ ನ್ಯೂಸ್ ಟಾಪ್ ೧೦ ರಲ್ಲಿ ಹುಲಿ ಚೇಸಿಂಗ್ ಸುದ್ದಿ ಕೂಡ ಸ್ಥಾನ ಪಡೆದಿದ್ದು, ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ ೨೪ ಗಂಟೆಯೊಳಗೆ ೧೦ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಯೂಟ್ಯೂಬ್ ನಲ್ಲೂ ಹುಲಿರಾಯ ಹವಾ ಸೃಷ್ಟಿಸಿದ್ದಾನೆ.

ಘಟನೆ ನಡೆದದ್ದು ಎಲ್ಲಿ? ಏಕೆ?

ವಿಡಿಯೋ ವೈರಲ್ ಆದ ಆರಂಭದಲ್ಲಿ ಬಂಡೀಪುರ- ಊಟಿ ರಸ್ತೆಯ ಮಧುಮಲೆ ಅರಣ್ಯ ವಲಯದಲ್ಲಿ ನಡೆದಿದೆ ಎಂದು ವರದಿಯಾಗಿತ್ತು. ಬಳಿಕ, ವೈನಾಡಿನಿಂದ ಪುಲ್ಪಳ್ಳಿಗೆ ತೆರಳುವ ರಸ್ತೆಯಲ್ಲಿ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ವೈನಾಡಿನ ವಿಮಲ್ ಎಂಬ ಯುವಕ ತನ್ನ ಸ್ನೇಹಿತನೊಂದಿಗೆ ತೆರಳಿದ್ದಾಗ ಹುಲಿ ಇವರಿಬ್ಬರ ಮೇಲೆ ಮುಗಿಬಿದ್ದಿದೆ ಎಂದು ತಿಳಿದುಬಂದಿದೆ.

ವಿಮಲ್ ಮತ್ತು ಸ್ನೇಹಿತ ಕಿಡಿಗೇಡಿ ಕೃತ್ಯ ಮಾಡಿದ್ದರಿಂದಲೇ ಹುಲಿ ರೊಚ್ಚಿಗೆದ್ದು ಮುಗಿಬಿದ್ದಿದ್ದು, ಬೈಕ್ ವೇಗ ಹೆಚ್ಚಾಗುವ ವೇಳೆ ಬಂದ ಕರ್ಕಶ ಶಬ್ಧದಿಂದ ಬೆದರಿ ಹುಲಿ ಬೇರೆಡೆ ಓಡಿದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ.

ಇನ್ನು, ಘಟನೆ ಸಂಬಂಧ ಬಂಡೀಪುರ ಸಿಎಫ್ಒ ಬಾಲಚಂದ್ರ ಈಟಿವಿಗೆ ಪ್ರತಿಕ್ರಿಯಿಸಿ ಘಟನೆ ಬಂಡೀಪುರ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Conclusion:ಒಟ್ಟಿನಲ್ಲಿ ಇಂದು ಬೆಳಗ್ಗೆಯಿಂದ ಸುದ್ದಿಯಾಗಿ ವೈರಲ್ಲಾದ
ಟೈಗರ್ ಚೇಸಿಂಗ್ ವಿಡಿಯೋ ವಿಶ್ಚಮಟ್ಟದಲ್ಲಿ ಸದ್ದು ಮಾಡಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.