ETV Bharat / state

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಯಾರಿಗೆ ವಿಜಯದ ಮಾಲೆ... ಜೋರಾಗಿದೆ ಜನರ ಲೆಕ್ಕಾಚಾರ - undefined

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಈ ಸಲ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡ್ತಾರಾ? ಅಥವಾ ಮೋದಿ ಅಲೆಯಲ್ಲಿ ಪ್ರಚಾರ ಕೈಗೊಂಡ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡರು ಜಯಭೇರಿ ಬಾರಿಸ್ತಾರಾ..? ಅನ್ನೋ ಪ್ರಶ್ನೆಗಳು ಇದೀಗ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ನಾಲ್ಕೈದು ಜನರನ್ನೊಳಗೊಂಡ ಗುಂಪಿನಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಅಂಶಗಳೇ ಹೈಲೈಟ್​ ಆಗುರುತ್ತಿವೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ
author img

By

Published : May 13, 2019, 12:46 PM IST

ಬೆಂಗಳೂರು: ರಾಜ್ಯದಲ್ಲಿ ಮತದಾನ ಮುಗಿದಿದ್ದು, ಯಲ್ಲರ ಗಮನ ಫಲಿತಾಂಶದಂತ ಕಡೆ ವಾಲಿದೆ. ಅದೇ ರೀತಿ ಸಾಕಷ್ಟು ಜಿದ್ದಾಜಿದ್ದಿ ಶುರು ಮಾಡಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದು ಎಣಿಕೆಗೆ ಹೆಚ್ಚು 10 ದಿನಗಳು ಮಾತ್ರ ಬಾಕಿ ಇವೆ. ಈ ಮಧ್ಯೆ ಅಭ್ಯರ್ಥಿಗಳ ಸೋಲು- ಗೆಲುವಿನ ಲೆಕ್ಕಾಚಾರದ ಕುರಿತು ಚರ್ಚೆಯಾಗುತ್ತಿದೆ.

ಹೌದು, ಬಚ್ಚೇಗೌಡ ಈ ಭಾಗದ ಪ್ರಬಲ ಸಮುದಾಯವರಾಗಿದ್ದು, ಕ್ಷೇತ್ರದಲ್ಲಿ ತಮ್ಮದೇ ವೋಟ್​ ಬ್ಯಾಂಕ್​ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧೆಯಿಂದ ಮತಗಳು ವಿಭಜನೆಯಾಗಿ ಇದೇ ಗೌಡರು ಸೋಲನುಭವಿಸಬೇಕಾಗಿತ್ತು. ಆದರೆ, ಈ ಬಾರಿ ಹೆಚ್ಚಿನ ಜನರು ತಮ್ಮತ್ತ ಒಲವು ತೋರಿಸಿದ್ದಾರೆ ಎಂಬ ಖುಷಿಯಲ್ಲಿದ್ದಾರೆ ಬಚ್ಚೇಗೌಡರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕಾಂಗ್ರೆಸ್, 2 ಜೆಡಿಎಸ್ ಮತ್ತು ಒಂದು ಬಿಜೆಪಿ ಸ್ಥಾನವನ್ನು ಬಿಜೆಪಿ ಹೊಂದಿದೆ. ಬಹುತೇಕ ಕಡೆ ಕಮಲ ಪ್ರಾಬಲ್ಯ ಕಡಿಮೆ ಇದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಸ್ಪರ್ಧೆ ಎದುರಿಸಿದ್ದು ಮೊಯ್ಲಿಗೆ ಅನುಕೂಲವಾಗಿದೆ. ಮೈತ್ರಿಯಿಂದ‌ ವೀರಪ್ಪ ಮೊಯ್ಲಿ ಮತ್ತೊಮ್ಮೆ ಗೆಲುವು ಸಾಧಿಸಲಿದ್ದಾರೆ ಅನ್ನೋ ಮಾತುಗಳು ಈ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಹಿಂದೆ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲ್ನೋಟಕ್ಕೆ ಒಂದಾಗಿದ್ದು, ಆಂತರಿಕವಾಗಿ ದಳಪತಿಗಳು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎನ್ನಲಾಗ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲದಿದ್ದರೂ ಲೋಕ ಸಮರದಲ್ಲಿ ಮತ ಪ್ರಮಾಣ ಹೆಚ್ಚಿಸಿಕೊಂಡಿದೆ. ಇದರಿಂದ ಬಚ್ಚೇಗೌಡರ ಗೆಲುವು ಖಚಿತ ಎನ್ನಲಾಗುತ್ತಿದೆ. ಈ ನಡುವೆ ಮತದಾರರು ಮತದಾನದ ವೇಳೆ ಯಾರಿಗೆ ಹೆಚ್ಚು ಮತ ಹಾಕಿ ಗೆಲ್ಲಿಸಿದ್ದಾರೆ. ಯಾರನ್ನು ಸೋಲಿಸಿದ್ದಾರೆ ಅನ್ನೋದು ಮೇ 23 ರಂದೇ ತಿಳಿಯಲಿದೆ.

ಬೆಂಗಳೂರು: ರಾಜ್ಯದಲ್ಲಿ ಮತದಾನ ಮುಗಿದಿದ್ದು, ಯಲ್ಲರ ಗಮನ ಫಲಿತಾಂಶದಂತ ಕಡೆ ವಾಲಿದೆ. ಅದೇ ರೀತಿ ಸಾಕಷ್ಟು ಜಿದ್ದಾಜಿದ್ದಿ ಶುರು ಮಾಡಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದು ಎಣಿಕೆಗೆ ಹೆಚ್ಚು 10 ದಿನಗಳು ಮಾತ್ರ ಬಾಕಿ ಇವೆ. ಈ ಮಧ್ಯೆ ಅಭ್ಯರ್ಥಿಗಳ ಸೋಲು- ಗೆಲುವಿನ ಲೆಕ್ಕಾಚಾರದ ಕುರಿತು ಚರ್ಚೆಯಾಗುತ್ತಿದೆ.

ಹೌದು, ಬಚ್ಚೇಗೌಡ ಈ ಭಾಗದ ಪ್ರಬಲ ಸಮುದಾಯವರಾಗಿದ್ದು, ಕ್ಷೇತ್ರದಲ್ಲಿ ತಮ್ಮದೇ ವೋಟ್​ ಬ್ಯಾಂಕ್​ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧೆಯಿಂದ ಮತಗಳು ವಿಭಜನೆಯಾಗಿ ಇದೇ ಗೌಡರು ಸೋಲನುಭವಿಸಬೇಕಾಗಿತ್ತು. ಆದರೆ, ಈ ಬಾರಿ ಹೆಚ್ಚಿನ ಜನರು ತಮ್ಮತ್ತ ಒಲವು ತೋರಿಸಿದ್ದಾರೆ ಎಂಬ ಖುಷಿಯಲ್ಲಿದ್ದಾರೆ ಬಚ್ಚೇಗೌಡರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕಾಂಗ್ರೆಸ್, 2 ಜೆಡಿಎಸ್ ಮತ್ತು ಒಂದು ಬಿಜೆಪಿ ಸ್ಥಾನವನ್ನು ಬಿಜೆಪಿ ಹೊಂದಿದೆ. ಬಹುತೇಕ ಕಡೆ ಕಮಲ ಪ್ರಾಬಲ್ಯ ಕಡಿಮೆ ಇದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಸ್ಪರ್ಧೆ ಎದುರಿಸಿದ್ದು ಮೊಯ್ಲಿಗೆ ಅನುಕೂಲವಾಗಿದೆ. ಮೈತ್ರಿಯಿಂದ‌ ವೀರಪ್ಪ ಮೊಯ್ಲಿ ಮತ್ತೊಮ್ಮೆ ಗೆಲುವು ಸಾಧಿಸಲಿದ್ದಾರೆ ಅನ್ನೋ ಮಾತುಗಳು ಈ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಹಿಂದೆ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲ್ನೋಟಕ್ಕೆ ಒಂದಾಗಿದ್ದು, ಆಂತರಿಕವಾಗಿ ದಳಪತಿಗಳು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎನ್ನಲಾಗ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲದಿದ್ದರೂ ಲೋಕ ಸಮರದಲ್ಲಿ ಮತ ಪ್ರಮಾಣ ಹೆಚ್ಚಿಸಿಕೊಂಡಿದೆ. ಇದರಿಂದ ಬಚ್ಚೇಗೌಡರ ಗೆಲುವು ಖಚಿತ ಎನ್ನಲಾಗುತ್ತಿದೆ. ಈ ನಡುವೆ ಮತದಾರರು ಮತದಾನದ ವೇಳೆ ಯಾರಿಗೆ ಹೆಚ್ಚು ಮತ ಹಾಕಿ ಗೆಲ್ಲಿಸಿದ್ದಾರೆ. ಯಾರನ್ನು ಸೋಲಿಸಿದ್ದಾರೆ ಅನ್ನೋದು ಮೇ 23 ರಂದೇ ತಿಳಿಯಲಿದೆ.

Intro:KN_BNG_01_120519_CBP_script_Ambarish_7203301
Slug: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಜಯ..? ಕ್ಷೇತ್ರದಲ್ಲಿನ ಜನರು ಏನಂತಾರೆ..?

ಬೆಂಗಳೂರು: ರಾಜ್ಯದಲ್ಲಿ ಮತದಾನ ಮುಗಿದು ಕೌಂಟಿಂಗ್ ಗೆ ಎದುರು ನೋಡುತ್ತಿದೆ.. ಅದೇ ರೀತಿ ಸಾಕಷ್ಟು ಟೆನ್ಷನ್ ಶುರು ಮಾಡಿದ್ದ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಮತದಾನ ಮುಗಿದು ಎಣಿಕೆಗೆ ಹಚ್ಚು ಕಮ್ಮಿ ಒಂದು ವಾರ ಇರುವಾಗ್ಲೇ ಎಲ್ಲೆಡೆ ಅಭ್ಯರ್ಥಿಗಳ ಸೋಲು ಗೆಲುವಿನ ಬಗ್ಗೆ ಚರ್ಚೆಯಾಗುತ್ತಿದೆ. ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದರ ಮೇಲೆ ಬಾಜಿ‌ ಕಟ್ತಾ ಇದ್ದಾರೆ..

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ .ಎಂ.ವೀರಪ್ಪ ಮೊಯ್ಲಿ ಈ ಸಲ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡ್ತಾರಾ? ಅಥವಾ ಮೋದಿ ಅಲೆಯಲ್ಲಿ ಪ್ರಚಾರ ಕೈಗೊಂಡ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರು ಜಯಭೇರಿ ಬಾರಿಸ್ತಾರಾ..? ಅನ್ನೋ ಪ್ರಶ್ನೆಗಳು ಇದೀಗ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ನಾಲ್ಕೈದು ಜನರನ್ನೊಳಗೊಂಡ ಗುಂಪಿನಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಅಂಶಗಳನ್ನು ಮುಂದಿಟ್ಟು ವಾದಿಸಲಾಗುತ್ತಿದೆ. ಕ್ಷೇತ್ರದ ಚುನಾವಣೆಯಲ್ಲಿ ಸಾಕಷ್ಟು ಮಂದಿ ಸ್ಪರ್ಧಿಸಿದ್ದಾರೆ.. ಆದರೆ, ಗೆಲುವಿನ ವಿಚಾರದಲ್ಲಿ ಮೊಯ್ಲಿ ಮತ್ತು ಬಚ್ಚೇಗೌಡರ ಹೆಸರು ಮಾತ್ರವೇ ಚರ್ಚೆಯಾಗುತ್ತಿದೆ. ಇದಕ್ಕೆ ಸಾಕಷ್ಟು ಕಾರಣಗಳಿದ್ದು, ಇಬ್ಬರಿಗೂ ಈ ಎಲೆಕ್ಷನ್ ಪ್ರತಿಷ್ಠೆಯ ಚುನಾವಣೆಯಾಗಿದೆ..

ಬಚ್ಚೇಗೌಡ ಒಕ್ಕಲಿಗರಾಗಿದ್ದು, ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದ ಒಕ್ಕಲಿಗ ಮತಗಳು ವಿಭಜನೆಯಾಗಿ ಇದೇ ಗೌಡರು ಸೋಲನುಭವಿಸಬೇಕಾಯಿತು. ಆದರೆ, ಈ ಬಾರಿ ಸಮುದಾಯದ ಜನರು ಹೆಚ್ಚಿನ ಒಲವು ತೋರಿದ್ದಾರೆ ಎಂಬ ಖುಷಿಯಲ್ಲಿದ್ದಾರೆ ಗೌಡರು. ಮತ್ತೊಂದೆಡೆ ಬಲಿಜ ಸಮುದಾಯ ಕಾಂಗ್ರೆಸ್​ಗೆ ಬಹುತೇಕ ಕೈ ಕೊಟ್ಟಿದೆ. ಹಿಂದೆ 2ಎ ಮೀಸಲಾತಿ ಹೊಂದಿದ್ದ ಸಮುದಾಯವನ್ನು 3ಎಗೆ ಸೇರಿಸಿ ಮೊಯ್ಲಿ ಅನ್ಯಾಯ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೈಕ್ಷಣಿಕವಾಗಿ ಅನ್ವಯವಾಗುವಂತೆ 2ಎ ಮೀಸಲಾತಿ ನೀಡಿದ್ದಾರೆ ಎಂದು ಸಮುದಾಯದ ಮುಖಂಡರೇ ಚುನಾವಣೆ ವೇಳೆ ಬಹಿರಂಗವಾಗಿ ಹೇಳಿರುವುದು ಬಿಜೆಪಿಗೆ ವರದಾನವಾಗಲಿದೆ..

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಪೈಕಿ 5 ಕಾಂಗ್ರೆಸ್, 2 ಜೆಡಿಎಸ್ ಮತ್ತು ಒಂದು ಬಿಜೆಪಿ ಹೊಂದಿದ್ದು, ಬಹುತೇಕ ಕಡೆ ಕಮಲ ಪ್ರಾಬಲ್ಯ ಕಡಿಮೆ ಇದೆ.. ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಸ್ಪರ್ಧೆ ಎದುರಿಸಿರುವುದು ಮೊಯ್ಲಿಗೆ ಅನುಕೂಲಕರವಾಗಿದೆ. ಮೈತ್ರಿಯಿಂದ‌ ವೀರಪ್ಪಮೊಯ್ಲಿ ಗೆಲುವು ಸಾಧಿಸಲಿದ್ದಾರೆ ಅನ್ನೋ ಲೆಕ್ಕಾಚಾರ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.. ಅದೇ ರೀತಿ ಎತ್ತಿನ ಹೊಳೆ ಯೋಜನೆ ಜಾರಿಯಿಂದ ಹಿಡಿದು ಅದರ ಕಾಮಗಾರಿ ಸೇರಿದಂತೆ ಕ್ಷೇತ್ರದ ಜನರಿಗೆ ನೀರು ತರುವಂತ ವ್ಯವಸ್ಥೆ ಮೊಯ್ಲಿ ಅವರು ಮಾಡಿದ್ದಾರೆ.. ಇನ್ನು ಎರಡು ವರ್ಷದಲ್ಲಿ ಈ ಭಾಗಕ್ಕೆ ನೀರು ಬರುತ್ತವೆ ಅನ್ನೋ ಭರವಸೆ ನೀಡಿದ್ದು, ಇದು ಮೊಯ್ಲಿ ಗೆಲುವಿಗೆ ಕಾರಣವಾಗಬಹುದು ಅನ್ನೋದು ಮತ್ತಷ್ಟು ಜನರ ಅಭಿಪ್ರಾಯ..

ಹಿಂದೆ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲ್ನೋಟಕ್ಕೆ ಒಂದಾಗಿದ್ದು, ಆಂತರಿಕವಾಗಿ ದಳಪತಿಗಳು ಬಿಜೆಪಿಗೆ ಬೆಂಬಲಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಮಲ ಹೆಚ್ಚಿನ ಸ್ಥಾನಗಳನ್ನು ಗೆಲ್ಲದಿದ್ದರೂ ಮತ ಪ್ರಮಾಣ ಹೆಚ್ಚಿಸಿಕೊಂಡಿದೆ. ಇದರಿಂದ ಬಚ್ಚೇಗೌಡರ ಗೆಲುವು ಖಚಿತ ಎನ್ನಲಾಗುತ್ತಿದೆ. ಇದರ ನಡುವೆ ಮತದಾರರು ಮತದಾನದ ವೇಳೆ ಯಾರಿಗೆ ಹೆಚ್ಚು ಮತ ಹಾಕಿ ಗೆಲ್ಲಿಸಿದ್ದಾರೆ.. ಯಾರನ್ನು ಸೋಲಿಸಿದ್ದಾರೆ ಅನ್ನೋದನ್ನು ೨೩ ರಂದು ತಿಳಿಯಲಿದೆ..
Body:NoConclusion:No

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.