ETV Bharat / state

ಮಾಮೂಲಿ ಕೊಡದಿದ್ದಕ್ಕೆ ಹೊಡೆದ್ರು ಅಂತಾ ವೃದ್ಧ ಹೇಳಿದ್ರೆ... ಕರ್ತವ್ಯಕ್ಕೆ ಅಡ್ಡಿಪಡಿಸಿದ್ರು ಅಂತಾರೆ ಪೊಲೀಸರು

author img

By

Published : Jun 9, 2019, 1:25 PM IST

Updated : Jun 9, 2019, 1:33 PM IST

ಮಾಮೂಲಿ ಕೊಡಲಿಲ್ಲವೆಂದು ಪೇದೆ ಥಳಿಸಿದ್ದಾರೆ ಎಂದು ವೃದ್ಧ ಆರೋಪಿಸುತ್ತಿದ್ದಾರೆ. ಆದ್ರೆ ಅಕ್ರಮ ಮದ್ಯ ಮಾರಾಟ ತಡೆಯಲು ಹೋದ ಪೇದೆಯ ಕರ್ತವ್ಯಕ್ಕೆ ವೃದ್ಧ ಅಡ್ಡಿಪಡಿಸಿದ್ದಾರೆ ಎಂದು ಗುಡಿಬಂಡೆ ಪೊಲೀಸರು ದೂರು ದಾಖಲಿಸಿದ್ದಾರೆ.

ವೃದ್ಧನ ಮೇಲೆ ಪೊಲೀಸಪ್ಪನ ಪ್ರತಾಪ

ಚಿಕ್ಕಬಳ್ಳಾಪುರ: ಮಾಮೂಲಿ ಕೊಡಲಿಲ್ಲ ಎಂದು ವೃದ್ಧನ ಮೇಲೆ ಪೊಲೀಸ್ ಪೇದೆ ಪ್ರತಾಪ ತೋರಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ.

ಗ್ರಾಮದ ವೃದ್ಧ ನರಸಿಂಹಪ್ಪಗೆ ಪೇದೆ ಮುನಿರಾಜು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ಅಂಗಡಿಯಲ್ಲಿ ನರಸಿಂಹಪ್ಪ ಮದ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೇದೆ ಮಾಮೂಲಿ ಪಡೆಯುತ್ತಿದ್ದರಂತೆ. ಹೀಗೆ 13 ಸಾವಿರ ರೂ. ಪಡೆದಿದ್ದಾರಂತೆ. ಮತ್ತೆ ಮಾಮೂಲಿ ಕೊಡಲ್ಲ ಎಂದಾಗ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ವೃದ್ಧನ ಮೇಲೆ ಪೊಲೀಸಪ್ಪನ ಪ್ರತಾಪ?

ಮಾಮೂಲಿ ಕೊಡದ ಕಾರಣ ಪೇದೆ ಮನಬಂದಂತೆ ಥಳಿಸಿದ್ದಾರೆ ಎಂದು ನರಸಿಂಹಪ್ಪ ಮತ್ತು ಅವರ ಸೊಸೆ ಆರೋಪಿಸಿದ್ದಾರೆ.

ಇತ್ತ ಗುಡಿಬಂಡೆ ಪೊಲೀಸರು ಅಕ್ರಮ ಮದ್ಯ ಮಾರಾಟ ತಡೆಯಲು ಹೋದ ಪೊಲೀಸ್ ಪೇದೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನರಸಿಂಹಪ್ಪನ ಮೇಲೆ ಕೇಸ್ ದಾಖಲಿಸಿದ್ದಾರೆ. ಸದ್ಯ ಪೊಲೀಸ್ ಏಟಿನಿಂದ ಗಾಯಗೊಂಡಿರುವ ನರಸಿಂಹಪ್ಪ ಗುಡಿಬಂಡೆ ತಾಲೂಕು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಚಿಕ್ಕಬಳ್ಳಾಪುರ: ಮಾಮೂಲಿ ಕೊಡಲಿಲ್ಲ ಎಂದು ವೃದ್ಧನ ಮೇಲೆ ಪೊಲೀಸ್ ಪೇದೆ ಪ್ರತಾಪ ತೋರಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ.

ಗ್ರಾಮದ ವೃದ್ಧ ನರಸಿಂಹಪ್ಪಗೆ ಪೇದೆ ಮುನಿರಾಜು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ಅಂಗಡಿಯಲ್ಲಿ ನರಸಿಂಹಪ್ಪ ಮದ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೇದೆ ಮಾಮೂಲಿ ಪಡೆಯುತ್ತಿದ್ದರಂತೆ. ಹೀಗೆ 13 ಸಾವಿರ ರೂ. ಪಡೆದಿದ್ದಾರಂತೆ. ಮತ್ತೆ ಮಾಮೂಲಿ ಕೊಡಲ್ಲ ಎಂದಾಗ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ವೃದ್ಧನ ಮೇಲೆ ಪೊಲೀಸಪ್ಪನ ಪ್ರತಾಪ?

ಮಾಮೂಲಿ ಕೊಡದ ಕಾರಣ ಪೇದೆ ಮನಬಂದಂತೆ ಥಳಿಸಿದ್ದಾರೆ ಎಂದು ನರಸಿಂಹಪ್ಪ ಮತ್ತು ಅವರ ಸೊಸೆ ಆರೋಪಿಸಿದ್ದಾರೆ.

ಇತ್ತ ಗುಡಿಬಂಡೆ ಪೊಲೀಸರು ಅಕ್ರಮ ಮದ್ಯ ಮಾರಾಟ ತಡೆಯಲು ಹೋದ ಪೊಲೀಸ್ ಪೇದೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನರಸಿಂಹಪ್ಪನ ಮೇಲೆ ಕೇಸ್ ದಾಖಲಿಸಿದ್ದಾರೆ. ಸದ್ಯ ಪೊಲೀಸ್ ಏಟಿನಿಂದ ಗಾಯಗೊಂಡಿರುವ ನರಸಿಂಹಪ್ಪ ಗುಡಿಬಂಡೆ ತಾಲೂಕು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Intro:ಮಾಮೂಲಿ ಕೊಡಲಿಲ್ಲ ಅಂತ ಮುದುಕನ ಮೇಲೆ ಪೊಲೀಸ್ ಪ್ರತಾಪ ತೋರಿಸಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.Body:ಗ್ರಾಮದ ಮುದುಕ ನರಸಿಂಹಪ್ಪ ತಮ್ಮ ಅಂಗಡಿಯಲ್ಲಿ ಮದ್ಯ ಮಾರಾಟ ನಡೆಸುತ್ತಿದ್ದು ಇದರ ಸಲುವಾಗಿಯೇ ಪೇದೆ ಮುನಿರಾಜು ಮಾಮೂಲಿಯನ್ನು ಪಡೆದುಕೊಂಡಿರುತ್ತಾನೇ. ಇದುವರೆಗೂ 13 ಸಾವಿರ ಹಣವನ್ನು ಮುದುಕ ನರಸಿಂಹಪ್ಪನಿಂದ ಪಡೆದುಕೊಂಡ ಪೇದೆ ಮುನಿರಾಜು ಮತ್ತೆ ಮಾಮೂಲಿ ಕೊಡಲಿಲ್ಲವೆಂದು ರಕ್ತ ಬರುವ ಹಾಗೇ ಹೊಡೆದಿದ್ದಾನೆ.

ಆದರೆ ಈಗಾಗಲೇ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಿದರು ಸಹ ಮಾಮಾಲಿ ಕೊಡದ ಕಾರಣ ಪೇದೆ ಮುನಿರಾಜು ಗ್ರಾಮದ ನರಸಿಂಹಪ್ಪನನ್ನು ಮನಬಂದಂತೆ ಥಳಿಸಿದ್ದಾನೆ ಎಂದು ಮುದುಕ ಹಾಗೂ ಸೊಸೆಯ ಆರೋಪವಾಗಿದ್ರೆ ಇತ್ತ ಗುಡಿಬಂಡೆ ಪೊಲೀಸರು ಅಕ್ರಮ ಮದ್ಯ ಮಾರಟವನ್ನು ತಡೆಯಲು ಹೋದ ಪೊಲೀಸ್ ಪೇದೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ಮುದುಕನ ಮೇಲೆಯೇ ಕೇಸ್ ಜಡಿದಿದ್ದಾರೆ.
ಸದ್ಯ ಪೊಲೀಸ್ ಏಟಿಗೆ ಬೆಚ್ಚಿಬಿದ್ದು ತೀವ್ರ ಅಸ್ವಸ್ಥರಾದ ಮುದುಕ ನರಸಿಂಹಪ್ಪ ಗುಡಿಬಂಡೆ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದು‌ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.
ಏನೇ ಆಗಲಿ ಅಕ್ರಮ ಮದ್ಯ ಮಾರಾಟ ತಪ್ಪಾದರು ಠಾಣೆಗೆ ಕರೆದೊಯ್ದು ವಿಚರಣೆ ನಡೆಸಬೇಕೆ ವಿನಃ ಈ ರೀತಿ ಮನಬಂದಂತೆ ಥಳಿಸುವುದು ಸೂಕ್ತವಲ್ಲಾ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
Conclusion:
Last Updated : Jun 9, 2019, 1:33 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.