ETV Bharat / state

ಚಾರ್ಮಾಡಿ ಘಾಟ್​ನಲ್ಲಿ ಅಪಘಾತ: ಸಾವಿರ ಅಡಿ ಪ್ರಪಾತಕ್ಕೆ ಬಿದ್ದ ಲಾರಿ, ಪವಾಡ ಸದೃಶ ರೀತಿಯಲ್ಲಿ ಚಾಲಕ ಪಾರು

author img

By ETV Bharat Karnataka Team

Published : Jan 13, 2024, 8:32 PM IST

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ಅಪಘಾತ ಸಂಭವಿಸಿದ್ದು, ಲಾರಿಯೊಂದು ಸಾವಿರ ಅಡಿ ಪ್ರಪಾತಕ್ಕೆ ಬಿದ್ದಿದೆ. ಪವಾಡ ಸದೃಶ ರೀತಿಯಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

Etv Bharat
Etv Bharat
ಚಾರ್ಮಾಡಿ ಘಾಟಿನಲ್ಲಿ ಅಪಘಾತ: ಸಾವಿರ ಅಡಿ ಪ್ರಪಾತಕ್ಕೆ ಬಿದ್ದ ಲಾರಿ, ಪವಾಡ ಸದೃಶ ರೀತಿಯಲ್ಲಿ ಚಾಲಕ ಪಾರು

ಚಿಕ್ಕಮಗಳೂರು: ಅದು ಪ್ರಕೃತಿ ಮಡಿಲಲ್ಲಿರೋ ಹಾವು ಬಳುಕಿನ ಇಕ್ಕಟ್ಟಿನ ರಸ್ತೆ. ಸ್ವಲ್ಪ ಯಾಮಾರಿದರೂ ಸಂಚರಿಸುವ ವಾಹನ ಸವಾರರ ಮೃತ ದೇಹ ಸಿಗೋದು ಬಲು ಕಷ್ಟ. ಕೂದಲೆಳೆ ಎಚ್ಚರ ತಪ್ಪಿದ್ರು ಪ್ರಾಣ ಹೋಗೋದು ಗ್ಯಾರಂಟಿ. ಆದರೆ, ಇಲ್ಲೊಬ್ಬ ಲಾರಿ ಚಾಲಕ ಬರೋಬ್ಬರಿ ಒಂದು ಸಾವಿರ ಅಡಿ ಪ್ರಪಾತಕ್ಕೆ ಬಿದ್ದರೂ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.

ಸ್ವಚ್ಛಂದ ರಸ್ತೆ, ಸುತ್ತಲು ಹಚ್ಚ ಹಸಿರಿನ ಪ್ರಕೃತಿ ಮಡಿಲು. ಹಸಿರು ಗುಡ್ಡಗಳ ನಡುವೆ ಹಾವು ಬಳಿಕಿನಂತೆ ಹಾದು ಹೋಗಿರೋ ಹೆದ್ದಾರಿ. ಆಹಾ ನೋಡೋದಕ್ಕೆ ಎಷ್ಟು ಚಂದ ಇದೆ ಅಲ್ವಾ. ಅಷ್ಟೇ ಡೇಂಜರ್ ಮತ್ತು ಡೆಡ್ಲಿ ರಸ್ತೆ ಆಗಿದೆ. ಹೌದು, ಈ ಹೆದ್ದಾರಿ ಇರೋದು, ಬೇರೆಲ್ಲೂ ಅಲ್ಲ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆಯ ಮೂಲಕ ಹಾದು ಹೋಗಿರುವ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ. ಕೊಟ್ಟಿಗೆ ಹಾರದಿಂದ ಆರಂಭವಾಗುವ ಘಾಟಿ ತಿರುವಿನ ರಸ್ತೆ ವಾಹನ ಸವಾರರ ಪಾಲಿಗೆ ಯಮ ಸ್ವರೂಪಿ ಆಗ್ತಿದೆ. ಇಲ್ನೋಡಿ ಈ ದೃಶ್ಯಗನ್ನು ಕಳೆದ ರಾತ್ರಿ ಲಾರಿ ಚಾಲಕ ತನ್ನ ನಿಯಂತ್ರಣ ತಪ್ಪಿ ಒಂದು ಸಾವಿರ ಅಡಿ ಪ್ರಪಾತಕ್ಕೆ ಲಾರಿ ಸಮೇತ ಬಿದ್ದು ಪವಾಡ ಸದಸ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಾಟಿನ ತಿರುವಿನ ರಸ್ತೆಯಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ರಸ್ತೆ ಕಾಣದೇ ತಡೆ ಗೋಡೆಗೆ ಗುದ್ದಿದ್ದರಿಂದ ಸಾವಿರ ಅಡಿ ಪ್ರಪಾತಕ್ಕೆ ಲಾರಿ ಉರುಳಿ ಬಿದ್ದಿದೆ.

ಪ್ರಪಾತಕ್ಕೆ ಲಾರಿ ಉರುಳಿ ಬಿದ್ದರು ಲಾರಿ ಚಾಲಕ ಜೀವಂತ ಉಳಿದಿರುವುದು ನಿಜಕ್ಕೂ ಆಶ್ಚರ್ಯ ತರಿಸಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಲಾರಿ ಚಾಲಕನ ಸೊಂಟ ಮುರಿದಿದ್ದು, ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ತಿಂಗಳಲ್ಲಿ ಮೂರ್ನಾಲ್ಕು ವಾಹನಗಳು ಇದೇ ಜಾಗದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದಿದ್ದವು. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಗಮನಕ್ಕೆ ಬಂದಿದ್ದರೂ, ಉತ್ತಮ ರೀತಿಯ ತಡೆಗೋಡೆ ನಿರ್ಮಿಸದಿರುವುದು ಇಲ್ಲಿನ ಅನಾಹುತಗಳಿಗೆ ಕಾರಣ ಎನ್ನಲಾಗುತ್ತಿದೆ. ಮಳೆಗಾಲ ಹಾಗೂ ಚಳಿಗಾಲ ಆರಂಭ ವಾಗುತ್ತಿದ್ದಂತೆ ಚಾರ್ಮಾಡಿ ರಸ್ತೆಯಲ್ಲಿ ದಟ್ಟವಾದ ಮಂಜು ಕವಿಯೋ ಕಾರಣ ರಸ್ತೆಯ ಇಕ್ಕೆಲ ಕಾಣದೇ ಈ ಅನಾಹುತಗಳು ಸಂಭವಿಸುತ್ತಿದೆ. ವರ್ಷಕ್ಕೆ ಹಲವು ಅಪಘಾತಗಳು ಪದೇ ಪದೇ ಸಂಭವಿಸುತ್ತಿದ್ದು, ಸರ್ಕಾರ ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ ತುರ್ತು ವೇಗ ನೀಡಬೇಕಿದೆ.

ಸ್ಥಳೀಯರಿಂದ ಆಕ್ರೋಶ: ಕಾಫಿ ನಾಡಿನ ಈ ಡೆಡ್ಲಿ ಡೇಂಜರ್ ಚಾರ್ಮಾಡಿ ರಸ್ತೆ ವಾಹನ ಸವಾರರ ಪಾಲಿಗೆ ಯಮ ಸ್ವರೂಪಿ ರಸ್ತೆಯಾಗಿ ಮಾರ್ಪಾಡಾ ಗುತ್ತಿರುವುದು ನಿಜಕ್ಕೂ ದುರಂತ. ಕಡೂರಿನಿಂದ ಮಂಗಳೂರು ಕರಾವಳಿ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅವಧಿ ಮೀರಿ ಪಾರ್ಟಿ: ತನಿಖಾ ವರದಿ ಕೇಳಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ

ಚಾರ್ಮಾಡಿ ಘಾಟಿನಲ್ಲಿ ಅಪಘಾತ: ಸಾವಿರ ಅಡಿ ಪ್ರಪಾತಕ್ಕೆ ಬಿದ್ದ ಲಾರಿ, ಪವಾಡ ಸದೃಶ ರೀತಿಯಲ್ಲಿ ಚಾಲಕ ಪಾರು

ಚಿಕ್ಕಮಗಳೂರು: ಅದು ಪ್ರಕೃತಿ ಮಡಿಲಲ್ಲಿರೋ ಹಾವು ಬಳುಕಿನ ಇಕ್ಕಟ್ಟಿನ ರಸ್ತೆ. ಸ್ವಲ್ಪ ಯಾಮಾರಿದರೂ ಸಂಚರಿಸುವ ವಾಹನ ಸವಾರರ ಮೃತ ದೇಹ ಸಿಗೋದು ಬಲು ಕಷ್ಟ. ಕೂದಲೆಳೆ ಎಚ್ಚರ ತಪ್ಪಿದ್ರು ಪ್ರಾಣ ಹೋಗೋದು ಗ್ಯಾರಂಟಿ. ಆದರೆ, ಇಲ್ಲೊಬ್ಬ ಲಾರಿ ಚಾಲಕ ಬರೋಬ್ಬರಿ ಒಂದು ಸಾವಿರ ಅಡಿ ಪ್ರಪಾತಕ್ಕೆ ಬಿದ್ದರೂ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.

ಸ್ವಚ್ಛಂದ ರಸ್ತೆ, ಸುತ್ತಲು ಹಚ್ಚ ಹಸಿರಿನ ಪ್ರಕೃತಿ ಮಡಿಲು. ಹಸಿರು ಗುಡ್ಡಗಳ ನಡುವೆ ಹಾವು ಬಳಿಕಿನಂತೆ ಹಾದು ಹೋಗಿರೋ ಹೆದ್ದಾರಿ. ಆಹಾ ನೋಡೋದಕ್ಕೆ ಎಷ್ಟು ಚಂದ ಇದೆ ಅಲ್ವಾ. ಅಷ್ಟೇ ಡೇಂಜರ್ ಮತ್ತು ಡೆಡ್ಲಿ ರಸ್ತೆ ಆಗಿದೆ. ಹೌದು, ಈ ಹೆದ್ದಾರಿ ಇರೋದು, ಬೇರೆಲ್ಲೂ ಅಲ್ಲ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆಯ ಮೂಲಕ ಹಾದು ಹೋಗಿರುವ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ. ಕೊಟ್ಟಿಗೆ ಹಾರದಿಂದ ಆರಂಭವಾಗುವ ಘಾಟಿ ತಿರುವಿನ ರಸ್ತೆ ವಾಹನ ಸವಾರರ ಪಾಲಿಗೆ ಯಮ ಸ್ವರೂಪಿ ಆಗ್ತಿದೆ. ಇಲ್ನೋಡಿ ಈ ದೃಶ್ಯಗನ್ನು ಕಳೆದ ರಾತ್ರಿ ಲಾರಿ ಚಾಲಕ ತನ್ನ ನಿಯಂತ್ರಣ ತಪ್ಪಿ ಒಂದು ಸಾವಿರ ಅಡಿ ಪ್ರಪಾತಕ್ಕೆ ಲಾರಿ ಸಮೇತ ಬಿದ್ದು ಪವಾಡ ಸದಸ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಾಟಿನ ತಿರುವಿನ ರಸ್ತೆಯಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ರಸ್ತೆ ಕಾಣದೇ ತಡೆ ಗೋಡೆಗೆ ಗುದ್ದಿದ್ದರಿಂದ ಸಾವಿರ ಅಡಿ ಪ್ರಪಾತಕ್ಕೆ ಲಾರಿ ಉರುಳಿ ಬಿದ್ದಿದೆ.

ಪ್ರಪಾತಕ್ಕೆ ಲಾರಿ ಉರುಳಿ ಬಿದ್ದರು ಲಾರಿ ಚಾಲಕ ಜೀವಂತ ಉಳಿದಿರುವುದು ನಿಜಕ್ಕೂ ಆಶ್ಚರ್ಯ ತರಿಸಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಲಾರಿ ಚಾಲಕನ ಸೊಂಟ ಮುರಿದಿದ್ದು, ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ತಿಂಗಳಲ್ಲಿ ಮೂರ್ನಾಲ್ಕು ವಾಹನಗಳು ಇದೇ ಜಾಗದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದಿದ್ದವು. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಗಮನಕ್ಕೆ ಬಂದಿದ್ದರೂ, ಉತ್ತಮ ರೀತಿಯ ತಡೆಗೋಡೆ ನಿರ್ಮಿಸದಿರುವುದು ಇಲ್ಲಿನ ಅನಾಹುತಗಳಿಗೆ ಕಾರಣ ಎನ್ನಲಾಗುತ್ತಿದೆ. ಮಳೆಗಾಲ ಹಾಗೂ ಚಳಿಗಾಲ ಆರಂಭ ವಾಗುತ್ತಿದ್ದಂತೆ ಚಾರ್ಮಾಡಿ ರಸ್ತೆಯಲ್ಲಿ ದಟ್ಟವಾದ ಮಂಜು ಕವಿಯೋ ಕಾರಣ ರಸ್ತೆಯ ಇಕ್ಕೆಲ ಕಾಣದೇ ಈ ಅನಾಹುತಗಳು ಸಂಭವಿಸುತ್ತಿದೆ. ವರ್ಷಕ್ಕೆ ಹಲವು ಅಪಘಾತಗಳು ಪದೇ ಪದೇ ಸಂಭವಿಸುತ್ತಿದ್ದು, ಸರ್ಕಾರ ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ ತುರ್ತು ವೇಗ ನೀಡಬೇಕಿದೆ.

ಸ್ಥಳೀಯರಿಂದ ಆಕ್ರೋಶ: ಕಾಫಿ ನಾಡಿನ ಈ ಡೆಡ್ಲಿ ಡೇಂಜರ್ ಚಾರ್ಮಾಡಿ ರಸ್ತೆ ವಾಹನ ಸವಾರರ ಪಾಲಿಗೆ ಯಮ ಸ್ವರೂಪಿ ರಸ್ತೆಯಾಗಿ ಮಾರ್ಪಾಡಾ ಗುತ್ತಿರುವುದು ನಿಜಕ್ಕೂ ದುರಂತ. ಕಡೂರಿನಿಂದ ಮಂಗಳೂರು ಕರಾವಳಿ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅವಧಿ ಮೀರಿ ಪಾರ್ಟಿ: ತನಿಖಾ ವರದಿ ಕೇಳಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.