ETV Bharat / state

ದೆಹಲಿಯಲ್ಲಿ ಹೋರಾಟ ಮಾಡುತ್ತಿರುವವರು ರೈತರಲ್ಲ, ದಲ್ಲಾಳಿಗಳು: ಸಂಸದ ಮುನಿಸ್ವಾಮಿ

author img

By

Published : Dec 25, 2020, 8:56 PM IST

ದೆಹಲಿಯಲ್ಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಪಂಜಾಬ್​ನವರು‌ ನಿಜವಾದ ರೈತರಲ್ಲ, ಅವರು ದಲ್ಲಾಳಿಗಳು. ಅವರು ರೈತರಿಂದ ಭತ್ತ, ಗೋಧಿ ಪಡೆದು ಬಚ್ಚಿಟ್ಟು ಆಹಾರ ಕೊರತೆಯೆಂದು ಬಿಂಬಿಸುತ್ತಿದ್ದಾರೆ ಎಂದು ಸಂಸದ ಮುನಿಸ್ವಾಮಿ ಆರೋಪಿಸಿದ್ದಾರೆ.

MP Muniswamy about farmers protest
ಸಂಸದ ಮುನಿಸ್ವಾಮಿ

ಚಿಕ್ಕಬಳ್ಳಾಪುರ: ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವವರು ನಿಜವಾದ ರೈತರಲ್ಲ, ಅವರೆಲ್ಲರೂ ದಲ್ಲಾಳಿಗಳು ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.

ಚಿಂತಾಮಣಿಯಲ್ಲಿ ಕಿಸಾನ್ ಸನ್ಮಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಪಂಜಾಬ್​ನವರು‌ ನಿಜವಾದ ರೈತರಲ್ಲ. ಅವರು ದಲ್ಲಾಳಿಗಳು. ಅವರು ರೈತರಿಂದ ಭತ್ತ, ಗೋಧಿ ಪಡೆದು ಬಚ್ಚಿಟ್ಟು ಆಹಾರ ಕೊರತೆಯೆಂದು ನಂಬಿಸಿ ನೂರು ರೂಪಾಯಿ ಬೆಲೆ ಬಾಳುವ ಆಹಾರ ಧಾನ್ಯಗಳನ್ನು ಸಾವಿರಾರು ರೂಪಾಯಿಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ.

ಸಂಸದ ಮುನಿಸ್ವಾಮಿ

ಓದಿ : ನಾಯಕತ್ವದ ಬಗ್ಗೆ ಮಾತನಾಡಲು ಬಸನಗೌಡ ಪಾಟೀಲ್ ಯತ್ನಾಳ್​ ಯಾರು: ಡಿವಿಎಸ್ ಕಿಡಿ

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವುದರ ಮೂಲಕ ದೇಶದ ರೈತರಿಗೆ ನಿಜವಾದ ಸ್ವಾತಂತ್ರ್ಯ ನೀಡಿದೆ. ಈ ಹಿಂದೆ ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಎಪಿಎಂಸಿಯನ್ನು ರದ್ದುಗೊಳಿಸುವುದಾಗಿ ಹೇಳಿದ್ದರು. ಆದರೆ ಈಗ ಎಪಿಎಂಸಿಯನ್ನು ರದ್ದು ಮಾಡದೆ ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಕಾನೂನು ತರಲಾಗಿದೆ ಎಂದರು.

ಚಿಕ್ಕಬಳ್ಳಾಪುರ: ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವವರು ನಿಜವಾದ ರೈತರಲ್ಲ, ಅವರೆಲ್ಲರೂ ದಲ್ಲಾಳಿಗಳು ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.

ಚಿಂತಾಮಣಿಯಲ್ಲಿ ಕಿಸಾನ್ ಸನ್ಮಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಪಂಜಾಬ್​ನವರು‌ ನಿಜವಾದ ರೈತರಲ್ಲ. ಅವರು ದಲ್ಲಾಳಿಗಳು. ಅವರು ರೈತರಿಂದ ಭತ್ತ, ಗೋಧಿ ಪಡೆದು ಬಚ್ಚಿಟ್ಟು ಆಹಾರ ಕೊರತೆಯೆಂದು ನಂಬಿಸಿ ನೂರು ರೂಪಾಯಿ ಬೆಲೆ ಬಾಳುವ ಆಹಾರ ಧಾನ್ಯಗಳನ್ನು ಸಾವಿರಾರು ರೂಪಾಯಿಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ.

ಸಂಸದ ಮುನಿಸ್ವಾಮಿ

ಓದಿ : ನಾಯಕತ್ವದ ಬಗ್ಗೆ ಮಾತನಾಡಲು ಬಸನಗೌಡ ಪಾಟೀಲ್ ಯತ್ನಾಳ್​ ಯಾರು: ಡಿವಿಎಸ್ ಕಿಡಿ

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವುದರ ಮೂಲಕ ದೇಶದ ರೈತರಿಗೆ ನಿಜವಾದ ಸ್ವಾತಂತ್ರ್ಯ ನೀಡಿದೆ. ಈ ಹಿಂದೆ ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಎಪಿಎಂಸಿಯನ್ನು ರದ್ದುಗೊಳಿಸುವುದಾಗಿ ಹೇಳಿದ್ದರು. ಆದರೆ ಈಗ ಎಪಿಎಂಸಿಯನ್ನು ರದ್ದು ಮಾಡದೆ ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಕಾನೂನು ತರಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.