ETV Bharat / state

ಕಂದಾಯ ಇಲಾಖೆಯಿಂದ ಜನಸ್ಪಂದನಾ ಕಾರ್ಯಕ್ರಮ..

ಈ ಸಭೆಯಲ್ಲಿ ಸುಮಾರು 160ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಫಾರಂ 53 ಅನ್ವಯ ಅರ್ಜಿ ಹಳೆಯ ದರಖಾಸ್ತು ಸಮಿತಿಯಲ್ಲಿ ಪರಿಶೀಲನೆ ಮಾಡಿರುವ 80 ಅರ್ಜಿಗಳ ಪೈಕಿ 30 ಫಲಾನುಭವಿಗಳಿಗೆ ಪಹಣಿ ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ನಾನೇ ಖುದ್ದು ಅರ್ಜಿದಾರರ ಜಮೀನು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಹಕ್ಕು ಪತ್ರಗಳನ್ನು ಒಂದು ತಿಂಗಳ ಒಳಗಾಗಿ ವಿತರಸಿಲಾಗುವುದು ಹಾಗೂ ಫಾರಂ 57ರಲ್ಲಿ ಹೊಸದಾಗಿ ಅರ್ಜಿಗಳನ್ನು ಹಾಕಿರುವವರಿಗೆ ಹೊಸ ದರಖಾಸ್ತು ಸಮಿತಿ ರಚನೆಯಾದ ನಂತರ ಸಭೆಯಲ್ಲಿ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

author img

By

Published : Jan 22, 2020, 11:36 PM IST

janaspandana-program-by-the-revenue-department
janaspandana-program-by-the-revenue-department

ಗುಡಿಬಂಡೆ/ ಚಿಕ್ಕಬಳ್ಳಾಪುರ: ಜನತೆ ತಮ್ಮ ಸಮಸ್ಯೆಗಳ ಬಗ್ಗೆ ಮೌಖಿಕವಾಗಿ ದೂರು ನೀಡದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯ ಬಗ್ಗೆ ನೇರವಾಗಿ ಲಿಖಿತ ರೂಪದಲ್ಲಿ ದೂರು ನೀಡಿದಾಗ ತಮ್ಮ ಸಮಸ್ಯೆಯನ್ನು ನಿಗಧಿತ ಸಮಯದಲ್ಲಿ ಬಗೆಹರಿಸುವುದಾಗಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ತಿಳಿಸಿದರು.

ಕಂದಾಯ ಇಲಾಖೆಯಿಂದ ಜನಸ್ಪಂದನಾ ಕಾರ್ಯಕ್ರಮ..

ಪಟ್ಟಣದ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ನಡೆಸಿದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಎಲ್ಲರೂ ಮೌಖಿಕವಾಗಿ ತಾಲೂಕು ಕಚೇರಿಯಲ್ಲಿ ಕೆಲಸಗಳಾಗುತ್ತಿಲ್ಲ ಎಂದು ದೂರು ನೀಡಿರುವುದು ಸಾಮಾನ್ಯ. ಆದರೆ, ತಾವು ನೀಡಿದ ದೂರಿನಲ್ಲಿ ಯಾವ ಅಧಿಕಾರಿ ಕೆಲಸ ಮಾಡುತ್ತಿಲ್ಲ ಎಂಬುದು ತಿಳಿಸದೇ ಇರುವ ಕಾರಣ ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟಕರ. ಆದ್ದರಿಂದ ತಾವುಗಳು ಲಿಖಿತ ರೂಪದಲ್ಲಿ ತಮಗೆ ಯಾವ ಅಧಿಕಾರಿಯಿಂದ ಕೆಲಸವಾಗಬೇಕಿದೆ ಎಂಬುದನ್ನು ನೀಡಿದಾಗ ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.

ಈ ಸಭೆಯಲ್ಲಿ ಸುಮಾರು 160ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಫಾರಂ 53 ಅನ್ವಯ ಅರ್ಜಿ ಹಳೆಯ ದರಖಾಸ್ತು ಸಮಿತಿಯಲ್ಲಿ ಪರಿಶೀಲನೆ ಮಾಡಿರುವ 80 ಅರ್ಜಿಗಳ ಪೈಕಿ 30 ಫಲಾನುಭವಿಗಳಿಗೆ ಪಹಣಿ ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ನಾನೇ ಖುದ್ದು ಅರ್ಜಿದಾರರ ಜಮೀನು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಹಕ್ಕು ಪತ್ರಗಳನ್ನು ಒಂದು ತಿಂಗಳ ಒಳಗಾಗಿ ವಿತರಸಿಲಾಗುವುದು ಹಾಗೂ ಫಾರಂ 57ರಲ್ಲಿ ಹೊಸದಾಗಿ ಅರ್ಜಿಗಳನ್ನು ಹಾಕಿರುವವರಿಗೆ ಹೊಸ ದರಖಾಸ್ತು ಸಮಿತಿ ರಚನೆಯಾದ ನಂತರ ಸಭೆಯಲ್ಲಿ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಭೂಮಿಗಾಗಿ ಹಣ ನೀಡಬೇಡಿ: ಸರ್ಕಾರದಿಂದ ಭೂ ರಹಿತರಿಗಾಗಿ ಉಚಿತ ದರಖಾಸ್ತು ಸಮಿತಿಯ ಮೂಲಕ ಭೂಮಿ ನೀಡುತ್ತಿದೆ. ಈಗಾಗಲೇ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಹಳೆಯ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಆದಷ್ಟು ಶೀಘ್ರ ಫಲಾನುಭವಿಗಳಿಗೆ ಭೂಮಿಯ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ. ಉಳಿದಂತೆ ಹೊಸದಾಗಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ದರಖಾಸ್ತು ಸಮಿತಿ ಹೊಸದಾಗಿ ರಚನೆ ಮಾಡಬೇಕಿದೆ. ಅದನ್ನು ಆದಷ್ಟೂ ಬೇಗ ಸಿದ್ದಮಾಡಿ ಆ ಅರ್ಜಿಗಳನ್ನು ವಿಲೇವಾರಿ ಮಾಡುತ್ತೇನೆ. ಈ ಬಾರಿ ನಾನೇ ಖುದ್ದು ಅಧಿಕಾರಿಗಳೊಡನೆ ತಮ್ಮ ಗ್ರಾಮಗಳಿಗೆ ಭೇಟಿ ನೀಡಿ ಅರ್ಹರನ್ನು ಪತ್ತೆ ಮಾಡಿ ಭೂಮಿ ನೀಡುವ ಕೆಲಸ ಮಾಡುತ್ತೇನೆ. ಯಾವುದೇ ಅಧಿಕಾರಿಗಳಾಗಲಿ ಅಥವಾ ಮಧ್ಯವರ್ತಿಗಳಿಗಾಗಲಿ ಹಣ ನೀಡಬೇಡಿ ಎಂದರು.

ತಾಲೂಕಿನಾದ್ಯಂತ ವಸತಿ ರಹಿತರಿಗೆ ನಿವೇಶನ ನೀಡಲು ಈಗಾಗಲೇ ಜಾಗ ಸಹ ಮಂಜೂರಾಗಿದೆ. ಫಲಾನುಭವಿಗಳ ಪಟ್ಟಿಯನ್ನು ತಂತ್ರಾಂಶದಲ್ಲಿ ಗಣಕೀಕರಣ ಗೊಳಿಸಬೇಕಿರುವುದರಿಂದ ಪಂಚಾಯತ್‌ ಚುನಾವಣೆ ಘೋಷಣೆ ಆಗುವುದಕ್ಕೂ ಮುನ್ನೆವೇ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕೆಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಗುಡಿಬಂಡೆ/ ಚಿಕ್ಕಬಳ್ಳಾಪುರ: ಜನತೆ ತಮ್ಮ ಸಮಸ್ಯೆಗಳ ಬಗ್ಗೆ ಮೌಖಿಕವಾಗಿ ದೂರು ನೀಡದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯ ಬಗ್ಗೆ ನೇರವಾಗಿ ಲಿಖಿತ ರೂಪದಲ್ಲಿ ದೂರು ನೀಡಿದಾಗ ತಮ್ಮ ಸಮಸ್ಯೆಯನ್ನು ನಿಗಧಿತ ಸಮಯದಲ್ಲಿ ಬಗೆಹರಿಸುವುದಾಗಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ತಿಳಿಸಿದರು.

ಕಂದಾಯ ಇಲಾಖೆಯಿಂದ ಜನಸ್ಪಂದನಾ ಕಾರ್ಯಕ್ರಮ..

ಪಟ್ಟಣದ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ನಡೆಸಿದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಎಲ್ಲರೂ ಮೌಖಿಕವಾಗಿ ತಾಲೂಕು ಕಚೇರಿಯಲ್ಲಿ ಕೆಲಸಗಳಾಗುತ್ತಿಲ್ಲ ಎಂದು ದೂರು ನೀಡಿರುವುದು ಸಾಮಾನ್ಯ. ಆದರೆ, ತಾವು ನೀಡಿದ ದೂರಿನಲ್ಲಿ ಯಾವ ಅಧಿಕಾರಿ ಕೆಲಸ ಮಾಡುತ್ತಿಲ್ಲ ಎಂಬುದು ತಿಳಿಸದೇ ಇರುವ ಕಾರಣ ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟಕರ. ಆದ್ದರಿಂದ ತಾವುಗಳು ಲಿಖಿತ ರೂಪದಲ್ಲಿ ತಮಗೆ ಯಾವ ಅಧಿಕಾರಿಯಿಂದ ಕೆಲಸವಾಗಬೇಕಿದೆ ಎಂಬುದನ್ನು ನೀಡಿದಾಗ ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.

ಈ ಸಭೆಯಲ್ಲಿ ಸುಮಾರು 160ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಫಾರಂ 53 ಅನ್ವಯ ಅರ್ಜಿ ಹಳೆಯ ದರಖಾಸ್ತು ಸಮಿತಿಯಲ್ಲಿ ಪರಿಶೀಲನೆ ಮಾಡಿರುವ 80 ಅರ್ಜಿಗಳ ಪೈಕಿ 30 ಫಲಾನುಭವಿಗಳಿಗೆ ಪಹಣಿ ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ನಾನೇ ಖುದ್ದು ಅರ್ಜಿದಾರರ ಜಮೀನು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಹಕ್ಕು ಪತ್ರಗಳನ್ನು ಒಂದು ತಿಂಗಳ ಒಳಗಾಗಿ ವಿತರಸಿಲಾಗುವುದು ಹಾಗೂ ಫಾರಂ 57ರಲ್ಲಿ ಹೊಸದಾಗಿ ಅರ್ಜಿಗಳನ್ನು ಹಾಕಿರುವವರಿಗೆ ಹೊಸ ದರಖಾಸ್ತು ಸಮಿತಿ ರಚನೆಯಾದ ನಂತರ ಸಭೆಯಲ್ಲಿ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಭೂಮಿಗಾಗಿ ಹಣ ನೀಡಬೇಡಿ: ಸರ್ಕಾರದಿಂದ ಭೂ ರಹಿತರಿಗಾಗಿ ಉಚಿತ ದರಖಾಸ್ತು ಸಮಿತಿಯ ಮೂಲಕ ಭೂಮಿ ನೀಡುತ್ತಿದೆ. ಈಗಾಗಲೇ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಹಳೆಯ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಆದಷ್ಟು ಶೀಘ್ರ ಫಲಾನುಭವಿಗಳಿಗೆ ಭೂಮಿಯ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ. ಉಳಿದಂತೆ ಹೊಸದಾಗಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ದರಖಾಸ್ತು ಸಮಿತಿ ಹೊಸದಾಗಿ ರಚನೆ ಮಾಡಬೇಕಿದೆ. ಅದನ್ನು ಆದಷ್ಟೂ ಬೇಗ ಸಿದ್ದಮಾಡಿ ಆ ಅರ್ಜಿಗಳನ್ನು ವಿಲೇವಾರಿ ಮಾಡುತ್ತೇನೆ. ಈ ಬಾರಿ ನಾನೇ ಖುದ್ದು ಅಧಿಕಾರಿಗಳೊಡನೆ ತಮ್ಮ ಗ್ರಾಮಗಳಿಗೆ ಭೇಟಿ ನೀಡಿ ಅರ್ಹರನ್ನು ಪತ್ತೆ ಮಾಡಿ ಭೂಮಿ ನೀಡುವ ಕೆಲಸ ಮಾಡುತ್ತೇನೆ. ಯಾವುದೇ ಅಧಿಕಾರಿಗಳಾಗಲಿ ಅಥವಾ ಮಧ್ಯವರ್ತಿಗಳಿಗಾಗಲಿ ಹಣ ನೀಡಬೇಡಿ ಎಂದರು.

ತಾಲೂಕಿನಾದ್ಯಂತ ವಸತಿ ರಹಿತರಿಗೆ ನಿವೇಶನ ನೀಡಲು ಈಗಾಗಲೇ ಜಾಗ ಸಹ ಮಂಜೂರಾಗಿದೆ. ಫಲಾನುಭವಿಗಳ ಪಟ್ಟಿಯನ್ನು ತಂತ್ರಾಂಶದಲ್ಲಿ ಗಣಕೀಕರಣ ಗೊಳಿಸಬೇಕಿರುವುದರಿಂದ ಪಂಚಾಯತ್‌ ಚುನಾವಣೆ ಘೋಷಣೆ ಆಗುವುದಕ್ಕೂ ಮುನ್ನೆವೇ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕೆಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.

Intro:ಕಂದಾಯ ಇಲಾಖೆಯಿಂದ ಜನಸ್ಪಂದನಾ ಕಾರ್ಯಕ್ರಮBody:ಗುಡಿಬಂಡೆ: ಜನತೆ ತಮ್ಮ ಸಮಸ್ಯೆಗಳ ಬಗ್ಗೆ ಮೌಖಿಕವಾಗಿ ದೂರು ನೀಡದೇ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಯ ಬಗ್ಗೆ ನೇರವಾಗಿ ಲಿಖಿತ ರೂಪದಲ್ಲಿ ದೂರು ನೀಡಿದಾಗ ತಮ್ಮ ಸಮಸ್ಯೆಯನ್ನು ನಿಗಧಿತ ಸಮಯದಲ್ಲಿ ಬಗೆಹರಿಸುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
Conclusion: ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಕರೆಯಲಾಗಿದ್ದ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಎಲ್ಲರೂ ಮೌಖಿಕವಾಗಿ ತಾಲ್ಲೂಕು ಕಛೇರಿಯಲ್ಲಿ ಕೆಲಸಗಳಾಗುತ್ತಿಲ್ಲ, ಆ ಕಛೇರಿಯಲ್ಲಿ ಆಗುತ್ತಿಲ್ಲ ಎಂದು ಮೌಖಿಕವಾಗಿ ದೂರು ನೀಡುವುದು ಸಾಮಾನ್ಯವಾಗಿದೆ. ಆದರೆ ತಾವು ನೀಡಿದ ದೂರಿನಲ್ಲಿ ಯಾವ ಅಧಿಕಾರಿ ಕೆಲಸ ಮಾಡುತ್ತಿಲ್ಲ ಎಂಬುದು ತಿಳಿಸದೇ ಇರುವ ಕಾರಣ ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟಕರವಾಗಿದೆ. ಆದ್ದರಿಂದ ತಾವುಗಳು ಲಿಖಿತ ರೂಪದಲ್ಲಿ ತಮಗೆ ಯಾವ ಅಧಿಕಾರಿಯಿಂದ ಕೆಲಸವಾಗಬೇಕಿದೆ ಎಂಬುದನ್ನು ನೀಡಿದಾಗ ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.

ಈ ಸಭೆಯಲ್ಲಿ ಸುಮಾರು 160 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಪಾರಂ 53 ಅನ್ವಯ ಅರ್ಜಿಗಳು ಹಳೇಯ ದರಖಾಸ್ತು ಸಮಿತಿಯಲ್ಲಿ ಪರಿಶೀಲನೆ ಮಾಡಿರುವ 80 ಅರ್ಜಿಗಳ ಪೈಕಿ 30 ಫಲಾನುಭವಿಗಳಿಗೆ ಪಹಣಿಗಳನ್ನು ವಿತರಿಸಲಾಗಿದ್ದು ಉಳಿದ ಅರ್ಜಿಗಳನ್ನು ನಾನೇ ಖುದ್ದು ಅರ್ಜಿದಾರರ ಜಮೀನು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಬೇಟಿ ನೀಡಿ ಪರಿಶೀಲನೆ ಮಾಡಿ ಹಕ್ಕು ಪತ್ರಗಳನ್ನು ಒಂದು ತಿಂಗಳ ಒಳಗಾಗಿ ವಿತರಸಿಲಾಗುವುದು ಹಾಗೂ ಪಾರಂ 57 ರಲ್ಲಿ ಹೊಸದಾಗಿ ಅರ್ಜಿಗಳನ್ನು ಹಾಕಿರುವವರಿಗೆ ಹೊಸದಾಗಿ ದರಖಾಸ್ತು ಸಮಿತಿ ರಚನೆಯಾದ ನಂತರ ಸಭೆಯಲ್ಲಿ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಭೂಮಿಗಾಗಿ ಹಣ ನೀಡಬೇಡಿ: ಸರ್ಕಾರದಿಂದ ಭೂ ರಹಿತರಿಗಾಗಿ ಉಚಿತವಾಗಿ ದರಖಾಸ್ತು ಸಮಿತಿಯ ಮೂಲಕ ಭೂಮಿಯನ್ನು ನೀಡುತ್ತಿದ್ದು. ಈಗಾಗಲೇ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಹಳೇಯ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಆದಷ್ಟು ಶೀಘ್ರವಾಗಿ ಫಲಾನುಭವಿಗಳಿಗೆ ಭೂಮಿಯ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ. ಉಳಿದಂತೆ ಹೊಸದಾಗಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ದರಖಾಸ್ತು ಸಮಿತಿ ಹೊಸದಾಗಿ ರಚನೆ ಮಾಡಬೇಕಿದೆ. ಅದನ್ನು ಆದಷ್ಟೂ ಬೇಗ ಸಿದ್ದಮಾಡಿ ಆ ಅರ್ಜಿಗಳನ್ನು ವಿಲೇವಾರಿ ಮಾಡುತ್ತೇನೆ. ಈ ಬಾರಿ ನಾನೇ ಖುದ್ದು ಅಧಿಕಾರಿಗಳೊಡನೆ ತಮ್ಮ ಗ್ರಾಮಗಳಿಗೆ ಭೇಟಿ ನೀಡಿ ಅರ್ಹರನ್ನು ಪತ್ತೆ ಮಾಡಿ ಭೂಮಿ ನೀಡುವ ಕೆಲಸ ಮಾಡುತ್ತೇನೆ. ಯಾವುದೇ ಅಧಿಕಾರಿಗಾಗಲೀ ಅಥವಾ ಮಧ್ಯವರ್ತಿಗಳಿಗಾಗಲಿ ಹಣ ನೀಡಬೇಡಿ ಎಂದರು.

ಇನ್ನೂ ತಾಲ್ಲೂಕಿನಾದ್ಯಂತ ವಸತಿ ರಹಿತರಿಗೆ ನಿವೇಶನ ನೀಡಲು ಈಗಾಗಲೇ ಜಾಗ ಸಹ ಮಂಜೂರಾಗಿದ್ದು, ಫಲಾನುಭವಿಗಳ ಪಟ್ಟಿಯನ್ನು ತಂತ್ರಾಂಶದಲ್ಲಿ ಗಣಕೀಕರಣ ಗೊಳಿಸಬೇಕಿರುವುದರಿಂದ ಪಂಚಾಯತಿ ಚುನಾವಣೆ ಘೋಷಣೆ ಆಗುವುದಕ್ಕೂ ಮುನ್ನೆವೇ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕೆಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.