ETV Bharat / state

ಪ್ರೀತಿಸಿ ಮದುವೆಯಾದ ಪ್ರೇಮಿಗಳು: ಪೋಷಕರ ವಿರುದ್ಧ ದೂರು

author img

By

Published : Aug 8, 2023, 7:30 AM IST

Updated : Aug 8, 2023, 12:48 PM IST

Chikkaballapur Lovers: ಪ್ರೀತಿಸಿ ಮದುವೆಯಾದ ಪ್ರೇಮಿಗಳು ತಮ್ಮ ಪೋಷಕರಿಂದ ತಮಗೆ ಜೀವ ಭಯವಿದೆ ಎಂದು ದೂರು ನೀಡಿದ್ದಾರೆ.

ಪ್ರೀತಿಸಿ ಮದುವೆಯಾದ ಜೋಡಿ
ಪ್ರೀತಿಸಿ ಮದುವೆಯಾದ ಜೋಡಿ

ಚಿಕ್ಕಬಳ್ಳಾಪುರ: ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಪ್ರೇಮಿಗಳು ಪ್ರೀತಿಸಿ ಮದುವೆಯಾಗಿದ್ದು, ತಮಗೆ ತಮ್ಮ ಪೋಷಕರಿಂದ ಜೀವ ಭಯವಿದೆ, ಹಾಗಾಗಿ ರಕ್ಷಣೆ ನೀಡಿ ದಾಂಪತ್ಯ ಜೀವನ ನಡೆಸಲು ಅವಕಾಶ ಮಾಡಿಕೊಡುವಂತೆ ಪೊಲೀಸರ ಮೊರೆ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಭಾನುಶ್ರೀ ಮತ್ತು ಮಧುಸೂಧನ್ ಮದುವೆಯಾದ ಜೋಡಿಯಾಗಿದ್ದು ತಮ್ಮ ಪೋಷಕರಿಂದ ತಮಗೆ ಜೀವ ಭಯವಿದೆ ಎಂದು ಯುವತಿಯು ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾನುಶ್ರೀ ಮೂಲತಃ ಗುಡಿಬಂಡೆ ತಾಲೂಕಿನ ಜಂಬಿಗೆಮರದಹಳ್ಳಿ ನಿವಾಸಿ. ಮಧುಸೂಧನ್ ಅದೇ ತಾಲೂಕಿನ ಕಾಮಶೆಟ್ಟಿಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ''ತಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಈ ವಿಚಾರ ಇಬ್ಬರ ಮನೆಯಲ್ಲಿಯೂ ಗೊತ್ತಿತ್ತು. ಆದರೆ, ಹುಡುಗ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ನಮ್ಮ ಪೋಷಕರ ಕಡೆಯವರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ಹೀಗಾಗಿ ಬೇರೆ ಮದುವೆ ಮಾಡಲು ಪ್ರಯತ್ನ ನಡೆಸಿದ್ದರು.

ಇದರಿಂದ ಪೋಷಕರಿಗೆ ಹೇಳದೇ ಕೇಳದೆ ಹುಡುಗನೊಂದಿಗೆ ಆಗಸ್ಟ್ 3 ರಂದು ದೇವಾಲಯದಲ್ಲಿ ಮದುವೆಯಾಗಿದ್ದೇವೆ. ಬೇರೆ ಸಮುದಾಯದ ಹುಡುಗನನ್ನು ಮದುವೆಯಾದ್ದು ನಿನ್ನನ್ನು ಎಳೆದುಕೊಂಡು ಬೇರೆ ಮದುವೆ ಮಾಡಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ. ನಮ್ಮ ತಂದೆ - ತಾಯಿಂದ ಜೀವ ಭಯವಿದೆ. ಹಾಗಾಗಿ ನಮ್ಮನ್ನು ನಮ್ಮ ಪಾಡಿಗೆ ಬದುಕಲು ಕಾನೂನಿನಂತೆ ಅವಕಾಶ ಮಾಡಿಕೊಡಿ'' ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೂ ಮೊದಲು ಯುವತಿಯ ಪೋಷಕರು ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ : ಪ್ರೀತಿಸಿ ದೂರಾಗಲು ಯತ್ನಿಸಿದ ಯುವಕನೊಂದಿಗೆ ಮದುವೆಯಾದ ಯುವತಿ

ಪ್ರೀತಿಸಿದ ಬಳಿಕ ತನ್ನಿಂದ ದೂರವಾಗಲು ಯತ್ನಿಸಿದ ಯುವಕನೊಂದಿಗೆ ಯುವತಿ ಮದುವೆಯಾದ ಘಟನೆ ಇತ್ತೀಚೆಗೆ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ನಡೆದಿದೆ. ದಲಿತ ಸಂಘಟನೆಗಳ ಮುಖಂಡರು ಯುವಕನಿಗೆ ಬುದ್ಧಿವಾದ ಹೇಳಿ ರಾಜಿ ಸಂಧಾನ ನಡೆಸುವ ಮೂಲಕ ಇಬ್ಬರಿಗೂ ಮದುವೆ ಮಾಡಿಸಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಕಿರಿಗಿಂಬಿ ಗ್ರಾಮದ ಯುವಕ ಚೇತನ್ ಹಾಗೂ ಇಟಪ್ಪನಹಳ್ಳಿ ಗ್ರಾಮದ ವನಿತಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವನಿತಾ ಈಗ ಗರ್ಭಿಣಿಯಾಗಿದ್ದು ಈ ವಿಚಾರವನ್ನು ಪ್ರಿಯಕರ ಚೇತನ್​ ಬಳಿ ತಿಳಿಸಿದ್ದರು. ಇದಕ್ಕೆ ಚೇತನ್​ ಗರ್ಭವನ್ನು ತೆಗೆಸುವಂತೆ ಒತ್ತಾಯಿಸಿದ್ದ. ಇದಕ್ಕೆ ಒಪ್ಪದ ವನಿತಾ, ಮದುವೆ ಮಾಡಿಕೊಳ್ಳುವಂತೆ ಚೇತನ್​ನಲ್ಲಿ ಕೇಳಿಕೊಂಡಿದ್ದಳು.

ಆದರೆ, ಪಟ್ಟು ಬಿಡಿದ ಚೇತನ್ ವನಿತಾಳನ್ನು ಶಿಡ್ಲಘಟ್ಟ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಗರ್ಭ ತೆಗೆಸಲು ಮುಂದಾಗಿದ್ದ. ವನಿತಾ ಇಲ್ಲಿ ಕೂಡ ಗರ್ಭ ತೆಗೆಸಲು ನಿರಾಕರಿಸಿದ್ದಳು. ಅಲ್ಲದೆ ಚೇತನ್ ಜೊತೆ ವಾಗ್ವಾದ ಸಹ ನಡೆಸಿದ್ದಳು. ಇದನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ವಿಚಾರಿಸಿದಾಗ ಚೇತನ್​ ತಪ್ಪು ಮಾಡಿರುವುದು ಗೊತ್ತಾಗಿತ್ತು. ವಿಚಾರ ತಿಳಿದು ಸ್ಥಳಕ್ಕೆ ಬಂದ ದಲಿತ ಸಂಘಟನೆ ಮುಖಂಡರು ಚೇತನ್​ಗೆ ಬುದ್ಧಿವಾದ ಹೇಳಿ ಇಬ್ಬರಿಗೂ ಮದುವೆ ಮಾಡಿಸಿದ್ದರು.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಭಯ: ಪೋಷಕರ ವಿರುದ್ದ ದೂರು ನೀಡಿದ ಪ್ರೇಮಿಗಳು

ಚಿಕ್ಕಬಳ್ಳಾಪುರ: ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಪ್ರೇಮಿಗಳು ಪ್ರೀತಿಸಿ ಮದುವೆಯಾಗಿದ್ದು, ತಮಗೆ ತಮ್ಮ ಪೋಷಕರಿಂದ ಜೀವ ಭಯವಿದೆ, ಹಾಗಾಗಿ ರಕ್ಷಣೆ ನೀಡಿ ದಾಂಪತ್ಯ ಜೀವನ ನಡೆಸಲು ಅವಕಾಶ ಮಾಡಿಕೊಡುವಂತೆ ಪೊಲೀಸರ ಮೊರೆ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಭಾನುಶ್ರೀ ಮತ್ತು ಮಧುಸೂಧನ್ ಮದುವೆಯಾದ ಜೋಡಿಯಾಗಿದ್ದು ತಮ್ಮ ಪೋಷಕರಿಂದ ತಮಗೆ ಜೀವ ಭಯವಿದೆ ಎಂದು ಯುವತಿಯು ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾನುಶ್ರೀ ಮೂಲತಃ ಗುಡಿಬಂಡೆ ತಾಲೂಕಿನ ಜಂಬಿಗೆಮರದಹಳ್ಳಿ ನಿವಾಸಿ. ಮಧುಸೂಧನ್ ಅದೇ ತಾಲೂಕಿನ ಕಾಮಶೆಟ್ಟಿಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ''ತಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಈ ವಿಚಾರ ಇಬ್ಬರ ಮನೆಯಲ್ಲಿಯೂ ಗೊತ್ತಿತ್ತು. ಆದರೆ, ಹುಡುಗ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ನಮ್ಮ ಪೋಷಕರ ಕಡೆಯವರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ಹೀಗಾಗಿ ಬೇರೆ ಮದುವೆ ಮಾಡಲು ಪ್ರಯತ್ನ ನಡೆಸಿದ್ದರು.

ಇದರಿಂದ ಪೋಷಕರಿಗೆ ಹೇಳದೇ ಕೇಳದೆ ಹುಡುಗನೊಂದಿಗೆ ಆಗಸ್ಟ್ 3 ರಂದು ದೇವಾಲಯದಲ್ಲಿ ಮದುವೆಯಾಗಿದ್ದೇವೆ. ಬೇರೆ ಸಮುದಾಯದ ಹುಡುಗನನ್ನು ಮದುವೆಯಾದ್ದು ನಿನ್ನನ್ನು ಎಳೆದುಕೊಂಡು ಬೇರೆ ಮದುವೆ ಮಾಡಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ. ನಮ್ಮ ತಂದೆ - ತಾಯಿಂದ ಜೀವ ಭಯವಿದೆ. ಹಾಗಾಗಿ ನಮ್ಮನ್ನು ನಮ್ಮ ಪಾಡಿಗೆ ಬದುಕಲು ಕಾನೂನಿನಂತೆ ಅವಕಾಶ ಮಾಡಿಕೊಡಿ'' ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೂ ಮೊದಲು ಯುವತಿಯ ಪೋಷಕರು ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ : ಪ್ರೀತಿಸಿ ದೂರಾಗಲು ಯತ್ನಿಸಿದ ಯುವಕನೊಂದಿಗೆ ಮದುವೆಯಾದ ಯುವತಿ

ಪ್ರೀತಿಸಿದ ಬಳಿಕ ತನ್ನಿಂದ ದೂರವಾಗಲು ಯತ್ನಿಸಿದ ಯುವಕನೊಂದಿಗೆ ಯುವತಿ ಮದುವೆಯಾದ ಘಟನೆ ಇತ್ತೀಚೆಗೆ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ನಡೆದಿದೆ. ದಲಿತ ಸಂಘಟನೆಗಳ ಮುಖಂಡರು ಯುವಕನಿಗೆ ಬುದ್ಧಿವಾದ ಹೇಳಿ ರಾಜಿ ಸಂಧಾನ ನಡೆಸುವ ಮೂಲಕ ಇಬ್ಬರಿಗೂ ಮದುವೆ ಮಾಡಿಸಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಕಿರಿಗಿಂಬಿ ಗ್ರಾಮದ ಯುವಕ ಚೇತನ್ ಹಾಗೂ ಇಟಪ್ಪನಹಳ್ಳಿ ಗ್ರಾಮದ ವನಿತಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವನಿತಾ ಈಗ ಗರ್ಭಿಣಿಯಾಗಿದ್ದು ಈ ವಿಚಾರವನ್ನು ಪ್ರಿಯಕರ ಚೇತನ್​ ಬಳಿ ತಿಳಿಸಿದ್ದರು. ಇದಕ್ಕೆ ಚೇತನ್​ ಗರ್ಭವನ್ನು ತೆಗೆಸುವಂತೆ ಒತ್ತಾಯಿಸಿದ್ದ. ಇದಕ್ಕೆ ಒಪ್ಪದ ವನಿತಾ, ಮದುವೆ ಮಾಡಿಕೊಳ್ಳುವಂತೆ ಚೇತನ್​ನಲ್ಲಿ ಕೇಳಿಕೊಂಡಿದ್ದಳು.

ಆದರೆ, ಪಟ್ಟು ಬಿಡಿದ ಚೇತನ್ ವನಿತಾಳನ್ನು ಶಿಡ್ಲಘಟ್ಟ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಗರ್ಭ ತೆಗೆಸಲು ಮುಂದಾಗಿದ್ದ. ವನಿತಾ ಇಲ್ಲಿ ಕೂಡ ಗರ್ಭ ತೆಗೆಸಲು ನಿರಾಕರಿಸಿದ್ದಳು. ಅಲ್ಲದೆ ಚೇತನ್ ಜೊತೆ ವಾಗ್ವಾದ ಸಹ ನಡೆಸಿದ್ದಳು. ಇದನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ವಿಚಾರಿಸಿದಾಗ ಚೇತನ್​ ತಪ್ಪು ಮಾಡಿರುವುದು ಗೊತ್ತಾಗಿತ್ತು. ವಿಚಾರ ತಿಳಿದು ಸ್ಥಳಕ್ಕೆ ಬಂದ ದಲಿತ ಸಂಘಟನೆ ಮುಖಂಡರು ಚೇತನ್​ಗೆ ಬುದ್ಧಿವಾದ ಹೇಳಿ ಇಬ್ಬರಿಗೂ ಮದುವೆ ಮಾಡಿಸಿದ್ದರು.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಭಯ: ಪೋಷಕರ ವಿರುದ್ದ ದೂರು ನೀಡಿದ ಪ್ರೇಮಿಗಳು

Last Updated : Aug 8, 2023, 12:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.