ETV Bharat / state

ಕಟ್ಟಡದ ಉದ್ಘಾಟನೆಗೆ ಬಂದ ಸಚಿವರನ್ನು ತಡೆದ ಗ್ರಾಮಸ್ಥರು,ಕಾರಣ?

author img

By

Published : Oct 19, 2019, 1:54 PM IST

ಕಟ್ಟಡದ ಉದ್ಘಾಟನೆಗೆಂದು ಬಂದ ಅಬಕಾರಿ ಸಚಿವರಿಗೆ ಗ್ರಾಮಸ್ಥರು ತಡೆದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಬಳಿ ನಡೆದಿದೆ.

ಐಟಿಐ ಕಾಲೇಜು ಕಟ್ಟಡದ ಉದ್ಘಾಟನೆ

ಚಿಕ್ಕಬಳ್ಳಾಪುರ : ಕಟ್ಟಡದ ಉದ್ಘಾಟನೆಗೆಂದು ಬಂದ ಅಬಕಾರಿ ಸಚಿವರಿಗೆ ಗ್ರಾಮಸ್ಥರು ತಡೆಯೊಡ್ಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಬಳಿ ನಡೆದಿದೆ.

ಐಟಿಐ ಕಾಲೇಜು ಕಟ್ಟಡದ ಉದ್ಘಾಟನೆ

ತಾಲೂಕಿನ ಮಂಡಿಕಲ್ ಬಳಿ ಐಟಿಐ ಕಾಲೇಜು ಕಟ್ಟಡದ ಉದ್ಘಾಟನೆಗೆ ಅಬಕಾರಿ ಸಚಿವ ನಾಗೇಶ್ ಹಾಜರಾಗಿದ್ದು, ಎಲ್ಲಾ ತಯಾರಿ ನಡೆಸಿಕೊಂಡಿದ್ದರು. ಆದರೆ ಸ್ಥಳೀಯ ಅನರ್ಹ ಶಾಸಕ ಸುಧಾಕರ್​ಗೆ ಆಹ್ವಾನ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಕೆಲ ಕಾಲ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.

ಮಂಡಿಕಲ್ಲು ಗ್ರಾಮದಲ್ಲಿನ ಐಟಿಐ ಕಾಲೇಜು ಉದ್ಘಾಟನೆಗೆ ಸ್ಥಳೀಯ ಗ್ರಾ.ಪಂ ಸದಸ್ಯ ಹಾಗೂ ಆನರ್ಹ ಶಾಸಕರಿಗೆ ಆಹ್ವಾನ ಇಲ್ಲದ ಕಾರಣ ಸುಧಾಕರ್ ಬೆಂಬಲಿಗರು ಗುತ್ತಿಗೆದಾರ ಹಾಗೂ ಕಾಲೇಜು ಪ್ರಾಂಶುಪಾಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾರ್ಯಕ್ರಮಕ್ಕೆ ಅನರ್ಹ ಶಾಸಕ ಸುಧಾಕರ್ ಹಾಗೂ ಸಚಿವರು ಬಂದ ನಂತರವೇ ಬೆಂಬಲಿಗರು ಶಾಂತಗೊಂಡು ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ನಂತರ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಚಿಕ್ಕಬಳ್ಳಾಪುರ : ಕಟ್ಟಡದ ಉದ್ಘಾಟನೆಗೆಂದು ಬಂದ ಅಬಕಾರಿ ಸಚಿವರಿಗೆ ಗ್ರಾಮಸ್ಥರು ತಡೆಯೊಡ್ಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಬಳಿ ನಡೆದಿದೆ.

ಐಟಿಐ ಕಾಲೇಜು ಕಟ್ಟಡದ ಉದ್ಘಾಟನೆ

ತಾಲೂಕಿನ ಮಂಡಿಕಲ್ ಬಳಿ ಐಟಿಐ ಕಾಲೇಜು ಕಟ್ಟಡದ ಉದ್ಘಾಟನೆಗೆ ಅಬಕಾರಿ ಸಚಿವ ನಾಗೇಶ್ ಹಾಜರಾಗಿದ್ದು, ಎಲ್ಲಾ ತಯಾರಿ ನಡೆಸಿಕೊಂಡಿದ್ದರು. ಆದರೆ ಸ್ಥಳೀಯ ಅನರ್ಹ ಶಾಸಕ ಸುಧಾಕರ್​ಗೆ ಆಹ್ವಾನ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಕೆಲ ಕಾಲ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.

ಮಂಡಿಕಲ್ಲು ಗ್ರಾಮದಲ್ಲಿನ ಐಟಿಐ ಕಾಲೇಜು ಉದ್ಘಾಟನೆಗೆ ಸ್ಥಳೀಯ ಗ್ರಾ.ಪಂ ಸದಸ್ಯ ಹಾಗೂ ಆನರ್ಹ ಶಾಸಕರಿಗೆ ಆಹ್ವಾನ ಇಲ್ಲದ ಕಾರಣ ಸುಧಾಕರ್ ಬೆಂಬಲಿಗರು ಗುತ್ತಿಗೆದಾರ ಹಾಗೂ ಕಾಲೇಜು ಪ್ರಾಂಶುಪಾಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾರ್ಯಕ್ರಮಕ್ಕೆ ಅನರ್ಹ ಶಾಸಕ ಸುಧಾಕರ್ ಹಾಗೂ ಸಚಿವರು ಬಂದ ನಂತರವೇ ಬೆಂಬಲಿಗರು ಶಾಂತಗೊಂಡು ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ನಂತರ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Intro:ಕಟ್ಟಡದ ಉದ್ಘಾಟನೆಯ ಮೊದಲೇ ಅಬಕಾರಿ ಸಚಿವರಿಗೆ ಗ್ರಾಮಸ್ಥರು ತಡೆ ನೀಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಬಳಿ ನಡೆದಿದೆ.Body:ತಾಲೂಕಿನ ಮಂಡಿಕಲ್ ಬಳಿ ಐಟಿಐ ಕಾಲೇಜು ಕಟ್ಟಡದ ಉದ್ಘಾಟನೆಗೆ ಅಬಕಾರಿ ಸಚಿವ ನಾಗೇಶ್ ಕಾರ್ಯಕ್ರಮಕ್ಕೆ ಹಾಜರಾಗಬೇಕಿದ್ದು ಎಲ್ಲಾ ತಯಾರಿಯನ್ನು ನಡೆಸಿಕೊಂಡಿದ್ದರು ಆದರೆ ಸ್ಥಳೀಯ ಶಾಸಕರಾಗಿದ್ದ ಅನರ್ಹ ಶಾಸಕ ಸುಧಾಕರ್ ಗೆ ಆಹ್ವಾನ ನೀಡಿಲ್ಲಾ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದಾರೆ.

ಇನ್ನೂ ಸಚಿವ ನಾಗೇಶ್ ಮೊದಲ‌ ಬಾರಿಗೆ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಕಟ್ಟಡಕ್ಕೆ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವ ಮೊದಲೇ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ.

ಮಂಡಿಕಲ್ಲು ಗ್ರಾಮದಲ್ಲಿನ ಐಟಿಐ ಕಾಲೇಜು ಉದ್ಘಾಟನೆಗೆ
ಸ್ಥಳೀಯ ಗ್ರಾಪಂ ಸದಸ್ಯರ ಹಾಗೂ ಆನರ್ಹ ಶಾಸಕರಿಗೂ ಇಲ್ಲದ ಆಹ್ವಾನ ಇಲ್ಲದ ಕಾರಣ ಆಕ್ರೋಶಗೊಂಡ ಸುಧಾಕರ್ ಬೆಂಬಲಿಗರು ಗುತ್ತಿಗೆದಾರ ಹಾಗೂ ಕಾಲೇಜು ಪ್ರಾಂಶುಪಾಲರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಕಾರ್ಯಕ್ರಮಕ್ಕೆ ಅನರ್ಹ ಶಾಸಕ ಸುಧಾಕರ್ ಹಾಗೂ ಸಚಿವರು ಒಂದೇ ಸಮನೇ ಬಂದ ನಂತರ ಶಾಂತಗೊಂಡು ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ನಂತರ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಟ್ಟಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.