ETV Bharat / state

ನಟನೆ ಅವರ ರಕ್ತದಲ್ಲೇ ಬಂದಿದೆ: ಸಂಚಾರಿ 'ವಿಜಯ್​' ಕುರಿತು ಬಾಲ್ಯ ಸ್ನೇಹಿತರು, ಗ್ರಾಮಸ್ಥರ ಮಾತು

author img

By

Published : Jun 14, 2021, 8:58 PM IST

Updated : Jun 15, 2021, 1:00 PM IST

ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ಚಿಂತಾಜನಕ ಸ್ಥಿತಿಗೆ ತಲುಪಿದ್ದು, ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ವಿಜಯ್​ಗೆ ಬಂದೊದಗಿರುವ ಈ ಸ್ಥಿತಿ ಕಂಡು ತವರೂರಾದ ಪಂಚನಹಳ್ಳಿಯ ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ಬಾಲ್ಯದ ಸ್ನೇಹಿತರು ಹಾಗೂ ಊರಿನ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

actor-sanchari-vijay-friends-shared-memories
ನಟನೆ ಅವರ ರಕ್ತದಲ್ಲೇ ಬಂದಿದೆ: ಸಂಚಾರಿ 'ವಿಜಯ್​' ಕುರಿತು ಬಾಲ್ಯ ಸ್ನೇಹಿತರು, ಗ್ರಾಮಸ್ಥರ ಮಾತು

ಚಿಕ್ಕಮಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಇತ್ತ ಅವರ ತವರೂರಾದ ಪಂಚನಹಳ್ಳಿಯಲ್ಲಿ ನೀರವ ಮೌನ ಆವರಿಸಿದೆ.

ಸಂಚಾರಿ 'ವಿಜಯ್​' ಕುರಿತು ಬಾಲ್ಯ ಸ್ನೇಹಿತರು ಹಾಗೂ ಗ್ರಾಮಸ್ಥರ ಮಾತು

ಅಪಘಾತದಲ್ಲಿ ತಲೆಗೆ ಪೆಟ್ಟಾದ ಹಿನ್ನೆಲೆ ವಿಜಯ್​ ಅವರ ಮೆದುಳು ನಿಷ್ಕ್ರಿಯ ಆಗಿರುವ ಕುರಿತು ಈಗಾಗಲೇ ಅಪೋಲೋ ಆಸ್ಪತ್ರೆಯ ವೈದ್ಯರು ಖಚಿತ ಪಡಿಸಿದ್ದಾರೆ. ಈ ಸುದ್ದಿ ಕೇಳಿ ಅವರ ಹುಟ್ಟೂರಾದ ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮಸ್ಥರು ಮೌನಕ್ಕೆ ಶರಣಾಗಿದ್ದಾರೆ. ಜೊತೆಗೆ ಬಾಲ್ಯದ ಗೆಳೆಯನ ಸವಿನೆನಪಿನ ಘಳಿಗೆಗಳನ್ನು ಸ್ನೇಹಿತರು ಬಿಚ್ಚಿಟ್ಟಿದ್ದಾರೆ.

ಸಂಚಾರಿ ವಿಜಯ್ ಹುಟ್ಟು ಕಲಾವಿದರು. ನಟನೆ ಅವರ ರಕ್ತದಲ್ಲೇ ಬಂದಿದೆ. ಅವರು ಊರಿಗೆ ಬಂದಾಗ ಪ್ರತಿಯೊಬ್ಬರನ್ನು ಪ್ರೀತಿ-ವಿಶ್ವಾಸದಿಂದ ಮಾತನಾಡಿಸುತ್ತಿದ್ದರು. ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಹಾಗು ಛಲ ಅವರಲ್ಲಿ ಹುಟ್ಟಿನಿಂದಲೂ ಇತ್ತು. ಅವರಿಗೆ ಊರಿನ ತುಂಬಾ ಸ್ನೇಹಿತರಿದ್ದಾರೆ. ಅವನಿಗೆ ಈರೀತಿ ಆಗಿದೆ ಎಂದರೆ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಸಾಹಿತ್ಯವನ್ನು ದೆಹಲಿಗೆ ತೆಗೆದುಕೊಂಡು ಹೋದ ವ್ಯಕ್ತಿ ಅವರು. ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಎಂದು ವಿಜಯ್​​ ಅವರೊಂದಿಗಿನ ಒಡನಾಟದ ಕುರಿತು ಅವರ ಸ್ನೇಹಿತರು ಹಾಗೂ ಗ್ರಾಮಸ್ಥರು ಮೆಲುಕು ಹಾಕಿದರು.

ಚಿಕ್ಕಮಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಇತ್ತ ಅವರ ತವರೂರಾದ ಪಂಚನಹಳ್ಳಿಯಲ್ಲಿ ನೀರವ ಮೌನ ಆವರಿಸಿದೆ.

ಸಂಚಾರಿ 'ವಿಜಯ್​' ಕುರಿತು ಬಾಲ್ಯ ಸ್ನೇಹಿತರು ಹಾಗೂ ಗ್ರಾಮಸ್ಥರ ಮಾತು

ಅಪಘಾತದಲ್ಲಿ ತಲೆಗೆ ಪೆಟ್ಟಾದ ಹಿನ್ನೆಲೆ ವಿಜಯ್​ ಅವರ ಮೆದುಳು ನಿಷ್ಕ್ರಿಯ ಆಗಿರುವ ಕುರಿತು ಈಗಾಗಲೇ ಅಪೋಲೋ ಆಸ್ಪತ್ರೆಯ ವೈದ್ಯರು ಖಚಿತ ಪಡಿಸಿದ್ದಾರೆ. ಈ ಸುದ್ದಿ ಕೇಳಿ ಅವರ ಹುಟ್ಟೂರಾದ ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮಸ್ಥರು ಮೌನಕ್ಕೆ ಶರಣಾಗಿದ್ದಾರೆ. ಜೊತೆಗೆ ಬಾಲ್ಯದ ಗೆಳೆಯನ ಸವಿನೆನಪಿನ ಘಳಿಗೆಗಳನ್ನು ಸ್ನೇಹಿತರು ಬಿಚ್ಚಿಟ್ಟಿದ್ದಾರೆ.

ಸಂಚಾರಿ ವಿಜಯ್ ಹುಟ್ಟು ಕಲಾವಿದರು. ನಟನೆ ಅವರ ರಕ್ತದಲ್ಲೇ ಬಂದಿದೆ. ಅವರು ಊರಿಗೆ ಬಂದಾಗ ಪ್ರತಿಯೊಬ್ಬರನ್ನು ಪ್ರೀತಿ-ವಿಶ್ವಾಸದಿಂದ ಮಾತನಾಡಿಸುತ್ತಿದ್ದರು. ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಹಾಗು ಛಲ ಅವರಲ್ಲಿ ಹುಟ್ಟಿನಿಂದಲೂ ಇತ್ತು. ಅವರಿಗೆ ಊರಿನ ತುಂಬಾ ಸ್ನೇಹಿತರಿದ್ದಾರೆ. ಅವನಿಗೆ ಈರೀತಿ ಆಗಿದೆ ಎಂದರೆ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಸಾಹಿತ್ಯವನ್ನು ದೆಹಲಿಗೆ ತೆಗೆದುಕೊಂಡು ಹೋದ ವ್ಯಕ್ತಿ ಅವರು. ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಎಂದು ವಿಜಯ್​​ ಅವರೊಂದಿಗಿನ ಒಡನಾಟದ ಕುರಿತು ಅವರ ಸ್ನೇಹಿತರು ಹಾಗೂ ಗ್ರಾಮಸ್ಥರು ಮೆಲುಕು ಹಾಕಿದರು.

Last Updated : Jun 15, 2021, 1:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.