ETV Bharat / state

ನರ್ಸ್ ವೇಷದಲ್ಲಿ ಬಂದು ಮಹಿಳೆಯಿಂದ ಮಗು ಅಪಹರಿಸಿ ಪರಾರಿ

ನರ್ಸ್ ವೇಷದಲ್ಲಿ ಬಂದು ಮಹಿಳೆಯೊಬ್ಬಳು ಮಗುವನ್ನು ಅಪಹರಿಸಿರುವ ಪ್ರಕರಣ ಚಿಕ್ಕಮಗಳೂರು ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ.

author img

By

Published : Jan 5, 2020, 12:11 PM IST

hospital
ಮಗು ಕಿಡ್ನ್ಯಾಪ್

ಚಿಕ್ಕಮಗಳೂರು : ನಗರದಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶುಶ್ರೂಷಕಿಯ ವೇಷದಲ್ಲಿ ಬಂದ ಖತರ್ನಾಕ್ ಮಹಿಳೆಯೊಬ್ಬಳು ನಾಲ್ಕು ದಿನದ ಗಂಡು ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾಳೆ.

ಮಗು ಅಪಹರಣ

ತಾನು ನರ್ಸ್‌ ಎಂದು ಹೇಳಿದ ಅಪರಿಚಿತ ಮಹಿಳೆ 4 ದಿನದ ಗಂಡು ಮಗುವನ್ನು ಎತ್ತಿಕೊಂಡು ಹೋಗಿದ್ದಾಳೆ. ಚಿಕ್ಕಮಗಳೂರು ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಸ್ಸೋಂ ಮೂಲದ ಅಂಜಲಿ-ಸುನಿಲ್ ದಂಪತಿಗೆ ಹೊಸ ವರ್ಷದಂದು ದಂಪತಿಗೆ ಮಗು ಜನಿಸಿತ್ತು.

ಆಸ್ಪತ್ರೆಯಲ್ಲಿರುವ ಎಲ್ಲಾ ಸಿಸಿಟಿವಿಗಳು ಕೆಟ್ಟು ಹೋಗಿದ್ದು ಆಸ್ಪತ್ರೆಯ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಹಾಗಾಗಿ ಈ ಪ್ರಕರಣವನ್ನು ಬೇಧಿಸುವುದು ಪೊಲೀಸರಿಗೂ ಸವಾಲಾಗುವ ಸಾಧ್ಯತೆ ಇದೆ.

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು : ನಗರದಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶುಶ್ರೂಷಕಿಯ ವೇಷದಲ್ಲಿ ಬಂದ ಖತರ್ನಾಕ್ ಮಹಿಳೆಯೊಬ್ಬಳು ನಾಲ್ಕು ದಿನದ ಗಂಡು ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾಳೆ.

ಮಗು ಅಪಹರಣ

ತಾನು ನರ್ಸ್‌ ಎಂದು ಹೇಳಿದ ಅಪರಿಚಿತ ಮಹಿಳೆ 4 ದಿನದ ಗಂಡು ಮಗುವನ್ನು ಎತ್ತಿಕೊಂಡು ಹೋಗಿದ್ದಾಳೆ. ಚಿಕ್ಕಮಗಳೂರು ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಸ್ಸೋಂ ಮೂಲದ ಅಂಜಲಿ-ಸುನಿಲ್ ದಂಪತಿಗೆ ಹೊಸ ವರ್ಷದಂದು ದಂಪತಿಗೆ ಮಗು ಜನಿಸಿತ್ತು.

ಆಸ್ಪತ್ರೆಯಲ್ಲಿರುವ ಎಲ್ಲಾ ಸಿಸಿಟಿವಿಗಳು ಕೆಟ್ಟು ಹೋಗಿದ್ದು ಆಸ್ಪತ್ರೆಯ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಹಾಗಾಗಿ ಈ ಪ್ರಕರಣವನ್ನು ಬೇಧಿಸುವುದು ಪೊಲೀಸರಿಗೂ ಸವಾಲಾಗುವ ಸಾಧ್ಯತೆ ಇದೆ.

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Intro:Kn_ckm_Magu_kallatana_av_7202347Body:ಚಿಕ್ಕಮಗಳೂರು : -

ಚಿಕ್ಕಮಗಳೂರು ನಗರದಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯ ಕರ್ಮಕಾಂಡವೊಂದು ಬೆಳಕಿಗೆ ಬಂದಿದೆ.ನರ್ಸ್ ವೇಷದಲ್ಲಿ ಮಹಿಳೆ ಬಂದು ಮಗುವನ್ನು ಖತರ್ನಾಕ್ ಮಹಿಳೆ ಕದ್ದುಕೊಂಡು ಹೋಗಿದ್ದು ಇಡೀ ನಗರವೇ ಈ ಘಟನೆಯಿಂದ ಬೆಚ್ಚಿ ಬೀಳುವಂತೆ ಮಾಡಿದೆ.ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಾಲ್ಕು ದಿನದ ಗಂಡು ಮಗು ಕಳವು ಆಗಿದ್ದು ನರ್ಸ್ ಎಂದು ಹೇಳಿ ಮಗು ಎತ್ತಿಕೊಂಡು ಕಳ್ಳಿ ಹೋಗಿದ್ದಾಳೆ. ಚಿಕ್ಕಮಗಳೂರು ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು ಅಸ್ಸಾಂ ಮೂಲದ ಅಂಜಲಿ-ಸುನಿಲ್ ದಂಪತಿಗೆ ಗಂಡು ಜನಿಸಿತ್ತು ಈ ಮಗು ಈಗ ಕಳ್ಳತನ ಆಗಿದ್ದು ಹೊಸ ವರ್ಷದಂದು ದಂಪತಿಗೆ ಕಂದಮ್ಮ ಜನಿಸಿತ್ತು. ಆಸ್ಪತ್ರೆಯಲ್ಲಿರು ಎಲ್ಲಾ ಸಿಸಿ ಟಿವಿಗಳು ಕೆಟ್ಟು ಹೋಗಿದ್ದು ನಾಲ್ಕೇ ದಿನಕ್ಕೆ ಕಂದಮ್ಮ ಕಳವು ಆಗಿರುವ ಕಾರಣ ಹೆತ್ತ ಕರುಳು ಕಣ್ಣೀರು ಹಾಕುತ್ತಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ....


Conclusion:ರಾಜಕುಮಾರ್....
ಈಟಿವಿ ಭಾರತ್...
ಚಿಕ್ಕಮಗಳೂರು...

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.